AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

My India My Life Goals: ಲಕ್ಷಗಟ್ಟಲೆ ಸಸಿಗಳನ್ನು ನೆಟ್ಟು ಪ್ರಕೃತಿಯ ಪೋಷಿಸುತ್ತಿರುವ ಇಕ್ಬಾಲ್ ಲೋನ್! ಭಾರತ ಪಾಕ್ ನಿಯಂತ್ರಣ ಗಡಿ ಬಳಿ ಸ್ವರ್ಗವನ್ನೇ ಸೃಷ್ಟಿಸಿದ್ದಾರೆ

Green Warrior Mohammad Iqbal Lone: ಮೊಹಮ್ಮದ್ ಇಕ್ಬಾಲ್ ಲೋನ್ LOC ಬಳಿ ಜಮ್ಮು ಮತ್ತು ಕಾಶ್ಮೀರಕ್ಕೆ ಅಂಟಿಕೊಂಡಂತೆ ಲಕ್ಷಗಟ್ಟಲೆ ಮರಗಳ ನೆಟ್ಟಿದ್ದಾರೆ. ಇದು ಅವರ ನನ್ನ ಭಾರತ ನನ್ನ ಜೀವನದ ಗುರಿಗಳು ಧ್ಯೇಯೋದ್ದೇಶ

My India My Life Goals: ಲಕ್ಷಗಟ್ಟಲೆ ಸಸಿಗಳನ್ನು ನೆಟ್ಟು ಪ್ರಕೃತಿಯ ಪೋಷಿಸುತ್ತಿರುವ ಇಕ್ಬಾಲ್ ಲೋನ್! ಭಾರತ ಪಾಕ್ ನಿಯಂತ್ರಣ ಗಡಿ ಬಳಿ ಸ್ವರ್ಗವನ್ನೇ ಸೃಷ್ಟಿಸಿದ್ದಾರೆ
ಲಕ್ಷಗಟ್ಟಲೆ ಸಸಿಗಳನ್ನು ನೆಟ್ಟ ಪ್ರಕೃತಿಯ ಪೋಷಿಸುತ್ತಿರುವ ಇಕ್ಬಾಲ್ ಲೋನ್!
ಸಾಧು ಶ್ರೀನಾಥ್​
| Updated By: ಡಾ. ಭಾಸ್ಕರ ಹೆಗಡೆ|

Updated on:Jun 30, 2023 | 5:58 PM

Share

Inspirational Story: ಇದು ಮೊಹಮ್ಮದ್ ಇಕ್ಬಾಲ್ ಲೋನ್ ಅವರ ಸ್ಪೂರ್ತಿದಾಯಕ ಕಥೆ – ಪರಿಸರ ಚೆನ್ನಾಗಿದ್ದರೆ ನಾವು ಚೆನ್ನಾಗಿರುತ್ತೇವೆ.. ಇಲ್ಲವಾದರೆ ಮುಂದಿನ ಪೀಳಿಗೆಗೆ ಇಂದಿನ ಪೀಳಿಗೆಯ ಜನ ಪ್ರಶ್ನಾರ್ಹವಾಗುತ್ತಾರೆ.. ಹಾಗಾಗಿಯೇ ಕೆಲವರು ಪರಿಸರ ರಕ್ಷಣೆಗೆ ಹರಸಾಹಸ ಪಡುತ್ತಾ ಎಲ್ಲರಿಗೂ ಆದರ್ಶವಾಗುತ್ತಿದ್ದಾರೆ. ಅವರು ಪರಿಸರಕ್ಕಾಗಿ ಅಸಂಖ್ಯಾತ ಪ್ರಯತ್ನಗಳನ್ನು ಮಾಡುತ್ತಾರೆ. ಅವರ ಈ ಮಹತ್ಕಾರ್ಯಕ್ಕಾಗಿ ಅನೇಕ ಪ್ರಶಸ್ತಿಗಳು ಸಹ ಅಂತಹವರನ್ನು ಹುಡುಕಿಕೊಂಡು ಹೋಗುತ್ತವೆ. ಆದರೆ 50ನೇ ಪರಿಸರ ದಿನದ ಅಂಗವಾಗಿ ಆಜಾದಿ ಕಾ ಅಮೃತ್ ಮಹೋತ್ಸವದ (Azadi Ka Amrit Mahotsav) ಅಂಗವಾಗಿ ಭಾರತ ಸರ್ಕಾರವು ‘ನನ್ನ ಭಾರತ – ನನ್ನ ಜೀವನದ ಗುರಿಗಳು’, ಪರಿಸರ ಆಂದೋಲನಕ್ಕಾಗಿ ಜೀವನಶೈಲಿ – ಜೀವನ ಎಂಬ ಘೋಷಣೆಯಡಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಗ್ರೀನ್ ವಾರಿಯರ್ಸ್ ಎನಿಸಿಕೊಂಡವರ (Green Warrior Mohammad Iqbal Lone) ಜೀವನ ಕಥೆಗಳನ್ನು ಮತ್ತು ಅವರ ಪ್ರಯತ್ನಗಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಈ ಆಂದೋಲನದಲ್ಲಿ ಟಿವಿ9 ಸಹ (TV9 Network) ಭಾಗವಹಿಸುತ್ತಿದೆ.

ಆದರೆ, ಪರಿಸರ ಸಂರಕ್ಷಣೆಯ ಅಂಗವಾಗಿ ಗಿಡಗಳನ್ನು ನೆಡುವುದರೊಂದಿಗೆ ಎಲ್ಲರಿಗೂ ಮಾದರಿಯಾಗಿರುವ ಜಮ್ಮು-ಕಾಶ್ಮೀರದ ಇಕ್ಬಾಲ್ ಲೋನ್ ಅವರು ಜೀವ ವೈವಿಧ್ಯ ರಕ್ಷಣೆಗೆ ನಿರಂತರ ಶ್ರಮಿಸುತ್ತಿದ್ದಾರೆ. ಪರಿಸರ ಹೋರಾಟಗಾರ ಮೊಹಮ್ಮದ್ ಇಕ್ಬಾಲ್ ಲೋನ್ ಕಾಶ್ಮೀರದಲ್ಲಿ ಪರಿಸರ ಸಂರಕ್ಷಣೆಗೆ ನಿರಂತರ ಶ್ರಮಿಸುತ್ತಿದ್ದಾರೆ.

ಇದರ ಭಾಗವಾಗಿ ಭಾರತೀಯ ಸೇನಾ ವಲಯಕ್ಕೆ ಹಲವು ಬಗೆಯ ಗಿಡಗಳನ್ನು ನೀಡಲಾಗುತ್ತದೆ. ಅಲ್ಲದೆ, ಇಕ್ಬಾಲ್ ಲೋನ್​ ಅವರು ಭಾರತ-ಪಾಕಿಸ್ತಾನ ಗಡಿ ಪ್ರದೇಶಗಳಲ್ಲಿಯೂ ಸಸಿಗಳನ್ನು ನೆಡುವ ವಿಶೇಷತೆಯಾಗಿದೆ. ಅದಕ್ಕೇ ಇಕ್ಬಾಲ್ ಲೋನ್​ ಅವರು ಸ್ವರ್ಗ ಎಲ್ಲೋ ಅಲ್ಲ.. ಭೂಮಿಯ ಮೇಲಿದೆ ಅಂತಾ ಹೇಳೋದು.

“ಸ್ವರ್ಗವೆಂದರೆ.. ಎಲ್ಲೋ ಅಲ್ಲ.. ಇದು ಭೂಮಿಯ ಮೇಲೆ ಇದೆ ಎಂದು ನಾನು ನಂಬುತ್ತೇನೆ. ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯುತ್ತಿದ್ದರೆ.. ಮುಂದಿನ ದಿನಗಳಲ್ಲಿ ಸ್ವರ್ಗವು ಯಾರಿಗೂ ಕಾಣಿಸುವುದಿಲ್ಲ. ಹಲೋ.. ನನ್ನ ಹೆಸರು ಇಕ್ಬಾಲ್ ಲೋನ್. ಕಾಶ್ಮೀರದ ಉರಿ ಪ್ರದೇಶದಲ್ಲಿ ನಾನು ವಾಸಿಸುತ್ತಿದ್ದೇನೆ.

ಬೆಂಕಿಯಿಂದಾಗಿ ಇಲ್ಲಿ.. ಶೇ. 40-50 ರಷ್ಟು ಅರಣ್ಯ ಕಣ್ಮರೆಯಾಗಿದೆ. ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಜಲ್​ ಜಂಗಲ್ ಜಮೀನ್.. ಇಲ್ಲದಿದ್ದರೆ ಜೀವದ ಉಳಿವು ಅಸಾಧ್ಯ” ಎಂದು ಇಕ್ಬಾಲ್ ಲೋನ್ ಅಭಿಪ್ರಾಯಪಡುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:48 am, Wed, 28 June 23

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!