AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಂತನಾಗ್ ಎನ್​ಕೌಂಟರ್; 4ನೇ ಯೋಧನ ಮೃತದೇಹ ಪತ್ತೆ; ಉಗ್ರರ ಅಟ್ಟಹಾಸ ಇಂದೇ ಕೊನೆಗಾಣಿಸಲು ಸೇನೆ ಸಂಕಲ್ಪ

Anantnag Encounter: ಏಳು ದಿನಗಳ ಹಿಂದೆ ದಕ್ಷಿಣ ಕಾಶ್ಮೀರದ ಅನಂತನಾಗ್​ನಲ್ಲಿ ಆರಂಭವಾದ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಕಾಳಗ ಇನ್ನೂ ಮುಗಿದಿಲ್ಲ. ಇನ್ನೂ ಇಬ್ಬರು ಅಥವಾ ಮೂವರು ಉಗ್ರರು ದಟ್ಟಾರಣ್ಯದಲ್ಲಿ ಅಡಗಿಕೊಂಡಿರುವ ಸಾಧ್ಯತೆ ಇದೆ. ಇದೇ ವೇಳೆ, ಎನ್​ಕೌಂಟರ್ ಸ್ಥಳದಲ್ಲಿ ಭದ್ರತಾ ಪಡೆಗೆ ಸೇರಿಗೆ 4ನೇ ಮೃತದೇಹ ಸಿಕ್ಕಿದೆ. ಇವತ್ತು ಬೆಳಗ್ಗೆ ಉಗ್ರನ ಸುಟ್ಟದೇಹವೊಂದೂ ಸಿಕ್ಕಿದೆ.

ಅನಂತನಾಗ್ ಎನ್​ಕೌಂಟರ್; 4ನೇ ಯೋಧನ ಮೃತದೇಹ ಪತ್ತೆ; ಉಗ್ರರ ಅಟ್ಟಹಾಸ ಇಂದೇ ಕೊನೆಗಾಣಿಸಲು ಸೇನೆ ಸಂಕಲ್ಪ
ಅನಂತನಾಗ್ ಎನ್​ಕೌಂಟರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 19, 2023 | 12:08 PM

ಶ್ರೀನಗರ, ಸೆಪ್ಟೆಂಬರ್ 19: ಕಾಶ್ಮೀರ ಕಣಿವೆಯ ಅನಂತನಾಗ್​ನಲ್ಲಿ ನಡೆಯುತ್ತಿರುವ ಗುಂಡಿನ ಕಾಳಗ (Anantnag Encounter) ಆರಂಭವಾಗಿ ಇಂದು ಏಳನೇ ದಿನ. ನಿನ್ನೆಯಿಂದ ಮತ್ತೆರಡು ಮೃತದೇಹ ಸಿಕ್ಕಿವೆ. ಇದರಲ್ಲಿ ಒಂದು ದೇಹ ಉಗ್ರನದ್ದಾದರೆ, ಮತ್ತೊಂದು ಸೇನಾ ಯೋಧರೊಬ್ಬರದ್ದು ಎಂದು ಹೇಳಲಾಗಿದೆ. ಇಬ್ಬರು ಉಗ್ರರು ಇನ್ನೂ ಜೀವಂತವಾಗಿದ್ದು, ಅವರನ್ನು ಇಂದೇ ಕೊನೆಗಾಣಿಸುವ ಸಂಕಲ್ಪದಲ್ಲಿ ಭದ್ರತಾ ಪಡೆಗಳು ಇವೆ.

ನಿನ್ನೆಯಿಂದ ಪತ್ತೆಯಾದ ಎರಡು ಮೃತದೇಹಗಳಲ್ಲಿ, ಒಂದು ಸುಟ್ಟು ಕರಕಲಾಗಿರುವ ದೇಹ ಇದೆ. ಇದು ಉಗ್ರನೊಬ್ಬನದೆಂದು ಶಂಕಿಸಲಾಗಿದೆ. ಇದು ಇಂದು ಬೆಳಗ್ಗೆ ಸಿಕ್ಕಿದೆ. ನಿನ್ನೆ ಸಿಕ್ಕಿದ್ದ ಮತ್ತೊಂದು ಮೃತದೇಹ ಯೋಧ ಪ್ರದೀಪ್ ಎನ್ನುವವರದ್ದು ಎಂದು ಗುರುತಿಸಲಾಗಿದೆ. ಈ ಎರಡೂ ಮೃತದೇಹಗಳ ಸ್ಯಾಂಪಲ್​ಗಳನ್ನು ಡಿಎನ್​ಎ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಇದನ್ನೂ ಓದಿ: ಮುಳ್ಳಿಗೆ ಮುಳ್ಳು; ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿದ ಭಾರತ; 5 ದಿನದಲ್ಲಿ ಹಿಂದಿರುಗುವಂತೆ ಸೂಚನೆ

ಅನಂತನಾಗ್​ನ ಕೋಕರ್ನಾಗ್​ನಲ್ಲಿ ನಡೆಯುತ್ತಿರುವ ಈ ಗುಂಡಿನ ಕಾಳಗ ಸುದೀರ್ಘದ್ದಾಗಿದೆ. ಪಾಕಿಸ್ತಾನ ಬೆಂಬಲಿತ ಉಗ್ರರು ಮತ್ತು ಭದ್ರತಾ ಪಡೆಗಳ ಮಧ್ಯೆ ಘೋರ ಗುಂಡಿನ ಚಕಮಕಿ ನಡೆದಿತ್ತು. ರಾಷ್ಟ್ರೀಯ ರೈಪಲ್ಸ್ ಪಡೆಯ ಕರ್ನಲ್ ಮನಪ್ರೀತ್ ಸಿಂಗ್, ಮೇಜರ್ ಆಶೀಶ್ ಧೋನಚಕ್ ಮತ್ತು ಜಮ್ಮು ಕಾಶ್ಮೀರ ಡಿಎಸ್​ಪಿ ಹುಮಾಯೂನ್ ಭಟ್ ಅವರು ಈ ಕಾಳಗದಲ್ಲಿ ಬಲಿಯಾಗಿದ್ದರು. ಇದೀಗ ಪ್ರದೀಪ್ ಎಂಬುವವರು ಈ ಪಟ್ಟಿಗೆ ಸೇರಿಕೊಂಡಿದ್ದಾರೆ.

ದಕ್ಷಿಣ ಕಾಶ್ಮೀರದಲ್ಲಿರುವ ಅನಂತನಾಗ್ ಸುತ್ತಮುತ್ತ ದಟ್ಟಾರಣ್ಯ ಇದ್ದು, ಉಗ್ರರು ಅಲ್ಲಿಗೆ ಪಲಾಯನಗೊಂಡು ಗುಹೆಗಳಂತಹ ಸ್ಥಳಗಳಲ್ಲಿ ಅಡಗಿಕೊಂಡಿರುವ ಸಾಧ್ಯತೆ ಇದೆ. ಭದ್ರತಾ ಪಡೆಗಳು ಡ್ರೋನ್ ಮತ್ತು ಹೆಲಿಕಾಪ್ಟರ್ ಬಳಸಿ ಶೋಧ ನಡೆಸುತ್ತಿದ್ದಾರೆ. ಅರಣ್ಯ ಭಾಗದಿಂದ ಜನರ ವಾಸ ಪ್ರದೇಶಗಳತ್ತ ಉಗ್ರರು ನುಸುಳದಿರುವಂತೆ ಎಚ್ಚರವಹಿಸಲು ಭದ್ರತಾ ಪಡೆಗಳು ನಾಕಾಬಂದಿ ಹಾಕಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ