AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ರೂಪಾಯಿ ವೇತನ ಪಡೆಯುವುದಾಗಿ ಹೇಳಿದ ಪಂಜಾಬ್​​​ನ ಹೊಸ ಅಡ್ವೋಕೇಟ್​ ಜನರಲ್​ ಸಿಧು

2007ರಲ್ಲಿ ಇವರಿಗೆ ಸೀನಿಯರ್​ ಅಡ್ವೋಕೇಟ್​ ಹುದ್ದೆ ಸಿಕ್ಕಿತು. ನಂತರ 2008ರಿಂದ 2014ರವರೆಗೆ ಅಸಿಸ್ಟೆಂಟ್​​ ಸಾಲಿಸಿಟರ್​ ಜನರಲ್​ ಆಫ್​ ಇಂಡಿಯಾ ಆಗಿ ಕಾರ್ಯನಿರ್ವಹಿಸಿದರು.

ಒಂದೇ ರೂಪಾಯಿ ವೇತನ ಪಡೆಯುವುದಾಗಿ ಹೇಳಿದ ಪಂಜಾಬ್​​​ನ ಹೊಸ ಅಡ್ವೋಕೇಟ್​ ಜನರಲ್​ ಸಿಧು
ಅನ್ಮೋಲ್​ ರತ್ತನ್​ ಸಿಧು
TV9 Web
| Edited By: |

Updated on: Mar 20, 2022 | 8:12 AM

Share

ಪಂಜಾಬ್​ ರಾಜ್ಯ ಸರ್ಕಾರ ಹೊಸದಾಗಿ ನೇಮಕ ಮಾಡಿರುವ ಅಡ್ವೋಕೇಟ್ ಜನರಲ್​ ಅನ್ಮೋಲ್​ ರತ್ತನ್​ ಸಿಧು, ತಾವು ತಮ್ಮ ಕೆಲಸಕ್ಕೆ ಕೇವಲ 1 ರೂಪಾಯಿ ಸಂಬಳ ಪಡೆಯುವುದಾಗಿ ಹೇಳಿದ್ದಾರೆ. ಎಲ್ಲ ಕೇಸ್​​ಗಳನ್ನು ಪಾರದರ್ಶಕವಾಗಿ ನಡೆಸುತ್ತೇನೆ. ಆದರೆ ವೃಥಾ ಹೆಚ್ಚಿನ ವೇತನ ಪಡೆದು ಸರ್ಕಾರಕ್ಕೆ ಹೊರೆಯಾಗುವುದಿಲ್ಲ ಎಂದು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಈ ಮಾಧ್ಯಮದೊಂದಿಗೆ ಅವರು ಎಕ್ಸ್​ಕ್ಲೂಸಿವ್​ ಆಗಿ ಮಾತನಾಡಿದ್ದಾರೆ. ತಮ್ಮ ಸುದೀರ್ಘ ಅವಧಿಯ ವೃತ್ತಿ ಜೀವನದಲ್ಲಿ ಅವರು ಅತ್ಯಂತ ಸೂಕ್ಷ್ಮ ಪ್ರಕರಣಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಖಾಸಗಿ ವ್ಯಕ್ತಿಗಳ ಕ್ರಿಮಿನಲ್​, ಸಿವಿಲ್​, ಸಾಂವಿಧಾನಿಕ, ಭೂಮಿಗೆ ಸಂಬಂಧಪಟ್ಟ ಪ್ರಕರಣಗಳನ್ನೂ ಕೈಗೆತ್ತಿಕೊಂಡು, ಗೆದ್ದಿದ್ದಾರೆ. ಇವರೊಬ್ಬ ಪ್ರತಿಭಾವಂತ ಹಿರಿಯ ವಕೀಲರು.

1958ರ ಮೇ 1ರಂದು, ಕಾರ್ಮಿಕ ದಿನದಂದೇ ರೈತ ಕುಟುಂಬದಲ್ಲಿ ಜನಿಸಿದ ಅನ್ಮೋಲ್​ ರತ್ತನ್​ ಸಿಧು, 1975ರವರೆಗೆ ಹಳ್ಳಿಶಾಲೆಯಲ್ಲೇ ಕಲಿಸಿದ್ದಾರೆ. ನಂತರ ಚಂಡಿಗಢ್​​ಗೆ ತೆರಳಿ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ. ಬಳಿಕ ಪಂಜಾಬ್​ ಯೂನಿವರ್ಸಿಟಿಯಲ್ಲಿ ಕಾನೂನು ಓದಿದ್ದಾರೆ. ಸೋಶಿಯೋ-ಪೊಲಿಟಿಕಲ್​​ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದ ಅವರು, 1981-1982ರವರೆಗೆ ಪಂಜಾಬ್​ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮಂಡಳಿ ಅಧ್ಯಕ್ಷರಾಗಿದ್ದರು. 1985ರಲ್ಲಿ ಈ ಕಾನೂನು ವೃತ್ತಿ ಪ್ರವೇಶಿಸಿದರು. 1993ರಲ್ಲಿ ಪಂಜಾಬ್​​ನ ಡೆಪ್ಯೂಟಿ ಅಡ್ವೋಕೇಟ್​ ಜನರಲ್​ ಆಗಿ ನೇಮಕಗೊಂಡರು. 2005ರಲ್ಲಿ ಪಂಜಾಬ್​ ಮತ್ತು ಹರ್ಯಾಣ ಹೈಕೋರ್ಟ್​​ನಲ್ಲಿ ಹೆಚ್ಚುವರಿ ಅಡ್ವೋಕೇಟ್​ ಜನರಲ್​ ಆಗಿದ್ದರು. ಈ ವೇಳೆ ಹಲವು ಖಾಸಗಿ ಕೇಸ್​​ಗಳನ್ನು ಅವರು ನಿಭಾಯಿಸುತ್ತಿದ್ದರು.

2007ರಲ್ಲಿ ಇವರಿಗೆ ಸೀನಿಯರ್​ ಅಡ್ವೋಕೇಟ್​ ಹುದ್ದೆ ಸಿಕ್ಕಿತು. ನಂತರ 2008ರಿಂದ 2014ರವರೆಗೆ ಅಸಿಸ್ಟೆಂಟ್​​ ಸಾಲಿಸಿಟರ್​ ಜನರಲ್​ ಆಫ್​ ಇಂಡಿಯಾ ಆಗಿ ಕಾರ್ಯನಿರ್ವಹಿಸಿದರು. ಪಂಜಾಬ್​ ಮತ್ತು ಹರ್ಯಾಣ ಕೋರ್ಟ್​​ನಲ್ಲಿ, ಸಿಬಿಐನ ಪಬ್ಲಿಕ್​ ಪ್ರಾಸಿಕ್ಯೂಟರ್​ ಆಗಿಯೂ ಕೆಲಸ ಮಾಡಿದ್ದಾರೆ.  ಅನ್ಮೋಲ್​ ರತ್ತನ್​ ಸಿಧು ಅವರು ಪಂಜಾಬ್​​ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪರ್ಮಾನ್​ ಪಾತ್ರಾಕ್ಕೂ ಭಾಜನರಾಗಿದ್ದಾರೆ. ಪಂಜಾಬ್​​ನಲ್ಲಿ ಆಮ್​ ಆದ್ಮಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇವರನ್ನು ಸರ್ಕಾರದ ಪರ ಅಡ್ವೋಕೇಟ್ ಜನರಲ್​ ಆಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: World Sparrow Day 2022 : ಇಂದು ವಿಶ್ವ ಗುಬ್ಬಚ್ಚಿ ದಿನ: ಈ ದಿನವನ್ನು ಹೇಗೆ ಆಚರಿಸುವುದು? ಇಲ್ಲಿದೆ ಮಾಹಿತಿ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ