AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amarnath Yatra: ಮೇಘಸ್ಫೋಟದ ನಂತರ ಯಾತ್ರೆಯ ಪುನರಾರಂಭಕ್ಕೆ ಕಾಯುತ್ತಿರುವ ಅಮರನಾಥ ಯಾತ್ರಿಕರು

ಹವಾಮಾನ ವೈಪರಿತ್ಯದಿಂದ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯುಂಟಾಗಿದ್ದು, ಬಾಲ್ತಾಸ್ ಮೂಲ ಶಿಬಿರದಲ್ಲಿರುವ ಯಾತ್ರಿಕರು ಅಮರನಾಥ ಯಾತ್ರೆಯು ಮತ್ತೆ ಆರಂಭವಾಗಲು ಕಾಯುತ್ತಿದ್ದಾರೆ.

Amarnath Yatra: ಮೇಘಸ್ಫೋಟದ ನಂತರ ಯಾತ್ರೆಯ ಪುನರಾರಂಭಕ್ಕೆ ಕಾಯುತ್ತಿರುವ ಅಮರನಾಥ ಯಾತ್ರಿಕರು
ಅಮರನಾಥ ಯಾತ್ರೆಯ ಮಾರ್ಗ ಸರಿಪಡಿಸುವ ಕೆಲಸ ವೇಗವಾಗಿ ನಡೆಯುತ್ತಿದೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 10, 2022 | 12:51 PM

ಶ್ರೀನಗರ: ಮೇಘಸ್ಫೋಟದ (Cloud Burst) ನಂತರ ಅಮರನಾಥ ಯಾತ್ರೆಯು (Amarnath Yatra) ತಾತ್ಕಾಲಿಕವಾಗಿ ರದ್ದಾಗಿದೆ. ಹವಾಮಾನ ವೈಪರಿತ್ಯದಿಂದ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯುಂಟಾಗಿದ್ದು, ಬಾಲ್ತಾಸ್ ಮೂಲ ಶಿಬಿರದಲ್ಲಿರುವ ಯಾತ್ರಿಕರು ಅಮರನಾಥ ಯಾತ್ರೆಯು ಮತ್ತೆ ಆರಂಭವಾಗಲು ಕಾಯುತ್ತಿದ್ದಾರೆ. ಬಾಲ್ತಾಸ್​​ ಪ್ರದೇಶದಲ್ಲಿ ಮಳೆಯೂ ಜೋರಾಗಿ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.

ಅಮರನಾಥ ಯಾತ್ರೆಯ ಮಾರ್ಗವೂ ಹಾಳಾಗಿದ್ದು, ರಿಪೇರಿ ಕಾಮಗಾರಿ ಆರಂಭವಾಗಿದೆ. ಮಾರ್ಗವನ್ನು ಸರಿಪಡಿಸಿ ಮತ್ತು ಯಾತ್ರೆ ಆರಂಭವಾಗಲು ತುಸು ಸಮಯ ಬೇಕಾಗಬಹುದು ಎಂದು ತಂತ್ರಜ್ಞರು ಹಾಗೂ ಅಧಿಕಾರಿಗಳು ಹೇಳಿದ್ದಾರೆ. ಪುಣೆಯಿಂದ ಬಂದಿದ್ದ ಕುಂದನ್ ನಾಯಕ್ ಎನ್ನುವವರು ಸಹ ಬಾಲ್ತಾಲ್​​ನಲ್ಲಿ ಕಾಯುತ್ತಿದ್ದು, ‘ಯಾತ್ರೆ ಮುಗಿಸದೇ ಊರಿಗೆ ಹಿಂದಿರುಗುವುದಿಲ್ಲ’ ಎಂದು ಹಟ ಹಿಡಿದಿದ್ದಾರೆ. ‘ನನ್ನ ನೋಂದಣಿ ಪ್ರಕಾರ ಇಂದು ನನಗೆ ಸ್ವಾಮಿಯ ದರ್ಶನ ಆಗಬೇಕಿತ್ತು. ಆದರೆ ಯಾತ್ರೆಯು ಸ್ಥಗಿತಗೊಂಡಿರುವುದರಿಂದ ಇಲ್ಲಿಯೇ ಕಾಯಬೇಕಾಗಿದೆ. ಯಾತ್ರೆಯು ಪುನರಾರಂಭವಾಗುವವರೆಗೆ ಇಲ್ಲಿಯೇ ಕಾಯುತ್ತೇವೆ’ ಎಂದು ಅವರು ಹೇಳಿದರು.

ಪಂಜಾಬ್​ನಿಂದ ಬಂದಿದ್ದ ಆಯುಷ್ ಎನ್ನುವ ಬಾಲಕ ಮಾತನಾಡಿ, ‘ದರ್ಶನವಿಲ್ಲದೆ ಮನೆಗೆ ಹಿಂದಿರುಗುವುದಿಲ್ಲ’ ಎಂದು ಹೇಳಿದ. ‘ಅಮರನಾಥ ಯಾತ್ರೆಯ ಮಾರ್ಗದಲ್ಲಿ ಒಡೆದು ಹೋಗಿರುವ ನೀರಿನ ಪೈಪ್​ಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ನನಗೆ ಇಲ್ಲಿನ ಆಡಳಿತದ ಮೇಲೆ ಸಂಪೂರ್ಣ ನಂಬಿಕೆಯಿದೆ. ಇಂದು ಯಾತ್ರೆ ಪುನರಾರಂಭವಾಗದಿದ್ದರೆ, ನಾಳೆಯಾದರೂ ಜನರ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತಾರೆ’ ಎಂದು ಪಂಜಾಬ್​ನಿಂದ ಬಂದಿದ್ದ ಡಾ ದೇವರಾಜ್ ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಪಡೆy (National Disaster Response Force – NDRF) ಮಾಹಿತಿ ಪ್ರಕಾರ ಮೇಘಸ್ಫೋಟದಿಂದಾಗಿ ಕನಿಷ್ಠ 16 ಮಂದಿ ಅಮರನಾಥ ಯಾತ್ರಿಕರು ಮೃತಪಟ್ಟಿದ್ದಾರೆ. ಪರಿಹಾರ ಕಾರ್ಯಾಚರಣೆಗಾಗಿ ವಾಯುಪಡೆಯು ನಾಲ್ಕು Mi-17V5 ಮತ್ತು ನಾಲ್ಕು ಚೀತನ್ ಹೆಲಿಕಾಪ್ಟರ್​ಗಳನ್ನು ನಿಯೋಜಿಸಲಾಗಿದೆ.

ಚೀತಲ್ ಹೆಲಿಕಾಪ್ಟರ್​ಗಳು ಈವರೆಗೆ 45 ಬಾರಿ ಹಾರಾಟ ನಡೆಸಿದ್ದು, ಎನ್​ಡಿಆರ್​ಎಫ್ ಮತ್ತು ಸೇನಾ ಸಿಬ್ಬಂದಿಯನ್ನು ಕೊಂಡೊಯ್ದಿದೆ. ಈವರೆಗೆ 3.5 ಟನ್ ಪರಿಹಾರ, ರಿಪೇರಿ ಸಾಮಗ್ರಿಗಳನ್ನು ದುರಂತ ನಡೆದ ಸ್ಥಳಕ್ಕೆ ರವಾನಿಸಲಾಗಿದೆ. ಅಮರನಾಥ ಗುಹೆಯಲ್ಲಿ ಸಿಲುಕಿದ್ದ 45 ಯಾತ್ರಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಅಮರನಾಥ ಯಾತ್ರಿಕರ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಿಶೇಷ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಮೃತರ ಗೌರವಾರ್ಥ 2 ನಿಮಿಷಗಳ ಮೌನಾಚರಣೆ ಮಾಡಲಾಯಿತು.

ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್​​ ರೆಜಿಮೆಂಟ್​ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಡಿಎಸ್ ಔಜ್ಲಾ ನೇತೃತ್ವದಲ್ಲಿ ರಕ್ಷಣೆ ಮತ್ತು ಪರಿಹಾರ ಕಾಮಗಾರಿಗಳು ನಡೆಯುತ್ತಿವೆ. ಇಂಡೊ-ಟಿಬೇಟನ್ ಬಾರ್ಡರ್ ಪೊಲೀಸ್​ನ ಸಿಬ್ಬಂದಿಯನ್ನೂ ಸ್ಥಳಕ್ಕೆ ನಿಯೋಜಿಸಲಾಗಿದೆ. ಅಮರನಾಥದ ಪವಿತ್ರ ಗುಹೆಯ ಸಮೀಪ ಶುಕ್ರವಾರ ಮೇಘಸ್ಫೋಟ ಸಂಭವಿಸಿದ್ದರಿಂದ ಸಮೀಪದ ನಾಲೆಯಲ್ಲಿ ದೊಡ್ಡಮಟ್ಟದಲ್ಲಿ ನೀರು ಹರಿದುಬಂದು, ಯಾತ್ರೆಯು ಅಸ್ತವ್ಯಸ್ತಗೊಂಡಿತು.

ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ

ಅಮರನಾಥ್ ಯಾತ್ರೆಯಲ್ಲಿ ಪಾಲ್ಗೊಂಡಿರುವ ಭಕ್ತರಿಗೆ ಅಗತ್ಯ ಸೇವೆ ಒದಗಿಸುತ್ತಿರುವ ಮುಸ್ಲಿಮರು ಭಾನುವಾರ ಬಕ್ರೀದ್ ಪ್ರಯುಕ್ತ ಬಲ್ತಾಲ್ ಶಿಬಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮೇಘಸ್ಫೋಟದಿಂದ ಮೃತಪಟ್ಟವರ ಆತ್ಮಗಳಿಗೆ ಶಾಂತಿ ಕೋರಿ ಮತ್ತು ಅಮರನಾಥ ಯಾತ್ರೆ ಸುಸೂತ್ರವಾಗಿ ನಡೆಯಬೇಕೆಂದು ಆಶಿಸಿ ಮತ್ತೊಮ್ಮೆ ಹೆಚ್ಚುವರಿಯಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

Published On - 12:51 pm, Sun, 10 July 22

ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು