ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಗೀತಾ ಪ್ರೆಸ್​​ನ ರಾಮಚರಿತ ಮಾನಸ, ರಾಮನ ಕೃತಿಗಳಿಗೆ ಭರ್ಜರಿ ಬೇಡಿಕೆ

| Updated By: ಗಣಪತಿ ಶರ್ಮ

Updated on: Jan 13, 2024 | 6:46 PM

ಗೋರಖ್​​ಪುರದ ಗೀತಾ ಪ್ರೆಸ್​​ನ ‘ರಾಮಾಚರಿತ ಮಾನಸ’ಕ್ಕೆ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಬೇಡಿಕೆ ವ್ಯಕ್ತವಾಗಿದೆ ಎಂಬ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ಸುಂದರಕಾಂಡ’ ಮತ್ತು ‘ಹನುಮಾನ್ ಚಾಲೀಸ’ಕ್ಕೂ ಬಹಳಷ್ಟು ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಸಂದೇಶಗಳಲ್ಲಿ ಉಲ್ಲೇಖವಾಗಿದೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಗೀತಾ ಪ್ರೆಸ್​​ನ ರಾಮಚರಿತ ಮಾನಸ, ರಾಮನ ಕೃತಿಗಳಿಗೆ ಭರ್ಜರಿ ಬೇಡಿಕೆ
ಗೀತಾ ಪ್ರೆಸ್
Follow us on

ನವದೆಹಲಿ, ಜನವರಿ 13: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಪ್ರಾಣ ಪ್ರತಿಷ್ಠೆಗೆ ದಿನಗಳಲ್ಲಿ ಆರಂಭವಾಗಿದೆ. ಈ ಮಧ್ಯೆ ದೇಶದ ಮೂಲೆ ಮೂಲೆಯಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ವಿವಿಧ ವಿಚಾರಗಳು, ಐತಿಹ್ಯಗಳು ಬೆಳಕಿಗೆ ಬರುತ್ತಿವೆ. ಎಲ್ಲೆಡೆ ಭಗವಾನ್ ರಾಮನಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೀಗ ರಾಮ ಮಂದಿರ ಉದ್ಘಾಟನೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ರಾಮಾಚರಿತ ಮಾನಸದ ಪುಸ್ತಕ ಪ್ರತಿಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಗೋರಖ್​​ಪುರದ ಗೀತಾ ಪ್ರೆಸ್​​ನ ‘ರಾಮಾಚರಿತ ಮಾನಸ’ಕ್ಕೆ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಬೇಡಿಕೆ ವ್ಯಕ್ತವಾಗಿದೆ ಎಂಬ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಭಗವಾನ್ ರಾಮನಿಗೆ ಸಂಬಂಧಿಸಿದ ಕೃತಿಗಳಿಗೆ ಬೇಡಿಕೆ ಬಹಳ ಹೆಚ್ಚಾಗಿದ್ದು ಪೂರೈಸುವುದು ಗೀತಾ ಪ್ರೆಸ್​​​ಗೆ ಕಷ್ಟಕರವಾಗಿ ಪರಿಣಮಿಸಿದೆ.

‘ಸುಂದರಕಾಂಡ’ ಮತ್ತು ‘ಹನುಮಾನ್ ಚಾಲೀಸ’ಕ್ಕೂ ಬಹಳಷ್ಟು ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಸಂದೇಶಗಳಲ್ಲಿ ಉಲ್ಲೇಖವಾಗಿದೆ.


ಮತ್ತೊಂಡೆ, ದೇಶದ ವಿವಿಧ ಕಡೆಗಳಲ್ಲಿ ಭಗವಾನ್ ಶ್ರೀ ರಾಮನ ಚಿತ್ರ ಹಾಗೂ ಸಂದೇಶಗಳುಳ್ಳ ಕಟೌಟ್​​ಗಳು, ಬ್ಯಾನರ್​​​ಗಳು ರಾರಾಜಿಸುತ್ತಿವೆ. ಗುಜರಾತ್ ರಾಜ್ಯದ ಸೂರತ್ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ 35 ಮೀಟರ್ ಉದ್ದ ಹಾಗೂ 6.5 ಮೀಟರ್ ಅಗಲದ ಬೃಹದಾಕಾರದ ಬ್ಯಾನರ್ ಅಳವಡಿಸಿರುವುದು ಗಮನ ಸೆಳೆಯುತ್ತಿದೆ.


ಮತ್ತಷ್ಟು ಓದಿ: ಒಡಿಶಾದ ಜಗನ್ನಾಥ ದೇವಾಲಯದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹಾಗೂ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟ್ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರಗಳ ನೂರಾರು ಗಣ್ಯರಿಗೆ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ