AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕಾಶ್ ಏರ್ ಡೇಟಾಗೆ ಹ್ಯಾಕರ್‌ಗಳಿಂದ ಕನ್ನ; ಮಾಹಿತಿ ಸೋರಿಕೆಯಾಗಿದ್ದಕ್ಕೆ ಕ್ಷಮೆಯಾಚಿಸಿದ ವಿಮಾನಯಾನ ಸಂಸ್ಥೆ

ಘಟನೆ ಬಗ್ಗೆ ಅರಿವಿಗೆ ಬಂದ ಕೂಡಲೇ , ಆಕಾಶ ಏರ್ ತನ್ನ ಸಿಸ್ಟಮ್‌ನ ಸಂಬಂಧಿತ ಕ್ರಿಯಾತ್ಮಕ ಅಂಶಗಳನ್ನು ಸಂಪೂರ್ಣವಾಗಿ ಮುಚ್ಚುವ ಮೂಲಕ ಈ ಅನಧಿಕೃತ ಪ್ರವೇಶವನ್ನು ತಕ್ಷಣವೇ ನಿಲ್ಲಿಸಿದೆ ಎಂದು ಹೇಳಿದೆ

ಆಕಾಶ್ ಏರ್ ಡೇಟಾಗೆ ಹ್ಯಾಕರ್‌ಗಳಿಂದ ಕನ್ನ; ಮಾಹಿತಿ ಸೋರಿಕೆಯಾಗಿದ್ದಕ್ಕೆ ಕ್ಷಮೆಯಾಚಿಸಿದ ವಿಮಾನಯಾನ ಸಂಸ್ಥೆ
ಸಾಂದರ್ಭಿಕ ಚಿತ್ರ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Aug 28, 2022 | 8:26 PM

Share

ದೆಹಲಿ: ಒಂದು ತಿಂಗಳ ಹಿಂದೆಯಷ್ಟೇ ಕಾರ್ಯಾಚರಣೆ ಆರಂಭಿಸಿದ ಆಕಾಶ ಏರ್‌ ಡೇಟಾಗೆ (Akasa Air) ಹ್ಯಾಕರ್‌ಗಳು ಕನ್ನ ಹಾಕಿರುವ ಬಗ್ಗೆ ವರದಿ ಆಗಿದೆ. ಮಾಹಿತಿ ಸೋರಿಕೆ ಆಗಿರುವ ಬಗ್ಗೆ ಬಗ್ಗೆ ಏರ್‌ಲೈನ್ ಭಾನುವಾರ ಕ್ಷಮೆಯಾಚಿಸಿದೆ. ಈ ಘಟನೆಯನ್ನು ನೋಡಲ್ ಏಜೆನ್ಸಿಯಾದ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಗೆ ವರದಿ ಮಾಡಲಾಗಿದೆ ಎಂದು ಪ್ರಸ್ತುತ ವಿಮಾನಯಾನ ಸಂಸ್ಥೆ ಹೇಳಿದೆ. ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ತಿಳಿಸಿರುವ ಆಕಾಶ್ ಏರ್, ತನ್ನ ಲಾಗಿನ್ ಮತ್ತು ಸೈನ್-ಅಪ್ ಸೇವೆಗೆ ಸಂಬಂಧಿಸಿದ ತಾತ್ಕಾಲಿಕ ತಾಂತ್ರಿಕ ಕಾನ್ಫಿಗರೇಶನ್ ದೋಷವನ್ನು ಆಗಸ್ಟ್ 25 ರಂದು ವರದಿ ಮಾಡಲಾಗಿದೆ ಎಂದು ಏರ್‌ಲೈನ್ ಹೇಳಿದೆ. ಇದರ ಪರಿಣಾಮ,  ಹೆಸರು, ಲಿಂಗ, ಇಮೇಲ್ ವಿಳಾಸಗಳು ಮತ್ತು ಫೋನ್ ಸಂಖ್ಯೆಗಳಿಗೆ ಸೀಮಿತವಾಗಿರುವ ಕೆಲವು ಆಕಾಶ ಏರ್ ನೊಂದಾಯಿತ ಬಳಕೆದಾರರ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳು ವೀಕ್ಷಿಸಿರಬಹುದು. “ಮೇಲಿನ ವಿವರಗಳನ್ನು ಹೊರತುಪಡಿಸಿ, ಯಾವುದೇ ಪ್ರಯಾಣ-ಸಂಬಂಧಿತ ಮಾಹಿತಿ, ಪ್ರಯಾಣ ದಾಖಲೆಗಳು ಅಥವಾ ಪಾವತಿ ಮಾಹಿತಿಯು ರಾಜಿ ಮಾಡಿಕೊಂಡಿಲ್ಲ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಘಟನೆ ಬಗ್ಗೆ ಅರಿವಿಗೆ ಬಂದ ಕೂಡಲೇ , ಆಕಾಶ ಏರ್ ತನ್ನ ಸಿಸ್ಟಮ್‌ನ ಸಂಬಂಧಿತ ಕ್ರಿಯಾತ್ಮಕ ಅಂಶಗಳನ್ನು ಸಂಪೂರ್ಣವಾಗಿ ಮುಚ್ಚುವ ಮೂಲಕ ಈ ಅನಧಿಕೃತ ಪ್ರವೇಶವನ್ನು ತಕ್ಷಣವೇ ನಿಲ್ಲಿಸಿದೆ ಎಂದು ಹೇಳಿದೆ. ಈ ಪರಿಸ್ಥಿತಿಯನ್ನು ಪರಿಹರಿಸಲು ಹೆಚ್ಚುವರಿ ನಿಯಂತ್ರಣಗಳನ್ನು ಸೇರಿಸಿದ ನಂತರ, ನಾವು ನಮ್ಮ ಲಾಗಿನ್ ಮತ್ತು ಸೈನ್-ಅಪ್ ಅನ್ನು ಪುನರಾರಂಭಿಸಿದ್ದೇವೆ” ಎಂದು ವಿಮಾನಯಾನ ಸಂಸ್ಥೆ ಹೇಳಿದೆ

ಸಿಸ್ಟಂ ಭದ್ರತೆ ಮತ್ತು ಗ್ರಾಹಕರ ಮಾಹಿತಿಯ ರಕ್ಷಣೆ ಅತಿಮುಖ್ಯವಾಗಿದೆ ಎಂದ ಆಕಾಶ ಏರ್, ಇದರಿಂದ ಉಂಟಾದ ಯಾವುದೇ ಅನಾನುಕೂಲತೆಗಾಗಿ ನಾವು ನಿಮ್ಮಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದಿದೆ.

ಸುಮಾರು ಒಂದು ದಶಕದಲ್ಲಿ ಪ್ರಾರಂಭವಾದ ಮೊದಲ ಭಾರತೀಯ ವಾಹಕವಾದ ಆಕಾಶ ಏರ್ ಆಗಸ್ಟ್ 7 ರಂದು ಮುಂಬೈನಿಂದ ಅಹಮದಾಬಾದ್‌ಗೆ ತನ್ನ ಮೊದಲ ವಿಮಾನ ಹಾರಾಟ ನಡೆಸಿದೆ.ಈ ತಿಂಗಳ ಆರಂಭದಲ್ಲಿ ನಿಧನರಾದ ಧನಿಕ ರಾಕೇಶ್ ಜುಂಜುನ್ ವಾಲಾ ಅವರು ವಿಮಾನಯಾನ ಸಂಸ್ಥೆಯಲ್ಲಿ ಗಣನೀಯ ಹೂಡಿಕೆ ಮಾಡಿದ್ದರು.

Follow Us
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು