AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದ ಹಳ್ಳಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ವಿವಾದ ಸೃಷ್ಟಿಸಿದ ‘ತಾಲಿಬಾನ್‘; ಆಯೋಜಕರು ಮಾಡಿದ್ದೇನು?

ಭನಿಯಾನಾ ಹಳ್ಳಿ ಪೋಖ್ರಾನ್​ನಿಂದ 36 ಕಿಮೀ ದೂರದಲ್ಲಿದೆ. ಪೋಖ್ರಾನ್​ ಸುತ್ತಮುತ್ತಲೂ ಅಲ್ಪಸಂಖ್ಯಾತರ ಸಮುದಾಯದವರೇ ಜಾಸ್ತಿ ಜನ ಇದ್ದಾರೆ.

ರಾಜಸ್ಥಾನದ ಹಳ್ಳಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ವಿವಾದ ಸೃಷ್ಟಿಸಿದ ‘ತಾಲಿಬಾನ್‘; ಆಯೋಜಕರು ಮಾಡಿದ್ದೇನು?
ಕ್ರಿಕೆಟ್​ ಪಂದ್ಯಾವಳಿ ದೃಶ್ಯ
TV9 Web
| Updated By: Lakshmi Hegde|

Updated on:Aug 23, 2021 | 6:42 PM

Share

ಸದ್ಯ ವಿಶ್ವದಾದ್ಯಂತ ಸುದ್ದಿಯಲ್ಲಿರುವುದು ತಾಲಿಬಾನ್​. ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ಕೈವಶ ಮಾಡಿಕೊಂಡಿರುವ ತಾಲಿಬಾನ್ ಉಗ್ರರು ವಿಶ್ವದ ಬಹುತೇಕ ರಾಷ್ಟ್ರಗಳ ಪಾಲಿಗೆ ವಿಲನ್​​ಗಳೇ ಆಗಿದ್ದಾರೆ. ಅವರನ್ನು ಉಗ್ರರು ಎಂದೇ ಕರೆಯಲಾಗುತ್ತಿದ್ದು, ತಾಲಿಬಾನಿಗಳ ಪರವಾಗಿ ಮಾತನಾಡುವುದೂ ಅಪರಾಧ ಎಂದೇ ಹೇಳಲಾಗುತ್ತಿದೆ. ಭಾರತದಲ್ಲೂ ಕೂಡ ಪರಿಸ್ಥಿತಿ ಹೀಗೇ ಇದೆ. ಈಗಾಗಲೇ ತಾಲಿಬಾನ್​ ಪರ ವಹಿಸಿ ಮಾತನಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಲಾಗಿದೆ. ಇಷ್ಟೆಲ್ಲ ಆದ ಮೇಲೆ ರಾಜಸ್ಥಾನದ ಕ್ರಿಕೆಟ್​ ಟೂರ್ನಿಮೆಂಟ್​ಗೆ ತಾಲಿಬಾನ್​ ಬಂದರೆ ಹೇಗಾಗಬೇಡ !-ಇದೀಗ ದೊಡ್ಡ ವಿವಾದ ಸೃಷ್ಟಿಯಾಗಿದೆ. 

ರಾಜಸ್ಥಾನದ ಭನಿಯಾನಾ ಎಂಬ ಹಳ್ಳಿಯಲ್ಲಿ ಕ್ರಿಕೆಟ್​ ಟೂರ್ನಮೆಂಟ್​ ಆಯೋಜಿಸಲಾಗಿತ್ತು. ಅದರಲ್ಲಿ ವಿವಿಧ ತಂಡಗಳು ಪಾಲ್ಗೊಂಡಿದ್ದವು. ಯಾವುದೇ ಪಂದ್ಯಾವಳಿ ಇರಲಿ ತಂಡಕ್ಕೊಂದು ಹೆಸರಿಟ್ಟುಕೊಂಡು ಪಾಲ್ಗೊಳ್ಳುವುದು ಸಹಜ. ಹಾಗೇ, ಭನಿಯಾನಾದಲ್ಲಿ ನಡೆದ ಕ್ರಿಕೆಟ್​ ಪಂದ್ಯಾವಳಿ ಪಾಲ್ಗೊಂಡ ಒಂದು ತಂಡ ತಾಲಿಬಾನ್​ ಎಂದು ಹೆಸರಿಟ್ಟುಕೊಂಡಿತ್ತು. ಆದರೆ ಕ್ರಿಕೆಟ್​ ತಂಡ ತಾಲಿಬಾನ್​ ಎಂದು ಹೆಸರಿಟ್ಟುಕೊಂಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಯ್ತು.

ಭನಿಯಾನಾ ಹಳ್ಳಿ ಪೋಖ್ರಾನ್​ನಿಂದ 36 ಕಿಮೀ ದೂರದಲ್ಲಿದೆ. ಪೋಖ್ರಾನ್​ ಸುತ್ತಮುತ್ತಲೂ ಅಲ್ಪಸಂಖ್ಯಾತರ ಸಮುದಾಯದವರೇ ಜಾಸ್ತಿ ಜನ ಇದ್ದಾರೆ. ಪೋಖ್ರಾನ್​ ಫೈರಿಂಗ್​ ವಲಯ ಕೂಡ ಸಮೀಪದಲ್ಲೇ ಇರುವುದರಿಂದ ಇದು ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ಭಾರತೀಯ ಸೇನಾ ಯೋಧರ ಚಲನವಲನ ಸಾಮಾನ್ಯವಾಗಿರುತ್ತದೆ.

ತಾಲಿಬಾನ್​ ತಂಡ ಏನಾಯ್ತು? ತಾಲಿಬಾನ್ ಹೆಸರಿನ ತಂಡವನ್ನು ಕಣ್ತಪ್ಪಿನಿಂದ ಪಂದ್ಯಾವಳಿಗೆ ಸೇರಿಸಿಕೊಂಡಿದ್ದೆವು. ಆದರೆ  ನಂತರ ಅವರನ್ನು ತೆಗೆದುಹಾಕಲಾಗಿದೆ. ಅವರಿಗೆ ಟೂರ್ನಮೆಂಟ್​ನಲ್ಲಿ ಆಡಲು ಅವಕಾಶ ನಿರಾಕರಿಸಲಾಯಿತು ಎಂದು ಆಯೋಜಕರು ಹೇಳಿದ್ದಾರೆ. ಅದರಲ್ಲೂ ಮೊದಲ ಪಂದ್ಯ ಅವರು ಆಡಿದ್ದಾರೆ. ನಂತರ ಸಂಪೂರ್ಣವಾಗಿ ನಿಷೇಧ ಹೇರಲಾಯಿತು ಎಂದೂ ಮಾಹಿತಿ ನೀಡಿದ್ದಾರೆ. ತಾಲಿಬಾನ್​ ಎಂದು ಹೆಸರಿಟ್ಟುಕೊಂಡ ಕ್ರಿಕೆಟ್​ ತಂಡದವರೂ ಕೂಡ ನಂತರ ಕ್ಷಮೆಯಾಚಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 

ದೆಹಲಿಯಲ್ಲಿ ಹೊಂಜು ಗೋಪುರ ಉದ್ಘಾಟಿಸಿದ ಅರವಿಂದ ಕೇಜ್ರಿವಾಲ್

ಅಫ್ಘಾನ್​​ನಿಂದ ಇಂದು ಭಾರತಕ್ಕೆ ಬಂದ 146 ಮಂದಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು; ಆಸ್ಪತ್ರೆಗೆ ದಾಖಲು

Published On - 6:40 pm, Mon, 23 August 21