AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಂಧನ; ಮ್ಯಾಟ್ರಿಮೋನಿ ತಾಣದಲ್ಲೇ ಟಾರ್ಗೆಟ್​ ಮಾಡ್ತಿದ್ದ

ಈ ವ್ಯಕ್ತಿ ಪ್ರತಿಬಾರಿಯೂ ತನ್ನ ಫೋನ್​ನಂಬರ್​ ಬದಲಿಸುತ್ತಿದ್ದ. ಪ್ರತೀಸಲ ಊಬರ್​, ಓಲಾ ಕ್ಯಾಬ್​ಗಳನ್ನು ಬುಕ್​​ ಮಾಡುವಾಗಲೂ ಬೇರೆಬೇರೆ ಸಿಮ್​​ಗಳನ್ನೇ  ಬಳಸುತ್ತಿದ್ದ. ಈ ವ್ಯಕ್ತಿಗೆ ಕಂಪ್ಯೂಟರ್​ ಬಗ್ಗೆಯೂ ಅಪಾರ ತಿಳಿವಳಿಕೆ ಇದೆ. ಹ್ಯಾಕರ್​ ಕೂಡ ಹೌದು ಎಂದು ಮುಂಬೈ ಡೆಪ್ಯೂಟಿ ಪೊಲೀಸ್​ ಕಮೀಷನರ್​​ ಸುರೇಶ್​ ಮೆಂಗಾಡೆ ತಿಳಿಸಿದ್ದಾರೆ.

12 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಂಧನ; ಮ್ಯಾಟ್ರಿಮೋನಿ ತಾಣದಲ್ಲೇ ಟಾರ್ಗೆಟ್​ ಮಾಡ್ತಿದ್ದ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 08, 2021 | 5:26 PM

Share

ಸುಮಾರು 12 ಮಹಿಳೆಯರನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ 37 ವರ್ಷದ ವ್ಯಕ್ತಿಯನ್ನು ನವೀ ಮುಂಬೈ ಪೊಲೀಸರು ಮಲಾಡ್​ ಎಂಬಲ್ಲಿ ಬಂಧಿಸಿದ್ದಾರೆ. ಈತನ ಹೆಸರು ಮಹೇಶ್​ ಅಲಿಯಾಸ್ ಕರಣ್​ ಗುಪ್ತಾ. ಇವನು ಮೆಕ್ಯಾನಿಕಲ್​ ಇಂಜನಿಯರ್​ ಆಗಿದ್ದು, ಹಲವು ಗೌರವಾನ್ವಿತ ಕಂಪನಿಗಳಲ್ಲಿ ಕೆಲಸ ಕೂಡ ಮಾಡಿದ್ದಾನೆ. ಮ್ಯಾಟ್ರಿಮೋನಿ ಮೂಲಕ ಮಹಿಳೆಯರನ್ನು ವಂಚಿಸಿ ಅತ್ಯಾಚಾರ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕರಣ್​ ಗುಪ್ತಾ ತುಂಬ ಮ್ಯಾಟ್ರಿಮೋನಿಯಲ್​ ಸೈಟ್​​ನಲ್ಲಿ ಹಲವು ನಕಲಿ ಖಾತೆಗಳನ್ನು ಹೊಂದಿದ್ದ. ಅದರ ಮೂಲಕ ಆತ ವಿದ್ಯಾವಂತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ವಧು-ವರರ ವೇದಿಕೆ ಮೂಲಕ ಅಂಥ ಯುವತಿಯರನ್ನು ಹುಡುಕಿ, ಅವರನ್ನು ಸಂಪರ್ಕ ಮಾಡುತ್ತಿದ್ದ. ಬಳಿಕ ಅವರಿಂದ ಫೋನ್​ ನಂಬರ್​ ಪಡೆಯುತ್ತಿದ್ದ. ಪಬ್​, ರೆಸ್ಟೋರೆಂಟ್​​ಗಳಲ್ಲಿ ಭೇಟಿಯಾಗೋಣ ಎಂದು ಕರೆಯುತ್ತಿದ್ದ. ತನ್ನನ್ನು ತಾನು ಸಭ್ಯನಂತೆ ಬಿಂಬಿಸಿಕೊಳ್ಳುತ್ತಿದ್ದ. ಹೀಗೆ ಭೇಟಿಯಾದ ಸಂದರ್ಭದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವ್ಯಕ್ತಿ ಪ್ರತಿಬಾರಿಯೂ ತನ್ನ ಫೋನ್​ನಂಬರ್​ ಬದಲಿಸುತ್ತಿದ್ದ. ಪ್ರತೀಸಲ ಊಬರ್​, ಓಲಾ ಕ್ಯಾಬ್​ಗಳನ್ನು ಬುಕ್​​ ಮಾಡುವಾಗಲೂ ಬೇರೆಬೇರೆ ಸಿಮ್​​ಗಳನ್ನೇ  ಬಳಸುತ್ತಿದ್ದ. ಈ ವ್ಯಕ್ತಿಗೆ ಕಂಪ್ಯೂಟರ್​ ಬಗ್ಗೆಯೂ ಅಪಾರ ತಿಳಿವಳಿಕೆ ಇದೆ. ಹ್ಯಾಕರ್​ ಕೂಡ ಹೌದು ಎಂದು ಮುಂಬೈ ಡೆಪ್ಯೂಟಿ ಪೊಲೀಸ್​ ಕಮೀಷನರ್​​ ಸುರೇಶ್​ ಮೆಂಗಾಡೆ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಗುಪ್ತಾ 12 ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸೆದಿದ್ದಾನೆಂದು ಅನ್ನಿಸುತ್ತದೆ. ಆದರೆ ಆ ಸಂಖ್ಯೆ ದೊಡ್ಡದಿದೆ ಎಂಬುದು ನಮ್ಮ ಅನುಮಾನ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲಸಿಕೆ ಪಡೆದ ಆ ಯುವಕನ ರೀತಿಯೇ ವೈರಲ್​ ಆಯ್ತು ಪ್ರಶಾಂತ್​ ನೀಲ್ ಫೋಟೋ​; ಆದರೆ ಕಾರಣ ಬೇರೆ

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ