AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಬರ್ ಪ್ಲೇಟ್​ನಲ್ಲಿ ‘ಆಂಧ್ರ ಸಿಎಂ ಜಗನ್’ ಹೆಸರು ಇರುವ ಕಾರು ಕೆ ಆರ್​ ಪುರಂನಲ್ಲಿ ಪತ್ತೆಯಾಯ್ತು!

YS Jagan Mohan Reddy: ಕರ್ನಾಟಕದ ರಾಜಧಾನಿ ಬೆಂಗೂರಿನಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ ಎಸ್​ ಜಗನ್​ ಮೋಹನ್​ ರೆಡ್ಡಿ ಅವರ ಹೆಸರಿನ ನಂಬರ್ ಪ್ಲೇಟ್​ ಇರುವ ಕಾರೊಂದು ಪತ್ತೆಯಾಗಿದೆ.  ಅಂದಹಾಗೆ ಸಿಎಂ ಜಗನ್​ ಅವರ ಹೆಸರಿರುವ ನಂಬರ್​ ಪ್ಲೇಟ್ ವಾಹನಗಳು ನೆರೆಯ ರಾಜ್ಯಗಳಲ್ಲಿಯೂ ಆಗಾಗ ಕಾಣಿಸುತ್ತಿರುತ್ತವೆ. ​  

ನಂಬರ್ ಪ್ಲೇಟ್​ನಲ್ಲಿ ‘ಆಂಧ್ರ ಸಿಎಂ ಜಗನ್’ ಹೆಸರು ಇರುವ ಕಾರು ಕೆ ಆರ್​ ಪುರಂನಲ್ಲಿ ಪತ್ತೆಯಾಯ್ತು!
ನಂಬರ್ ಪ್ಲೇಟ್​ನಲ್ಲಿ ‘ಆಂಧ್ರ ಸಿಎಂ ಜಗನ್’ ಹೆಸರು ಇರುವ ಕಾರು ಕೆ ಆರ್​ ಪುರಂನಲ್ಲಿ ಪತ್ತೆಯಾಯ್ತು!
TV9 Web
| Updated By: ಸಾಧು ಶ್ರೀನಾಥ್​|

Updated on: Jul 02, 2021 | 9:54 AM

Share

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗೂರಿನಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ ಎಸ್​ ಜಗನ್​ ಮೋಹನ್​ ರೆಡ್ಡಿ ಅವರ ಹೆಸರಿನ ನಂಬರ್ ಪ್ಲೇಟ್​ ಇರುವ ಕಾರೊಂದು ಪತ್ತೆಯಾಗಿದೆ.  ಅಂದಹಾಗೆ ಸಿಎಂ ಜಗನ್​ ಅವರ ಹೆಸರಿರುವ ನಂಬರ್​ ಪ್ಲೇಟ್ ವಾಹನಗಳು ನೆರೆಯ ರಾಜ್ಯಗಳಲ್ಲಿಯೂ ಆಗಾಗ ಕಾಣಿಸುತ್ತಿರುತ್ತವೆ. ​  

ಕೆ.ಆರ್‌. ಪುರಂ ಪೊಲೀಸರು ವಾಹನಗಳ ತಪಾಸಣೆ ವೇಳೆ ಈ ನಿಗೂಢ ಕಾರನ್ನು ಪತ್ತೆ ಹಚ್ಚಿದ್ದಾರೆ.  ಕಾರಿನ ನಂಬರ್ ಪ್ಲೇಟ್‌ನಲ್ಲಿ (Number Plate) ಆಂಧ್ರ ಸಿಎಂ ಜಗನ್ ಹೆಸರು ಕಂಡುಬರುತ್ತಿದ್ದಂತೆ ಎಚ್ಚೆತ್ತ ಕೆ.ಆರ್‌. ಪುರಂ ಪೊಲೀಸರು ವಾಹನವನ್ನು ತಡೆದು, ಪರಿಶೀಲಿಸಿದ್ದಾರೆ. ಆ ವೇಳೆ  ಕಾರಿನ ಸಂಖ್ಯೆ AP 39 JG 451 ಎಂದಿದ್ದು, ‘451’ ಸಂಖ್ಯೆಯನ್ನ ‘YSJ’ ರೀತಿಯಲ್ಲಿ ಅಳವಡಿಸಿರುವುದಾಗಿ ಗೊತ್ತಾಗಿದೆ. ಆದರೆ ಇದು ಮೋಟಾರು ವಾಹನ ಕಾಯ್ದೆ ಅಧಿನಿಯಮಕ್ಕೆ (The Motor Vehicle Act – Rule 50, 51 of MV Act, 1989)  ವ್ಯತಿರಿಕ್ತವಾಗಿದ್ದರಿಂದ ಕೆ ಆರ್​ ಪುರಂ ಪೊಲೀಸರು ಕಾರು ಮಾಲೀಕನಿಗೆ ದಂಡ ಹಾಕಿ ಕಳಿಸಿದ್ದಾರೆ.

ಇಷ್ಟಕ್ಕೂ ಆಗಿದ್ದೇನೆಂದ್ರೆ ಸದರಿ ಕಾರಿನ ಮಾಲೀಕ ಆಂಧ್ರ ಸಿಎಂ ಜಗನ್  ಅವರ (Y S Jagan Mohan Reddy – Chief Minister of Andhra Pradesh) ಅಪ್ಪಟ ಅಭಿಮಾನಿ. ಹಾಗಾಗಿ ತನ್ನ ಕಾರ್ ನಂಬರ್ ಪ್ಲೇಟ್ ಮೇಲೆ ತನ್ನ ನೆಚ್ಚಿನ ಮುಖ್ಯಮಂತ್ರಿಯ ಹೆಸರು ಹಾಕಿಸಿಕೊಂಡಿದ್ದಾರೆ. ಸದರಿ ಕಾರು AP39 JG 451 ನಂಬರಿನ ಆಂಧ್ರಪ್ರದೇಶ ನೋಂದಣಿ ಹೊಂದಿದೆ.  ಹಾಗಾಗಿ, ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ್ದರಿಂದ ಬೆಂಗಳೂರು ಪೊಲೀಸರು ಚಾಲಕನಿಗೆ ಫೈನ್ ಹಾಕಿ ಕಳಿಸಿದ್ದಾರೆ.

(Andhra CM Jagan found on number plate of car in kr puram bengaluru Motor Vehicle Act Improper Number Plate)

Traffic Rules: ವಾಹನಗಳ ನಂಬರ್​ ಪ್ಲೇಟ್​ ಇನ್ಮುಂದೆ ಹೀಗೆ ಇರಬೇಕಂತೆ..ಇಲ್ಲದಿದ್ದರೆ ದಂಡ!; ಫೋಟೋ ಶೇರ್​ ಮಾಡಿದ ಬೆಂಗಳೂರು ಟ್ರಾಫಿಕ್​ ಪೊಲೀಸ್​

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!