AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್​​ಲೈನರ್ ಅಸಾಮಾನ್ಯ ಸಾಮರ್ಥ್ಯವಿರುವ ವಿಮಾನ; ಆದರೂ ಹೀಗಾಗಿದ್ದು ಆಶ್ಚರ್ಯ !

Ahmedabad Plane Crash: ನೋಡ ನೋಡುತ್ತಲೇ ಟೇಕ್ ಆಫ್ ಆಗಿದ್ದ ಏರ್ ಇಂಡಿಯಾ ವಿಮಾನ ಬಂದು ನೆಲಕ್ಕಪ್ಪಳಿಸಿದೆ. ವಿಮಾನದಲ್ಲಿ 242 ಮಂದಿ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಏರ್ ಇಂಡಿಯಾದ ಬೋಯಿಂದ 787-8 ಡ್ರೀಮ್​​ಲೈನರ್ ವಿಮಾನವಾಗಿದ್ದು, ಈ ವಿಮಾನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಅಪಘಾತದ ನಂತರ, ಅಗ್ನಿಶಾಮಕ ದಳದ ವಾಹನಗಳು, ಬಿಎಸ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ತಕ್ಷಣ ಸ್ಥಳಕ್ಕೆ ರವಾನಿಸಲಾಯಿತು ಮತ್ತು ಈ ಅಪಘಾತದ ಸ್ಫೋಟ ಮತ್ತು ಹೊಗೆ 5 ಕಿಲೋಮೀಟರ್ ದೂರದವರೆಗೆ ಗೋಚರಿಸಿತು.

ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್​​ಲೈನರ್ ಅಸಾಮಾನ್ಯ ಸಾಮರ್ಥ್ಯವಿರುವ ವಿಮಾನ; ಆದರೂ ಹೀಗಾಗಿದ್ದು ಆಶ್ಚರ್ಯ !
ಏರ್ ಇಂಡಿಯಾ ವಿಮಾನ
ನಯನಾ ರಾಜೀವ್
| Updated By: Digi Tech Desk|

Updated on:Jun 12, 2025 | 4:13 PM

Share

ಅಹಮದಾಬಾದ್, ಜೂನ್ 12: ಗುಜರಾತ್​​ನ ಅಹಮದಾಬಾದ್(Ahmedabad)​ನಲ್ಲಿ ಲಂಡನ್​​ಗೆ 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ(Air India) ಬೋಯಿಂದ 787 ವಿಮಾನ ಪತನಗೊಂಡಿದೆ. ಮೇಘನಗರ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ನಂತರ, ಅಗ್ನಿಶಾಮಕ ದಳದ ವಾಹನಗಳು, ಬಿಎಸ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ತಕ್ಷಣ ಸ್ಥಳಕ್ಕೆ ರವಾನಿಸಲಾಯಿತು ಮತ್ತು ಈ ಅಪಘಾತದ ಸ್ಫೋಟ ಮತ್ತು ಹೊಗೆ 5 ಕಿಲೋಮೀಟರ್ ದೂರದವರೆಗೆ ಗೋಚರಿಸಿತು.

ಈ ಅತಿ ದೊಡ್ಡ ಪ್ರಯಾಣಿಕ ವಿಮಾನ ಬೋಯಿಂಗ್ 787 ಡ್ರೀಮ್‌ಲೈನರ್ ಅನ್ನು ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ವಿಮಾನ ಎಷ್ಟು ಕಿಲೋಮೀಟರ್ ಹಾರಬಲ್ಲದು ಮತ್ತು ಅದು ಎಷ್ಟು ಲೀಟರ್ ಇಂಧನವನ್ನು ಹೊತ್ತೊಯ್ಯುತ್ತಿತ್ತು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ವಾಸ್ತವವಾಗಿ, ಬೋಯಿಂಗ್ 787 ವಿಮಾನಗಳು ಮೂರು ಮಾದರಿಗಳಲ್ಲಿ ಇರುತ್ತವೆ. ಅವು 787-8, 787-9 ಮತ್ತು 787-10. ಪ್ರತಿ ಮಾದರಿಯಲ್ಲಿ ಇಂಧನ ಟ್ಯಾಂಕ್ ಸಾಮರ್ಥ್ಯ ಸ್ವಲ್ಪ ಭಿನ್ನವಾಗಿರುತ್ತದೆ, ಆದರೆ ಸರಾಸರಿ ಇದು ಸುಮಾರು 1.26 ಲಕ್ಷ ಲೀಟರ್ ಅಂದರೆ 33,000-33,400 ಗ್ಯಾಲನ್ ಇಂಧನವನ್ನು ಸಾಗಿಸಬಲ್ಲದು. ಇನ್ನು ತೂಕದ ವಿಚಾರಕ್ಕೆ ಬಂದರೆ ಇದು 1 ಲಕ್ಷ ಕಿಲೋಗಳಿಗಿಂತ ಹೆಚ್ಚು ಇಂಧನವನ್ನು ಹೊಂದಿರುತ್ತದೆ.

ಏಕೆಂದರೆ ಈ ವಿಮಾನವು ದೆಹಲಿಯಿಂದ ನ್ಯೂಯಾರ್ಕ್ ಅಥವಾ ಲಂಡನ್‌ಗೆ 13,000 ರಿಂದ 14,000 ಕಿಲೋಮೀಟರ್‌ಗಳವರೆಗೆ ಹಾರಬಲ್ಲದು. ಅಪಘಾತಕ್ಕೀಡಾದ ಈ ವಿಮಾನವು 58,000 ಲೀಟರ್ ಇಂಧನವನ್ನು ಸಾಗಿಸುತ್ತಿತ್ತು.

ಮತ್ತಷ್ಟು ಓದಿ: ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ರು

ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ ಸಂಖ್ಯೆ AI171 ವಾಸ್ತವವಾಗಿ 787-8 ಮಾದರಿಯಾಗಿತ್ತು. ಏರ್ ಇಂಡಿಯಾ ಫ್ಲೀಟ್‌ನಲ್ಲಿ ಸೇರಿಸಲಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಅದರ ಇಂಧನ ದಕ್ಷತೆ ಮತ್ತು ದೀರ್ಘ-ದೂರ ಹಾರುವ ಸಾಮರ್ಥ್ಯವು ಇದನ್ನು ವಿಶೇಷವಾಗಿಸುತ್ತದೆ.

ಇದು ಅಮೆರಿಕನ್ ವಿಮಾನ ತಯಾರಕ ಬೋಯಿಂಗ್ ನಿರ್ಮಿಸಿದ ವಿಶಾಲ ವಿಮಾನವಾಗಿದೆ. ಏರ್ ಇಂಡಿಯಾ ಇದನ್ನು 2012 ರಲ್ಲಿ ತನ್ನ ಫ್ಲೀಟ್‌ಗೆ ಸೇರಿಸಿತು ಮತ್ತು ಇದು ಇಂದಿಗೂ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಅದರ ಬೆನ್ನೆಲುಬಾಗಿ ಉಳಿದಿದೆ.ಈ ಚಿಕ್ಕ ಮಾದರಿ 787-8 ಸುಮಾರು 1,26,206 ಲೀಟರ್ ಇಂಧನವನ್ನು ಸಾಗಿಸಬಲ್ಲದು. ಇದರರ್ಥ ಇದು ಅಹಮದಾಬಾದ್‌ನಿಂದ ಲಂಡನ್‌ಗೆ ಹಾರಾಟವನ್ನು (ಸುಮಾರು 6,700 ಕಿ.ಮೀ) ಸುಲಭವಾಗಿ ಪೂರ್ಣಗೊಳಿಸಬಹುದು.

787-9 ಮತ್ತು 787-10 ಬಗ್ಗೆ ಹೇಳುವುದಾದರೆ, ಅವುಗಳಲ್ಲಿ ಬಹುತೇಕ ಒಂದೇ ಪ್ರಮಾಣದ ಇಂಧನ ತುಂಬಿರುತ್ತದೆ, ಆದರೆ 787-10 ಹೆಚ್ಚಿನ ಪ್ರಯಾಣಿಕರನ್ನು ಹೊತ್ತೊಯ್ಯುತ್ತದೆ, ಆದ್ದರಿಂದ ಅದರ ವ್ಯಾಪ್ತಿಯು ಸ್ವಲ್ಪ ಕಡಿಮೆ (ಸುಮಾರು 11,900 ಕಿ.ಮೀ).

ಹಾರಾಟದ ದೂರ, ಪ್ರಯಾಣಿಕರ ಸಂಖ್ಯೆ, ಸಾಮಾನುಗಳ ತೂಕ ಮತ್ತು ಹವಾಮಾನವನ್ನು ಪರಿಗಣಿಸಿ ವಿಮಾನದಲ್ಲಿ ಇಂಧನ ತುಂಬಿಸಲಾಗುತ್ತದೆ. ಉದಾಹರಣೆಗೆ, ಅಹಮದಾಬಾದ್‌ನಿಂದ ಲಂಡನ್‌ಗೆ ಹಾರಾಟಕ್ಕೆ ಸುಮಾರು 80-90 ಸಾವಿರ ಲೀಟರ್ ಇಂಧನ ಸಾಕಾಗಬಹುದು. ಇದರಲ್ಲಿ ಮೀಸಲು ಇಂಧನವೂ ಸೇರಿದೆ, ಆದ್ದರಿಂದ ತುರ್ತು ಸಂದರ್ಭದಲ್ಲಿ ಇದನ್ನು ಬಳಸಬಹುದು.

ಬೋಯಿಂಗ್ 787 ರ ಇಂಧನವನ್ನು ಮೂರು ಟ್ಯಾಂಕ್‌ಗಳಲ್ಲಿ ಇಡಲಾಗುತ್ತದೆ. ಇವು ವಿಮಾನದ ಎರಡೂ ರೆಕ್ಕೆಗಳಲ್ಲಿ ಮತ್ತು ಒಂದು ಟ್ಯಾಂಕ್‌ನಲ್ಲಿವೆ, ಇವು ಎಷ್ಟು ಬಲವಾಗಿರುತ್ತವೆ ಎಂದರೆ ಸಣ್ಣ ಅಪಘಾತಗಳಲ್ಲಿಯೂ ಸೋರಿಕೆಯಾಗುವುದಿಲ್ಲ. ಈ ವಿಮಾನವು ಒಂದು ಗಂಟೆಯಲ್ಲಿ ಸರಾಸರಿ 10,000 ಲೀಟರ್ ಇಂಧನವನ್ನು ಬಳಸುತ್ತದೆ. ಅಂದರೆ, ದೀರ್ಘ ಹಾರಾಟದಲ್ಲಿ ಅದು ಕ್ರಮೇಣ ಹಗುರವಾಗುತ್ತದೆ, ಇದು ಲ್ಯಾಂಡಿಂಗ್ ಅನ್ನು ಸುಲಭಗೊಳಿಸುತ್ತದೆ. ಆದರೆ ಅಹಮದಾಬಾದ್​ನಲ್ಲಿ ಸಂಭವಿಸಿದ ಅಪಘಾತಕ್ಕೆ ನಿಜವಾದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:56 pm, Thu, 12 June 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ