AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Manipur Violence: ಮಣಿಪುರದ ಬಿಜೆಪಿ ಶಾಸಕನ ಮನೆ ಮೇಲೆ ಕಚ್ಚಾ ಬಾಂಬ್​​ ದಾಳಿ

ಹಿಂಸಾಚಾರ ಪೀಡಿತ ಮಣಿಪುರದ ಬಿಜೆಪಿ ಶಾಸಕರೊಬ್ಬರ ನಿವಾಸದ ಮೇಲೆ ಗುರುವಾರ ರಾತ್ರಿ ಎರಡು ದ್ವಿಚಕ್ರವಾಹನಗಳಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಕಚ್ಚಾ ಬಾಂಬ್ ಎಸೆದಿದ್ದಾರೆ. ಶಾಸಕರ ನಿವಾಸದ ಗೇಟ್‌ನಲ್ಲಿ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡಿದೆ

Manipur  Violence: ಮಣಿಪುರದ ಬಿಜೆಪಿ ಶಾಸಕನ ಮನೆ ಮೇಲೆ ಕಚ್ಚಾ ಬಾಂಬ್​​ ದಾಳಿ
ಬಿಜೆಪಿ ಶಾಸಕನ ಮನೆ ಮೇಲೆ ಬಾಂಬ್ ದಾಳಿ
ಅಕ್ಷಯ್​ ಪಲ್ಲಮಜಲು​​
|

Updated on: Jun 09, 2023 | 1:06 PM

Share

ಇಂಫಾಲ್: ಮಣಿಪುರದಲ್ಲಿ (Manipur) ಬಿಜೆಪಿ ಶಾಸಕನ ಮನೆ ಮೇಲೆ ಕಚ್ಚಾ ಬಾಂಬ್​​ ಎಸೆದಿರುವ ಘಟನೆ ಗುರುವಾರ (ಜೂ.8) ರಾತ್ರಿ ನಡೆದಿದೆ. ಹಿಂಸಾಚಾರ ಪೀಡಿತ ಮಣಿಪುರದ ಬಿಜೆಪಿ ಶಾಸಕರೊಬ್ಬರ ನಿವಾಸದ ಮೇಲೆ ಗುರುವಾರ ರಾತ್ರಿ ಎರಡು ದ್ವಿಚಕ್ರವಾಹನಗಳಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಕಚ್ಚಾ ಬಾಂಬ್ ಎಸೆದಿದ್ದಾರೆ. ಶಾಸಕರ ನಿವಾಸದ ಗೇಟ್‌ನಲ್ಲಿ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡಿದೆ, ಗೇಟ್‌ನ ಟಿನ್ ರಕ್ಷಣಾತ್ಮಕ ಕವಚಗಳಲ್ಲಿ ಅನೇಕ ರಂಧ್ರಗಳಾಗಿವೆ ಎಂದು ದೃಶ್ಯವೊಂದರಲ್ಲಿ ತೋರಿಸಲಾಗಿದೆ.

ಕೇಬಿ ದೇವಿ ಇಂಫಾಲ್ ಪಶ್ಚಿಮ ಜಿಲ್ಲೆಯ ನವೋರಿಯಾ ಪಖಾಂಗ್ಲಕ್ಪಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, ಘಟನೆ ನಡೆದಾಗ ಅವರ ನಿವಾಸದಲ್ಲಿದ್ದರು ಎಂದು ಹೇಳಲಾಗಿದೆ. ಮಣಿಪುರದಲ್ಲಿ ಮೇ 3ರಂದು ಬೆಟ್ಟಗಳಲ್ಲಿ ನೆಲೆಸಿರುವ ಕುಕಿ ಬುಡಕಟ್ಟು ಜನಾಂಗದವರ ಪ್ರತಿಭಟನೆಯ ನಂತರ ಹಿಂಸಾಚಾರವು ದೇಶದದ್ಯಾಂತ ಭಾರೀ ಸದ್ದು ಮಾಡಿತ್ತು. ಸರ್ಕಾರದ ಕಾರ್ಯ ನೀತಿಯ ಅಡಿಯಲ್ಲಿ ಮೀಸಲಾತಿಯನ್ನು ನೀಡುವ ಪರಿಶಿಷ್ಟ ಪಂಗಡಗಳ (ಎಸ್‌ಟಿ) ವರ್ಗಕ್ಕೆ ಸೇರಿಸಲು ಕಣಿವೆಯ ಬಹುಸಂಖ್ಯಾತ ಮೈಟೈಸ್‌ನ ಬೇಡಿಕೆಯ ವಿರುದ್ಧವಾಗಿ ನಡೆಯಿತು ಎಂಬ ಕಾರಣಕ್ಕೆ ಭಾರೀ ಮಟ್ಟದಲ್ಲಿ ಗಲಭೆ ನಡೆದಿತ್ತು.

ಸುದೀರ್ಘವಾದ ಜನಾಂಗೀಯ ಹಿಂಸಾಚಾರದಿಂದ ಈಶಾನ್ಯ ರಾಜ್ಯದ 13 ಜಿಲ್ಲೆಗಳಲ್ಲಿ ವಿವಿಧ ಸಮುದಾಯಗಳ ಸುಮಾರು 37,450 ಜನರು ತಮ್ಮ ಮನೆಗಳಿಂದ ವಲಸೆ ಹೋಗಿದ್ದು ಮತ್ತು ಸಮುದಾಯ ಭವನಗಳು ಸೇರಿದಂತೆ 272 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಇದನ್ನೂ ಓದಿ: Manipur Violence Explainer: ದ್ವೇಷದ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿದೆ ಮಣಿಪುರ, ಹಿಂಸಾಚಾರಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

ನಿರಾಶ್ರಿತರಿಗೆ ಪರಿಹಾರ ನೀಡಲು ಕೇಂದ್ರ 101.75 ಕೋಟಿ ರೂ. ಪ್ಯಾಕೇಜ್ ಮಂಜೂರು ಮಾಡಿದೆ. ಕಳೆದ 24 ಗಂಟೆಗಳಲ್ಲಿ 27 ಶಸ್ತ್ರಾಸ್ತ್ರಗಳು ಮತ್ತು 245 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ, ಮಣಿಪುರದ ಭದ್ರತಾ ಪಡೆಗಳು ಇದುವರೆಗೆ 896 ಅತ್ಯಾಧುನಿಕ ಮತ್ತು ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು 11,763 ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಹೇಳಿದ್ದಾರೆ. ಜನಾಂಗೀಯ ಗಲಭೆಗಳು ಭುಗಿಲೆದ್ದ ನಂತರ ಪೋಲಿಸ್ ಮತ್ತು ಇತರ ಹಲವಾರು ಭದ್ರತಾ ಸಂಸ್ಥೆಗಳಿಂದ ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಭದ್ರತಾ ಪಡೆಗಳು ವಿವಿಧ ಜಿಲ್ಲೆಗಳಿಂದ 200 ಬಾಂಬ್‌ಗಳನ್ನು ವಶಪಡಿಸಿಕೊಂಡಿವೆ. ಎಸ್‌ಟಿ ಸ್ಥಾನಮಾನಕ್ಕಾಗಿ ಮೀತಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಬೆಟ್ಟದ ಜಿಲ್ಲೆಗಳಲ್ಲಿ ‘ಬುಡಕಟ್ಟು ಐಕ್ಯತಾ ಮೆರವಣಿಗೆ’ ಆಯೋಜಿಸಿದ ನಂತರ 98 ಜನರು ಸಾವನ್ನಪ್ಪಿದ್ದಾರೆ ಮತ್ತು 310 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರದ ವರದಿ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ