AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಂಧನ; ಮ್ಯಾಟ್ರಿಮೋನಿ ತಾಣದಲ್ಲೇ ಟಾರ್ಗೆಟ್​ ಮಾಡ್ತಿದ್ದ

ಈ ವ್ಯಕ್ತಿ ಪ್ರತಿಬಾರಿಯೂ ತನ್ನ ಫೋನ್​ನಂಬರ್​ ಬದಲಿಸುತ್ತಿದ್ದ. ಪ್ರತೀಸಲ ಊಬರ್​, ಓಲಾ ಕ್ಯಾಬ್​ಗಳನ್ನು ಬುಕ್​​ ಮಾಡುವಾಗಲೂ ಬೇರೆಬೇರೆ ಸಿಮ್​​ಗಳನ್ನೇ  ಬಳಸುತ್ತಿದ್ದ. ಈ ವ್ಯಕ್ತಿಗೆ ಕಂಪ್ಯೂಟರ್​ ಬಗ್ಗೆಯೂ ಅಪಾರ ತಿಳಿವಳಿಕೆ ಇದೆ. ಹ್ಯಾಕರ್​ ಕೂಡ ಹೌದು ಎಂದು ಮುಂಬೈ ಡೆಪ್ಯೂಟಿ ಪೊಲೀಸ್​ ಕಮೀಷನರ್​​ ಸುರೇಶ್​ ಮೆಂಗಾಡೆ ತಿಳಿಸಿದ್ದಾರೆ.

12 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಂಧನ; ಮ್ಯಾಟ್ರಿಮೋನಿ ತಾಣದಲ್ಲೇ ಟಾರ್ಗೆಟ್​ ಮಾಡ್ತಿದ್ದ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 08, 2021 | 5:26 PM

Share

ಸುಮಾರು 12 ಮಹಿಳೆಯರನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ 37 ವರ್ಷದ ವ್ಯಕ್ತಿಯನ್ನು ನವೀ ಮುಂಬೈ ಪೊಲೀಸರು ಮಲಾಡ್​ ಎಂಬಲ್ಲಿ ಬಂಧಿಸಿದ್ದಾರೆ. ಈತನ ಹೆಸರು ಮಹೇಶ್​ ಅಲಿಯಾಸ್ ಕರಣ್​ ಗುಪ್ತಾ. ಇವನು ಮೆಕ್ಯಾನಿಕಲ್​ ಇಂಜನಿಯರ್​ ಆಗಿದ್ದು, ಹಲವು ಗೌರವಾನ್ವಿತ ಕಂಪನಿಗಳಲ್ಲಿ ಕೆಲಸ ಕೂಡ ಮಾಡಿದ್ದಾನೆ. ಮ್ಯಾಟ್ರಿಮೋನಿ ಮೂಲಕ ಮಹಿಳೆಯರನ್ನು ವಂಚಿಸಿ ಅತ್ಯಾಚಾರ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕರಣ್​ ಗುಪ್ತಾ ತುಂಬ ಮ್ಯಾಟ್ರಿಮೋನಿಯಲ್​ ಸೈಟ್​​ನಲ್ಲಿ ಹಲವು ನಕಲಿ ಖಾತೆಗಳನ್ನು ಹೊಂದಿದ್ದ. ಅದರ ಮೂಲಕ ಆತ ವಿದ್ಯಾವಂತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ವಧು-ವರರ ವೇದಿಕೆ ಮೂಲಕ ಅಂಥ ಯುವತಿಯರನ್ನು ಹುಡುಕಿ, ಅವರನ್ನು ಸಂಪರ್ಕ ಮಾಡುತ್ತಿದ್ದ. ಬಳಿಕ ಅವರಿಂದ ಫೋನ್​ ನಂಬರ್​ ಪಡೆಯುತ್ತಿದ್ದ. ಪಬ್​, ರೆಸ್ಟೋರೆಂಟ್​​ಗಳಲ್ಲಿ ಭೇಟಿಯಾಗೋಣ ಎಂದು ಕರೆಯುತ್ತಿದ್ದ. ತನ್ನನ್ನು ತಾನು ಸಭ್ಯನಂತೆ ಬಿಂಬಿಸಿಕೊಳ್ಳುತ್ತಿದ್ದ. ಹೀಗೆ ಭೇಟಿಯಾದ ಸಂದರ್ಭದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವ್ಯಕ್ತಿ ಪ್ರತಿಬಾರಿಯೂ ತನ್ನ ಫೋನ್​ನಂಬರ್​ ಬದಲಿಸುತ್ತಿದ್ದ. ಪ್ರತೀಸಲ ಊಬರ್​, ಓಲಾ ಕ್ಯಾಬ್​ಗಳನ್ನು ಬುಕ್​​ ಮಾಡುವಾಗಲೂ ಬೇರೆಬೇರೆ ಸಿಮ್​​ಗಳನ್ನೇ  ಬಳಸುತ್ತಿದ್ದ. ಈ ವ್ಯಕ್ತಿಗೆ ಕಂಪ್ಯೂಟರ್​ ಬಗ್ಗೆಯೂ ಅಪಾರ ತಿಳಿವಳಿಕೆ ಇದೆ. ಹ್ಯಾಕರ್​ ಕೂಡ ಹೌದು ಎಂದು ಮುಂಬೈ ಡೆಪ್ಯೂಟಿ ಪೊಲೀಸ್​ ಕಮೀಷನರ್​​ ಸುರೇಶ್​ ಮೆಂಗಾಡೆ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಗುಪ್ತಾ 12 ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸೆದಿದ್ದಾನೆಂದು ಅನ್ನಿಸುತ್ತದೆ. ಆದರೆ ಆ ಸಂಖ್ಯೆ ದೊಡ್ಡದಿದೆ ಎಂಬುದು ನಮ್ಮ ಅನುಮಾನ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲಸಿಕೆ ಪಡೆದ ಆ ಯುವಕನ ರೀತಿಯೇ ವೈರಲ್​ ಆಯ್ತು ಪ್ರಶಾಂತ್​ ನೀಲ್ ಫೋಟೋ​; ಆದರೆ ಕಾರಣ ಬೇರೆ

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ