AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Driving Licence: ಡ್ರೈವಿಂಗ್ ಲೈಸೆನ್ಸ್​ ನವೀಕರಣ ಸೇರಿ, 16 ಸೇವೆಗಳನ್ನು ಆನ್​ಲೈನ್​ ಮೂಲಕ ಪಡೆಯಲು ಆಧಾರ್​ ದೃಢೀಕರಣ ಅಗತ್ಯ

ಸುರಕ್ಷತೆ ದೃಷ್ಟಿಯಿಂದ aadhaar authentication ಅನಿವಾರ್ಯವಾಗಿದೆ. ವಾಹನಕ್ಕೆ ಸಂಬಂಧಪಟ್ಟಂತ ನಕಲಿ ದಾಖಲೆಗಳು, ಲೈಸೆನ್ಸ್​ಗಳನ್ನು ಹೊಂದುವುದನ್ನು ತಪ್ಪಿಸಲು ಇದು ಸಹಕಾರಿ ಎಂದು ಸಾರಿಗೆ ಇಲಾಖೆ ತನ್ನ ಪ್ರಸ್ತಾವನೆಯಲ್ಲಿ ವಿವರಿಸಿದೆ.

Driving Licence: ಡ್ರೈವಿಂಗ್ ಲೈಸೆನ್ಸ್​ ನವೀಕರಣ ಸೇರಿ, 16 ಸೇವೆಗಳನ್ನು ಆನ್​ಲೈನ್​ ಮೂಲಕ ಪಡೆಯಲು ಆಧಾರ್​ ದೃಢೀಕರಣ ಅಗತ್ಯ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Feb 10, 2021 | 7:34 PM

Share

ದೆಹಲಿ: ವಾಹನ ಮಾಲೀಕರಾಗಿದ್ದು, ವಾಹನ ಚಾಲನಾ ಪರವಾನಗಿ ಹೊಂದಿರುವವರು ಡಿಎಲ್​ ನವೀಕರಣ ಸೇರಿ ಒಟ್ಟು 16 ರೀತಿಯ ಸೇವೆಗಳನ್ನು ಸಾರಿಗೆ ಇಲಾಖೆಯ ಆನ್​ಲೈನ್ ಪೋರ್ಟಲ್​ ಮೂಲಕ ಪಡೆಯಲು ಆಧಾರ್​ ಸಂಖ್ಯೆಯ ದೃಢೀಕರಣ ಮಾಡಿಕೊಳ್ಳಬೇಕಾಗುತ್ತದೆ. ನೀವು ಸಾರಿಗೆ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡದೆ, ಸಂಪರ್ಕಿಸದೆ ಆನ್​ಲೈನ್​ ಮೂಲಕವೇ ಡಿಎಲ್​ (ವಾಹನ ಚಾಲನಾ ಪರವಾನಗಿ) ನವೀಕರಣ, ವಾಹನ ಕಲಿಕಾ ಪರವಾನಗಿ, ವಿಳಾಸ ಬದಲಾವಣೆ, ನೋಂದಣಿ ಪ್ರಮಾಣ ಪತ್ರ, ಅಂತಾರಾಷ್ಟ್ರೀಯ ಚಾಲನಾ ಪರವಾನಗಿ (international driving licence​), ವಾಹನ ಮಾಲೀಕತ್ವ ವರ್ಗಾವಣೆ ಅರ್ಜಿ, ಮತ್ತು ವರ್ಗಾವಣೆ ನೋಟಿಸ್​ ಪಡೆಯುವುದು ಸೇರಿ ಒಟ್ಟು 16 ರೀತಿಯ ಸರ್ವೀಸ್​ ಪಡೆಯಲು ಬಯಸುತ್ತೀರಿ ಎಂದಾದರೆ ಆಧಾರ್ ದೃಢೀಕರಣ ಬೇಕೇಬೇಕು.

ಈ ಬಗ್ಗೆ ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ಕರಡು ಆದೇಶ ಹೊರಡಿಸಿದೆ. ಯಾರೇ ಆಗಲಿ, ಆನ್​ಲೈನ್​ ಮೂಲಕವೇ ನೀವು ಸರ್ವೀಸ್​ ಪಡೆಯಲು ಬಯಸುತ್ತೀರಿ ಎಂದಾದರೆ ನಿಮ್ಮ ಆಧಾರ್​ ದೃಢೀಕರಣ ಮಾಡಿಕೊಳ್ಳಲೇಬೇಕು. ಇನ್ನು ಹೀಗೆ ಆಧಾರ್​ ದೃಢೀಕರಣಕ್ಕೆ ಒಪ್ಪದೆ ಇದ್ದವರು ಸಾರಿಗೆ ಕಚೇರಿಗೇ ಹೋಗಿ ನಿಮ್ಮ ಕೆಲಸ ಮಾಡಿಕೊಳ್ಳಬಹುದು ಎಂದೂ ಸಾರಿಗೆ ಇಲಾಖೆ ತಿಳಿಸಿದೆ.

ಉತ್ತಮ ಆಡಳಿತದ ಒಂದು ಭಾಗವಾಗಿ ಈ ಕರಡು ಆದೇಶ ಪ್ರಸ್ತಾಪಿಸಿದ್ದಾಗಿ ಸಾರಿಗೆ ಇಲಾಖೆ ಹೇಳಿಕೊಂಡಿದ್ದು, ಈಗಾಗಲೇ ಅದಕ್ಕೆ ಹಲವು ಸಲಹೆ, ಆಕ್ಷೇಪಣೆಗಳು ಬಂದಿವೆ. ಇತ್ತೀಚೆಗೆ ಆನ್​ಲೈನ್​ ಮೂಲಕವೇ ಎಲ್ಲ ಕೆಲಸ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಅದು ಸುಲಭವೂ ಹೌದು. ಆದರೆ ಸುರಕ್ಷತೆ ದೃಷ್ಟಿಯಿಂದ ಆಧಾರ್​ಕಾರ್ಡ್​ ದೃಢೀಕರಣ ಅನಿವಾರ್ಯವಾಗಿದೆ. ವಾಹನಕ್ಕೆ ಸಂಬಂಧಪಟ್ಟಂತ ನಕಲಿ ದಾಖಲೆಗಳು, ಲೈಸೆನ್ಸ್​ಗಳನ್ನು ಹೊಂದುವುದನ್ನು, ಒಂದಕ್ಕಿಂತ ಹೆಚ್ಚು ಪರವಾನಗಿಗಳನ್ನು ಪಡೆಯುವುದನ್ನು ತಪ್ಪಿಸಲು ಇದು ಸಹಕಾರಿ ಎಂದು ಸಾರಿಗೆ ಇಲಾಖೆ ತನ್ನ ಪ್ರಸ್ತಾವನೆಯಲ್ಲಿ ವಿವರಿಸಿದೆ. ಹಾಗೇ, ಇದು ಸ್ವಯಂಪ್ರೇರಿತವಾಗಿದ್ದು, ಕಡ್ಡಾಯವಲ್ಲ. ಆಯಾ ರಾಜ್ಯಸರ್ಕಾರಗಳು ಈ ಕ್ರಮವನ್ನು ಉತ್ತೇಜಿಸಬೇಕು. ಜನರಲ್ಲಿ ಅರಿವು ಮೂಡಿಸಬೇಕು ಎಂದೂ ತಿಳಿಸಿದೆ.

ಇದನ್ನೂ ಓದಿ: RBI Grade B Recruitment 2021: ಗ್ರೇಡ್​ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RBI; ಖಾಲಿ ಇವೆ ಒಟ್ಟು 322 ಹುದ್ದೆ

Published On - 7:08 pm, Wed, 10 February 21

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್