AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಘು ಗಡಿಯಲ್ಲಿ ಹತ್ಯೆ ಪ್ರಕರಣ: ಮೂವರು ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ

Singhu border murder ದೆಹಲಿ ಗಡಿ ಸಮೀಪದ ರೈತರ ಪ್ರತಿಭಟನಾ ಸ್ಥಳದಲ್ಲಿ ಶುಕ್ರವಾರ ಬೆಳಿಗ್ಗೆ ತರನ್ ತಾರಣ್ ನಿವಾಸಿ  ಲಖ್‌ಬೀರ್ ಸಿಂಗ್ ಎಂಬ 35 ವರ್ಷದ ವ್ಯಕ್ತಿಯನ್ನು ಹತ್ಯೆಗೈದ ಆರೋಪದಲ್ಲಿ ಈ ಮೂವರು ಶಿಕ್ಷೆಗೊಳಗಾಗಿದ್ದಾರೆ.

ಸಿಂಘು ಗಡಿಯಲ್ಲಿ ಹತ್ಯೆ ಪ್ರಕರಣ: ಮೂವರು ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Oct 17, 2021 | 8:20 PM

Share

ದೆಹಲಿ: ಸಿಂಘು ಗಡಿ ಹತ್ಯೆ ಪ್ರಕರಣದ (Singhu border murder) ಮೂವರು ಆರೋಪಿಗಳಾದ ನಾರಾಯಣ್ ಸಿಂಗ್, ಭಗವಂತ್ ಸಿಂಗ್ ಮತ್ತು ಗೋವಿಂದ್ ಪ್ರೀತ್ ಸಿಂಗ್ ಅವರನ್ನು ಸೋನಿಪತ್‌ನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಭಾನುವಾರ ಆರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ದೆಹಲಿ ಗಡಿ ಸಮೀಪದ ರೈತರ ಪ್ರತಿಭಟನಾ ಸ್ಥಳದಲ್ಲಿ ಶುಕ್ರವಾರ ಬೆಳಿಗ್ಗೆ ತರನ್ ತಾರಣ್ ನಿವಾಸಿ  ಲಖ್‌ಬೀರ್ ಸಿಂಗ್ (Lakhbir Singh) ಎಂಬ 35 ವರ್ಷದ ವ್ಯಕ್ತಿಯನ್ನು  ಹತ್ಯೆಗೈದ ಆರೋಪದಲ್ಲಿ ಈ ಮೂವರು ಶಿಕ್ಷೆಗೊಳಗಾಗಿದ್ದಾರೆ. ಅಮೃತಸರ ಗ್ರಾಮೀಣ ಪೊಲೀಸರು ಶನಿವಾರ ಸಂಜೆ ಅಮರಕೋಟ್ ಗ್ರಾಮದಿಂದ ನಿಹಾಂಗ್ ಬಾಬಾ ನಾರಾಯಣ್ ಸಿಂಗ್  ಪೊಲೀಸರಿಗೆ ಶರಣಾದ ನಂತರ ಬಂಧಿಸಿದರು. ತರುವಾಯ ಘಟನೆಗೆ ಸಂಬಂಧಿಸಿದಂತೆ ಇನ್ನೂ ಎರಡು ನಿಹಾಂಗ್‌ಗಳನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇನ್ನೊಬ್ಬ ಆರೋಪಿಯನ್ನು ಸರ್ವಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ಈತನನ್ನು ಶುಕ್ರವಾರ ಸಂಜೆ ಸೋನಿಪತ್‌ನ ಕುಂಡ್ಲಿಯಿಂದ ಪೊಲೀಸರು ಬಂಧಿಸಿದ್ದು ನ್ಯಾಯಾಲಯವು ಈಗಾಗಲೇ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಸಿಖ್ಖರ ಪವಿತ್ರ ಪುಸ್ತಕವನ್ನು “ಅಪವಿತ್ರಗೊಳಿಸಿದ” ಕಾರಣಕ್ಕಾಗಿ ಲಖ್‌ಬೀರ್ ಸಿಂಗ್ ಎಂಬ ರೈತನನ್ನು ಕೊಲೆ ಮಾಡಲಾಗಿದೆ. ಈ ಕೊಲೆ ನಡೆಸಿದ್ದು ನಿಹಾಂಗ್​​ಗಳು ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಸಲ್ಲಿಸಿದ್ದಾರೆ.

ಸಿಂಗ್ ಅವರನ್ನು ಶನಿವಾರ ರಾತ್ರಿ ಅಂತ್ಯಕ್ರಿಯೆ ಮಾಡಲಾಯಿತು. ಅವರ ದೇಹವನ್ನು ಮರಳಿ ತರಲು ಜಿಲ್ಲಾಡಳಿತವು ಸೋನಿಪತ್‌ಗೆ ವಾಹನವನ್ನು ಕಳುಹಿಸಿತ್ತು, ಅದು ಸಂಜೆ 7 ಗಂಟೆಗೆ ಗ್ರಾಮವನ್ನು ತಲುಪಿತು. ಅರ್ದಾಸ್ (ಸಿಖ್ ಧಾರ್ಮಿಕ ಪ್ರಾರ್ಥನೆ) ಯನ್ನು ನಿರ್ವಹಿಸಲು ಯಾವುದೇ ಸಿಖ್ ಅರ್ಚಕರು ಹಾಜರಿರಲಿಲ್ಲ. ಅವರ ಹಳ್ಳಿಯ ಚೀಮಾ ಕಲಾನ್, ಕುಟುಂಬವನ್ನು ಹೊರತುಪಡಿಸಿ ಯಾರೂ ಅಂತ್ಯ ಸಂಸ್ಕಾರಕ್ಕೆ ಹಾಜರಾಗಿಲ್ಲ ಎಂದು ಆ ಬೆಳವಣಿಗೆ ಬಗ್ಗೆ ಪರಿಚಯವಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಂಘು ಗಡಿಯಲ್ಲಿ ಗುಂಪು ಹಲ್ಲೆ: ಪೊಲೀಸರಿಗೆ ಶರಣಾದ ಕೊಲೆ ಆರೋಪಿ

ಇದನ್ನೂ ಓದಿ: Singhu Border Murder ಸಿಂಘು ಗಡಿಯಲ್ಲಿ ರೈತನ ಬರ್ಬರ ಹತ್ಯೆ, ಕೈ ಕಾಲು ಕತ್ತರಿಸಿ ಬ್ಯಾರಿಕೇಡ್​​ಗೆ ಕಟ್ಟಿಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ