AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Driving Licence: ಡ್ರೈವಿಂಗ್ ಲೈಸೆನ್ಸ್​ ನವೀಕರಣ ಸೇರಿ, 16 ಸೇವೆಗಳನ್ನು ಆನ್​ಲೈನ್​ ಮೂಲಕ ಪಡೆಯಲು ಆಧಾರ್​ ದೃಢೀಕರಣ ಅಗತ್ಯ

ಸುರಕ್ಷತೆ ದೃಷ್ಟಿಯಿಂದ aadhaar authentication ಅನಿವಾರ್ಯವಾಗಿದೆ. ವಾಹನಕ್ಕೆ ಸಂಬಂಧಪಟ್ಟಂತ ನಕಲಿ ದಾಖಲೆಗಳು, ಲೈಸೆನ್ಸ್​ಗಳನ್ನು ಹೊಂದುವುದನ್ನು ತಪ್ಪಿಸಲು ಇದು ಸಹಕಾರಿ ಎಂದು ಸಾರಿಗೆ ಇಲಾಖೆ ತನ್ನ ಪ್ರಸ್ತಾವನೆಯಲ್ಲಿ ವಿವರಿಸಿದೆ.

Driving Licence: ಡ್ರೈವಿಂಗ್ ಲೈಸೆನ್ಸ್​ ನವೀಕರಣ ಸೇರಿ, 16 ಸೇವೆಗಳನ್ನು ಆನ್​ಲೈನ್​ ಮೂಲಕ ಪಡೆಯಲು ಆಧಾರ್​ ದೃಢೀಕರಣ ಅಗತ್ಯ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Feb 10, 2021 | 7:34 PM

Share

ದೆಹಲಿ: ವಾಹನ ಮಾಲೀಕರಾಗಿದ್ದು, ವಾಹನ ಚಾಲನಾ ಪರವಾನಗಿ ಹೊಂದಿರುವವರು ಡಿಎಲ್​ ನವೀಕರಣ ಸೇರಿ ಒಟ್ಟು 16 ರೀತಿಯ ಸೇವೆಗಳನ್ನು ಸಾರಿಗೆ ಇಲಾಖೆಯ ಆನ್​ಲೈನ್ ಪೋರ್ಟಲ್​ ಮೂಲಕ ಪಡೆಯಲು ಆಧಾರ್​ ಸಂಖ್ಯೆಯ ದೃಢೀಕರಣ ಮಾಡಿಕೊಳ್ಳಬೇಕಾಗುತ್ತದೆ. ನೀವು ಸಾರಿಗೆ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡದೆ, ಸಂಪರ್ಕಿಸದೆ ಆನ್​ಲೈನ್​ ಮೂಲಕವೇ ಡಿಎಲ್​ (ವಾಹನ ಚಾಲನಾ ಪರವಾನಗಿ) ನವೀಕರಣ, ವಾಹನ ಕಲಿಕಾ ಪರವಾನಗಿ, ವಿಳಾಸ ಬದಲಾವಣೆ, ನೋಂದಣಿ ಪ್ರಮಾಣ ಪತ್ರ, ಅಂತಾರಾಷ್ಟ್ರೀಯ ಚಾಲನಾ ಪರವಾನಗಿ (international driving licence​), ವಾಹನ ಮಾಲೀಕತ್ವ ವರ್ಗಾವಣೆ ಅರ್ಜಿ, ಮತ್ತು ವರ್ಗಾವಣೆ ನೋಟಿಸ್​ ಪಡೆಯುವುದು ಸೇರಿ ಒಟ್ಟು 16 ರೀತಿಯ ಸರ್ವೀಸ್​ ಪಡೆಯಲು ಬಯಸುತ್ತೀರಿ ಎಂದಾದರೆ ಆಧಾರ್ ದೃಢೀಕರಣ ಬೇಕೇಬೇಕು.

ಈ ಬಗ್ಗೆ ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ಕರಡು ಆದೇಶ ಹೊರಡಿಸಿದೆ. ಯಾರೇ ಆಗಲಿ, ಆನ್​ಲೈನ್​ ಮೂಲಕವೇ ನೀವು ಸರ್ವೀಸ್​ ಪಡೆಯಲು ಬಯಸುತ್ತೀರಿ ಎಂದಾದರೆ ನಿಮ್ಮ ಆಧಾರ್​ ದೃಢೀಕರಣ ಮಾಡಿಕೊಳ್ಳಲೇಬೇಕು. ಇನ್ನು ಹೀಗೆ ಆಧಾರ್​ ದೃಢೀಕರಣಕ್ಕೆ ಒಪ್ಪದೆ ಇದ್ದವರು ಸಾರಿಗೆ ಕಚೇರಿಗೇ ಹೋಗಿ ನಿಮ್ಮ ಕೆಲಸ ಮಾಡಿಕೊಳ್ಳಬಹುದು ಎಂದೂ ಸಾರಿಗೆ ಇಲಾಖೆ ತಿಳಿಸಿದೆ.

ಉತ್ತಮ ಆಡಳಿತದ ಒಂದು ಭಾಗವಾಗಿ ಈ ಕರಡು ಆದೇಶ ಪ್ರಸ್ತಾಪಿಸಿದ್ದಾಗಿ ಸಾರಿಗೆ ಇಲಾಖೆ ಹೇಳಿಕೊಂಡಿದ್ದು, ಈಗಾಗಲೇ ಅದಕ್ಕೆ ಹಲವು ಸಲಹೆ, ಆಕ್ಷೇಪಣೆಗಳು ಬಂದಿವೆ. ಇತ್ತೀಚೆಗೆ ಆನ್​ಲೈನ್​ ಮೂಲಕವೇ ಎಲ್ಲ ಕೆಲಸ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಅದು ಸುಲಭವೂ ಹೌದು. ಆದರೆ ಸುರಕ್ಷತೆ ದೃಷ್ಟಿಯಿಂದ ಆಧಾರ್​ಕಾರ್ಡ್​ ದೃಢೀಕರಣ ಅನಿವಾರ್ಯವಾಗಿದೆ. ವಾಹನಕ್ಕೆ ಸಂಬಂಧಪಟ್ಟಂತ ನಕಲಿ ದಾಖಲೆಗಳು, ಲೈಸೆನ್ಸ್​ಗಳನ್ನು ಹೊಂದುವುದನ್ನು, ಒಂದಕ್ಕಿಂತ ಹೆಚ್ಚು ಪರವಾನಗಿಗಳನ್ನು ಪಡೆಯುವುದನ್ನು ತಪ್ಪಿಸಲು ಇದು ಸಹಕಾರಿ ಎಂದು ಸಾರಿಗೆ ಇಲಾಖೆ ತನ್ನ ಪ್ರಸ್ತಾವನೆಯಲ್ಲಿ ವಿವರಿಸಿದೆ. ಹಾಗೇ, ಇದು ಸ್ವಯಂಪ್ರೇರಿತವಾಗಿದ್ದು, ಕಡ್ಡಾಯವಲ್ಲ. ಆಯಾ ರಾಜ್ಯಸರ್ಕಾರಗಳು ಈ ಕ್ರಮವನ್ನು ಉತ್ತೇಜಿಸಬೇಕು. ಜನರಲ್ಲಿ ಅರಿವು ಮೂಡಿಸಬೇಕು ಎಂದೂ ತಿಳಿಸಿದೆ.

ಇದನ್ನೂ ಓದಿ: RBI Grade B Recruitment 2021: ಗ್ರೇಡ್​ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RBI; ಖಾಲಿ ಇವೆ ಒಟ್ಟು 322 ಹುದ್ದೆ

Published On - 7:08 pm, Wed, 10 February 21

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ