AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮುದ್ರದ ನೀರಿನಿಂದ ಅಡುಗೆ ಮನೆವರೆಗೆ: ಭಾರತದಲ್ಲಿ ಸ್ಪಟಿಕದಂತಹ ಉಪ್ಪು ತಯಾರಾಗುವುದು ಹೇಗೆ?

ಪ್ರತಿಯೊಬ್ಬರ ನಿತ್ಯ ಜೀವನದಲ್ಲಿ ಅವಿಭಾಜ್ಯ ಅಂಗವಾಗಿರುವ ಉಪ್ಪು, ಭಾರತದಲ್ಲಿ ಕೋಟ್ಯಾಂತರ ಟನ್‌ಗಳಷ್ಟು ಉತ್ಪಾದನೆಯಾಗುತ್ತದೆ. ವಿಶ್ವದಲ್ಲೇ 3ನೇ ಅತಿ ದೊಡ್ಡ ಉತ್ಪಾದಕ ರಾಷ್ಟ್ರವಾಗಿರುವ ಭಾರತದಲ್ಲಿ, ಗುಜರಾತ್ ಶೇ 75ರಷ್ಟು ಕೊಡುಗೆ ನೀಡುತ್ತದೆ. ಸೂರ್ಯನ ಶಾಖದಿಂದ ನೀರು ಆವಿ ಮಾಡುವ ವಿಧಾನದ ಮೂಲಕ ಉಪ್ಪನ್ನು ತಯಾರಿಸಿ, ಶುದ್ಧೀಕರಿಸಿ ಅಯೋಡಿನ್ ಬೆರೆಸಿ ಮಾರುಕಟ್ಟೆಗೆ ತರಲಾಗುತ್ತದೆ. ಈ ಪ್ರಕ್ರಿಯೆಯ ಸಂಪೂರ್ಣ ವಿವರ ಇಲ್ಲಿದೆ.

ಸಮುದ್ರದ ನೀರಿನಿಂದ ಅಡುಗೆ ಮನೆವರೆಗೆ: ಭಾರತದಲ್ಲಿ ಸ್ಪಟಿಕದಂತಹ ಉಪ್ಪು ತಯಾರಾಗುವುದು ಹೇಗೆ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Aug 07, 2026 | 9:00 AM

Share

ಪ್ರತಿಯೊಬ್ಬರ ನಿತ್ಯದ ಅಡುಗೆಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿರುವ, ಪ್ರಾಣಿ-ಪಕ್ಷಿ ಹಾಗೂ ಮಾನವಕುಲಕ್ಕೆ ಅತ್ಯಗತ್ಯವಾಗಿರುವ ಪದಾರ್ಥವೆಂದರೆ ಅದು ‘ಉಪ್ಪು’. ಭಾರತವು ಪ್ರಪಂಚದಲ್ಲೇ ಚೀನಾ ಮತ್ತು ಅಮೆರಿಕದ ನಂತರ ಮೂರನೇ ಅತಿ ದೊಡ್ಡ ಉಪ್ಪು ಉತ್ಪಾದನಾ ದೇಶವಾಗಿದೆ.

ಭಾರತದಲ್ಲಿ ಪ್ರತಿ ವರ್ಷ ಕೋಟ್ಯಾಂತರ ಟನ್ ಉಪ್ಪು ಉತ್ಪಾದನೆಯಾಗುತ್ತದೆ. ದೇಶದ ಶೇಕಡಾ 75ಕ್ಕೂ ಹೆಚ್ಚು ಉಪ್ಪನ್ನು ಗುಜರಾತ್ ಒಂದೇ ರಾಜ್ಯ ಉತ್ಪಾದಿಸಿದರೆ, ತಮಿಳುನಾಡು, ರಾಜಸ್ಥಾನ (ಸಾಂಭಾರ್ ಸರೋವರ) ಮತ್ತು ಆಂಧ್ರಪ್ರದೇಶಗಳು ನಂತರದ ಸ್ಥಾನದಲ್ಲಿವೆ. ಇನ್ನು ಈ ಉಪ್ಪು ಹೇಗೆ ಉತ್ಪಾದನೆ ಆಗುವ ಹಂತಗಳು ಇಲ್ಲಿದೆ ನೋಡಿ.

ಉಪ್ಪು ತಯಾರಿಕೆಯ ಹಂತಗಳು :

ಭಾರತದಲ್ಲಿ ಶೇಕಡಾ 70ಕ್ಕೂ ಹೆಚ್ಚು ಉಪ್ಪನ್ನು ಸೂರ್ಯನ ಶಾಖದಿಂದ ಆವಿ ಮಾಡುವ ತಂತ್ರಜ್ಞಾನ ಮೂಲಕವೇ ತಯಾರಿಸಲಾಗುತ್ತದೆ. ಈ ಇಡೀ ಪ್ರಕ್ರಿಯೆಯು ಪ್ರಕೃತಿಯ ಬೆಳಕು ಮತ್ತು ಗಾಳಿಯ ಮೇಲೆ ಅವಲಂಬಿತವಾಗಿರುತ್ತದೆ.

ಉಪ್ಪಿನ ಗದ್ದೆಗಳ ನಿರ್ಮಾಣ :

ಸಮುದ್ರ ತೀರದ ತಗ್ಗು ಪ್ರದೇಶಗಳಲ್ಲಿ ಅಥವಾ ಬೃಹತ್ ಬಯಲು ಜಾಗಗಳಲ್ಲಿ ಸಣ್ಣ ಸಣ್ಣ ಪಾತಿಗಳಂತಿರುವ ಗದ್ದೆಗಳನ್ನು ನಿರ್ಮಿಸಲಾಗುತ್ತದೆ. ಈ ಗದ್ದೆಗಳ ತಳಭಾಗದ ಮಣ್ಣನ್ನು ಗಟ್ಟಿಯಾಗಿ ಮೆತ್ತಿ, ನೀರು ಭೂಮಿಯೊಳಗೆ ಇಂಗಿ ಹೋಗದಂತೆ ತಡೆಯಲಾಗುತ್ತದೆ.

ಸಮುದ್ರದ ನೀರನ್ನು ಹಾಯಿಸುವುದು

ಹೈ-ಟೈಡ್ (ಅಲೆಗಳ ಉಬ್ಬರ) ಸಮಯದಲ್ಲಿ ಅಥವಾ ದೊಡ್ಡ ಮೋಟಾರ್ ಪಂಪ್‌ಗಳ ಸಹಾಯದಿಂದ ಸಮುದ್ರದ ಉಪ್ಪು ನೀರನ್ನು ಈ ಬೃಹತ್ ಗದ್ದೆಗಳಿಗೆ ತುಂಬಿಸಲಾಗುತ್ತದೆ.

ಸೂರ್ಯನ ತಾಪಕ್ಕೆ ಆವಿಯಾಗುವಿಕೆ

ಗದ್ದೆಗಳಲ್ಲಿ ಸಂಗ್ರಹವಾದ ನೀರು ಸುಮಾರು 2 ರಿಂದ 3 ವಾರಗಳ ಕಾಲ ಬಿಸಿಲಿನಲ್ಲಿ ಒಣಗಲು ಬಿಡಲಾಗುತ್ತದೆ. ಸೂರ್ಯನ ತೀವ್ರ ಶಾಖ ಮತ್ತು ಬೀಸುವ ಗಾಳಿಗೆ ನೀರಿನಲ್ಲಿದ್ದ ದ್ರವಾಂಶವು ಆವಿಯಾಗಿ ಗಾಳಿಯಲ್ಲಿ ವಿಲೀನವಾಗುತ್ತದೆ. ನೀರು ಕಡಿಮೆಯಾದಂತೆಲ್ಲಾ ನೀರಿನಲ್ಲಿದ್ದ ಉಪ್ಪಿನ ಸಾಂದ್ರತೆ ಹೆಚ್ಚಾಗುತ್ತಾ ಹೋಗುತ್ತದೆ.

ಸ್ಪಟಿಕ ರೂಪ ತಾಳುವುದು :

ನೀರು ಸಂಪೂರ್ಣವಾಗಿ ಆವಿಯಾದ ನಂತರ ಗದ್ದೆಯ ತಳದಲ್ಲಿ ದಪ್ಪನೆಯ ಬಿಳಿ ಬಣ್ಣದ ಉಪ್ಪಿನ ಪದರ ಅಥವಾ ಸ್ಪಟಿಕಗಳು ಉಳುಕಿಕೊಳ್ಳುತ್ತವೆ. ಇದನ್ನು ಸ್ಥಳೀಯ ಭಾಷೆಯಲ್ಲಿ “ಕಚ್ಚಾ ಉಪ್ಪು” ಎನ್ನಲಾಗುತ್ತದೆ.

ಉಪ್ಪು ಸಂಗ್ರಹಣೆ ಹಾಗೂ ಒಣಗಿಸುವಿಕೆ

ಉಪ್ಪಿನ ಗದ್ದೆ ಕಾರ್ಮಿಕರು (ಅಗರಿಯಾಗಳು) ಮರದ ಸಲಿಕೆಗಳು ಮತ್ತು ಕುಂಟೆಗಳನ್ನು ಬಳಸಿ ಗದ್ದೆಯ ತಳದಲ್ಲಿದ್ದ ಉಪ್ಪನ್ನು ರಾಶಿ ಹಾಕುತ್ತಾರೆ. ಈ ಕಚ್ಚಾ ಉಪ್ಪನ್ನು ಸಂಪೂರ್ಣವಾಗಿ ಒಣಗಿಸಲು ದೊಡ್ಡ ದೊಡ್ಡ ದಿಬ್ಬಗಳಾಗಿ ಸಂಗ್ರಹಿಸಿಡಲಾಗುತ್ತದೆ.

ಶುದ್ಧೀಕರಣ ಮತ್ತು ಅಯೋಡಿಕರಣ

ಗದ್ದೆಗಳಿಂದ ಸಂಗ್ರಹಿಸಿದ ಕಚ್ಚಾ ಉಪ್ಪು ನೇರವಾಗಿ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಅದನ್ನು ಉಪ್ಪು ಸಂಸ್ಕರಣಾ ಘಟಕಗಳಿಗೆ ರವಾನಿಸಲಾಗುತ್ತದೆ.

ತೊಳೆಯುವುದು ಮತ್ತು ಶುದ್ಧೀಕರಣ: ಉಪ್ಪಿನಲ್ಲಿದ್ದ ಮಣ್ಣು, ಹುಳ ಹಾಗೂ ಕಸವನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ತೊಳೆದು ತೆಗೆಯಲಾಗುತ್ತದೆ.

ಅಯೋಡಿನ್ ಬೆರೆಸುವುದು: ಭಾರತ ಸರ್ಕಾರದ ನಿಯಮಾವಳಿಗಳ ಪ್ರಕಾರ, ಥೈರಾಯ್ಡ್ ಮತ್ತು ಗಾಯಿಟರ್‌ನಂತಹ ಕಾಯಿಲೆಗಳನ್ನು ತಡೆಯಲು ಪ್ರತಿಯೊಂದು ಖಾದ್ಯ ಉಪ್ಪಿಗೂ ಕಡ್ಡಾಯವಾಗಿ ಪೊಟ್ಯಾಸಿಯಮ್ ಅಯೋಡೇಟ್ (ಅಯೋಡಿನ್) ಬೆರೆಸಲಾಗುತ್ತದೆ.

ಪುಡಿ ಮಾಡುವುದು ಮತ್ತು ಪ್ಯಾಕಿಂಗ್: ಕಲ್ಲು ಉಪ್ಪನ್ನು ಬೇಕಾದ ಗಾತ್ರಕ್ಕೆ ಪುಡಿ ಮಾಡಿ, ತೇವಾಂಶ ತಗಲದಂತೆ ಪ್ಯಾಕ್ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ.

ಇದನ್ನೂ ಓದಿ: Charm Pricing Strategy: ಬಹುತೇಕ ವಸ್ತುಗಳ ಬೆಲೆ 499, 999 ರೂ. ಏಕಿರುತ್ತವೆ, ಏನಿದು ಮಾರ್ಕೆಟಿಂಗ್ ಗಿಮಿಕ್‌?

ವಿಶ್ವದಲ್ಲೇ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ಟಾಪ್ 7 ದೇಶಗಳು

ಚೀನಾ – ಪ್ರಥಮ ಸ್ಥಾನ:

ವಿಶ್ವದಲ್ಲೇ ಅತಿ ದೊಡ್ಡ ಉಪ್ಪು ಉತ್ಪಾದಕ ದೇಶವಾಗಿರುವ ಚೀನಾ, ವರ್ಷಕ್ಕೆ ಸುಮಾರು 64 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಚೀನಾದ ವಿಶಾಲವಾದ ಭೂಪ್ರದೇಶ ಹಾಗೂ ಬೃಹತ್ ಉಪ್ಪಿನ ಅಗಳಿಗಳು ಇದರ ಪ್ರಮುಖ ಆಧಾರವಾಗಿವೆ. ಆವಿಯಾಗಿಸುವಿಕೆ ಹಾಗೂ ಬ್ರೈನ್ ಎಕ್ಸ್‌ಟ್ರಾಕ್ಷನ್ ತಂತ್ರಜ್ಞಾನಗಳ ಮೂಲಕ ಇಲ್ಲಿ ಉಪ್ಪು ತಯಾರಿಸಲಾಗುತ್ತದೆ.

ಅಮೆರಿಕ – ದ್ವಿತೀಯ ಸ್ಥಾನ

ಅಮೆರಿಕವು ವಾರ್ಷಿಕವಾಗಿ ಸುಮಾರು 42 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಆಹಾರ ದರ್ಜೆಯ ಉಪ್ಪು ಹಾಗೂ ಕೈಗಾರಿಕಾ ಉಪ್ಪನ್ನು ಇಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಓಹಿಯೋ, ಟೆಕ್ಸಾಸ್ ಮತ್ತು ಮಿಚಿಗನ್ ರಾಜ್ಯಗಳು ಅಮೆರಿಕದ ಪ್ರಮುಖ ಉಪ್ಪು ಉತ್ಪಾದನಾ ಕೇಂದ್ರಗಳಾಗಿವೆ.

ಭಾರತ – ತೃತೀಯ ಸ್ಥಾನ

ಭಾರತವು ವರ್ಷಕ್ಕೆ 30 ಮಿಲಿಯನ್ ಮೆಟ್ರಿಕ್ ಟನ್‌ಗೂ ಹೆಚ್ಚು ಉಪ್ಪು ಉತ್ಪಾದಿಸುವ ಮೂಲಕ ಜಾಗತಿಕವಾಗಿ 3ನೇ ಅತಿ ದೊಡ್ಡ ದೇಶವಾಗಿದೆ. ಗುಜರಾತ್ ಹಾಗೂ ತಮಿಳುನಾಡು ಕರಾವಳಿ ರಾಜ್ಯಗಳು ದೇಶದ ಪ್ರಮುಖ ಉಪ್ಪು ಉತ್ಪಾದನಾ ಹಬ್‌ಗಳಾಗಿವೆ. ಭಾರತವು ಏಷ್ಯಾ ಮತ್ತು ಆಫ್ರಿಕಾ ಖಂಡದ ಹಲವು ದೇಶಗಳಿಗೆ ಬೃಹತ್ ಪ್ರಮಾಣದಲ್ಲಿ ಉಪ್ಪನ್ನು ರಫ್ತು ಮಾಡುತ್ತದೆ.

ಚಿಲಿ – 4ನೇ ಸ್ಥಾನ

ದಕ್ಷಿಣ ಅಮೆರಿಕದ ಚಿಲಿ ದೇಶವು ವರ್ಷಕ್ಕೆ ಸುಮಾರು 15 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ತನ್ನ ಒಣ ಪ್ರದೇಶಗಳಲ್ಲಿರುವ ನೈಸರ್ಗಿಕ ಉಪ್ಪಿನ ನಿಕ್ಷೇಪಗಳನ್ನು ಬಳಸಿಕೊಂಡು ಆಹಾರ ಹಾಗೂ ಕೈಗಾರಿಕಾ ಅಗತ್ಯಗಳಿಗಾಗಿ ಉಪ್ಪು ತಯಾರಿಸಿ ವಿವಿಧ ಖಂಡಗಳಿಗೆ ರಫ್ತು ಮಾಡುತ್ತದೆ.

ಕೆನಡಾ – 5ನೇ ಸ್ಥಾನ

ಕೆನಡಾವು ವಾರ್ಷಿಕವಾಗಿ ಸುಮಾರು 14 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಅತ್ಯಾಧುನಿಕ ಉಪ್ಪಿನ ಗಣಿಗಾರಿಕೆ ಹಾಗೂ ಸುಸ್ಥಿರ ಪದ್ಧತಿಗಳ ಮೂಲಕ ಜಾಗತಿಕ ಉಪ್ಪು ಮಾರುಕಟ್ಟೆಯಲ್ಲಿ ಕೆನಡಾ ಪ್ರಮುಖ ಪಾತ್ರ ವಹಿಸಿದೆ.

ಜರ್ಮನಿ – 6ನೇ ಸ್ಥಾನ

ಯುರೋಪ್‌ನ ಪ್ರಮುಖ ಉತ್ಪಾದಕ ರಾಷ್ಟ್ರವಾಗಿರುವ ಜರ್ಮನಿ ವರ್ಷಕ್ಕೆ ಸುಮಾರು 12 ಮಿಲಿಯನ್ ಮೆಟ್ರಿಕ್ ಟನ್ ಉಪ್ಪು ಉತ್ಪಾದಿಸುತ್ತದೆ. ಹಿಮಾವೃತ ರಸ್ತೆಗಳ ಹಿಮ ಕರಗಿಸಲು (De-icing) ಹಾಗೂ ರಾಸಾಯನಿಕ ಕೈಗಾರಿಕೆಗಳಿಗೆ ಇಲ್ಲಿನ ಉಪ್ಪನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಆಸ್ಟ್ರೇಲಿಯಾ– 7ನೇ ಸ್ಥಾನ

ಆಸ್ಟ್ರೇಲಿಯಾವು ನೈಸರ್ಗಿಕ ಉಪ್ಪಿನ ಸರೋವರಗಳು ಹಾಗೂ ಸುಧಾರಿತ ಹೊರತೆಗೆಯುವ ತಂತ್ರಜ್ಞಾನದ ನೆರವಿನಿಂದ ವಾರ್ಷಿಕ ಸುಮಾರು 11 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಇದನ್ನು ದೇಶೀಯ ಬಳಕೆಯ ಜೊತೆಗೆ ಇತರ ದೇಶಗಳಿಗೂ ರಫ್ತು ಮಾಡಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು