AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ರೈಲಿನ ಕಿಟಕಿ ಮೂಲಕ ಫೋನ್ ಕಸಿಯಲೆತ್ನಿಸಿದವನ ಕೈ ಹಿಡಿದೆಳೆದ ಪ್ರಯಾಣಿಕ; ಬಿಹಾರದಲ್ಲಿ ಕಳ್ಳನಿಗೆ ತಕ್ಕ ಶಾಸ್ತಿ

ಸುಮಾರು 10 ಕಿಮಿಗಳಷ್ಟು ದೂರ ಆತ ರೈಲಿನ ಕಿಟಕಿ ಬದಿಯಲ್ಲಿ ನೇತಾಡುತ್ತಾ ಪ್ರಯಾಣಿಸಿದ್ದಾನೆ. ಕೊನೆಗೆ ಖಗರಿಯಾ ಬಳಿ ಬಂದಾಗ ಆತನನ್ನು ಬಿಡಲಾಯಿತು

Watch ರೈಲಿನ ಕಿಟಕಿ ಮೂಲಕ ಫೋನ್ ಕಸಿಯಲೆತ್ನಿಸಿದವನ ಕೈ ಹಿಡಿದೆಳೆದ ಪ್ರಯಾಣಿಕ; ಬಿಹಾರದಲ್ಲಿ ಕಳ್ಳನಿಗೆ ತಕ್ಕ ಶಾಸ್ತಿ
ಬಿಹಾರದ ಫೋನ್ ಕಳ್ಳ
TV9 Web
| Edited By: |

Updated on: Sep 15, 2022 | 9:56 PM

Share

ಪಾಟ್ನಾ: ರೈಲು ಪ್ರಯಾಣಿಕರ ಬಳಿಯಿಂದ ಕಿಟಕಿಯ ಮೂಲಕ ಮೊಬೈಲ್ ಫೋನ್ ಕಸಿದುಕೊಳ್ಳಲು ವ್ಯಕ್ತಿಯೊಬ್ಬ ಯತ್ನಿಸಿದ್ದು ಈ ಕೃತ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೆಪ್ಟೆಂಬರ್ 14 ರಂದು ಈ ಘಟನೆ ಬಿಹಾರದಲ್ಲಿ (Bihar) ನಡೆದಿದ್ದು, ಮೊಬೈಲ್ ಚೋರ ಪ್ರಯಾಣಿಕನ ಮೊಬೈಲ್ ಕಸಿಯಲು ಯತ್ನಿಸಿದ್ದಾನೆ. ರೈಲು ಬೇಗುಸರಾಯ್‌ನಿಂದ ಖಗರಿಯಾಗೆ ಹೋಗುತ್ತಿದ್ದಾಗ ಸಾಹೇಬ್‌ಪುರ ಕಮಲ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಮೊಬೈಲ್ ಕಸಿಯಲು ರೈಲಿನ ಕಿಟಕಿಯೊಳಗೆ ಕೈ ಹಾಕಿದ್ದಾನೆ. ಆದರೆ ಎಚ್ಚೆತ್ತ ಪ್ರಯಾಣಿಕರು ಅವನ ಕೈಯನ್ನು ಹಿಡಿದುಕೊಂಡನು. ಆಮೇಲೆ ಅವನ ಎರಡೂ ಕೈಗಳನ್ನು ಹಿಡಿದುಕೊಂಡಿದ್ದು ಆತ ಕಿಟಕಿಯಲ್ಲಿ ನೇತಾಡುವಂತೆ ಮಾಡಿದರು. ರೈಲು ಚಲಿಸುತ್ತಿದ್ದಂತೆ ಆತ ಕೈ ಬಿಡುವಂತೆ ಮನವಿ ಮಾಡಿದನು. ರೈಲು ಸ್ವಲ್ಪ ದೂರ ಪ್ರಯಾಣಿಸಿದ ನಂತರ ಪ್ರಯಾಣಿಕರು ಆತನ ಕೈ ಬಿಟ್ಟಿದ್ದಾರೆ.

ಸುಮಾರು 10 ಕಿಮಿಗಳಷ್ಟು ದೂರ ಆತ ರೈಲಿನ ಕಿಟಕಿ ಬದಿಯಲ್ಲಿ ನೇತಾಡುತ್ತಾ ಪ್ರಯಾಣಿಸಿದ್ದಾನೆ. ಕೊನೆಗೆ ಖಗರಿಯಾ ಬಳಿ ಬಂದಾಗ ಆತನನ್ನು ಬಿಡಲಾಯಿತು. ತಕ್ಷಣವೇ ಆತ ಓಡಿ ಹೋಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಈ ಕಳ್ಳ ತಪ್ಪಿಸಿಕೊಂಡಿದ್ದು, ಜೂನ್‌ನಲ್ಲಿ ಇಂತದ್ದೇ ವಿಡಿಯೊವೊಂದು ವೈರಲ್ ಆಗಿತ್ತು. ಆ ವಿಡಿಯೊದಲ್ಲಿದ್ದ ಕಳ್ಳ ತುಂಬಾನೇ ವೇಗವಾಗಿದ್ದ. ಆತನನ್ನು ಜನರು ಹೊಸ ಸ್ಪೈಡರ್ ಮ್ಯಾನ್ ಎಂದಿದ್ದರು. ಬಿಹಾರದ ರೈಲಿನೊಳಗಿಂದ ಚಿತ್ರೀಕರಿಸಲಾದ ಆ ವಿಡಿಯೊದಲ್ಲಿ ಸೇತುವೆಯ ಮೇಲೆ ಕುಳಿತಿದ್ದ ವ್ಯಕ್ತಿ ಕಿಟಕಿಯ ಮೂಲಕ ಪ್ರಯಾಣಿಕರೊಬ್ಬರ ಕೈಚೀಲವನ್ನು ಕಸಿಯುವುದನ್ನು ತೋರಿಸುತ್ತದೆ. ಜೂನ್‌ನಲ್ಲಿ, ಇದೇ ರೀತಿಯ ಕಸಿದುಕೊಳ್ಳುವ ಪ್ರಯತ್ನವು ಬಿಹಾರದ ಕತಿಹಾರ್ ರೈಲು ನಿಲ್ದಾಣದ ಬಳಿ ನಡೆದಿತ್ತು. ಈ ಮಹಿಳಾ ಪೊಲೀಸ್ ಗಂಭೀರ ಗಾಯಗೊಂಡಿದ್ದರು. ನಾವಡಾದಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಆರತಿ ಕುಮಾರಿ ತನ್ನ ಮೊಬೈಲ್ ಫೋನ್ ಅನ್ನು ಕೈಯಲ್ಲಿ ಹಿಡಿದುಕೊಂಡು ಬಾಗಿಲಿನ ಹತ್ತಿರ ನಿಂತಿದ್ದಾಗ ನಿಲ್ದಾಣದ ಬಳಿ ರೈಲು ನಿಧಾನಗೊಂಡಾಗ ಆಕೆಯ ಮೊಬೈಲ್ ಹಿಡಿದೆಳೆದಿದ್ದಾರೆ. ಆಕೆ ಹಿಡಿತ ಬಿಡದೇ ಇದ್ದಾಗ ಆ ವ್ಯಕ್ತಿಗಳು ಆಕೆಯನ್ನು ರೈಲಿನಿಂದ ಹೊರಗೆಳೆದಿದ್ದರು.

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ