Sign In

By signing in or creating an account, you agree with Associated Broadcasting Company's Terms & Conditions and Privacy Policy.

Driving Licence: ಡ್ರೈವಿಂಗ್ ಲೈಸೆನ್ಸ್​ ನವೀಕರಣ ಸೇರಿ, 16 ಸೇವೆಗಳನ್ನು ಆನ್​ಲೈನ್​ ಮೂಲಕ ಪಡೆಯಲು ಆಧಾರ್​ ದೃಢೀಕರಣ ಅಗತ್ಯ

ಸುರಕ್ಷತೆ ದೃಷ್ಟಿಯಿಂದ aadhaar authentication ಅನಿವಾರ್ಯವಾಗಿದೆ. ವಾಹನಕ್ಕೆ ಸಂಬಂಧಪಟ್ಟಂತ ನಕಲಿ ದಾಖಲೆಗಳು, ಲೈಸೆನ್ಸ್​ಗಳನ್ನು ಹೊಂದುವುದನ್ನು ತಪ್ಪಿಸಲು ಇದು ಸಹಕಾರಿ ಎಂದು ಸಾರಿಗೆ ಇಲಾಖೆ ತನ್ನ ಪ್ರಸ್ತಾವನೆಯಲ್ಲಿ ವಿವರಿಸಿದೆ.

Driving Licence: ಡ್ರೈವಿಂಗ್ ಲೈಸೆನ್ಸ್​ ನವೀಕರಣ ಸೇರಿ, 16 ಸೇವೆಗಳನ್ನು ಆನ್​ಲೈನ್​ ಮೂಲಕ ಪಡೆಯಲು ಆಧಾರ್​ ದೃಢೀಕರಣ ಅಗತ್ಯ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Feb 10, 2021 | 7:34 PM

ದೆಹಲಿ: ವಾಹನ ಮಾಲೀಕರಾಗಿದ್ದು, ವಾಹನ ಚಾಲನಾ ಪರವಾನಗಿ ಹೊಂದಿರುವವರು ಡಿಎಲ್​ ನವೀಕರಣ ಸೇರಿ ಒಟ್ಟು 16 ರೀತಿಯ ಸೇವೆಗಳನ್ನು ಸಾರಿಗೆ ಇಲಾಖೆಯ ಆನ್​ಲೈನ್ ಪೋರ್ಟಲ್​ ಮೂಲಕ ಪಡೆಯಲು ಆಧಾರ್​ ಸಂಖ್ಯೆಯ ದೃಢೀಕರಣ ಮಾಡಿಕೊಳ್ಳಬೇಕಾಗುತ್ತದೆ. ನೀವು ಸಾರಿಗೆ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡದೆ, ಸಂಪರ್ಕಿಸದೆ ಆನ್​ಲೈನ್​ ಮೂಲಕವೇ ಡಿಎಲ್​ (ವಾಹನ ಚಾಲನಾ ಪರವಾನಗಿ) ನವೀಕರಣ, ವಾಹನ ಕಲಿಕಾ ಪರವಾನಗಿ, ವಿಳಾಸ ಬದಲಾವಣೆ, ನೋಂದಣಿ ಪ್ರಮಾಣ ಪತ್ರ, ಅಂತಾರಾಷ್ಟ್ರೀಯ ಚಾಲನಾ ಪರವಾನಗಿ (international driving licence​), ವಾಹನ ಮಾಲೀಕತ್ವ ವರ್ಗಾವಣೆ ಅರ್ಜಿ, ಮತ್ತು ವರ್ಗಾವಣೆ ನೋಟಿಸ್​ ಪಡೆಯುವುದು ಸೇರಿ ಒಟ್ಟು 16 ರೀತಿಯ ಸರ್ವೀಸ್​ ಪಡೆಯಲು ಬಯಸುತ್ತೀರಿ ಎಂದಾದರೆ ಆಧಾರ್ ದೃಢೀಕರಣ ಬೇಕೇಬೇಕು.

ಈ ಬಗ್ಗೆ ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ಕರಡು ಆದೇಶ ಹೊರಡಿಸಿದೆ. ಯಾರೇ ಆಗಲಿ, ಆನ್​ಲೈನ್​ ಮೂಲಕವೇ ನೀವು ಸರ್ವೀಸ್​ ಪಡೆಯಲು ಬಯಸುತ್ತೀರಿ ಎಂದಾದರೆ ನಿಮ್ಮ ಆಧಾರ್​ ದೃಢೀಕರಣ ಮಾಡಿಕೊಳ್ಳಲೇಬೇಕು. ಇನ್ನು ಹೀಗೆ ಆಧಾರ್​ ದೃಢೀಕರಣಕ್ಕೆ ಒಪ್ಪದೆ ಇದ್ದವರು ಸಾರಿಗೆ ಕಚೇರಿಗೇ ಹೋಗಿ ನಿಮ್ಮ ಕೆಲಸ ಮಾಡಿಕೊಳ್ಳಬಹುದು ಎಂದೂ ಸಾರಿಗೆ ಇಲಾಖೆ ತಿಳಿಸಿದೆ.

ಉತ್ತಮ ಆಡಳಿತದ ಒಂದು ಭಾಗವಾಗಿ ಈ ಕರಡು ಆದೇಶ ಪ್ರಸ್ತಾಪಿಸಿದ್ದಾಗಿ ಸಾರಿಗೆ ಇಲಾಖೆ ಹೇಳಿಕೊಂಡಿದ್ದು, ಈಗಾಗಲೇ ಅದಕ್ಕೆ ಹಲವು ಸಲಹೆ, ಆಕ್ಷೇಪಣೆಗಳು ಬಂದಿವೆ. ಇತ್ತೀಚೆಗೆ ಆನ್​ಲೈನ್​ ಮೂಲಕವೇ ಎಲ್ಲ ಕೆಲಸ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಅದು ಸುಲಭವೂ ಹೌದು. ಆದರೆ ಸುರಕ್ಷತೆ ದೃಷ್ಟಿಯಿಂದ ಆಧಾರ್​ಕಾರ್ಡ್​ ದೃಢೀಕರಣ ಅನಿವಾರ್ಯವಾಗಿದೆ. ವಾಹನಕ್ಕೆ ಸಂಬಂಧಪಟ್ಟಂತ ನಕಲಿ ದಾಖಲೆಗಳು, ಲೈಸೆನ್ಸ್​ಗಳನ್ನು ಹೊಂದುವುದನ್ನು, ಒಂದಕ್ಕಿಂತ ಹೆಚ್ಚು ಪರವಾನಗಿಗಳನ್ನು ಪಡೆಯುವುದನ್ನು ತಪ್ಪಿಸಲು ಇದು ಸಹಕಾರಿ ಎಂದು ಸಾರಿಗೆ ಇಲಾಖೆ ತನ್ನ ಪ್ರಸ್ತಾವನೆಯಲ್ಲಿ ವಿವರಿಸಿದೆ. ಹಾಗೇ, ಇದು ಸ್ವಯಂಪ್ರೇರಿತವಾಗಿದ್ದು, ಕಡ್ಡಾಯವಲ್ಲ. ಆಯಾ ರಾಜ್ಯಸರ್ಕಾರಗಳು ಈ ಕ್ರಮವನ್ನು ಉತ್ತೇಜಿಸಬೇಕು. ಜನರಲ್ಲಿ ಅರಿವು ಮೂಡಿಸಬೇಕು ಎಂದೂ ತಿಳಿಸಿದೆ.

ಇದನ್ನೂ ಓದಿ: RBI Grade B Recruitment 2021: ಗ್ರೇಡ್​ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RBI; ಖಾಲಿ ಇವೆ ಒಟ್ಟು 322 ಹುದ್ದೆ

Published On - 7:08 pm, Wed, 10 February 21

ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ