AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Driving Test ಇಲ್ಲದೇ ಲೈಸೆನ್ಸ್​! ಕೇಂದ್ರ ಸರ್ಕಾರದಿಂದ ಮಹತ್ವದ ಪ್ರಸ್ತಾವನೆ; ಆದರೆ ಅದು ಅಪಾಯಕಾರಿ ಅಲ್ಲವೇ?

Driving License ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸದ್ಯ ಒಂದು ಕರಡು ಅಧಿಸೂಚನೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಅದರಲ್ಲಿ ಲೈಸೆನ್ಸ್ ಪಡೆಯುವ ಹೊಸ ನಿಯಮದ ಬಗ್ಗೆ ವಿವರಿಸಿದೆ.

Driving Test ಇಲ್ಲದೇ ಲೈಸೆನ್ಸ್​! ಕೇಂದ್ರ ಸರ್ಕಾರದಿಂದ ಮಹತ್ವದ ಪ್ರಸ್ತಾವನೆ; ಆದರೆ ಅದು ಅಪಾಯಕಾರಿ ಅಲ್ಲವೇ?
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on: Feb 08, 2021 | 12:28 PM

Share

ಡ್ರೈವಿಂಗ್​ ಕಲಿಯುವುದಕ್ಕಿಂತ ಡ್ರೈವಿಂಗ್​ ಲೈಸೆನ್ಸ್​ ಪಡೆಯುವುದೇ ಕಷ್ಟ ಎಂಬಂತಾಗಿದೆ. ವಾಹನ ಚಲಾಯಿಸುವುದನ್ನು ಎಷ್ಟೇ ಸರಿಯಾಗಿ ಕಲಿತು, ಪರವಾನಗಿ ಪಡೆಯಲು ಆರ್​ಟಿಒಗೆ ಹೋದರೂ ಅಲ್ಲಿ ಟೆಸ್ಟ್​ ಎದುರಿಸಲೇಬೇಕು. ಅವರು ಹೇಳಿದ ರಸ್ತೆಯಲ್ಲಿ ಗಾಡಿ ಓಡಿಸಿ, ತೋರಿಸಬೇಕು.. ಅದೆಲ್ಲ ಆದರೂ ಲೈಸೆನ್ಸ್​ ಬೇಗ ಸಿಗುವುದಿಲ್ಲ. ಹಣ ಕೊಡಬೇಕು.. ಕಾಯಬೇಕು ಹೀಗೆ ಒಂದೆರಡು ರಗಳೆಗಳೇ ಅಲ್ಲ!

ಆದರೆ ಕೇಂದ್ರ ಸರ್ಕಾರ ಈಗೊಂದು ಗುಡ್ ​ನ್ಯೂಸ್​ ಕೊಡಲು ಮುಂದಾಗಿದೆ. ಈ ನಿಯಮ ಅಧಿಕೃತವಾಗಿ ಜಾರಿಗೆ ಬಂದರೆ ಲೈಸೆನ್ಸ್​ ಪಡೆಯುವಾಗ ಆರ್​ಟಿಒ (ಪ್ರಾದೇಶಿಕ ರಸ್ತೆ ಕಚೇರಿಗೆ) ಹೋದರೆ ನೀವಲ್ಲಿ ಮತ್ತೆ ಟೆಸ್ಟ್​ ಎದುರಿಸುವ ಅಗತ್ಯವೇ ಇರುವುದಿಲ್ಲ.

ಖಾಸಗಿಯಾಗಿ ವಶೀಲಿಬಾಜಿ ಶುರುವಾಗುವುದಿಲ್ಲವಾ? ಆದರೆ ಅದು ಅಪಾಯಕಾರಿಯಾಗಲಿದೆ ಎಂಬ ಕೂಗೂ ಕೇಳೀಬಂದಿದೆ. ಎಲ್ಲ ಕಡೆಯೂ (ಅಂದ್ರೆ ಪಟ್ಟಣ ಪ್ರದೇಶಗಳಲ್ಲಿ) ಚಾಲನಾ ತರಬೇತಿ ಕೇಂದ್ರಗಳು ಇರಬೇಕಲ್ಲವಾ? ಎಂದು ಮೂಗೆಳೆದಿದ್ದಾರೆ. ಖಾಸಗಿ ವಲಯದ ಚಾಲನಾ ತರಬೇತಿ ಕೇಂದ್ರಗಳಲ್ಲಿ ವಶೀಲಿಬಾಜಿ ಶುರುವಾಗುವುದಿಲ್ಲವಾ? ಇಲ್ಲಿ ಕೊಡುವ ಹಣ ಅಲ್ಲಿ ಚಾಲನಾ ತರಬೇತಿ ಕೇಂದ್ರಗೆ ಕೊಡುವಂತಾಗುವುದಿಲ್ಲವಾ? ಚಾಲನಾ ತರಬೇತಿ ಕೇಂದ್ರಗಳ ಸಕ್ಷಮತೆ ಅಳೆಯುವುದು ಹೇಗೆ? ಚಾಲನಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದ ಮೇಲೆ ಕಲಿಕೆ ಎಷ್ಟೇ ಆಗಿದ್ದರೂ ಬಾಧ್ಯತೆಗೊಳಪಟ್ಟು ಅನುಮೋದನೆ ನೀಡತೊಡಗಿದರೆ ಗತಿಯೇನು?  ಎಂಬೆಲ್ಲಾ ಪ್ರಶ್ನೆಗಳು ಅದಾಗಲೇ ಕೇಳಿಬರುತ್ತಿವೆ.

ಏನಿದು ಹೊಸ ನಿಯಮ? ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸದ್ಯ ಒಂದು ಕರಡು ಅಧಿಸೂಚನೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಅದರಲ್ಲಿ ಲೈಸೆನ್ಸ್ ಪಡೆಯುವ ಹೊಸ ನಿಯಮದ ಬಗ್ಗೆ ವಿವರಿಸಿದೆ. ಅದರ ಅನ್ವಯ ಈಗ ದೇಶಾದ್ಯಂತ ಇರುವ ಚಾಲನಾ ತರಬೇತಿ ಕೇಂದ್ರಗಳಲ್ಲಿರುವ ವ್ಯವಸ್ಥೆ, ಚಾಲಕರ ಕ್ಷಮತೆಗಳನ್ನು ಪರಿಶೀಲಿಸಿ ಮಾನ್ಯತಾ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗೆ ಪ್ರಮಾಣ ಪತ್ರ ನೀಡುವ ತರಬೇತಿ ಕೇಂದ್ರಗಳು, ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡುವ ನಿಯಮಗಳನ್ನೂ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

ಇಂಥ ಮಾನ್ಯತೆ ಪಡೆದ ಡ್ರೈವಿಂಗ್ ಟ್ರೇನಿಂಗ್ ಸೆಂಟರ್​ಗಳಲ್ಲಿ ಚಾಲನಾ ತರಬೇತಿ ಪಡೆಯುವವರು ಲೈಸೆನ್ಸ್​ ಪಡೆಯಲು ಆರ್​​ಟಿಒಕ್ಕೆ ಹೋದರೆ ಮತ್ತೆ ಅಲ್ಲಿ ಟೆಸ್ಟ್​ ಪಡೆಯುವ ಅಗತ್ಯ ಇರುವುದಿಲ್ಲ. ಇನ್ನು ಈ ಕೇಂದ್ರಗಳ ಹೊರತಾಗಿ ಬೇರೆಯವರ ಬಳಿ ಚಾಲನಾ ತರಬೇತಿ ಪಡೆಯುವವರು, ಸ್ವಂತವಾಗಿ ಕಲಿಯುವವರು ಆರ್​ಟಿಒದಲ್ಲಿ ಲೈಸೆನ್ಸ್​ ಪಡೆಯುವಾಗ ಮೊದಲಿನಂತೆ ಟೆಸ್ಟ್​ಗೆ ಒಳಗಾಗಬೇಕು.

ಹೀಗೆ ಮಾನ್ಯತೆ ನೀಡಲಾಗುವ ತರಬೇತಿ ಕೇಂದ್ರಗಳಲ್ಲಿ ಯಾರು ಯಶಸ್ವಿಯಾಗಿ ಡ್ರೈವಿಂಗ್​ ಟ್ರೈನಿಂಗ್​ ಮುಗಿಸುತ್ತಾರೋ, ಅವರು ಆರ್​​ಟಿಒದಲ್ಲಿ ಲೈಸೆನ್ಸ್​ಗೆ ಅಪ್ಲೈ ಮಾಡುವಾಗ ಯಾವುದೇ ಟೆಸ್ಟ್​ ಪಡೆಯುವ ಅಗತ್ಯ ಇರುವುದಿಲ್ಲ. ಈ ಕ್ರಮದಿಂದ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ ಎಂದು ಸಚಿವಾಲಯ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ.

2025ರ ಹೊತ್ತಿಗೆ ಅರ್ಧದಷ್ಟಾದರೂ ರಸ್ತೆ ಅಪಘಾತಗಳನ್ನು ತಡೆಯಬೇಕು ಎಂಬುದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯದ ಗುರಿ. ಆದರೆ ನಿಧಾನವಾಗಿ ಅನುಷ್ಠಾನಕ್ಕೆ ತರುವ ಪ್ರಕ್ರಿಯೆ ಇದಲ್ಲ. ಪ್ರತಿಯೊಬ್ಬರೂ ಇದನ್ನು ಆದ್ಯತೆಯನ್ನಾಗಿ ಪರಿಗಣಿಸಬೇಕು ಎಂದು ಇತ್ತೀಚೆಗಷ್ಟೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಕೌನ್ಸಿಲ್​ ಮೀಟಿಂಗ್​​ನಲ್ಲಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಹೇಳಿದ್ದಾರೆ.

MSP ಇತ್ತು, MSP ಇದೆ ಮತ್ತು MSP ಮುಂದೆಯೂ ಇರಲಿದೆ: ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್