TTD Instructions To Ayodhya: ಅಯೋಧ್ಯೆ ಬಾಲರಾಮನ ದರ್ಶನಕ್ಕಾಗಿ ಕ್ಯೂ ವ್ಯವಸ್ಥೆ – ಅಯೋಧ್ಯೆ ಟ್ರಸ್ಟ್‌ಗೆ ಟಿಟಿಡಿ ಸಲಹೆ ಸೂಚನೆ

|

Updated on: Feb 19, 2024 | 1:59 PM

Queue management in Ayodhya: ಬಾಲರಾಮನ ದೇಗುಲಕ್ಕೆ ಬರುವ ಭಕ್ತರಿಗೆ ತೃಪ್ತಿಕರ ದರ್ಶನ ನೀಡಲು ಎಂತಹ ವ್ಯವಸ್ಥೆ ಮಾಡಬೇಕು ಎಂದು ಟಿಟಿಡಿ ಇಒ ಅವರನ್ನು ಅಯೋಧ್ಯೆ ಟ್ರಸ್ಟ್‌ ಸದಸ್ಯರು ಕೇಳಿದ್ದರು. ಕ್ಯೂ ಲೈನ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಟಿಟಿಡಿ ಎಂಜಿನಿಯರಿಂಗ್ ಅಧಿಕಾರಿಗಳು ಹಲವಾರು ಸಲಹೆಗಳನ್ನು ನೀಡಿದ್ದಾರೆ.

TTD Instructions To Ayodhya: ಅಯೋಧ್ಯೆ ಬಾಲರಾಮನ ದರ್ಶನಕ್ಕಾಗಿ ಕ್ಯೂ ವ್ಯವಸ್ಥೆ - ಅಯೋಧ್ಯೆ ಟ್ರಸ್ಟ್‌ಗೆ ಟಿಟಿಡಿ ಸಲಹೆ ಸೂಚನೆ
ಅಯೋಧ್ಯೆ ಬಾಲರಾಮನ ದರ್ಶನಕ್ಕಾಗಿ ಕ್ಯೂ ವ್ಯವಸ್ಥೆ: ಟಿಟಿಡಿ ಸಲಹೆ ಸೂಚನೆ
Follow us on

ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರ ದಟ್ಟಣೆಯನ್ನು ಕ್ರಮಬದ್ಧಗೊಳಿಸುವ ಬಗ್ಗೆ ಅಂದರೆ ಕ್ಯೂ ವ್ಯವಸ್ಥೆ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಲಿ ಪದಾಧಿಕಾರಿಗಳು (ಟಿಟಿಡಿ TTD) ಅಯೋಧ್ಯೆ ಟ್ರಸ್ಟ್‌ನ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರತಿನಿಧಿಗಳೊಂದಿಗೆ ಅವರು ಭಕ್ತರ ಹರಿವನ್ನು ನಿಯಂತ್ರಿಸುವ ಜೊತೆಗೆ ಸರತಿ ಸಾಲುಗಳ ನಿರ್ವಹಣೆಯ ಬಗ್ಗೆ ಚರ್ಚಿಸಿದರು. ಟಿಟಿಡಿ ಇ ಒ ಎ ವಿ ಧರ್ಮ ರೆಡ್ಡಿ ನೇತೃತ್ವದ ದೇವಾಸ್ಥಾನದ ಅಧಿಕಾರಿಗಳ ತಂಡ ಜಾಗೃತಿ ಮೂಡಿಸಿತು. ಟ್ರಸ್ಟ್‌ನ ಮನವಿಯಂತೆ ಟಿಟಿಡಿ ಅಧಿಕಾರಿಗಳು ಅಯೋಧ್ಯೆಗೆ ತೆರಳಿದ್ದರು. ಟ್ರಸ್ಟ್ ಕಚೇರಿಯಲ್ಲಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಯಿತು (Queue management in Ayodhya).

ಬಾಲರಾಮನ ದೇಗುಲಕ್ಕೆ ಬರುವ ಭಕ್ತರಿಗೆ ತೃಪ್ತಿಕರ ದರ್ಶನ ನೀಡಲು ಎಂತಹ ವ್ಯವಸ್ಥೆ ಮಾಡಬೇಕು ಎಂದು ಟಿಟಿಡಿ ಇಒ ಅವರನ್ನು ಕೇಳಲಾಯಿತು. ಕ್ಯೂ ಲೈನ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಟಿಟಿಡಿ ಎಂಜಿನಿಯರಿಂಗ್ ಅಧಿಕಾರಿಗಳು ಹಲವಾರು ಸಲಹೆಗಳನ್ನು ನೀಡಿದ್ದಾರೆ.

Also Read: ಪವಡಿಸು ಪರಮಾತ್ಮ… ಬಾಲ ರಾಮನಿಗೆ ಬೇಕು ವಿಶ್ರಾಂತಿ: ಇನ್ನು ಅಯೋಧ್ಯೆ ಮಂದಿರವನ್ನು 1 ಗಂಟೆ ಕಾಲ ಮುಚ್ಚಲಾಗುವುದು

ಬಳಿಕ ಬಾಲರಾಮನ ದರ್ಶನ ಏರ್ಪಡಿಸಿದ್ದ ದೇವಸ್ಥಾನದ ಟ್ರಸ್ಟ್‌ನ ಪ್ರತಿನಿಧಿಗಳು ಟಿಟಿಡಿ ಅಧಿಕಾರಿಗಳಿಗೆ ತೀರ್ಥಪ್ರಸಾದ ವಿತರಿಸಿದರು. ಅಯೋಧ್ಯೆ ಟ್ರಸ್ಟ್‌ನ ಪ್ರತಿನಿಧಿಗಳಾದ ಡಾ.ಅನಿಲ್ ಮಿಶ್ರಾ, ಗೋಪಾಲ್ ಜಿ, ಜಗದೀಶ್ ಆಫ್ಲೆ, ಗಿರೀಶ್ ಸಹಸ್ರ ಭೋಜನಿ, ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ರಾಘವ್ ಹಾಗೂ ಟಿಟಿಡಿ ಇ ಒ ಜೊತೆಗೆ ದೇವಸ್ಥಾನದ ವಿಶೇಷ ತಂಡವೂ ಅಯೋಧ್ಯೆ ಭೇಟಿಯಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:59 pm, Mon, 19 February 24