Nusrat Jahan ನನ್ನನ್ನು ತಪ್ಪಾಗಿ ಚಿತ್ರಿಸಲಾಗಿದೆ; ಮದುವೆ ವಿವಾದದ ಬಗ್ಗೆ ಮೌನ ಮುರಿದ ನುಸ್ರತ್ ಜಹಾನ್

ನುಸ್ರತ್ ಜಹಾನ್ ಅವರು ಗರ್ಭಿಣಿ ಎಂದು ಹೇಳಿದಾಗ ಮಗುವನ್ನು ಉಳಿಸಿಕೊಳ್ಳಬೇಕೆನ್ನುವುದು ನಮ್ಮಿಬ್ಬರ ನಿರ್ಧಾರವಾಗಿತ್ತು ಎಂದು ಯಶ್ ದಾಸ್‌ಗುಪ್ತಾ ಇತ್ತೀಚೆಗೆ ಬಹಿರಂಗಪಡಿಸಿದ್ದರು.

Nusrat Jahan ನನ್ನನ್ನು ತಪ್ಪಾಗಿ ಚಿತ್ರಿಸಲಾಗಿದೆ; ಮದುವೆ ವಿವಾದದ ಬಗ್ಗೆ ಮೌನ ಮುರಿದ ನುಸ್ರತ್ ಜಹಾನ್
ನುಸ್ರತ್ ಜಹಾನ್ ಮತ್ತು ಯಶ್ ದಾಸ್‌ಗುಪ್ತಾ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Nov 12, 2021 | 12:49 PM

ದೆಹಲಿ: ನಟಿ-ರಾಜಕಾರಣಿ ನುಸ್ರತ್ ಜಹಾನ್ (Nusrat Jahan) ಮತ್ತು ಯಶ್ ದಾಸ್‌ಗುಪ್ತಾ (Yash Dasgupta)ಅವರು ಈಗಾಗಲೇ ಮದುವೆಯಾಗಿರುವ ಬಗ್ಗೆ ಇತ್ತೀಚೆಗೆ ಸುಳಿವು ನೀಡಿದ್ದಾರೆ. ಈ ದಂಪತಿಗೆ ಆಗಸ್ಟ್ ತಿಂಗಳಲ್ಲಿ ಮಗ ಹುಟ್ಟಿದ್ದು ಯಿಶಾನ್‌ (Yishaan) ಎಂದು ಹೆಸರಿಟ್ಟಿದ್ದಾರೆ. ಈ ಹಿಂದೆ ತಮ್ಮ ಸಂಬಂಧದ ಬಗ್ಗೆ ಇಬ್ಬರೂ ಮೌನವಹಿಸಿದ್ದರೂ ನಂತರ ಯಶ್ ಅವರೇ ಮಗುವಿನ ತಂದೆ ಎಂದು ಖಚಿತಪಡಿಸಿದರು. ನುಸ್ರತ್ ಮತ್ತು ಆಕೆಯ ಪತಿ ನಿಖಿಲ್ ಜೈನ್ (Nikhil Jain) ಕೆಲವು ತಿಂಗಳ ಹಿಂದೆ ಬೇರೆಯಾಗಿದ್ದರು. ಈ ವರ್ಷದ ಆರಂಭದಲ್ಲಿ ನುಸ್ರತ್ ಜಹಾನ್, ನಿಖಿಲ್ ಅವರೊಂದಿಗಿನ ವಿವಾಹವು ಭಾರತೀಯ ಕಾನೂನಿನ ಅಡಿಯಲ್ಲಿ ಮಾನ್ಯವಾಗಿಲ್ಲ ಎಂದು ಹೇಳಿದ್ದರು. ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ಅವರು 2019 ರಲ್ಲಿ ಟರ್ಕಿಯ ಬೋಡ್ರಮ್‌ನಲ್ಲಿ ಎರಡು ಬಾರಿ ವಿವಾಹ ಸಮಾರಂಭ ನಡೆಸಿದ್ದರು. ನಿಖಿನ್ ಜೈನ್ ನಿಂದ ದೂರವಾದ ನಂತರ ನುಸ್ರತ್ ಜಹಾನ್ ಮತ್ತು ಯಶ್ ದಾಸ್‌ಗುಪ್ತಾ ಅವರ ಪ್ರಣಯ ಆಗಾಗ ಸುದ್ದಿಯಾಗುತ್ತಿತ್ತು.  ತನ್ನ ಮದುವೆ ವಿಚಾರದಲ್ಲಿನ ವಿವಾದದ ಬಗ್ಗೆ ಕೇಳಿದಾಗ “ಅವರು ನನ್ನ ಮದುವೆಗೆ ಖರ್ಚು ಮಾಡಿಲ್ಲ, ಅವರು ಹೋಟೆಲ್ ಬಿಲ್‌ಗಳನ್ನು ಪಾವತಿಸಲಿಲ್ಲ. ಅವರಿಗೆ ನಾನು ಏನನ್ನೂ ಹೇಳಬೇಕಾಗಿಲ್ಲ. ನಾನು ಪ್ರಾಮಾಣಿಕವಾಗಿದ್ದೇನೆ. ನನ್ನನ್ನು ತಪ್ಪಾಗಿ ಚಿತ್ರಿಸಲಾಗಿದೆ ಮತ್ತು ಈಗ ನಾನು ಅದನ್ನು ಸ್ಪಷ್ಟಪಡಿಸಿದ್ದೇನೆ ಎಂದು ಯಾರ ಹೆಸರನ್ನೂ ಹೇಳದೆ ನುಸ್ರತ್ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರನ್ನು ದೂಷಿಸುವುದು ಅಥವಾ ಇತರರನ್ನು ಕೆಟ್ಟದಾಗಿ ತೋರಿಸುವುದು ಸುಲಭ. ವಿವಾದದುದ್ದಕ್ಕೂ ತಾನು ಯಾರೊಬ್ಬರನ್ನೂ ಅವಮಾನ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ನುಸ್ರತ್ ಜಹಾನ್ ಅವರು ಗರ್ಭಿಣಿ ಎಂದು ಹೇಳಿದಾಗ ಮಗುವನ್ನು ಉಳಿಸಿಕೊಳ್ಳಬೇಕೆನ್ನುವುದು ನಮ್ಮಿಬ್ಬರ ನಿರ್ಧಾರವಾಗಿತ್ತು ಎಂದು ಯಶ್ ದಾಸ್‌ಗುಪ್ತಾ ಇತ್ತೀಚೆಗೆ ಬಹಿರಂಗಪಡಿಸಿದ್ದರು.ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ನೊಂದಿಗೆ ಮಾತನಾಡಿದ ಯಶ್ ನಾನು ಮಗು ಬೇಕು ಅಂದಿದ್ದೆ. ಆದರೆ ಅಂತಿಮ ನಿರ್ಧಾರವನ್ನು ಅವಳಿಗೆ ಬಿಟ್ಟಿದ್ದೆ. “ಅವಳು ಗರ್ಭಿಣಿ ಎಂದು ನನ್ನಲ್ಲಿ ಹೇಳಿದಾಗ ನಾನು ಹಿಂಜರಿಯಲಿಲ್ಲ. ಅವಳು ಅದರೊಂದಿಗೆ ಮುಂದುವರಿಯಲು ಬಯಸುತ್ತೀದ್ದಾಳಾ ಎಂದು ನಾನು ಅವಳನ್ನು ಕೇಳಿದೆ. ಇದು ನನ್ನ ದೇಹವಲ್ಲ – ಇದು ಅವಳದು. ಅವಳು ನಿರ್ಧರಿಸಬೇಕು. ನಾನು ಅವಳ ನಿರ್ಧಾರಗಳನ್ನು ಅಲ್ಲಗೆಳೆಯುವುದಿಲ್ಲ. ನಾನು ಮಗುವನ್ನು ಹೊಂದಲು ಬಯಸಿದ್ದೆ. ಆದರೆ ನನ್ನ ನಿರ್ಧಾರವನ್ನು ಅವಳ ಮೇಲೆ ಬಲವಂತವಾಗಿ ಹೇರಲು ಸಾಧ್ಯವಾಗಲಿಲ್ಲ. ನೀವು ಮಗುವಿಗೆ ಏನೂ ಮಾಡಲು ಬಯಸದಿದ್ದರೆ, ಪರವಾಗಿಲ್ಲ, ನಾನು ಮಗುವನ್ನು ಉಳಿಸಿಕೊಳ್ಳುತ್ತೇನೆ ಎಂದು ಅವಳು ನನಗೆ ಹೇಳಿದ್ದರು,” ಎಂದು ಯಶ್ ಹೇಳಿದ್ದಾರೆ.

ಇದನ್ನೂ ಓದಿ: ಯಶ್​ ದಾಸ್​ಗುಪ್ತಾಗೆ ಪ್ರೀತಿಯಿಂದ ಗಂಡ ಎಂದ ನಟಿ ನುಸ್ರತ್​; ಬರ್ತ್​ಡೇ ಫೋಟೋ ವೈರಲ್​

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ