12 ಗಂಟೆಗಳ ಬಾಂಗ್ಲಾ ಬಂದ್ ಕರೆ ನಡುವೆ ಪ್ರಿಯಾಂಗು ಪಾಂಡೆ ಮೇಲೆ ಗುಂಡು; ವಿಡಿಯೊ ಪೋಸ್ಟ್ ಮಾಡಿದ ಸುವೇಂದು ಅಧಿಕಾರಿ

ಬುಲೆಟ್ ದಾಳಿಯ ವಿಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡ ಬಿಜೆಪಿ ನಾಯಕ ಸುವೇಂದು ಅಧಿಕಾರಿ , “ಭಟ್ಪಾರಾದಲ್ಲಿ ಬಿಜೆಪಿ ನಾಯಕ ಪ್ರಿಯಾಂಗು ಪಾಂಡೆ ಅವರ ವಾಹನದ ಮೇಲೆ ಟಿಎಂಸಿ ಗೂಂಡಾ ಗುಂಡಿನ ದಾಳಿ ನಡೆಸಿದ್ದಾರೆ. ವಾಹನದ ಚಾಲಕನಿಗೆ ಗುಂಡು ಹಾರಿಸಲಾಗಿದೆ ” ಎಂದು ಬರೆದಿದ್ದಾರೆ.

12 ಗಂಟೆಗಳ ಬಾಂಗ್ಲಾ ಬಂದ್ ಕರೆ ನಡುವೆ ಪ್ರಿಯಾಂಗು ಪಾಂಡೆ ಮೇಲೆ ಗುಂಡು; ವಿಡಿಯೊ ಪೋಸ್ಟ್ ಮಾಡಿದ ಸುವೇಂದು ಅಧಿಕಾರಿ
ಪ್ರಿಯಾಂಗು ಪಾಂಡೆ

Updated on: Aug 28, 2024 | 2:06 PM

ಕೋಲ್ಕತ್ತಾ ಆಗಸ್ಟ್ 28: ಬುಧವಾರ 12 ಗಂಟೆಗಳ ಬಾಂಗ್ಲಾ ಬಂದ್ (Bangla Bandh) ವೇಳೆ ಪಶ್ಚಿಮ ಬಂಗಾಳದ (West Bengal) ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ನಾಯಕ ಪ್ರಿಯಾಂಗು ಪಾಂಡೆ (Priyangu Pandey) ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಭಾಟ್ಪಾರಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತನ್ನ ಮೇಲೆ ಗುಂಡು ಹಾರಿಸಿ ಬಾಂಬ್ ಎಸೆದಿದ್ದಾರೆ ಎಂದು ಪ್ರಿಯಾಂಗು ಪಾಂಡೆ ಆರೋಪಿಸಿದ್ದಾರೆ.

ಇಂದು ನಾನು ನಮ್ಮ ನಾಯಕ ಅರ್ಜುನ್ ಸಿಂಗ್ ಅವರ ನಿವಾಸಕ್ಕೆ ಹೋಗುತ್ತಿದ್ದೆವು … ನಾವು ಸ್ವಲ್ಪ ದೂರ ಹೋದೆವು. ಭಟ್ಪರಾ ಪುರಸಭೆಯಿಂದ ಜೆಟ್ಟಿಂಗ್ ಯಂತ್ರದಿಂದ ರಸ್ತೆಯನ್ನು ನಿರ್ಬಂಧಿಸಲಾಗಿದೆ. ನಮ್ಮ ಕಾರು ನಿಂತ ಕ್ಷಣ, ಸುಮಾರು 50-60 ಜನರು ವಾಹನವನ್ನು ಗುರಿಯಾಗಿಸಿಕೊಂಡರು. ನನ್ನ ವಾಹನದ ಮೇಲೆ ಕನಿಷ್ಠ ಏಳರಿಂದ ಎಂಟು ಬಾಂಬ್‌ಗಳನ್ನು ಎಸೆದರು ನಂತರ ಆರರಿಂದ ಏಳು ಸುತ್ತುಗಳ ಗುಂಡಿನ ದಾಳಿ ನಡೆಸಲಾಯಿತು…ಇದು ತೃಣಮೂಲ ಮತ್ತು ಪೊಲೀಸರ ಜಂಟಿ ಸಂಚು” ಎಂದು ಪ್ರಿಯಾಂಗು ಪಾಂಡೆ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

“ಪ್ರಿಯಾಂಗು ಪಾಂಡೆ ನಮ್ಮ ಪಕ್ಷದ ನಾಯಕ. ಇಂದು ಅವರ ಕಾರಿನ ಮೇಲೆ ದಾಳಿ ಮಾಡಿ ಗುಂಡುಗಳನ್ನು ಹಾರಿಸಲಾಗಿದೆ. ಚಾಲಕನಿಗೆ ಗುಂಡು ಹಾರಿಸಲಾಗಿದೆ. ಏಳು ಸುತ್ತು ಗುಂಡು ಹಾರಿಸಲಾಗಿದೆ.ಇದನ್ನು ಎಸಿಪಿ ಸಮ್ಮುಖದಲ್ಲಿ ಮಾಡಲಾಗಿದೆ. ಪ್ರಿಯಾಂಗು ಪಾಂಡೆಯನ್ನು ಕೊಲ್ಲಲು ಇರುವ ಯೋಜನೆ ಇದಾಗಿತ್ತು. ಇಬ್ಬರು ಗಾಯಗೊಂಡಿದ್ದಾರೆ, ಅವರಲ್ಲಿ ಒಬ್ಬರು ಗಂಭೀರವಾಗಿದ್ದಾರೆ ಎಂದು ಬಿಜೆಪಿ ನಾಯಕ ಅರ್ಜುನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.


ಗಾಯಗೊಂಡ ಚಾಲಕನನ್ನು ಭಾಟ್ಪಾರ ರಾಜ್ಯ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮನೆಯಿಂದ ಸುಮಾರು ಮೂರು ನಿಮಿಷಗಳ ಕಾಲ, ಅವರ ಕಾರು ಪುರಸಭೆಯ ಟ್ರಕ್ ಮೂಲಕ ಹಾದುಹೋಗಲು ನಿಧಾನವಾಯಿತು. ಅಲ್ಲಿ ದಾಳಿ ನಡೆದಿದೆ.

ದಾಳಿಯ ಹಿಂದೆ ತೃಣಮೂಲ ನಾಯಕರಾದ ತರುಣ್ ಸೌ ಮತ್ತು ಶಾಸಕ ಸೋಮನಾಥ್ ಶ್ಯಾಮ್ ಅವರ ಕೈವಾಡವಿದೆ ಎಂದು ಅರ್ಜುನ್ ಸಿಂಗ್ ಆರೋಪಿಸಿದ್ದು, ದುಷ್ಕರ್ಮಿಗಳನ್ನು ಕಾಕಿನಾರಾದಿಂದ ಕರೆತರಲಾಗಿದೆ ಎಂದು ಆರೋಪಿಸಿದ್ದಾರೆ.

ಬುಲೆಟ್ ದಾಳಿಯ ವಿಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡ ಬಿಜೆಪಿ ನಾಯಕ ಸುವೇಂದು ಅಧಿಕಾರಿ , “ಭಟ್ಪಾರಾದಲ್ಲಿ ಬಿಜೆಪಿ ನಾಯಕ ಪ್ರಿಯಾಂಗು ಪಾಂಡೆ ಅವರ ವಾಹನದ ಮೇಲೆ ಟಿಎಂಸಿ ಗೂಂಡಾ ಗುಂಡಿನ ದಾಳಿ ನಡೆಸಿದ್ದಾರೆ. ವಾಹನದ ಚಾಲಕನಿಗೆ ಗುಂಡು ಹಾರಿಸಲಾಗಿದೆ ” ಎಂದು ಬರೆದಿದ್ದಾರೆ.

“ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಬಿಜೆಪಿಯನ್ನು ಬೀದಿಗೆ ತಳ್ಳಲು ಈ ರೀತಿ ಪ್ರಯತ್ನಿಸುತ್ತಿದ್ದಾರೆ. ಬಂದ್ ಯಶಸ್ವಿಯಾಗಿದ್ದು, ಜನರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಪೊಲೀಸ್ ಮತ್ತು ಟಿಎಂಸಿ ಗೂಂಡಾಗಳ ವಿಷಕಾರಿ ಕಾಕ್ಟೈಲ್ ಬಿಜೆಪಿಯನ್ನು ಹೆದರಿಸಲು ಸಾಧ್ಯವಾಗುವುದಿಲ್ಲ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

ಆಗಸ್ಟ್ 9 ರಂದು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಬಂಗಾಳದಲ್ಲಿ ತೃಣಮೂಲ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಮಂಗಳವಾರ ‘ನಬನ್ನ’ ತಲುಪಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್, ಜಲಫಿರಂಗಿ ಮತ್ತು ಅಶ್ರುವಾಯು ಬಳಸಿದ ನಂತರ ಬಿಜೆಪಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಬಾಂಗ್ಲಾ ಬಂದ್‌ಗೆ ಕರೆ ನೀಡಿತು.

ಇದನ್ನೂ ಓದಿ: ಗುಜರಾತ್: ಸ್ನೇಹಿತನ 3 ವರ್ಷದ ಮಗು ಮೇಲೆ ವ್ಯಕ್ತಿಯಿಂದ ಅತ್ಯಾಚಾರ

ನೋಂದಣಿಯಾಗದ ವಿದ್ಯಾರ್ಥಿ ಸಂಘಟನೆ ‘ಪಶ್ಚಿಮ ಬಂಗಾ ಛತ್ರ ಸಮಾಜ’ ಮತ್ತು ಭಿನ್ನಮತೀಯ ರಾಜ್ಯ ಸರ್ಕಾರಿ ನೌಕರರ ವೇದಿಕೆ ‘ಸಂಗ್ರಾಮಿ ಜೌತ ಮಂಚ’ದಿಂದ ‘ನಬನ್ನ ಅಭಿಜನ್’ ಕರೆ ನೀಡಲಾಗಿದೆ.

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅತ್ಯಾಚಾರ-ಕೊಲೆ ಪ್ರಕರಣದ ನಡುವೆ ಪಶ್ಚಿಮ ಬಂಗಾಳ ರಾಜ್ಯ ಸಚಿವಾಲಯದ ನಬನ್ನಾ ಕಡೆಗೆ ಮೆರವಣಿಗೆ ನಡೆಸುತ್ತಿದ್ದ ಹೌರಾ ಸೇತುವೆಯ ಮೇಲೆ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌ ಪ್ರಯೋಗಿಸಿದ್ದು, ಜಲಫಿರಂಗಿಗಳನ್ನು ಬಳಸಿದರು. ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್ ಕೂಡಾ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ