AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​ ದಾಸ್​ಗುಪ್ತಾಗೆ ಪ್ರೀತಿಯಿಂದ ಗಂಡ ಎಂದ ನಟಿ ನುಸ್ರತ್​; ಬರ್ತ್​ಡೇ ಫೋಟೋ ವೈರಲ್​

ಯಶ್ ದಾಸ್​​ಗುಪ್ತ ಜತೆ ನುಸ್ರತ್​ ರಿಲೇಶನ್​ಶಿಪ್​ನಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ನುಸ್ರತ್​ ಮತ್ತು ನಿಖಿಲ್​ ಸಂಸಾರದಲ್ಲಿ ಬಿರುಗಾಳಿ ಬೀಸಲು ನಟ ಯಶ್​ ದಾಸ್​​ಗುಪ್ತ ಕಾರಣ ಎಂದು ಹೇಳಲಾಗಿತ್ತು.

ಯಶ್​ ದಾಸ್​ಗುಪ್ತಾಗೆ ಪ್ರೀತಿಯಿಂದ ಗಂಡ ಎಂದ ನಟಿ ನುಸ್ರತ್​; ಬರ್ತ್​ಡೇ ಫೋಟೋ ವೈರಲ್​
ಯಶ್​ ಮತ್ತು ನುಸ್ರತ್​
TV9 Web
| Edited By: |

Updated on: Oct 11, 2021 | 7:17 PM

Share

ಪಶ್ಚಿಮ ಬಂಗಾಳ ಟಿಎಂಸಿ ನಾಯಕಿ, ನಟಿ ನುಸ್ರತ್​ ಜಹಾನ್ ವೈಯಕ್ತಿಕ ಜೀವನದ ವಿಚಾರದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಆಗಸ್ಟ್​​ 26ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಅವರು, ಯಶ್​ ದಾಸ್​ಗುಪ್ತ ಈ ಮಗುವಿಗೆ ತಂದೆ ಎಂದು ಹೇಳಿದ್ದರು. ಈಗ ಯಶ್​ ದಾಸ್​ಗುಪ್ತಾ ಜನ್ಮದಿನದ ಫೋಟೋಗಳನ್ನು ನುಸ್ರತ್​ ಹಂಚಿಕೊಂಡಿದ್ದು, ಅವರನ್ನು ಪತಿ ಎಂದು ಪ್ರೀತಿಯಿಂದ ಕರೆದಿದ್ದಾರೆ.

2019ರಲ್ಲಿ ನಿಖಿಲ್​ ಜೈನ್​ ಎಂಬ ಉದ್ಯಮಿಯನ್ನು ಟರ್ಕಿಯಲ್ಲಿ ಮದುವೆಯಾಗಿದ್ದರು ನುಸ್ರತ್​. ಆದರೆ ಭಾರತೀಯ ಕಾನೂನಿನ ಅನ್ವಯ ಆ ವಿವಾಹ ಮಾನ್ಯವಾಗಿಲ್ಲ ಎಂದು ನುಸ್ರತ್ ಹೇಳಿದ್ದರು. 2020ರ ನವೆಂಬರ್​​ ತಿಂಗಳಲ್ಲಿ ಇಬ್ಬರೂ ಪ್ರತ್ಯೇಕವಾಗಿದ್ದಾಗಿ ತಿಳಿಸಿದ್ದ ಅವರು, ನಂತರ ತಾವು ಗರ್ಭಿಣಿ ಎಂದು ಘೋಷಿಸಿದರು. ಆಗಸ್ಟ್​ನಲ್ಲಿ ಮಗುವಿಗೆ ಜನ್ಮ ನೀಡಿದರು.

ಯಶ್ ದಾಸ್​​ಗುಪ್ತ ಜತೆ ನುಸ್ರತ್​ ರಿಲೇಶನ್​ಶಿಪ್​ನಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ನುಸ್ರತ್​ ಮತ್ತು ನಿಖಿಲ್​ ಸಂಸಾರದಲ್ಲಿ ಬಿರುಗಾಳಿ ಬೀಸಲು ನಟ ಯಶ್​ ದಾಸ್​​ಗುಪ್ತ ಕಾರಣ ಎಂದು ಹೇಳಲಾಗಿತ್ತು. ‘ಒನ್​’ ಸಿನಿಮಾದಲ್ಲಿ ಯಶ್​ ಮತ್ತು ನುಸ್ರತ್​ ಜೊತೆಯಾಗಿ ನಟಿಸಿದ್ದರು. ಆ ಬಳಿಕ ಇಬ್ಬರ ನಡುವೆ ಹೆಚ್ಚು ಆಪ್ತತೆ ಬೆಳೆದಿತ್ತು. ಯಶ್​ ದಾಸ್​​ಗುಪ್ತ ಮಗುವಿನ ತಂದೆ ಎಂದಿದ್ದ ನುಸ್ರತ್,​ ಈಗ ಯಶ್​ಗೆ ಪ್ರೀತಿಯಿಂದ ಗಂಡ ಎಂದಿದ್ದಾರೆ.

ಯಶ್​ ಜನ್ಮದಿನಕ್ಕೆ ತಂದ ಕೇಕ್​ಅನ್ನು ನುಸ್ರತ್​ ಹಂಚಿಕೊಂಡಿದ್ದಾರೆ. ಈ ಕೇಕ್​ ಮೇಲೆ ಅವರು ಮೇಲ್ಭಾಗದಲ್ಲಿ ಪತಿ ಎಂದು ಬರೆದರೆ ಕೆಳಭಾಗದಲ್ಲಿ ತಂದೆ ಎಂದು ಬರೆದುಕೊಂಡಿದ್ದಾರೆ. ಸದ್ಯ, ಈ ಫೋಟೋ ಸಾಕಷ್ಟು ವೈರಲ್​ ಆಗುತ್ತಿದೆ.

ಇತ್ತೀಚೆಗೆ ನುಸ್ರತ್​ ಜಹಾನ್​ ಮತ್ತು ಯಶ್​ ಒಟ್ಟಿಗೇ ಕೋಲ್ಕತ್ತ ಮುನ್ಸಿಪಲ್​ ಕಾರ್ಪೋರೇಶನ್​ನಲ್ಲಿ ಕಾಣಿಸಿಕೊಂಡಿದ್ದರು. ಅವರು ಕೊವಿಡ್​ 19 ಲಸಿಕೆ ಎರಡನೇ ಡೋಸ್​ ಪಡೆಯಲು ಬಂದಿದ್ದಾರೆಂದೇ ಹೇಳಲಾಗಿತ್ತು. ಆದರೆ ಅವರು ಮಗುವಿನ ಬರ್ತ್​ ಸರ್ಟಿಫಿಕೇಟ್​ ಸಂಬಂಧದ ಕೆಲಸಕ್ಕೆ ಬಂದಿದ್ದರೆಂದು ನಂತರ ವರದಿ ಆಗಿತ್ತು.

ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ತೃಣಮೂಲ ಕಾಂಗ್ರೆಸ್ ಸಂಸದೆ, ನಟಿ ನುಸ್ರತ್ ಜಹಾನ್​

ನಟಿ ನುಸ್ರತ್​ ಜಹಾನ್​​ ಮಗುವಿನ ತಂದೆ ಹೆಸರು ಅಂತೂ ಬಹಿರಂಗವಾಯ್ತು; ರೂಮರ್​ ನಿಜವಾಯ್ತು !

Follow Us
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ