AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೂವರೆ ಲಕ್ಷದ ಮಾಂಗಲ್ಯ ಸರವನ್ನು ನುಂಗಿದ ಎಮ್ಮೆ, ಆಮೇಲೇನಾಯ್ತು ಇಲ್ಲಿದೆ ಮಾಹಿತಿ

ಎಮ್ಮೆಯೊಂದು ಒಂದೂವರೆ ಲಕ್ಷದ ಮಾಂಗಲ್ಯಸರವನ್ನು ನುಂಗಿರುವ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ನಡೆದಿದೆ. ರೈತ ರಾಮಹರಿ ಅವರ ಪತ್ನಿ ಸ್ನಾನಕ್ಕೆ ತೆರಳುತ್ತಿದ್ದ ವೇಳೆ ಸೋಯಾಬೀನ್, ಶೇಂಗಾ ಚಿಪ್ಪು ತುಂಬಿದ್ದ ತಟ್ಟೆಯಲ್ಲಿ ಮಂಗಳಸೂತ್ರ ಬಿಚ್ಚಿಟ್ಟಿದ್ದರು. ಮಂಗಳಸೂತ್ರವನ್ನು ಇಟ್ಟಿದ್ದನ್ನು ಮರೆತು , ರಾಮಹರಿಯ ಹೆಂಡತಿ ಅಕಸ್ಮಾತ್ ಅದೇ ತಟ್ಟೆಯನ್ನು ಎಮ್ಮೆಯ ಮುಂದೆ ತಿನ್ನಲು ಇಟ್ಟಿದ್ದರು, ಸ್ನಾನ ಮುಗಿಸಿ ಮನೆಯ ಕೆಲಸದಲ್ಲಿ ತೊಡಗಿದರು.

ಒಂದೂವರೆ ಲಕ್ಷದ ಮಾಂಗಲ್ಯ ಸರವನ್ನು ನುಂಗಿದ ಎಮ್ಮೆ, ಆಮೇಲೇನಾಯ್ತು ಇಲ್ಲಿದೆ ಮಾಹಿತಿ
ಮಂಗಳಸೂತ್ರImage Credit source: IndiaToday
ನಯನಾ ರಾಜೀವ್
|

Updated on: Oct 02, 2023 | 2:16 PM

Share

ಎಮ್ಮೆಯೊಂದು ಒಂದೂವರೆ ಲಕ್ಷದ  ಮಂಗಳಸೂತ್ರವನ್ನು ನುಂಗಿರುವ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ನಡೆದಿದೆ. ರೈತ ರಾಮಹರಿ ಅವರ ಪತ್ನಿ ಸ್ನಾನಕ್ಕೆ ತೆರಳುತ್ತಿದ್ದ ವೇಳೆ ಸೋಯಾಬೀನ್, ಶೇಂಗಾ ಚಿಪ್ಪು ತುಂಬಿದ್ದ ತಟ್ಟೆಯಲ್ಲಿ ಮಂಗಳಸೂತ್ರ ಬಿಚ್ಚಿಟ್ಟಿದ್ದರು. ಮಂಗಳಸೂತ್ರವನ್ನು ಇಟ್ಟಿದ್ದನ್ನು ಮರೆತು , ರಾಮಹರಿಯ ಪತ್ನಿ ಅಕಸ್ಮಾತ್ ಅದೇ ತಟ್ಟೆಯನ್ನು ಎಮ್ಮೆಯ ಮುಂದೆ ತಿನ್ನಲು ಇಟ್ಟಿದ್ದರು, ಸ್ನಾನ ಮುಗಿಸಿ ಮನೆಯ ಕೆಲಸದಲ್ಲಿ ತೊಡಗಿದರು.

ಸ್ವಲ್ಪ ಸಮಯದ ನಂತರ, ಅವರ ಮಂಗಳಸೂತ್ರ ಕಾಣೆಯಾಗಿದೆ ಎಂಬುದು ಅವರ ಗಮನಕ್ಕೆ ಬಂದಿತ್ತು. ಹುಡುಕಾಟದ ನಂತರ, ಅವರು ಎಮ್ಮೆಗೆ ತಿನ್ನಲು ಕೊಟ್ಟ ಆಹಾರದಲ್ಲಿ ಮಂಗಳಸೂತ್ರವನ್ನು ಇಟ್ಟಿದ್ದನ್ನು ನೆನಪಿಸಿಕೊಂಡರು. ತಕ್ಷಣ ಎಮ್ಮೆಯ ಬಳಿಗೆ ಓಡಿದ್ದಾರೆ ಮತ್ತು ತಟ್ಟೆ ಖಾಲಿಯಾಗಿತ್ತು.

ಮತ್ತಷ್ಟು ಓದಿ: ಕೊಲ್ಲೂರು: ತನ್ನ ಜಮೀನಿನೊಳಕ್ಕೆ ಬಂದ ಹತ್ತಾರು ಹಸುಗಳಿಗೆ ಗುಂಡಿಕ್ಕಿದ ನಿರ್ದಯಿ ಮನುಷ್ಯ, ಅಸು ನೀಗಿದ ನಾಲ್ಕು ಹಸುಗಳು

ಆಕೆ ತನ್ನ ಪತಿಗೆ ಮಾಹಿತಿ ನೀಡಿದ್ದು, ಅವರು ಸ್ಥಳೀಯ ಪಶುವೈದ್ಯಾಧಿಕಾರಿ ಬಾಳಾಸಾಹೇಬ್ ಕೌಂಡನೆ ಅವರಿಗೆ ಕರೆ ಮಾಡಿದ್ದಾರೆ. ವೈದ್ಯರು ಮೆಟಲ್ ಡಿಟೆಕ್ಟರ್ ಮೂಲಕ ಎಮ್ಮೆಯ ಹೊಟ್ಟೆಯನ್ನು ತಪಾಸಣೆಗೆ ಒಳಪಡಿಸಿದಾಗ ಅದರೊಳಗೆ ವಸ್ತು ಇರುವುದು ಗೊತ್ತಾಗಿತ್ತು.

ನಂತರ ಎಮ್ಮೆಯ ಹೊಟ್ಟೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಬಳಿಕ ಪ್ರಾಣಿಯ ಹೊಟ್ಟೆಯಿಂದ ಚಿನ್ನದ ಮಂಗಳಸೂತ್ರವನ್ನು ಹೊರಕ್ಕೆ ತೆಗೆದಿದ್ದಾರೆ. ಎಮ್ಮೆಯದ್ದು ತಪ್ಪೇನು ಇಲ್ಲದಿದ್ದರೂ ನೋವು ಅನುಭವಿಸುವಂತಾಯಿತು.

ಹೊಟ್ಟೆಯ ಆಪರೇಷನ್​ ಸಂದರ್ಭದಲ್ಲಿ 65 ಹೊಲಿಗೆಗಳನ್ನು ಹಾಕಲಾಗಿದೆ. ಈ ಆಪರೇಷನ್ ಎರಡರಿಂದ ಎರಡೂವರೆ ಗಂಟೆಗಳ ಕಾಲ ನಡೆಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ