AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಧು ಮೂಸೆವಾಲಾ ಹಂತಕ ಎಂದು ಹೇಳಿಕೊಂಡ ವ್ಯಕ್ತಿಯಿಂದ ಎಐಎಂಐಎಂ ಗುಜರಾತ್ ಮುಖ್ಯಸ್ಥರಿಗೆ ಕೊಲೆ ಬೆದರಿಕೆ

ರಾತ್ರಿ 10:43 ರ ಸುಮಾರಿಗೆ, ಮಿನ್ಹಾಜ್ ಖಾತುನ್ ಅವರ ಹೆಸರಿನಲ್ಲಿ ಎಸ್‌ಬಿಐ ಬ್ಯಾಂಕ್ ಖಾತೆಯನ್ನು ಉಲ್ಲೇಖಿಸುವ ವಾಟ್ಸಾಪ್ ಸಂದೇಶ ಬಂತು. ರಾತ್ರಿ 11:30 ರ ನಂತರ ಕರೆ ಮಾಡಿದವರು 12 ಕರೆಗಳನ್ನು ಮಾಡಿದರು, ಅದನ್ನು ನಾನು ಸ್ವೀಕರಿಸಲಿಲ್ಲ. ನಂತರ ಮೂಸೆವಾಲಾ ಹತ್ಯೆಗೆ ಸಂಬಂಧಿಸಿದ 30 ನಿಮಿಷಗಳ ವಿಡಿಯೋವನ್ನು ನನಗೆ ಕಳುಹಿಸಿದ್ದಾರೆ

ಸಿಧು ಮೂಸೆವಾಲಾ ಹಂತಕ ಎಂದು ಹೇಳಿಕೊಂಡ ವ್ಯಕ್ತಿಯಿಂದ ಎಐಎಂಐಎಂ ಗುಜರಾತ್ ಮುಖ್ಯಸ್ಥರಿಗೆ ಕೊಲೆ ಬೆದರಿಕೆ
ಸಬೀರ್ ಕಬ್ಲಿವಾಲಾ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 15, 2022 | 7:20 PM

Share

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಗುಜರಾತ್ ರಾಜ್ಯಾಧ್ಯಕ್ಷ ಸಬೀರ್ ಕಬ್ಲಿವಾಲಾ (Sabir Kabliwala) ಅವರಿಗೆ ಪಂಜಾಬಿ ಗಾಯಕ-ರಾಜಕಾರಣಿ ಸಿಧು ಮೂಸೆವಾಲಾ  (Sidhu Moosewala) ಅವರನ್ನು ಹತ್ಯೆ ಮಾಡಿದ ಅಪರಿಚಿತ ವ್ಯಕ್ತಿಯಿಂದ ಹಲವಾರು ಕೊಲೆ ಬೆದರಿಕೆಗಳು ಮತ್ತು ಸುಲಿಗೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಗುಜರಾತ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ 9:50 ರ ನಡುವೆ  20 ಕ್ಕೂ ಹೆಚ್ಚು ಕೊಲೆ ಬೆದರಿಕೆ ಕರೆಗಳು ಬಂದಿವೆ ಎಂದು ಕಬ್ಲಿವಾಲಾ ದೂರು ಸಲ್ಲಿಸಿದ ನಂತರ ಬುಧವಾರ ಬೆಳಿಗ್ಗೆ ಅಹಮದಾಬಾದ್‌ನ ಗಾಯಕ್ವಾಡ್ ಹವೇಲಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (FIR) ದಾಖಲಿಸಲಾಗಿದೆ. ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ ತನ್ನ ಹೆಸರು ಇಮ್ರಾನ್ ಎಂದು ಹೇಳಿರುವ ವ್ಯಕ್ತಿ ಕಬ್ಲಿವಾಲಾಗೆ ಫೋನ್ ಮಾಡಿದ್ದು, ಕಬ್ಲಿವಾಲಾ ಅಹಮದಾಬಾದ್‌ನ ಅಸ್ತೋಡಿಯಾದಲ್ಲಿರುವ ತಮ್ಮ ನಿವಾಸದಲ್ಲಿ ಪೊಲೀಸ್ ಬೆಂಬಲಕ್ಕಾಗಿ ಸಹಾಯವಾಣಿ ಸಂಖ್ಯೆ 100 ಗೆ ಕರೆ ಮಾಡಿದ್ದಾರೆ. “ಮಂಗಳವಾರ ರಾತ್ರಿ 9:50 ರ ಸುಮಾರಿಗೆ, ನಾನು ಅಸ್ತೋಡಿಯಾದ ರಾಣಿ ಸಿಪ್ರಿ ಮಸೀದಿಯ ಬಳಿ ಕಾರಿನಲ್ಲಿ ಕುಳಿತಿದ್ದಾಗ ನನ್ನ ಫೋನ್‌ನ ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತು, ಅಲ್ಲಿ ಕರೆ ಮಾಡಿದ ವ್ಯಕ್ತಿ ತನ್ನನ್ನು ಇಮ್ರಾನ್ ಎಂದು ಗುರುತಿಸಿ ಇತ್ತೀಚೆಗೆ ಪಂಜಾಬಿ ಗಾಯಕ ಸಿಧು ಅವರನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

ಮೂಸೆವಾಲಾ ಮತ್ತು ಸತ್ಯುಗ್ ಮಹಾರಾಜ್ ಎಂಬ ವ್ಯಕ್ತಿ ನನ್ನನ್ನು ಕೊಲ್ಲಲು ಗುತ್ತಿಗೆ ನೀಡಿದ್ದಾನೆ ಎಂದು ಹೇಳಿಕೊಂಡಿದ್ದಾನೆ. ನಂತರ ವಾಟ್ಸಾಪ್ ವಾಯ್ಸ್ ಕಾಲ್ ಡಿಸ್​​ಕನೆಕ್ಟ್ ಮಾಡಿ ವಿಡಿಯೊ ಕಾಲ್ ಮಾಡಿದ್ದು ಅದರಲ್ಲಿ 2000 ರೂಪಾಯಿ ನೋಟುಗಳ ಬ್ಯಾಗ್ ಕಾಣಿಸುತ್ತಿತ್ತು. ನನಗೆ ಹಣ ಬೇಕು ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇನೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ನೀನು ಕಾರಿನಲ್ಲಿ ಕುಳಿತಿದ್ದಿ ಎಂದು ಗೊತ್ತಿದೆ. ಅಲ್ಲೇ ಇರು. ನನ್ನ ಜನರು ನಿನ್ನನ್ನು ನೋಡುತ್ತಿದ್ದಾರೆ. ಹಣ ಪಾವತಿ ಮಾಡಲು ನಿನಗೆ ಎರಡು ಗಂಟೆಗಳ ಕಾಲಾವಕಾಶ ನೀಡುತ್ತಿದ್ದೇನೆ. ಶೀಘ್ರದಲ್ಲೇ ಬ್ಯಾಂಕ್ ವಿವರಗಳನ್ನು ಕಳುಹಿಸುತ್ತೇನೆ ಎಂದು ಆತ ಹೇಳಿರುವುದಾಗಿ ಕಬ್ಲಿವಾಲಾ ತಮ್ಮ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ರಾತ್ರಿ 10:43 ರ ಸುಮಾರಿಗೆ, ಮಿನ್ಹಾಜ್ ಖಾತುನ್ ಅವರ ಹೆಸರಿನಲ್ಲಿ ಎಸ್‌ಬಿಐ ಬ್ಯಾಂಕ್ ಖಾತೆಯನ್ನು ಉಲ್ಲೇಖಿಸುವ ವಾಟ್ಸಾಪ್ ಸಂದೇಶ ಬಂತು. ರಾತ್ರಿ 11:30 ರ ನಂತರ ಕರೆ ಮಾಡಿದವರು 12 ಕರೆಗಳನ್ನು ಮಾಡಿದರು. ಅದನ್ನು ನಾನು ಸ್ವೀಕರಿಸಲಿಲ್ಲ. ನಂತರ ಮೂಸೆವಾಲಾ ಹತ್ಯೆಗೆ ಸಂಬಂಧಿಸಿದ 30 ನಿಮಿಷಗಳ ವಿಡಿಯೋವನ್ನು ನನಗೆ ಕಳುಹಿಸಿದ್ದಾರೆ. ಕರೆ ಮಾಡಿದವನು ನನಗೆ ನಿರಂತರವಾಗಿ ಕರೆಗಳನ್ನು ಮಾಡುತ್ತಿದ್ದ, ಅದನ್ನು ನಾನು ತಿರಸ್ಕರಿಸುತ್ತಲೇ ಇದ್ದೆ. ನಂತರ 12 ಗಂಟೆಯ ಸುಮಾರಿಗೆ ಅವರು ನನಗೆ ಆಡಿಯೋ ಕ್ಲಿಪ್ ಅನ್ನು ಕಳುಹಿಸಿದರು.

ಇದನ್ನೂ ಓದಿ
Image
Viral Photo: ಈ ಜಿಲ್ಲಾಧಿಕಾರಿಯ 10ನೇ ತರಗತಿ ಅಂಕಪಟ್ಟಿ ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ
Image
ಪಂಜಾಬಿ ಗಾಯಕ ಮೂಸೆವಾಲಾ ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ
Image
Hyderabad Gang Rape ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಎಐಎಂಐಎಂ ಶಾಸಕನ ಪುತ್ರ ವಶಕ್ಕೆ

ಅದರಲ್ಲಿ ಅವರು ನನಗೆ ಮೂರ್ನಾಲ್ಕು ದಿನಗಳ ಕಾಲಾವಕಾಶ ನೀಡುತ್ತಿದ್ದಾರೆ ಮತ್ತು ನಾಳೆ ಬೆಳಿಗ್ಗೆ ನಾನು ಅವರಿಗೆ ಮತ್ತೆ ಕರೆ ಮಾಡಿದರೆ ಎಲ್ಲವೂ ಸರಿಯಾಗುತ್ತದೆ. ಇಲ್ಲದಿದ್ದರೆ, ಈ ಮೂರು-ನಾಲ್ಕು ದಿನಗಳಲ್ಲಿ ನನ್ನ ಎಲ್ಲಾ ಕೊನೆಯ ಆಸೆಗಳನ್ನು ಪೂರ್ಣಗೊಳಿಸಿ ಎಂದು ಅವರು ನನಗೆ ಸಲಹೆ ನೀಡಿದರು. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ನಾನು ಪೊಲೀಸರ ಸಹಾಯಕ್ಕಾಗಿ 100 ಸಂಖ್ಯೆಗೆ ಕರೆ ಮಾಡಿದ್ದೇನೆ ಎಂದು ಕಬ್ಲಿವಾಲಾ ಹೇಳಿದರು. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 507 ರ ಅಡಿಯಲ್ಲಿ ಅನಾಮಧೇಯ ರೀತಿಯಲ್ಲಿ ಕ್ರಿಮಿನಲ್ ಬೆದರಿಕೆ ಮತ್ತು 387 ಅಪರಿಚಿತ ವ್ಯಕ್ತಿಗಳ ವಿರುದ್ಧ ಸಾವಿನ ಭಯವನ್ನು ಹಾಕಿ ಸುಲಿಗೆ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ ಎಂದು ಹಿರಿಯ ಅಹ್ಮದಬಾ ಪೊಲೀಸ್ ಅಧಿಕಾರಿಗಳು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 7:17 pm, Wed, 15 June 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ