AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಸ್‌ಫರ್ಡ್ ವಿವಿಯಿಂದ ಹೊಸ ಅಧ್ಯಯನ; ಕೊವಿಶೀಲ್ಡ್ 2 ಡೋಸ್ ನಡುವೆ ಅಂತರ ಹೆಚ್ಚಿದಷ್ಟು ಹೆಚ್ಚು ರಕ್ಷಣೆ

ಮೊದಲು ಆಸ್ಟ್ರಾಜನಿಕ ಕಂಪನಿಯ ಲಸಿಕೆ ಪಡೆಯಬೇಕು. ಬಳಿಕ ಫೈಜರ್ ಕಂಪನಿ ಲಸಿಕೆ ಪಡೆದರೆ ಕೊರೊನಾ ವಿರುದ್ಧ 9 ಪಟ್ಟು ಹೆಚ್ಚಿನ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ ಎಂದು ಲಸಿಕೆಗಳ ಬಗ್ಗೆ ಪ್ರೊಫೆಸರ್ ಮ್ಯಾಥ್ಯೂ ಸ್ನಾಪೆ ತಿಳಿಸಿದ್ದಾರೆ.

ಆಕ್ಸ್‌ಫರ್ಡ್ ವಿವಿಯಿಂದ ಹೊಸ ಅಧ್ಯಯನ; ಕೊವಿಶೀಲ್ಡ್ 2 ಡೋಸ್ ನಡುವೆ ಅಂತರ ಹೆಚ್ಚಿದಷ್ಟು ಹೆಚ್ಚು ರಕ್ಷಣೆ
ಪ್ರಾತಿನಿಧಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Jun 29, 2021 | 2:41 PM

Share

ದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಲಸಿಕೆಯ ಅಭಾವ ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲಿ ಲಸಿಕೆಯ ಕೊರತೆಯ ಮಧ್ಯೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಮತ್ತೊಂದು ಅಧ್ಯಯನ ನಡೆಸಿದೆ. ಲಸಿಕೆಗಳ ಮಿಶ್ರಣದಿಂದ ಕೊರೊನಾ ವಿರುದ್ಧ ಹೋರಾಡಲು ಹೆಚ್ಚು ರಕ್ಷಣೆ ಸಿಗುತ್ತೆ ಎಂದು ಆಕ್ಸ್‌ಫರ್ಡ್ ವ್ಯಾಕ್ಸಿನ್ ಗ್ರೂಪ್‌ ಅಧ್ಯಯನ ನಡೆಸಿದೆ. ಅಸ್ಟ್ರಾಜೆನೆಕಾ ಮತ್ತು ಫಿಜರ್-ಬಯೋಟೆಕ್ ಲಸಿಕೆಗಳನ್ನು ಪರ್ಯಾಯ ಪ್ರಮಾಣವು ಕೊರೊನಾ ವೈರಸ್ ವಿರುದ್ಧ ಹೋರಾಡಲು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎಂಬುವುದು ಅಧ್ಯಯನದ ಮೂಲಕ ತಿಳಿದುಬಂದಿದೆ.

ಮೊದಲು ಆಸ್ಟ್ರಾಜನಿಕ ಕಂಪನಿಯ ಲಸಿಕೆ ಪಡೆಯಬೇಕು. ಬಳಿಕ ಫೈಜರ್ ಕಂಪನಿ ಲಸಿಕೆ ಪಡೆದರೆ ಕೊರೊನಾ ವಿರುದ್ಧ 9 ಪಟ್ಟು ಹೆಚ್ಚಿನ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ ಎಂದು ಲಸಿಕೆಗಳ ಬಗ್ಗೆ ಪ್ರೊಫೆಸರ್ ಮ್ಯಾಥ್ಯೂ ಸ್ನಾಪೆ ತಿಳಿಸಿದ್ದಾರೆ. ಆಸ್ಟ್ರಾಜನಿಕ ಕಂಪನಿಯ 2 ಡೋಸ್‌ ಲಸಿಕೆಗಿಂತ 9 ಪಟ್ಟು ಹೆಚ್ಚು ಪ್ರತಿಕಾಯ ಸೃಷ್ಟಿಯಾಗುತ್ತೆ. ಮೊದಲು ಆಸ್ಟ್ರಾಜನಿಕ ಬಳಿಕ ಫೈಜರ್ ಲಸಿಕೆ ಪಡೆದರೆ ಪ್ರತಿಕಾಯ ಸೃಷ್ಟಿಯಾಗುತ್ತೆ. ಆದರೆ ಮೊದಲು ಫೈಜರ್ ಕಂಪನಿಯ ಲಸಿಕೆಯನ್ನು ಪಡೆದು ಬಳಿಕ ಆಸ್ಟ್ರಾಜನಿಕ ಲಸಿಕೆ ಪಡೆದರೆ 5 ಪಟ್ಟು ಪ್ರತಿಕಾಯ ಸೃಷ್ಟಿಯಾಗುತ್ತೆ. ಆಸ್ಟ್ರಾಜನಿಕ ಕಂಪನಿಯ 2 ಡೋಸ್ ಲಸಿಕೆ ಪಡೆದರೆ ಆಗ ಸೃಷ್ಟಿಯಾಗುವ ಪ್ರತಿಕಾಯಕ್ಕಿಂತ 5 ಪಟ್ಟು ಹೆಚ್ಚು ಸೃಷ್ಟಿಯಾಗುತ್ತೆ ಎಂದು ಆಕ್ಸ್‌ಫರ್ಡ್ ವ್ಯಾಕ್ಸಿನ್ ಗ್ರೂಪ್ ಅಧ್ಯಯನ ಹೇಳಿದೆ.

ಇನ್ನು ಕೊವಿಶೀಲ್ಡ್ ನಡುವಿನ ಅಂತರ ಹೆಚ್ಚಾದಷ್ಟು ಹೆಚ್ಚು ರಕ್ಷಣೆ ಇರುತ್ತೆ ಎಂದು ಆಕ್ಸ್‌ಫರ್ಡ್ ವಿವಿಯ ಮತ್ತೊಂದು ಅಧ್ಯಯನದಿಂದ ಮಾಹಿತಿ ಸಿಕ್ಕಿದೆ. 2 ಡೋಸ್‌ಗಳ ನಡುವೆ ಅಂತರ ಹೆಚ್ಚಾದಷ್ಟು ಹೆಚ್ಚು ರಕ್ಷಣೆ ಇರುತ್ತದೆ. ಕೊವಿಶೀಲ್ಡ್ 2 ಡೋಸ್ ನಡುವೆ ಅಂತರ 8-12 ವಾರದ ಅಂತರಕ್ಕಿಂತ 45 ವಾರ ಇದ್ದರೆ. 4 ಪಟ್ಟು ಹೆಚ್ಚು ಪ್ರತಿಕಾಯಗಳು ಸೃಷ್ಟಿಯಾಗುತ್ತದೆ. ಈ ಪ್ರತಿಕಾಯಗಳು ಒಂದು ವರ್ಷದವರೆಗೂ ಇರುತ್ತದೆ. 3ನೇ ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಂಡರೆ ಎರಡು ಪಟ್ಟು ಹೆಚ್ಚಿನ ಪ್ರತಿಕಾಯಗಳು ಸೃಷ್ಟಿಯಾಗುತ್ತದೆ. ಮನುಷ್ಯನ ದೇಹದ ಪ್ರತಿಕಾಯಗಳು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತವೆ. ಪ್ರತಿಕಾಯಗಳ ಪ್ರಮಾಣ ಹೆಚ್ಚಾದಷ್ಟು ಕೊರೊನಾ ವಿರುದ್ಧ ಹೆಚ್ಚಿನ ರಕ್ಷಣೆ ಸಿಗುತ್ತದೆ.

ಇದನ್ನೂ ಓದಿ: ಭಾರತದ ಕೊವ್ಯಾಕ್ಸಿನ್​ ಲಸಿಕೆ ಹೆಸರಲ್ಲಿ ಅತಿದೊಡ್ಡ ಹಗರಣ ನಡೆಸಿದ ಆರೋಪ; ಬ್ರೆಜಿಲ್​ ಅಧ್ಯಕ್ಷರ ಕುರ್ಚಿಯನ್ನೇ ಅಲುಗಾಡಿಸುತ್ತಿದೆ ಕೊರೊನಾ ಲಸಿಕೆ

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ