AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣದಲ್ಲಿ ಭಾರೀ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಸಿಕಂದರಾಬಾದ್ ಕ್ಲಬ್

Secunderabad Club ಮುಂಜಾನೆ 3 ಗಂಟೆ ಸುಮಾರಿಗೆ ಪಾರಂಪರಿಕ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಭಾರೀ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಸಿಕಂದರಾಬಾದ್ ಕ್ಲಬ್
ಸುಟ್ಟು ಭಸ್ಮವಾದ ಸಿಕಂದರಾಬಾದ್ ಕ್ಲಬ್
TV9 Web
| Edited By: |

Updated on:Jan 16, 2022 | 11:54 AM

Share

ಹೈದರಾಬಾದ್: ದೇಶದ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾದ ತೆಲಂಗಾಣದ (Telangana)  ಸಿಕಂದರಾಬಾದ್ ಕ್ಲಬ್‌ನಲ್ಲಿ ಭಾನುವಾರ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 144 ವರ್ಷಗಳಷ್ಟು ಹಳೆಯದಾದ ಕಟ್ಟಡ ಸುಟ್ಟು ಭಸ್ಮವಾಗಿದೆ. ಮುಂಜಾನೆ 3 ಗಂಟೆ ಸುಮಾರಿಗೆ ಪಾರಂಪರಿಕ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಾವು ತಕ್ಷಣವೇ 10 ಅಗ್ನಿಶಾಮಕ ವಾಹನಗಳೊಂದಿಗೆ ನಾವು ಕಟ್ಟಡಕ್ಕೆ ಧಾವಿಸಿದ್ದೇವೆ. ಬೆಂಕಿಯನ್ನು ಹತೋಟಿಗೆ ತರಲು ಸುಮಾರು ಮೂರ್ನಾಲ್ಕು ಗಂಟೆ ಬೇಕಾಯಿತು. ಇಡೀ ಕ್ಲಬ್ ಬೂದಿಯಾಯಿತು ಎಂದು ಅಧಿಕಾರಿ ಹೇಳಿದರು.  ಮಕರ ಸಂಕ್ರಾಂತಿ (Makara Sankranthi) ಹಬ್ಬದ ನಿಮಿತ್ತ ಶನಿವಾರ ಕ್ಲಬ್ ಮುಚ್ಚಲಾಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆವರಣದಲ್ಲಿ “ಬಹಳಷ್ಟು ದಹಿಸುವ ವಸ್ತುಗಳು” ಇರುವುದರಿಂದ ಬೆಂಕಿಯನ್ನು ನಂದಿಸಲು ಸಾಕಷ್ಟು ಹರಸಾಹಸ ಪಡಬೇಕಾಯಿತು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯಲ್ಲಿ ಹಲವಾರು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿವೆ ಎಂದು ನಂಬಲಾಗಿದೆ. 1878 ರಲ್ಲಿ ಬ್ರಿಟಿಷರು ಸ್ಥಾಪಿಸಿದ ಕ್ಲಬ್ ಭಾರತದ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾಗಿದೆ ಎಂದು ಪ್ರಸಿದ್ಧ ಪರಂಪರೆ ಸಂರಕ್ಷಣಾವಾದಿ ಅನುರಾಧಾ ರೆಡ್ಡಿ ಮತ್ತು ಸಿಕಂದರಾಬಾದ್ ಕ್ಲಬ್‌ನ ಸದಸ್ಯೆ ಹೇಳಿದರು.

“ಕ್ಲಬ್ ನನ್ನ ಮನೆಗೆ ಬಹಳ ಹತ್ತಿರದಲ್ಲಿದೆ. ಯಾವುದೋ ಅಪಘಾತ ಸಂಭವಿಸಿದೆ ಎಂದು ನಾನು ಭಾವಿಸಿದೆ. ಇಂದು ಬೆಳಿಗ್ಗೆ ಘಟನೆಯ ಬಗ್ಗೆ ನನಗೆ ತಿಳಿಯಿತು,” ಎಂದು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ಯ ಸಂಚಾಲಕರೂ ಆಗಿರುವ ರೆಡ್ಡಿ ಅವರು ಹೇಳಿದರು, ಅವರಿಗೆ ಮುಂಜಾನೆ ದೊಡ್ಡ ಶಬ್ದಗಳನ್ನು ಕೇಳಿಸಿತ್ತು .

ಕ್ಲಬ್‌ನ ಶತಮಾನದಷ್ಟು ಹಳೆಯದಾದ ಮೇನ್ ಕ್ಲಬ್ ಹೌಸ್‌ಗೆ 2017 ರಲ್ಲಿ ಹೈದರಾಬಾದ್ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿಯು ಪಾರಂಪರಿಕ ಸ್ಥಾನಮಾನವನ್ನು ನೀಡಿತು. ಮಿಲಿಟರಿ ಅಧಿಕಾರಿಗಳು, ರಾಜತಾಂತ್ರಿಕರು, ಪೊಲೀಸ್ ಅಧಿಕಾರಿಗಳು, ವೃತ್ತಿಪರರು, ವಿಜ್ಞಾನಿಗಳು ಮತ್ತು ಉದ್ಯಮಿಗಳು ಸೇರಿದಂತೆ 8,000 ಸದಸ್ಯರನ್ನು ಕ್ಲಬ್ ಹೊಂದಿದೆ.

ಸಿಕಂದರಾಬಾದ್ ವಿಭಾಗದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಧುಸೂಧನ್ ರಾವ್, “ಬೆಳಿಗ್ಗೆ 3.15 ರ ಸುಮಾರಿಗೆ ನಮಗೆ ಬೆಂಕಿ ಕಾಣಿಸಿಕೊಂಡಿದೆ ಎಂಬ ಸಂದೇಶವನ್ನು ಸ್ವೀಕರಿಸಿದ ತಕ್ಷಣ ಏಳು ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಪಾರಂಪರಿಕ ಕಟ್ಟಡದ ಹಲವಾರು ಭಾಗಗಳು, ಛಾವಣಿ ಸೇರಿದಂತೆ, ಮರದಿಂದ ಮಾಡಲ್ಪಟ್ಟಿದೆ, ಆದ್ದರಿಂದ ರಚನೆಯ ಪ್ರಮುಖ ಭಾಗವನ್ನು ಸುಟ್ಟು ಹೋಗಿವೆ ಮದ್ಯವನ್ನು ಸಂಗ್ರಹಿಸಲಾಗಿದೆ ಎಂದು ನಂಬಲಾದ ಹಾಲ್ ಮತ್ತು ಕೊಠಡಿ ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದಿದ್ದಾರೆ.

ಭಾರತದ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾದ ಸಿಕಂದರಾಬಾದ್ ಕ್ಲಬ್ ಅನ್ನು 1878 ರಲ್ಲಿ ಸ್ಥಾಪಿಸಲಾಯಿತು. ಈ ಹಿಂದೆ ಭೂತ ಬಂಗ್ಲೆಯಂತಿದ್ದ ಲಾಡ್ಜ್ ನಲ್ಲಿ ಸಾಲಾರ್ ಜಂಗ್ I, ನಿಜಾಮನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮೀರ್ ತುರಾಬ್ ಅಲಿ ಖಾನ್ ಅವರು ತಮ್ಮ ಬೇಟೆಯ ಪ್ರವಾಸದ ಸಮಯದಲ್ಲಿ ಅಲ್ಲಿಯೇ ಇರುತ್ತಿದ್ದರು.

ಸಿಕಂದರಾಬಾದ್ ಕ್ಲಬ್ ಅನ್ನು ಸಿಕಂದರಾಬಾದ್ ಸಾರ್ವಜನಿಕ ಕೊಠಡಿ ಎಂದು ಕರೆಯಲಾಗುತ್ತಿತ್ತು. ನಂತರ, ಹೈದರಾಬಾದ್‌ನಲ್ಲಿ ಬ್ರಿಟಿಷರ ಉಪಸ್ಥಿತಿಯು ಹೆಚ್ಚಾಯಿತು ಮತ್ತು ಬ್ರಿಟಿಷರು ನಿಜಾಮರ ರೈಲ್ವೆ ಮತ್ತು ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ನಾಗರಿಕ ಅಧಿಕಾರಿಗಳನ್ನು ಕರೆತಂದರು. ಸಿಕಂದರಾಬಾದ್ ಸಾರ್ವಜನಿಕ ಕೊಠಡಿಗಳನ್ನು ಸೇವೆಗಳ ಎಲ್ಲಾ ವಿಭಾಗಗಳನ್ನು ಪ್ರತಿನಿಧಿಸುವ ಯುನೈಟೆಡ್ ಸರ್ವಿಸಸ್ ಕ್ಲಬ್ ಆಗಿ ಪರಿವರ್ತಿಸಲಾಯಿತು.

1947 ರವರೆಗೆ, ಬ್ರಿಟಿಷ್ ನಾಗರಿಕರಿಗೆ ಮಾತ್ರ ಕ್ಲಬ್ ಅಧ್ಯಕ್ಷ ಸ್ಥಾನವನ್ನು ಹೊಂದಲು ಅವಕಾಶವಿತ್ತು ಮತ್ತು ಕೆಲವೇ ಕೆಲವು ಉನ್ನತ ಶ್ರೇಣಿಯ ಹೈದರಾಬಾದ್ ಶ್ರೀಮಂತರಿಗೆ ಸದಸ್ಯತ್ವವನ್ನು ನೀಡಲಾಯಿತು.  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಕ್ಲಬ್ ಸದಸ್ಯ ಪ್ರಕಾಶ್ ಅಮ್ಮನಬೋಳು ತಿಳಿಸಿದ್ದಾರೆ. ಶನಿವಾರದಂದು ರಜೆ ಇದ್ದ ಕಾರಣ, ಶನಿವಾರ ಸಂಜೆ ಮಾತ್ರ ಭಾಗಶಃ ಸೇವೆಗಳು ತೆರೆದಿದ್ದವು.

ಇದನ್ನೂ ಓದಿ: ಬ್ರಿಟನ್: ಪ್ರಯಾಣಿಕರಿಗೆ ಕಡ್ಡಾಯ ಕೊವಿಡ್ ಟೆಸ್ಟ್ ನಿಯಮದಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ಸಂಪೂರ್ಣ ಮಾಹಿತಿ ಇಲ್ಲಿದೆ

Published On - 11:31 am, Sun, 16 January 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ