AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಠಪೂರ್ತಿ ಕುಡಿದು, ಕಣ್ತುಂಬ ನಿದ್ದೆ ಮಾಡಿದ ರೈಲ್ವೆ ಸ್ಟೇಶನ್​ ಸಹಾಯಕ ಮಾಸ್ಟರ್​ಗೆ ನೀರು ಬಿದ್ದಾಗಲೇ ಎಚ್ಚರವಾಯ್ತು; ಗ್ರಹಚಾರ ಕಾದುಕುಳಿತಿತ್ತು..!

ಈ ಸ್ಟೇಶನ್​ನಲ್ಲಿ ದೆಹಲಿ-ಹೌರಾಹ್​ ಮಾರ್ಗದ ವೈಶಾಲಿ ಎಕ್ಸ್​ಪ್ರೆಸ್​, ಸಂಗಮ್​ ಎಕ್ಸ್​ಪ್ರೆಸ್​, ಮಗಧ್​ ಎಕ್ಸ್​ಪ್ರೆಸ್​ ಹಾಗೂ ಹಲವು ಸರಕು ರೈಲುಗಳು ಸುಮಾರು ಎರಡು ತಾಸುಗಳಿಗೂ ಅಧಿಕ ಕಾಲ ಕಾದಿವೆ. ಇದರಿಂದ ಪ್ರಯಾಣಿಕರಿಗೂ ತೀವ್ರ ತೊಂದರೆಯಾಗಿದೆ.

ಕಂಠಪೂರ್ತಿ ಕುಡಿದು, ಕಣ್ತುಂಬ ನಿದ್ದೆ ಮಾಡಿದ ರೈಲ್ವೆ ಸ್ಟೇಶನ್​ ಸಹಾಯಕ ಮಾಸ್ಟರ್​ಗೆ ನೀರು ಬಿದ್ದಾಗಲೇ ಎಚ್ಚರವಾಯ್ತು; ಗ್ರಹಚಾರ ಕಾದುಕುಳಿತಿತ್ತು..!
ರೈಲ್ವೆ ಸ್ಟೇಶನ್​ ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jul 17, 2021 | 3:45 PM

Share

ರೈಲು ಹೊರಡಲು ಎರಡು ತಾಸು ತಡ ಮಾಡಿದ ರೈಲ್ವೆ ಸ್ಟೇಶನ್​​ನ ಸಹಾಯಕ ಮಾಸ್ಟರ್​​​ನ್ನು ಅಮಾನತು ಮಾಡಲಾಗಿದೆ. ಉತ್ತರಪ್ರದೇಶದ ಕಂಚೌಸಿ ರೈಲ್ವೆಸ್ಟೇಶನ್​ನಲ್ಲಿ ಘಟನೆ ನಡೆದಿದ್ದು, ಈ ಸಹಾಯಕ ಸ್ಟೇಶನ್​ ಮಾಸ್ಟರ್​ ಕಂಠಪೂರ್ತಿ ಕುಡಿದು, ಗಡದ್ದಾಗಿ ನಿದ್ದೆಹೋದ ಕಾರಣಕ್ಕೆ ಕೆಲವು ರೈಲುಗಳು, ನಿಗದಿತ ಸಮಯಕ್ಕಿಂತಲೂ ಎರಡು ಗಂಟೆ ತಡವಾಗಿ ಹೊರಟಿವೆ. ಕರ್ತವ್ಯದಲ್ಲಿದ್ದಾಗಲೇ ನಿದ್ದೆ ಮಾಡಿ, ರೈಲ್ವೆ ಸಂಚಾರದಲ್ಲಿ ಅಡಚಣೆ ಉಂಟು ಮಾಡಿದ ಕಾರಣಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ.

ಔರಾಯಿಯಾ ಜಿಲ್ಲೆಯ ಕಂಚೌಸಿ ರೈಲ್ವೆ ಸ್ಟೇಶನ್​ನ ಈ ಸ್ಟೇಶನ್ ಮಾಸ್ಟರ್​ ಹೆಸರು ಅನಿರುದ್​ ಕುಮಾರ್​. ಗುರುವಾರ ಮಧ್ಯರಾತ್ರಿ 12ಗಂಟೆಯಿಂದ ಬೆಳಗ್ಗೆ 8ಗಂಟೆವರೆಗೆ ಅವರ ಶಿಫ್ಟ್ ಇತ್ತು. ಬಂದವರೇ ಕಂಠಪೂರ್ತಿ ಕುಡಿದು ಮಲಗಿಬಿಟ್ಟಿದ್ದರು. ಸ್ಟೇಶನ್​ಗೆ ಬರುವ ರೈಲುಗಳು ಮುಂದೆ ಹೋಗಬೇಕು ಎಂದರೆ ತಾವೇ, ಗ್ರೀನ್​ ಸಿಗ್ನಲ್​ ಕೊಡಬೇಕು ಎಂಬುದನ್ನು ಮರೆತೇ ಬಿಟ್ಟಿದ್ದ ಅವರು ನಿದ್ದೆ ಮಾಡಿದ್ದೇಬಂತು. ಸ್ಟೇಶನ್​ ಮಾಸ್ಟರ್​ ಹಸಿರು ಬಾವುಟ ಹಾರಿಸದೆ ಯಾವುದೇ ರೈಲು ಮುಂದೆ ಹೋಗುವುದಿಲ್ಲ. ಹಾಗೇ ಇಲ್ಲಿನ ರೈಲುಗಳ ಚಾಲಕರೂ ಬರೋಬ್ಬರಿ ಎರಡು ತಾಸು ಕಾದಿದ್ದಾರೆ. ಕೊನೆಗೂ ಅನಿರುದ್​ ಕುಮಾರ್​ಗೆ ಎಚ್ಚರವಾಗಲೇ ಇಲ್ಲ. ಅಷ್ಟರಲ್ಲಿ ರೈಲುಗಳು ವಿಳಂಬವಾಗಿದ್ದನ್ನು ಗಮನಿಸಿದ ಸ್ಟೇಶನ್​ ಅಧೀಕ್ಷಕ ವಿಶಂಭರ್​ ದಯಾಳ್​ ಪಾಂಡೆ ಕೂಡಲೇ ರೈಲ್ವೆ ಸ್ಟೇಶನ್​ಗೆ ಬಂದು, ಮಲಗಿದ್ದ ಅನಿರುದ್ಧ್​ ಕುಮಾರ್ ಮುಖದ ಮೇಲೆ ನೀರು ಸಿಂಪಡಿಸಿದ್ದಾರೆ. ಆಗಲೇ ಅನಿರುದ್ಧ್​ಗೆ ಎಚ್ಚರವಾಗಿದೆ.

ಈ ಸ್ಟೇಶನ್​ನಲ್ಲಿ ದೆಹಲಿ-ಹೌರಾಹ್​ ಮಾರ್ಗದ ವೈಶಾಲಿ ಎಕ್ಸ್​ಪ್ರೆಸ್​, ಸಂಗಮ್​ ಎಕ್ಸ್​ಪ್ರೆಸ್​, ಮಗಧ್​ ಎಕ್ಸ್​ಪ್ರೆಸ್​ ಹಾಗೂ ಹಲವು ಸರಕು ರೈಲುಗಳು ಸುಮಾರು ಎರಡು ತಾಸುಗಳಿಗೂ ಅಧಿಕ ಕಾಲ ಕಾದಿವೆ. ಇದರಿಂದ ಪ್ರಯಾಣಿಕರಿಗೂ ತೀವ್ರ ತೊಂದರೆಯಾಗಿದೆ. ಬಳಿಕ ಹತ್ತಿರದ ಫಫುಂಡ್​ ರೈಲ್ವೆ ಸ್ಟೇಶನ್​ ಮತ್ತು ಜಿಂಝಾಕ್​ ರೈಲ್ವೆ ಸ್ಟೇಶನ್​​ ಮಾಸ್ಟರ್​ಗಳು ಈ ಕಂಚೌಸಿ ರೈಲ್ವೆ ಸ್ಟೇಶನ್​​ನ ಕಂಟ್ರೋಲ್​ ರೂಂಗೆ ಫೋನ್​ ಮಾಡಿ, ರೈಲುಗಳೇಕೆ ಬರುತ್ತಿಲ್ಲ ಎಂದು ಕೇಳಿದ ಬಳಿಕವಷ್ಟೇ ಅಧೀಕ್ಷಕನ ಗಮನಕ್ಕೆ ಇದು ಬಂದಿದೆ. ಅಲ್ಲಿಯವರೆಗೂ ಸ್ಟೇಶನ್​ ಅಧೀಕ್ಷಕ ವಿಶಂಭರ್​ ದಯಾಳ್​ ಪಾಂಡೆಗೂ ಈ ವಿಚಾರ ಗೊತ್ತಿರಲಿಲ್ಲ.

ನಂತರ ಅನಿರುದ್ಧ್​ರನ್ನು ಪ್ರಯಾಗ್​ರಾಜ್​ನ ಹಿರಿಯ ವಿಭಾಗೀಯ ಕಾರ್ಯಾಚರಣೆಗಳ ವ್ಯವಸ್ಥಾಪಕ ಎಸ್​.ಕೆ.ಶುಕ್ಲಾ ಅಮಾನತು ಮಾಡಿದ್ದಾರೆ. ಅದಕ್ಕೂ ಮೊದಲು ಅವರನ್ನು ಆಸ್ಪತ್ರೆಗೆ ಸೇರಿಸಿ ವೈದ್ಯಕೀಯ ಪರೀಕ್ಷೆ ಕೂಡ ನಡೆಸಲಾಯಿತು. ಮದ್ಯ ಸೇವಿಸಿದ್ದು ಟೆಸ್ಟ್​​ನಲ್ಲಿ ದೃಢಪಟ್ಟ ತಕ್ಷಣ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: Ragging in Mangalore: ಮಂಗಳೂರಿನಲ್ಲಿ ಮತ್ತೆ ರ್ಯಾಗಿಂಗ್ ಪಿಡುಗು; ಕೇರಳ ಮೂಲದ 6 ನರ್ಸಿಂಗ್ ವಿದ್ಯಾರ್ಥಿಗಳು ಅರೆಸ್ಟ್

An assistant station master was suspended after got drunk during duty hours and slept In Uttar Pradesh

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ