AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಮತಾ ಬ್ಯಾನರ್ಜಿಗೆ ಸಾಹಿತ್ಯ ಪುರಸ್ಕಾರ: ಪ್ರಶಸ್ತಿ ಮರಳಿಸಿದ ಬೆಂಗಾಲಿ ಸಾಹಿತಿ

ಜಾನಪದ ಸಂಶೋಧಕಿ ರತ್ನಾ ರಶೀದ್ ಬ್ಯಾನರ್ಜಿ ತಮಗೆ ನೀಡಿದ್ದ ‘ಆನಂದ ಶಂಕರ್ ಸ್ಮಾರಕ್ ಪುರಸ್ಕಾರ’ವನ್ನು ಮರಳಿಸಲು ನಿರ್ಧರಿಸಿದ್ದಾರೆ.

ಮಮತಾ ಬ್ಯಾನರ್ಜಿಗೆ ಸಾಹಿತ್ಯ ಪುರಸ್ಕಾರ: ಪ್ರಶಸ್ತಿ ಮರಳಿಸಿದ ಬೆಂಗಾಲಿ ಸಾಹಿತಿ
ಬೆಂಗಾಲಿ ಸಾಹಿತಿ ರತ್ನಾ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: May 11, 2022 | 10:58 AM

Share

ಕೊಲ್ಕತ್ತಾ: ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ (Mamata Banergee) ಪಶ್ಚಿಮಬಂಗ ಬಾಂಗ್ಲಾ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಅಕಾಡೆಮಿಯ ಈ ನಿರ್ಧಾರ ವಿರೋಧಿಸಿ, ಬೆಂಗಾಲಿ ಲೇಖಕಿ ಮತ್ತು ಜಾನಪದ ಸಂಶೋಧಕಿ ರತ್ನಾ ರಶೀದ್ ಬ್ಯಾನರ್ಜಿ ತಮಗೆ ನೀಡಿದ್ದ ‘ಆನಂದ ಶಂಕರ್ ಸ್ಮಾರಕ್ ಪುರಸ್ಕಾರ’ವನ್ನು ಮರಳಿಸಲು ನಿರ್ಧರಿಸಿದ್ದಾರೆ. ಅಕಾಡೆಮಿಯು ಈ ಪುರಸ್ಕಾರವನ್ನು 2019ರಲ್ಲಿ ರತ್ನಾ ಅವರಿಗೆ ನೀಡಿತ್ತು. ಅಕಾಡೆಮಿ ಅಧ್ಯಕ್ಷ ಬೃತ್ಯ ಬಸು ಅವರಿಗೆ ಪತ್ರ ಬರೆದಿರುವ ರತ್ನಾ, ‘ಮಮತಾ ಬ್ಯಾನರ್ಜಿಗೆ ಪ್ರಶಸ್ತಿ ಘೋಷಣೆಯಾದ ನಂತರ ನನಗೆ ಸಿಕ್ಕಿರುವ ಪುರಸ್ಕಾರವು ಮುಳ್ಳಿನ ಕಿರೀಟದಂತೆ ಭಾಸವಾಗುತ್ತಿದೆ’ ಎಂದು ಹೇಳಿದ್ದಾರೆ. ಬಾಂಗ್ಲಾ ಅಕಾಡೆಮಿಯು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರವೀಂದ್ರನಾಥ್ ಟ್ಯಾಗೋರ್ ಜನ್ಮಶತಮಾನೋತ್ಸವದಂದು ಈ ಪುರಸ್ಕಾರ ನೀಡುವ ಘೋಷಣೆ ಮಾಡಿತ್ತು.

‘ಮುಖ್ಯಮಂತ್ರಿಗೆ ಅವರ ಸಾಹಿತ್ಯ ಸಾಧನೆಗಾಗಿ ಅಕಾಡೆಮಿಯ ಪುರಸ್ಕಾರ ಘೋಷಿಸಿರುವುದರಿಂದ ನನಗೆ ಅವಮಾನವಾಗಿದೆ. ಇದು ಅತ್ಯಂತ ಕೆಟ್ಟ ಮೇಲ್ಪಂಕ್ತಿ ಆಗುತ್ತದೆ. ಮಮತಾ ಬ್ಯಾನರ್ಜಿ ಅವರಿಗೆ ಪುರಸ್ಕಾರ ಘೋಷಿಸಿರುವ ಪತ್ರದಲ್ಲಿ ಸಾಹಿತ್ಯ ಅಕಾಡೆಮಿಯು ಅವರ ಸಾಹಿತ್ಯ ಸಾಧನೆಯನ್ನು ಹೊಗಳಿದೆ. ಈ ಪತ್ರದ ಬಹುತೇಕ ಸಾಲುಗಳು ಅಸತ್ಯ’ ಎಂದು ರತ್ನಾ ಟೀಕಿಸಿದ್ದಾರೆ.

ಮಮತಾ ಬ್ಯಾನರ್ಜಿ ಬರೆದಿರುವ 900ಕ್ಕೂ ಹೆಚ್ಚು ಕವನಗಳ ಸಂಗ್ರಹ ‘ಕಬಿತಾ ಬಿತನ್’ಗೆ ಅಕಾಡೆಮಿ ಬಹುಮಾನ ಘೋಷಿಸಿದೆ. ರಾಜ್ಯ ಸರ್ಕಾರವೇ ಆಯೋಜಿಸಿದ್ದ ಕವಿ ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅಕಾಡೆಮಿಯು ಈ ಪುರಸ್ಕಾರವನ್ನು ಘೋಷಿಸಿತು. ಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರೂ ಅಕಾಡೆಮಿಯು ಮುಖ್ಯಮಂತ್ರಿಯ ಪರವಾಗಿ ಬೃತ್ಯ ಬಸು ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿತು.

‘ಒಬ್ಬ ರಾಜಕಾರಿಣಿಯಾಗಿ ಮುಖ್ಯಮಂತ್ರಿಯನ್ನು ನಾನು ಗೌರವಿಸುತ್ತೇನೆ. ವ್ಯಾಪಕ ಜನಬೆಂಬಲ ಪಡೆದಿರುವ ಅವರು ಸತತ ಮೂರನೇ ಅವಧಿಗೆ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಿರ್ವಹಿಸುತ್ತಿದ್ದಾರೆ. ನಾನು ಕೂಡ ಅವರಿಗೇ ಮತ ಹಾಕಿದ್ದೆ. ರಾಜಕೀಯಕ್ಕೆ ಅವರ ಕೊಡುಗೆಗಳು ಮೌಲಿಕವಾದುದು. ಆದರೆ ಅದನ್ನು ಸಾಹಿತ್ಯ ಕ್ಷೇತ್ರಕ್ಕೆ ಸಮೀಕರಿಸುವುದನ್ನು ನಾನು ಒಪ್ಪುವುದಿಲ್ಲ’ ಎಂದು ರತ್ನಾ ರಶೀದ್ ಬ್ಯಾನರ್ಜಿ ಹೇಳಿದ್ದಾರೆ.

ಅಕಾಡೆಮಿಯು ಪ್ರಶಸ್ತಿ ಘೋಷಿಸಿದ್ದರೂ ಮುಖ್ಯಮಂತ್ರಿ ಅದನ್ನು ತಿರಸ್ಕರಿಸುವ ಪ್ರೌಢತೆ ತೋರಿಸಬೇಕಿತ್ತು. ಹೀಗೆ ಮಾಡಿದ್ದರೆ ಅವರ ಬಗೆಗಿನ ಗೌರವ ಇಮ್ಮಡಿಸುತ್ತಿತ್ತು ಎಂದು ರತ್ನಾ ಹೇಳಿದ್ದಾರೆ. ರತ್ನಾ ಅವರು ಜಾನಪದ ಸಂಸ್ಕೃತಿ ಬಗ್ಗೆ ಹಲವು ಸಂಶೋಧನೆಗಳನ್ನು ನಡೆಸಿ ಸಾಕಷ್ಟು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಮಮತಾ ಬ್ಯಾನರ್ಜಿ ಅವರು ಕವನ ಸಂಕಲನ ‘ಕಬಿತಾ ಬಿತನ್’ 2020ರಲ್ಲಿ ಕೊಲ್ಕತ್ತಾದಲ್ಲಿ ನಡೆದಿದ್ದ ಪುಸ್ತಕ ಮೇಳದಲ್ಲಿ ಬಿಡುಗಡೆಯಾಗಿತ್ತು.

ಇದನ್ನೂ ಓದಿ: ಅಮಿತ್ ಶಾ ಮನೆಗೆ ಬಂದಾಗ ಸಿಹಿ ಮೊಸರು ತಿನ್ನಿಸಿ ಅಂತ ಸೌರವ್ ಗಂಗೂಲಿಗೆ ಮಮತಾ ಬ್ಯಾನರ್ಜಿ ಸಲಹೆ ನೀಡಿದರು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ