AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಜಾಗವಿಲ್ಲದೆ, ಮರದ ಮೇಲೆ 11 ದಿನ ಐಸೋಲೇಟ್ ಆದ ಕೊವಿಡ್​ 19 ಸೋಂಕಿತ ಯುವಕ..

ಈ ಯುವಕನ ಹೆಸರು ಶಿವ. ಕೊರೊನಾ ಸೋಂಕಿತನಾಗಿದ್ದು, ಸೌಮ್ಯ ಲಕ್ಷಣಗಳು ಇದ್ದವು. ಆದರೆ ಮನೆಯಲ್ಲಿ ಐಸೋಲೇಟ್ ಆಗೋಣವೆಂದರೆ ಜಾಗವಿಲ್ಲ. ಬೇರೆ ದಾರಿ ಕಾಣದೆ ಈತ ಮನೆಯಿಂದ ಸ್ವಲ್ಪದೂರದಲ್ಲಿರುವ ಮರವನ್ನೇ ಆಶ್ರಯಿಸಿದ್ದಾನೆ.

ಮನೆಯಲ್ಲಿ ಜಾಗವಿಲ್ಲದೆ, ಮರದ ಮೇಲೆ 11 ದಿನ ಐಸೋಲೇಟ್ ಆದ ಕೊವಿಡ್​ 19 ಸೋಂಕಿತ ಯುವಕ..
ತೆಲೆಂಗಾಣದಲ್ಲಿ ಯುವಕ ಮರ ಏರಿ ಕುಳಿತಿರುವುದು
Lakshmi Hegde
|

Updated on: May 16, 2021 | 8:53 PM

Share

ಹೈದರಾಬಾದ್​: ತೆಲಂಗಾಣದ ನಲಗೊಂಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೊವಿಡ್​ 19 ರೋಗಿಗಳಿಗೆ ಮನೆಯಲ್ಲಿ ಐಸೋಲೇಟ್​ ಆಗುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಹಳ್ಳಿಯ ಹಲವು ಮನೆಗಳು ಕೇವಲ ಒಂದೇ ಕೋಣೆಯನ್ನು ಹೊಂದಿವೆ..ಹೀಗಾಗಿ ಕೊರೊನಾ ಸೋಂಕಿತರು ಪ್ರತ್ಯೇಕವಾಗಿ ಇರಲು ಸಾಧ್ಯವೇ ಆಗುತ್ತಿಲ್ಲ. ಈ ವಿಚಾರ ಬೆಳಕಿಗೆ ಬಂದಿದ್ದು, 18 ವರ್ಷದ ಕೊರೊನಾ ಸೋಂಕಿನ ಯುವಕನೊಬ್ಬ ಮರದ ಮೇಲೆ ಐಸೋಲೇಟ್ ಆದ ಫೋಟೋ ವೈರಲ್ ಆದಬಳಿಕ.. !

ಈ ಯುವಕನ ಹೆಸರು ಶಿವ. ಕೊರೊನಾ ಸೋಂಕಿತನಾಗಿದ್ದು, ಸೌಮ್ಯ ಲಕ್ಷಣಗಳು ಇದ್ದವು. ಆದರೆ ಮನೆಯಲ್ಲಿ ಐಸೋಲೇಟ್ ಆಗೋಣವೆಂದರೆ ಜಾಗವಿಲ್ಲ. ಬೇರೆ ದಾರಿ ಕಾಣದೆ ಈತ ಮನೆಯಿಂದ ಸ್ವಲ್ಪದೂರದಲ್ಲಿರುವ ಮರದ ಮೇಲೆ ಬಂಬೂ ಕೋಲುಗಳಿಂದ ಸಣ್ಣ ಮಂಚ ನಿರ್ಮಿಸಿಕೊಂಡು, ಅದರ ಮೇಲೆಲ್ಲ ಬೆಡ್​ಶೀಟ್​ ಹಾಕಿಕೊಂಡು ಐಸೋಲೇಟ್​ ಕೋಣೆ ಮಾಡಿಕೊಂಡಿದ್ದಾರೆ. ಈ ಯುವಕ ಮರದ ಮೇಲೆ ಕುಳಿತು, ಮೊಬೈಲ್​ ನೋಡುತ್ತಿರುವ ಫೋಟೋ ವೈರಲ್ ಆಗಿದೆ.

ನಲಗೊಂಡ ಜಿಲ್ಲೆಯ ಕೋಠಾನಂದಿಕೊಂಡಾ ಎಂಬ ಬುಡಕಟ್ಟು ಜನಾಂಗದವರ ಹಳ್ಳಿಯ ನಿವಾಸಿ ಈ ಶಿವ. ಇವರಿಗೆ ಕೊರೊನಾ ಸೋಂಕು ಇರುವುದು ಮೇ 4ರಂದು ದೃಢಪಟ್ಟಿತ್ತು. ಆ ಹಳ್ಳಿಯಲ್ಲಿ ಕೊರೊನಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕೆಲವು ಸ್ವಯಂ ಸೇವಕರು ಶಿವ ಅವರ ಬಳಿ ನೀವು ಮನೆಯಿಂದ ಪ್ರತ್ಯೇಕವಾಗಿರಿ ಎಂದು ಹೇಳಿದರು. ಆದರೆ ಮನೆಯಲ್ಲಿ ಸ್ಥಳವೇ ಇಲ್ಲದ ಕಾರಣ ಹೀಗೆ ಮರ ಹತ್ತಬೇಕಾಯಿತು ಎಂದು ಶಿವ ಅವರು ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಾಗೇ, ಇದೇ ಮರದ ಮೇಲೆ ಅವರು 11ದಿನ ಕಳೆದಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ.

ಕೋಠಾನಂದಿಕೊಂಡಾದಲ್ಲಿ ಸುಮಾರು 350 ಕುಟುಂಬಗಳು ವಾಸವಾಗಿವೆ. ಇಲ್ಲಿಂದ ಸಮೀಪದ ಆರೋಗ್ಯಕೇಂದ್ರಕ್ಕೆ ಹೋಗಬೇಕು ಎಂದರೆ 5 ಕಿಮೀ ದೂರ ಹೋಗಬೇಕು. ಹಾಗೇ, ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದರೆ ಚಿಕಿತ್ಸೆ ಪಡೆಯಲು 30 ಕಿಮೀ ದೂರ ಸಾಗಬೇಕು. ಇನ್ನು ಈ ಯುವಕ ಮರದ ಮೇಲೆ ಐಸೋಲೇಟ್ ಆದ ಬಗ್ಗೆ, ಅಲ್ಲಿನ ಆರೋಗ್ಯ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಲು ಮಾಧ್ಯಮವೊಂದು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿತ್ತು. ಆದರೆ ಜಿಲ್ಲಾಧಿಕಾರಿ ಸೇರಿ, ಯಾವುದೇ ಅಧಿಕಾರಿಗಳೂ ಕರೆ ಸ್ವೀಕರಿಸುತ್ತಿಲ್ಲ ಎಂದು ಮಾಧ್ಯಮ ಪ್ರಕಟಿಸಿದೆ.

ಇದನ್ನೂ ಓದಿ: ಈ ಬುದ್ಧಿ ಮ್ಯಾಚ್ ಫಿಕ್ಸಿಂಗ್ ವೇಳೆ ಇರಬೇಕಿತ್ತು; ಕೊಹ್ಲಿ ಪರ ಮಾತನಾಡಿದ್ದ ಪಾಕ್ ಕ್ರಿಕೆಟಿಗನಿಗೆ ವಾನ್ ತರಾಟೆ

Covid-19 Karnataka Update: ಕಳೆದ 24 ಗಂಟೆಗಳಲ್ಲಿ ಬೆಂಗಳೂರಲ್ಲಿ 8,344, ಇತರ ಜಿಲ್ಲೆಗಳಲ್ಲಿ 23,197 ಕೊವಿಡ್ ಸೋಂಕಿತರು ಪತ್ತೆ

(A student who infected by coronavirus isolated on tree in Telangana)

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!