AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಠಪೂರ್ತಿ ಕುಡಿದು, ಕಣ್ತುಂಬ ನಿದ್ದೆ ಮಾಡಿದ ರೈಲ್ವೆ ಸ್ಟೇಶನ್​ ಸಹಾಯಕ ಮಾಸ್ಟರ್​ಗೆ ನೀರು ಬಿದ್ದಾಗಲೇ ಎಚ್ಚರವಾಯ್ತು; ಗ್ರಹಚಾರ ಕಾದುಕುಳಿತಿತ್ತು..!

ಈ ಸ್ಟೇಶನ್​ನಲ್ಲಿ ದೆಹಲಿ-ಹೌರಾಹ್​ ಮಾರ್ಗದ ವೈಶಾಲಿ ಎಕ್ಸ್​ಪ್ರೆಸ್​, ಸಂಗಮ್​ ಎಕ್ಸ್​ಪ್ರೆಸ್​, ಮಗಧ್​ ಎಕ್ಸ್​ಪ್ರೆಸ್​ ಹಾಗೂ ಹಲವು ಸರಕು ರೈಲುಗಳು ಸುಮಾರು ಎರಡು ತಾಸುಗಳಿಗೂ ಅಧಿಕ ಕಾಲ ಕಾದಿವೆ. ಇದರಿಂದ ಪ್ರಯಾಣಿಕರಿಗೂ ತೀವ್ರ ತೊಂದರೆಯಾಗಿದೆ.

ಕಂಠಪೂರ್ತಿ ಕುಡಿದು, ಕಣ್ತುಂಬ ನಿದ್ದೆ ಮಾಡಿದ ರೈಲ್ವೆ ಸ್ಟೇಶನ್​ ಸಹಾಯಕ ಮಾಸ್ಟರ್​ಗೆ ನೀರು ಬಿದ್ದಾಗಲೇ ಎಚ್ಚರವಾಯ್ತು; ಗ್ರಹಚಾರ ಕಾದುಕುಳಿತಿತ್ತು..!
ರೈಲ್ವೆ ಸ್ಟೇಶನ್​ ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jul 17, 2021 | 3:45 PM

Share

ರೈಲು ಹೊರಡಲು ಎರಡು ತಾಸು ತಡ ಮಾಡಿದ ರೈಲ್ವೆ ಸ್ಟೇಶನ್​​ನ ಸಹಾಯಕ ಮಾಸ್ಟರ್​​​ನ್ನು ಅಮಾನತು ಮಾಡಲಾಗಿದೆ. ಉತ್ತರಪ್ರದೇಶದ ಕಂಚೌಸಿ ರೈಲ್ವೆಸ್ಟೇಶನ್​ನಲ್ಲಿ ಘಟನೆ ನಡೆದಿದ್ದು, ಈ ಸಹಾಯಕ ಸ್ಟೇಶನ್​ ಮಾಸ್ಟರ್​ ಕಂಠಪೂರ್ತಿ ಕುಡಿದು, ಗಡದ್ದಾಗಿ ನಿದ್ದೆಹೋದ ಕಾರಣಕ್ಕೆ ಕೆಲವು ರೈಲುಗಳು, ನಿಗದಿತ ಸಮಯಕ್ಕಿಂತಲೂ ಎರಡು ಗಂಟೆ ತಡವಾಗಿ ಹೊರಟಿವೆ. ಕರ್ತವ್ಯದಲ್ಲಿದ್ದಾಗಲೇ ನಿದ್ದೆ ಮಾಡಿ, ರೈಲ್ವೆ ಸಂಚಾರದಲ್ಲಿ ಅಡಚಣೆ ಉಂಟು ಮಾಡಿದ ಕಾರಣಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ.

ಔರಾಯಿಯಾ ಜಿಲ್ಲೆಯ ಕಂಚೌಸಿ ರೈಲ್ವೆ ಸ್ಟೇಶನ್​ನ ಈ ಸ್ಟೇಶನ್ ಮಾಸ್ಟರ್​ ಹೆಸರು ಅನಿರುದ್​ ಕುಮಾರ್​. ಗುರುವಾರ ಮಧ್ಯರಾತ್ರಿ 12ಗಂಟೆಯಿಂದ ಬೆಳಗ್ಗೆ 8ಗಂಟೆವರೆಗೆ ಅವರ ಶಿಫ್ಟ್ ಇತ್ತು. ಬಂದವರೇ ಕಂಠಪೂರ್ತಿ ಕುಡಿದು ಮಲಗಿಬಿಟ್ಟಿದ್ದರು. ಸ್ಟೇಶನ್​ಗೆ ಬರುವ ರೈಲುಗಳು ಮುಂದೆ ಹೋಗಬೇಕು ಎಂದರೆ ತಾವೇ, ಗ್ರೀನ್​ ಸಿಗ್ನಲ್​ ಕೊಡಬೇಕು ಎಂಬುದನ್ನು ಮರೆತೇ ಬಿಟ್ಟಿದ್ದ ಅವರು ನಿದ್ದೆ ಮಾಡಿದ್ದೇಬಂತು. ಸ್ಟೇಶನ್​ ಮಾಸ್ಟರ್​ ಹಸಿರು ಬಾವುಟ ಹಾರಿಸದೆ ಯಾವುದೇ ರೈಲು ಮುಂದೆ ಹೋಗುವುದಿಲ್ಲ. ಹಾಗೇ ಇಲ್ಲಿನ ರೈಲುಗಳ ಚಾಲಕರೂ ಬರೋಬ್ಬರಿ ಎರಡು ತಾಸು ಕಾದಿದ್ದಾರೆ. ಕೊನೆಗೂ ಅನಿರುದ್​ ಕುಮಾರ್​ಗೆ ಎಚ್ಚರವಾಗಲೇ ಇಲ್ಲ. ಅಷ್ಟರಲ್ಲಿ ರೈಲುಗಳು ವಿಳಂಬವಾಗಿದ್ದನ್ನು ಗಮನಿಸಿದ ಸ್ಟೇಶನ್​ ಅಧೀಕ್ಷಕ ವಿಶಂಭರ್​ ದಯಾಳ್​ ಪಾಂಡೆ ಕೂಡಲೇ ರೈಲ್ವೆ ಸ್ಟೇಶನ್​ಗೆ ಬಂದು, ಮಲಗಿದ್ದ ಅನಿರುದ್ಧ್​ ಕುಮಾರ್ ಮುಖದ ಮೇಲೆ ನೀರು ಸಿಂಪಡಿಸಿದ್ದಾರೆ. ಆಗಲೇ ಅನಿರುದ್ಧ್​ಗೆ ಎಚ್ಚರವಾಗಿದೆ.

ಈ ಸ್ಟೇಶನ್​ನಲ್ಲಿ ದೆಹಲಿ-ಹೌರಾಹ್​ ಮಾರ್ಗದ ವೈಶಾಲಿ ಎಕ್ಸ್​ಪ್ರೆಸ್​, ಸಂಗಮ್​ ಎಕ್ಸ್​ಪ್ರೆಸ್​, ಮಗಧ್​ ಎಕ್ಸ್​ಪ್ರೆಸ್​ ಹಾಗೂ ಹಲವು ಸರಕು ರೈಲುಗಳು ಸುಮಾರು ಎರಡು ತಾಸುಗಳಿಗೂ ಅಧಿಕ ಕಾಲ ಕಾದಿವೆ. ಇದರಿಂದ ಪ್ರಯಾಣಿಕರಿಗೂ ತೀವ್ರ ತೊಂದರೆಯಾಗಿದೆ. ಬಳಿಕ ಹತ್ತಿರದ ಫಫುಂಡ್​ ರೈಲ್ವೆ ಸ್ಟೇಶನ್​ ಮತ್ತು ಜಿಂಝಾಕ್​ ರೈಲ್ವೆ ಸ್ಟೇಶನ್​​ ಮಾಸ್ಟರ್​ಗಳು ಈ ಕಂಚೌಸಿ ರೈಲ್ವೆ ಸ್ಟೇಶನ್​​ನ ಕಂಟ್ರೋಲ್​ ರೂಂಗೆ ಫೋನ್​ ಮಾಡಿ, ರೈಲುಗಳೇಕೆ ಬರುತ್ತಿಲ್ಲ ಎಂದು ಕೇಳಿದ ಬಳಿಕವಷ್ಟೇ ಅಧೀಕ್ಷಕನ ಗಮನಕ್ಕೆ ಇದು ಬಂದಿದೆ. ಅಲ್ಲಿಯವರೆಗೂ ಸ್ಟೇಶನ್​ ಅಧೀಕ್ಷಕ ವಿಶಂಭರ್​ ದಯಾಳ್​ ಪಾಂಡೆಗೂ ಈ ವಿಚಾರ ಗೊತ್ತಿರಲಿಲ್ಲ.

ನಂತರ ಅನಿರುದ್ಧ್​ರನ್ನು ಪ್ರಯಾಗ್​ರಾಜ್​ನ ಹಿರಿಯ ವಿಭಾಗೀಯ ಕಾರ್ಯಾಚರಣೆಗಳ ವ್ಯವಸ್ಥಾಪಕ ಎಸ್​.ಕೆ.ಶುಕ್ಲಾ ಅಮಾನತು ಮಾಡಿದ್ದಾರೆ. ಅದಕ್ಕೂ ಮೊದಲು ಅವರನ್ನು ಆಸ್ಪತ್ರೆಗೆ ಸೇರಿಸಿ ವೈದ್ಯಕೀಯ ಪರೀಕ್ಷೆ ಕೂಡ ನಡೆಸಲಾಯಿತು. ಮದ್ಯ ಸೇವಿಸಿದ್ದು ಟೆಸ್ಟ್​​ನಲ್ಲಿ ದೃಢಪಟ್ಟ ತಕ್ಷಣ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: Ragging in Mangalore: ಮಂಗಳೂರಿನಲ್ಲಿ ಮತ್ತೆ ರ್ಯಾಗಿಂಗ್ ಪಿಡುಗು; ಕೇರಳ ಮೂಲದ 6 ನರ್ಸಿಂಗ್ ವಿದ್ಯಾರ್ಥಿಗಳು ಅರೆಸ್ಟ್

An assistant station master was suspended after got drunk during duty hours and slept In Uttar Pradesh

Follow Us
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್