AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಂಧನ; ಮ್ಯಾಟ್ರಿಮೋನಿ ತಾಣದಲ್ಲೇ ಟಾರ್ಗೆಟ್​ ಮಾಡ್ತಿದ್ದ

ಈ ವ್ಯಕ್ತಿ ಪ್ರತಿಬಾರಿಯೂ ತನ್ನ ಫೋನ್​ನಂಬರ್​ ಬದಲಿಸುತ್ತಿದ್ದ. ಪ್ರತೀಸಲ ಊಬರ್​, ಓಲಾ ಕ್ಯಾಬ್​ಗಳನ್ನು ಬುಕ್​​ ಮಾಡುವಾಗಲೂ ಬೇರೆಬೇರೆ ಸಿಮ್​​ಗಳನ್ನೇ  ಬಳಸುತ್ತಿದ್ದ. ಈ ವ್ಯಕ್ತಿಗೆ ಕಂಪ್ಯೂಟರ್​ ಬಗ್ಗೆಯೂ ಅಪಾರ ತಿಳಿವಳಿಕೆ ಇದೆ. ಹ್ಯಾಕರ್​ ಕೂಡ ಹೌದು ಎಂದು ಮುಂಬೈ ಡೆಪ್ಯೂಟಿ ಪೊಲೀಸ್​ ಕಮೀಷನರ್​​ ಸುರೇಶ್​ ಮೆಂಗಾಡೆ ತಿಳಿಸಿದ್ದಾರೆ.

12 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಂಧನ; ಮ್ಯಾಟ್ರಿಮೋನಿ ತಾಣದಲ್ಲೇ ಟಾರ್ಗೆಟ್​ ಮಾಡ್ತಿದ್ದ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jun 08, 2021 | 5:26 PM

ಸುಮಾರು 12 ಮಹಿಳೆಯರನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ 37 ವರ್ಷದ ವ್ಯಕ್ತಿಯನ್ನು ನವೀ ಮುಂಬೈ ಪೊಲೀಸರು ಮಲಾಡ್​ ಎಂಬಲ್ಲಿ ಬಂಧಿಸಿದ್ದಾರೆ. ಈತನ ಹೆಸರು ಮಹೇಶ್​ ಅಲಿಯಾಸ್ ಕರಣ್​ ಗುಪ್ತಾ. ಇವನು ಮೆಕ್ಯಾನಿಕಲ್​ ಇಂಜನಿಯರ್​ ಆಗಿದ್ದು, ಹಲವು ಗೌರವಾನ್ವಿತ ಕಂಪನಿಗಳಲ್ಲಿ ಕೆಲಸ ಕೂಡ ಮಾಡಿದ್ದಾನೆ. ಮ್ಯಾಟ್ರಿಮೋನಿ ಮೂಲಕ ಮಹಿಳೆಯರನ್ನು ವಂಚಿಸಿ ಅತ್ಯಾಚಾರ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕರಣ್​ ಗುಪ್ತಾ ತುಂಬ ಮ್ಯಾಟ್ರಿಮೋನಿಯಲ್​ ಸೈಟ್​​ನಲ್ಲಿ ಹಲವು ನಕಲಿ ಖಾತೆಗಳನ್ನು ಹೊಂದಿದ್ದ. ಅದರ ಮೂಲಕ ಆತ ವಿದ್ಯಾವಂತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ವಧು-ವರರ ವೇದಿಕೆ ಮೂಲಕ ಅಂಥ ಯುವತಿಯರನ್ನು ಹುಡುಕಿ, ಅವರನ್ನು ಸಂಪರ್ಕ ಮಾಡುತ್ತಿದ್ದ. ಬಳಿಕ ಅವರಿಂದ ಫೋನ್​ ನಂಬರ್​ ಪಡೆಯುತ್ತಿದ್ದ. ಪಬ್​, ರೆಸ್ಟೋರೆಂಟ್​​ಗಳಲ್ಲಿ ಭೇಟಿಯಾಗೋಣ ಎಂದು ಕರೆಯುತ್ತಿದ್ದ. ತನ್ನನ್ನು ತಾನು ಸಭ್ಯನಂತೆ ಬಿಂಬಿಸಿಕೊಳ್ಳುತ್ತಿದ್ದ. ಹೀಗೆ ಭೇಟಿಯಾದ ಸಂದರ್ಭದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವ್ಯಕ್ತಿ ಪ್ರತಿಬಾರಿಯೂ ತನ್ನ ಫೋನ್​ನಂಬರ್​ ಬದಲಿಸುತ್ತಿದ್ದ. ಪ್ರತೀಸಲ ಊಬರ್​, ಓಲಾ ಕ್ಯಾಬ್​ಗಳನ್ನು ಬುಕ್​​ ಮಾಡುವಾಗಲೂ ಬೇರೆಬೇರೆ ಸಿಮ್​​ಗಳನ್ನೇ  ಬಳಸುತ್ತಿದ್ದ. ಈ ವ್ಯಕ್ತಿಗೆ ಕಂಪ್ಯೂಟರ್​ ಬಗ್ಗೆಯೂ ಅಪಾರ ತಿಳಿವಳಿಕೆ ಇದೆ. ಹ್ಯಾಕರ್​ ಕೂಡ ಹೌದು ಎಂದು ಮುಂಬೈ ಡೆಪ್ಯೂಟಿ ಪೊಲೀಸ್​ ಕಮೀಷನರ್​​ ಸುರೇಶ್​ ಮೆಂಗಾಡೆ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಗುಪ್ತಾ 12 ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸೆದಿದ್ದಾನೆಂದು ಅನ್ನಿಸುತ್ತದೆ. ಆದರೆ ಆ ಸಂಖ್ಯೆ ದೊಡ್ಡದಿದೆ ಎಂಬುದು ನಮ್ಮ ಅನುಮಾನ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲಸಿಕೆ ಪಡೆದ ಆ ಯುವಕನ ರೀತಿಯೇ ವೈರಲ್​ ಆಯ್ತು ಪ್ರಶಾಂತ್​ ನೀಲ್ ಫೋಟೋ​; ಆದರೆ ಕಾರಣ ಬೇರೆ

ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ
VIDEO: ಮೈದಾನದಲ್ಲೇ ಹೊಡೆದಾಟ... ಬಾಂಗ್ಲಾ ಆಟಗಾರನಿಗೆ ಪಂಚ್
VIDEO: ಮೈದಾನದಲ್ಲೇ ಹೊಡೆದಾಟ... ಬಾಂಗ್ಲಾ ಆಟಗಾರನಿಗೆ ಪಂಚ್