AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ರೈಲಿನ ಕಿಟಕಿ ಮೂಲಕ ಫೋನ್ ಕಸಿಯಲೆತ್ನಿಸಿದವನ ಕೈ ಹಿಡಿದೆಳೆದ ಪ್ರಯಾಣಿಕ; ಬಿಹಾರದಲ್ಲಿ ಕಳ್ಳನಿಗೆ ತಕ್ಕ ಶಾಸ್ತಿ

ಸುಮಾರು 10 ಕಿಮಿಗಳಷ್ಟು ದೂರ ಆತ ರೈಲಿನ ಕಿಟಕಿ ಬದಿಯಲ್ಲಿ ನೇತಾಡುತ್ತಾ ಪ್ರಯಾಣಿಸಿದ್ದಾನೆ. ಕೊನೆಗೆ ಖಗರಿಯಾ ಬಳಿ ಬಂದಾಗ ಆತನನ್ನು ಬಿಡಲಾಯಿತು

Watch ರೈಲಿನ ಕಿಟಕಿ ಮೂಲಕ ಫೋನ್ ಕಸಿಯಲೆತ್ನಿಸಿದವನ ಕೈ ಹಿಡಿದೆಳೆದ ಪ್ರಯಾಣಿಕ; ಬಿಹಾರದಲ್ಲಿ ಕಳ್ಳನಿಗೆ ತಕ್ಕ ಶಾಸ್ತಿ
ಬಿಹಾರದ ಫೋನ್ ಕಳ್ಳ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 15, 2022 | 9:56 PM

Share

ಪಾಟ್ನಾ: ರೈಲು ಪ್ರಯಾಣಿಕರ ಬಳಿಯಿಂದ ಕಿಟಕಿಯ ಮೂಲಕ ಮೊಬೈಲ್ ಫೋನ್ ಕಸಿದುಕೊಳ್ಳಲು ವ್ಯಕ್ತಿಯೊಬ್ಬ ಯತ್ನಿಸಿದ್ದು ಈ ಕೃತ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೆಪ್ಟೆಂಬರ್ 14 ರಂದು ಈ ಘಟನೆ ಬಿಹಾರದಲ್ಲಿ (Bihar) ನಡೆದಿದ್ದು, ಮೊಬೈಲ್ ಚೋರ ಪ್ರಯಾಣಿಕನ ಮೊಬೈಲ್ ಕಸಿಯಲು ಯತ್ನಿಸಿದ್ದಾನೆ. ರೈಲು ಬೇಗುಸರಾಯ್‌ನಿಂದ ಖಗರಿಯಾಗೆ ಹೋಗುತ್ತಿದ್ದಾಗ ಸಾಹೇಬ್‌ಪುರ ಕಮಲ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಮೊಬೈಲ್ ಕಸಿಯಲು ರೈಲಿನ ಕಿಟಕಿಯೊಳಗೆ ಕೈ ಹಾಕಿದ್ದಾನೆ. ಆದರೆ ಎಚ್ಚೆತ್ತ ಪ್ರಯಾಣಿಕರು ಅವನ ಕೈಯನ್ನು ಹಿಡಿದುಕೊಂಡನು. ಆಮೇಲೆ ಅವನ ಎರಡೂ ಕೈಗಳನ್ನು ಹಿಡಿದುಕೊಂಡಿದ್ದು ಆತ ಕಿಟಕಿಯಲ್ಲಿ ನೇತಾಡುವಂತೆ ಮಾಡಿದರು. ರೈಲು ಚಲಿಸುತ್ತಿದ್ದಂತೆ ಆತ ಕೈ ಬಿಡುವಂತೆ ಮನವಿ ಮಾಡಿದನು. ರೈಲು ಸ್ವಲ್ಪ ದೂರ ಪ್ರಯಾಣಿಸಿದ ನಂತರ ಪ್ರಯಾಣಿಕರು ಆತನ ಕೈ ಬಿಟ್ಟಿದ್ದಾರೆ.

ಸುಮಾರು 10 ಕಿಮಿಗಳಷ್ಟು ದೂರ ಆತ ರೈಲಿನ ಕಿಟಕಿ ಬದಿಯಲ್ಲಿ ನೇತಾಡುತ್ತಾ ಪ್ರಯಾಣಿಸಿದ್ದಾನೆ. ಕೊನೆಗೆ ಖಗರಿಯಾ ಬಳಿ ಬಂದಾಗ ಆತನನ್ನು ಬಿಡಲಾಯಿತು. ತಕ್ಷಣವೇ ಆತ ಓಡಿ ಹೋಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಈ ಕಳ್ಳ ತಪ್ಪಿಸಿಕೊಂಡಿದ್ದು, ಜೂನ್‌ನಲ್ಲಿ ಇಂತದ್ದೇ ವಿಡಿಯೊವೊಂದು ವೈರಲ್ ಆಗಿತ್ತು. ಆ ವಿಡಿಯೊದಲ್ಲಿದ್ದ ಕಳ್ಳ ತುಂಬಾನೇ ವೇಗವಾಗಿದ್ದ. ಆತನನ್ನು ಜನರು ಹೊಸ ಸ್ಪೈಡರ್ ಮ್ಯಾನ್ ಎಂದಿದ್ದರು. ಬಿಹಾರದ ರೈಲಿನೊಳಗಿಂದ ಚಿತ್ರೀಕರಿಸಲಾದ ಆ ವಿಡಿಯೊದಲ್ಲಿ ಸೇತುವೆಯ ಮೇಲೆ ಕುಳಿತಿದ್ದ ವ್ಯಕ್ತಿ ಕಿಟಕಿಯ ಮೂಲಕ ಪ್ರಯಾಣಿಕರೊಬ್ಬರ ಕೈಚೀಲವನ್ನು ಕಸಿಯುವುದನ್ನು ತೋರಿಸುತ್ತದೆ. ಜೂನ್‌ನಲ್ಲಿ, ಇದೇ ರೀತಿಯ ಕಸಿದುಕೊಳ್ಳುವ ಪ್ರಯತ್ನವು ಬಿಹಾರದ ಕತಿಹಾರ್ ರೈಲು ನಿಲ್ದಾಣದ ಬಳಿ ನಡೆದಿತ್ತು. ಈ ಮಹಿಳಾ ಪೊಲೀಸ್ ಗಂಭೀರ ಗಾಯಗೊಂಡಿದ್ದರು. ನಾವಡಾದಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಆರತಿ ಕುಮಾರಿ ತನ್ನ ಮೊಬೈಲ್ ಫೋನ್ ಅನ್ನು ಕೈಯಲ್ಲಿ ಹಿಡಿದುಕೊಂಡು ಬಾಗಿಲಿನ ಹತ್ತಿರ ನಿಂತಿದ್ದಾಗ ನಿಲ್ದಾಣದ ಬಳಿ ರೈಲು ನಿಧಾನಗೊಂಡಾಗ ಆಕೆಯ ಮೊಬೈಲ್ ಹಿಡಿದೆಳೆದಿದ್ದಾರೆ. ಆಕೆ ಹಿಡಿತ ಬಿಡದೇ ಇದ್ದಾಗ ಆ ವ್ಯಕ್ತಿಗಳು ಆಕೆಯನ್ನು ರೈಲಿನಿಂದ ಹೊರಗೆಳೆದಿದ್ದರು.

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್