AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣೆದುರೇ ಭೀಕರವಾಗಿ ಕುಸಿದ ಗುಡ್ಡ; ಸೆಕೆಂಡ್​ಗಳ ಅಂತರದಲ್ಲಿ ಸಾವಿನಿಂದ ಪಾರಾದ 14 ಮಂದಿ-ಭಯಾನಕ ವಿಡಿಯೋ ಇಲ್ಲಿದೆ

ಆ ಗುಡ್ಡ ದೊಡ್ಡದಾಗಿದ್ದು, ಅದರ ಕೆಳಗೇ ಬಸ್​ ನಿಂತಿದೆ. ಒಂದು ಬದಿ ಮಾತ್ರ ಕುಸಿತವಾಗಿದೆ. ಹಾಗೊಮ್ಮೆ ಇಡೀ ಗುಡ್ಡ ಕುಸಿದಿದ್ದರೆ ಬಸ್​ ಮಣ್ಣಿನಡಿ ಸಿಲುಕಿ, ಪ್ರಯಾಣಿಕರನ್ನು ಉಳಿಸುವುದೂ ದೊಡ್ಡ ಸಾಹಸವೇ ಆಗುತ್ತಿತ್ತು.

ಕಣ್ಣೆದುರೇ ಭೀಕರವಾಗಿ ಕುಸಿದ ಗುಡ್ಡ; ಸೆಕೆಂಡ್​ಗಳ ಅಂತರದಲ್ಲಿ ಸಾವಿನಿಂದ ಪಾರಾದ 14 ಮಂದಿ-ಭಯಾನಕ ವಿಡಿಯೋ ಇಲ್ಲಿದೆ
ನೋಡನೋಡುತ್ತಿದ್ದಂತೆ ಕುಸಿದ ಗುಡ್ಡ
TV9 Web
| Edited By: |

Updated on:Aug 21, 2021 | 3:12 PM

Share

ಒಂದೇ ಕ್ಷಣದಲ್ಲಿ ಸಾವು ಕಣ್ಣೆದುರು ಬಂದು ಹೋದರೆ..! ಇಂಥದ್ದೊಂದು ಅನುಭವವನ್ನು ಉತ್ತರಾಖಂಡ್​​ನಲ್ಲಿ ಸುಮಾರು 14ಕ್ಕೂ ಹೆಚ್ಚು ಮಂದಿ ಒಂದೇ ಸಲಕ್ಕೆ ಪಡೆದಿದ್ದಾರೆ. ಸ್ವಲ್ಪೇಸ್ವಲ್ಪದರಲ್ಲಿ ಬಹುದೊಡ್ಡ ದುರಂತದಿಂದ ಪಾರಾಗಿದ್ದಾರೆ. ಅದರ ವಿಡಿಯೋ ಸಿಕ್ಕಾಪಟೆ ವೈರಲ್​ ಆಗಿದ್ದು, ನೋಡಿದರೆ ಭಯ ಹುಟ್ಟದೆ ಇರದು. ಉತ್ತರಾಖಂಡ್ ರಾಜ್ಯದ ನೈನಿತಾಲ್​ ಎಂಬಲ್ಲಿ ಬಹುದೊಡ್ಡ ಗುಡ್ಡದ ಬದಿಯಲ್ಲಿರುವ ಚಿಕ್ಕದಾದ ಡಾಂಬರು ರಸ್ತೆಯಲ್ಲಿ ಬಸ್​ ಹೋಗುತ್ತಿತ್ತು. ಇದರಲ್ಲಿ 14ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಅದು ಕಾಡು ಹೆಚ್ಚಾಗಿರುವ ಪ್ರದೇಶ..ನೋಡನೋಡುತ್ತಿದ್ದಂತೆ ಬಸ್​ನ ಎದುರೇ ಗುಡ್ಡೆ ಕುಸಿದು ಬಿದ್ದಿದೆ. ಬೆಟ್ಟದ ಮೇಲಿಂದ ಕಲ್ಲು, ಮರಗಳೆಲ್ಲ ಉದುರುದುರಿ ಬುಡಸಮೇತ ಕಿತ್ತು ರಸ್ತೆಗೆ ಉರುಳಿವೆ. ಬಸ್​ ಚೂರೇಚೂರು ಅಂತರ ಹಿಂದೆ ಇದ್ದಿದ್ದರಿಂದ ಬಚಾವ್ ಆಗಿದೆ. 

ಮೊದಲು ಸಣ್ಣ ಪ್ರಮಾಣದಲ್ಲಿ ಮಣ್ಣು ಉದುರಿ ರಸ್ತೆಗೆ ಬಿತ್ತು. ನೋಡನೋಡುತ್ತಿದ್ದಂತೆ ಇಡೀ ಗುಡ್ಡ ಕುಸಿತವಾಗಿದ್ದನ್ನು ನೀವು ಕೆಳಗಿನ ವಿಡಿಯೋದಲ್ಲಿ ನೋಡಬಹುದು. ಬಸ್​ ಚಾಲಕ ತಡಮಾಡದೆ ವಾಹವನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಆದರೆ ಅದರಲ್ಲಿದ್ದ ಪ್ರಯಾಣಿಕರು ಚಲಿಸುತ್ತಿದ್ದ ಬಸ್​​ನಿಂದ ಕೆಳಗಿಳಿದು, ತಮ್ಮ ಬ್ಯಾಗ್​​ ಹಿಡಿದು ಪ್ರಾಣಭಯದಿಂದ ಓಡಿಹೋಗಿದ್ದಾರೆ. ಕೆಲವರಂತೂ ಬಸ್​ ಕಿಟಿಕಿಯಿಂದಲೇ ಹಾರಿ, ಓಡಿದ್ದಾರೆ.

ನೈನಿತಾಲ್​​ನಲ್ಲಿ ಈ ಘಟನೆ ನಡೆದದ್ದು ಶುಕ್ರವಾರ ಎಂದು ಹೇಳಲಾಗಿದೆ. ಯಾರದ್ದೂ ಜೀವ ಹಾನಿಯಾಗಿಲ್ಲ. ಅದೃಷ್ಟವಶಾತ್​ ಯಾರಿಗೂ ಗಾಯವೂ ಆಗಿಲ್ಲ. ಆ ಗುಡ್ಡ ದೊಡ್ಡದಾಗಿದ್ದು, ಅದರ ಕೆಳಗೇ ಬಸ್​ ನಿಂತಿದೆ. ಒಂದು ಬದಿ ಮಾತ್ರ ಕುಸಿತವಾಗಿದೆ. ಹಾಗೊಮ್ಮೆ ಇಡೀ ಗುಡ್ಡ ಕುಸಿದಿದ್ದರೆ ಬಸ್​ ಮಣ್ಣಿನಡಿ ಸಿಲುಕಿ, ಪ್ರಯಾಣಿಕರನ್ನು ಉಳಿಸುವುದೂ ದೊಡ್ಡ ಸಾಹಸವೇ ಆಗುತ್ತಿತ್ತು ಎಂದು ಹೇಳಲಾಗಿದೆ. ಅತಿಯಾದ ಮಳೆಯಿಂದ ಇಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಸದ್ಯ ಈ ರಸ್ತೆ ಬ್ಲಾಕ್​ ಆಗಿದೆ.

ಇಲ್ಲಿದೆ ನೋಡಿ ಭಯಾನಕ ವಿಡಿಯೋ:

ಅತಿಯಾದ ಮಳೆಯ ಎಚ್ಚರಿಕೆ ಉತ್ತರಾಖಂಡ್​ನಲ್ಲಿ ಎರಡು ದಿನಗಳ ಕಾಲ ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ಶುಕ್ರವಾರ (ಆಗಸ್ಟ್​ 20) ನೀಡಿದೆ. ಇದರೊಂದಿಗೆ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ಕೂಡ ಸಜ್ಜಾಗಿದ್ದು, ಎಲ್ಲ ರೀತಿಯ ರಕ್ಷಣಾ ವ್ಯವಸ್ಥೆಗೆ ಬೇಕದ ಸಿದ್ಧತೆ ಮಾಡಿಕೊಂಡಿದೆ.  ಇನ್ನು ಉತ್ತರಾಖಂಡ್​​ನ ಕೆಲವು ಪ್ರದೇಶಗಳಲ್ಲಿ ಗುಡುಗು-ಮಿಂಚು ಸಹಿತ ಭರ್ಜರಿ ಮಳೆಯಾಗುವ ಎಚ್ಚರಿಕೆಯನ್ನೂ ಐಎಂಡಿ ನೀಡಿದೆ.   

ಇದನ್ನೂ ಓದಿ: Pro Kabaddi League: ಹರಾಜಿಗೂ ಮುನ್ನ ತಮ್ಮ ನಾಯಕರನ್ನು ಕೈಬಿಟ್ಟ 9 ತಂಡಗಳು! ಬೆಂಗಳೂರಿನಲ್ಲೇ ಉಳಿದ ಪವನ್ ಶೆರಾವತ್

Raksha Bandhan: ‘ಡಾಲಿ’ ಧನಂಜಯ ಜೊತೆ ಮಂಗಳಮುಖಿಯರ ರಕ್ಷಾ ಬಂಧನ ಹಬ್ಬದ ಸಂಭ್ರಮ

Published On - 3:11 pm, Sat, 21 August 21

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ