AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಕೊಂದ ಗೋರಕ್ಷಕರು; ಕಿರುಕುಳ ನೀಡುತ್ತಿರುವ ವಿಡಿಯೊ ವೈರಲ್

ಗೋಹತ್ಯೆ ಮಾಡುವ ಸ್ಥಳಗಳನ್ನು ಬಹಿರಂಗಪಡಿಸಲು ಮತ್ತು ಗೋಮಾಂಸ ಮಾರಾಟದಲ್ಲಿ ತೊಡಗಿರುವ ಜನರನ್ನು ಹೆಸರಿಸಲು ಆಲಂ ಅವರನ್ನು ಒತ್ತಾಯಿಸುವುದನ್ನು ವಿಡಿಯೊದಲ್ಲಿ ಕೇಳಬಹುದು.

ಬಿಹಾರದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಕೊಂದ ಗೋರಕ್ಷಕರು; ಕಿರುಕುಳ ನೀಡುತ್ತಿರುವ ವಿಡಿಯೊ ವೈರಲ್
ವಿಡಿಯೊ ದೃಶ್ಯ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Feb 23, 2022 | 4:41 PM

Share

ಪಟನಾ: ಬಿಹಾರದಲ್ಲಿ(Bihar) ಮುಸ್ಲಿಂ ಯುವಕನಿಗೆ ಸ್ವಯಂಘೋಷಿತ ಗೋರಕ್ಷಕರು (cow vigilantes) ಕಿರುಕುಳ ನೀಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಆತನನ್ನು ಹೊಡೆದು ಕೊಂದು ಆತನ ದೇಹವನ್ನು ನಾಲೆಯಲ್ಲಿ ಹೂಳಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೆಲವು ವರದಿಗಳ ಪ್ರಕಾರ ದಾಳಿಕೋರರು ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದಾರೆ. ನಂತರ ಅವರು ಅವನ ದೇಹಕ್ಕೆ ಉಪ್ಪನ್ನು ಎರಚಿ ಅದು ವೇಗವಾಗಿ ಕೊಳೆಯುವಂತೆ ಹೂತುಹಾಕಿದರು. ವಿಡಿಯೊದಲ್ಲಿ, ಸಮಸ್ತಿಪುರ ಜಿಲ್ಲೆಯ ಜನತಾ ದಳ (ಯುನೈಟೆಡ್) ಪಕ್ಷದ ಸದಸ್ಯ ಮೊಹಮ್ಮದ್ ಖಲೀಲ್ ಆಲಂ ತನ್ನ ದಾಳಿಕೋರರಿಗೆ ತನ್ನನ್ನು ಉಳಿಸುವಂತೆ ಕೈ ಜೋಡಿಸಿ ಮನವಿ ಮಾಡುವುದನ್ನು ಕಾಣಬಹುದು. ಹಲ್ಲೆಕೋರರು ವಿಡಿಯೊದಲ್ಲಿ ಕಾಣಿಸುತ್ತಿಲ್ಲ. ಗೋಹತ್ಯೆ ಮಾಡುವ ಸ್ಥಳಗಳನ್ನು ಬಹಿರಂಗಪಡಿಸಲು ಮತ್ತು ಗೋಮಾಂಸ ಮಾರಾಟದಲ್ಲಿ ತೊಡಗಿರುವ ಜನರನ್ನು ಹೆಸರಿಸಲು ಆಲಂ ಅವರನ್ನು ಒತ್ತಾಯಿಸುವುದನ್ನು ವಿಡಿಯೊದಲ್ಲಿ ಕೇಳಬಹುದು.  ಅವನು ತನ್ನ ಜೀವನದಲ್ಲಿ ಎಷ್ಟು ಗೋಮಾಂಸವನ್ನು ಸೇವಿಸಿದ್ದಾನೆ? ಅವನು ಅದನ್ನು ತನ್ನ ಮಕ್ಕಳಿಗೂ ತಿನ್ನಿಸಿದನೇ ಎಂದು ಅವರು ಅವನನ್ನು ಕೇಳುತ್ತಾರೆ. ಕುರಾನ್ ಗೋಮಾಂಸವನ್ನು ಸೇವಿಸುವಂತೆ ಸೂಚಿಸಿದೆಯೇ ಎಂದು ಅವರು ಅವರನ್ನು ಪ್ರಶ್ನಿಸಿದರು, ಅದಕ್ಕೆ ಆಲಂ ಇಲ್ಲ ಎಂದು ಉತ್ತರಿಸುತ್ತಾರೆ. ದ್ವೇಷಪೂರಿತ ಮಾತು ಮತ್ತು ಅಪವಾದಗಳಿಂದ ಕೂಡಿದ ಈ ವಿಡಿಯೊವನ್ನು ಮುಸ್ಲಿಮರ ವಿರುದ್ಧದ ದ್ವೇಷದ ಅಪರಾಧದ ಮತ್ತೊಂದು ಘಟನೆಯಾಗಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ. ಆದಾಗ್ಯೂ, ಸ್ಥಳೀಯ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದು ಇದು ಕೊಲೆಯನ್ನು ಮುಚ್ಚಿಹಾಕಲು ದಿಕ್ಕು ತಪ್ಪಿಸುವ ತಂತ್ರ ಎಂದು ಹೇಳುತ್ತಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ನಿನ್ನೆ ತಡರಾತ್ರಿ ಘಟನೆಯ ಹಿಂದಿ ಸುದ್ದಿ ಕ್ಲಿಪ್ಪಿಂಗ್ ಅನ್ನು ಟ್ವೀಟ್ ಮಾಡಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಬಿಹಾರದ ಎನ್‌ಡಿಎ ಸರ್ಕಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕಣ್ಮರೆಯಾಗಿದೆ, ಸ್ವತಃ ಜೆಡಿಯು ನಾಯಕನಾಗಿದ್ದ ಮುಸ್ಲಿಂ ಯುವಕನನ್ನು ಹೊಡೆದು ಜೀವಂತ ಸುಟ್ಟು ಸಮಾಧಿ ಮಾಡಲಾಗಿದೆ. ಬಿಹಾರದಲ್ಲಿ ಇಂತಹ ಘಟನೆಗಳು ಏಕೆ ನಡೆಯುತ್ತಿವೆ ಎಂದು ನಿತೀಶ್ ಕುಮಾರ್ ನಮಗೆ ಹೇಳಬೇಕು. ಜನರುಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದೇಕೇ?” ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.’

ಖಲೀಲ್ ಅವರ ಮೃತ ದೇಹವು ಶುಕ್ರವಾರ ಸಂಜೆ ಬುರ್ಹಿ ಗಂಡಕ್ ನದಿಯ ದಡದಿಂದ ಪತ್ತೆಯಾಗಿದೆ, ಅವರ ಕುಟುಂಬವು ಖಲೀಲ್ ಕಾಣೆಯಾಗಿದ್ದಾರೆ ಎಂದು ನಾಲ್ಕು ದಿನಗ ಹಿಂದೆ ದೂರು ನೀಡಿತ್ತು.

ಸ್ಥಳೀಯ ಪೊಲೀಸರ ಪ್ರಕಾರ, ಸಂತ್ರಸ್ತ ವ್ಯಕ್ತಿಯ ಕುಟುಂಬ ಸದಸ್ಯರು ಫೆಬ್ರವರಿ 16 ರಂದು ವರದಿಯನ್ನು ಸಲ್ಲಿಸಿದರು. ನಂತರದ ಕೆಲವು ದಿನಗಳವರೆಗೆ, ಅವರು ಸಂತ್ರಸ್ತರ ಮೊಬೈಲ್ ಸಂಖ್ಯೆಯಿಂದ ಹಣಕ್ಕಾಗಿ ಕರೆಗಳನ್ನು ಪಡೆಯುತ್ತಿದ್ದರು. ಕರೆ ಮಾಡಿದ ವ್ಯಕ್ತಿ ತಾನು ₹ 5 ಲಕ್ಷ ಸಾಲ ಪಡೆದಿರುವುದಾಗಿ ಹೇಳಿಕೊಂಡಿದ್ದು, ಕುಟುಂಬ ಪಾವತಿಸಲು ವಿಳಂಬ ಮಾಡಿದರೆ ತನ್ನ ಕಿಡ್ನಿ ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಫೆಬ್ರವರಿ 19 ರಂದು, ಅವರ ದೇಹವನ್ನು ನದಿಯ ದಡದಿಂದ ಮರಳಿನಲ್ಲಿ ಹೂತಿರುವ ಸ್ಥಿತಿಯಲ್ಲಿ ಪತ್ತೆಯಾಯಿತು. ಆದರೆ, ಮಂಗಳವಾರ ಸ್ಥಳೀಯ ಪೊಲೀಸರಿಗೆ ವಿಡಿಯೊ ಸಿಕ್ಕಿದ್ದು, ಜಾನುವಾರು ಕಳ್ಳಸಾಗಣೆಯಲ್ಲಿ ಆತನ ಪಾತ್ರದ ಕುರಿತು ಕೇಳಲಾಗುತ್ತಿದೆ.

ಕೊಲೆಗೆ ಕೋಮು ಬಣ್ಣ ನೀಡಲು ಹಾಗೂ ಗಮನ ಬೇರೆಡೆ ಸೆಳೆಯಲು ಈ ವಿಡಿಯೊ ರೆಕಾರ್ಡ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Big Breaking: ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​​ ಮಲಿಕ್​​ರನ್ನು ಬಂಧಿಸಿದ ಇ.ಡಿ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ