ಬಂಗಾಳದಲ್ಲಿನ ಹತ್ಯೆಯ ಬಗ್ಗೆ ಹೇಳಿ ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ಬಿಜೆಪಿ ಸಂಸದೆ ರೂಪಾ ಗಂಗೂಲಿ

Roopa Ganguly "ಪಶ್ಚಿಮ ಬಂಗಾಳದಲ್ಲಿ ಜನರು ಮಾತನಾಡಲು ಸಾಧ್ಯವಿಲ್ಲ, ಸರ್ಕಾರವು ಕೊಲೆಗಾರರನ್ನು ರಕ್ಷಿಸುತ್ತಿದೆ,  ಚುನಾವಣೆಯಲ್ಲಿ ಗೆದ್ದ ನಂತರ ಜನರನ್ನು ಕೊಲ್ಲುವ ಸರ್ಕಾರವಿರುವ ರಾಜ್ಯ ಬೇರೆಲ್ಲೂ ಇಲ್ಲ, ನಾವು ಮನುಷ್ಯರು, ನಾವು ಕಲ್ಲು ಹೃದಯದ ರಾಜಕೀಯ ಮಾಡುವುದಿಲ್ಲ...

ಬಂಗಾಳದಲ್ಲಿನ ಹತ್ಯೆಯ ಬಗ್ಗೆ ಹೇಳಿ ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ಬಿಜೆಪಿ ಸಂಸದೆ ರೂಪಾ ಗಂಗೂಲಿ
ರೂಪಾ ಗಂಗೂಲಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Mar 25, 2022 | 4:10 PM

ದೆಹಲಿ: ಬಿಜೆಪಿ ಸಂಸದೆ ರೂಪಾ ಗಂಗೂಲಿ (Roopa Ganguly)ಶುಕ್ರವಾರ ರಾಜ್ಯಸಭೆಯಲ್ಲಿ (Rajya sabha) ಎಂಟು ಜನರನ್ನು ಸುಟ್ಟುಹಾಕಿದ ಬಂಗಾಳದ ಬಿರ್ಭುಮ್ (Birbhum violence)ಜಿಲ್ಲೆಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮಾತನಾಡುತ್ತಾ ವಾಗ್ದಾಳಿ ನಡೆಸಿದರು. ರಾಜ್ಯವು “ಇನ್ನು ಬದುಕಲು ಯೋಗ್ಯವಾಗಿಲ್ಲ” ಎಂದು ಹೇಳಿದ ಅವರು ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದರು. “ನಾವು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸುತ್ತೇವೆ. ಅಲ್ಲಿ ಸಾಮೂಹಿಕ ಹತ್ಯೆಗಳು ನಡೆಯುತ್ತಿವೆ, ಜನರು ಸ್ಥಳದಿಂದ ಪಲಾಯನ ಮಾಡುತ್ತಿದ್ದಾರೆ. ರಾಜ್ಯವು ಇನ್ನು ಮುಂದೆ ಬದುಕಲು ಯೋಗ್ಯವಾಗಿಲ್ಲ” ಎಂದು ರೂಪಾ ಹೇಳಿದ್ದಾರೆ. ಕಲ್ಕತ್ತಾ ಹೈಕೋರ್ಟ್ ಇಂದು ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸದಂತೆ ಮಮತಾ ಬ್ಯಾನರ್ಜಿ ಸರ್ಕಾರದ ಮನವಿಯನ್ನು ನಿರಾಕರಿಸಿದ್ದು, ನಂತರ ಕೇಂದ್ರೀಯ ತನಿಖಾ ದಳಕ್ಕೆ ವರ್ಗಾಯಿಸಿದೆ. ಎಂಟು ಜನರನ್ನು ಮಂಗಳವಾರ ಗುಂಪೊಂದು ಹೊಡೆದು ಜೀವಂತವಾಗಿ ಸುಟ್ಟು ಹಾಕಿತು. ಸಂಸತ್ತಿನ ಮೇಲ್ಮನೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೂಲಿ, ರಾಜ್ಯ ಸರ್ಕಾರವು ದುಷ್ಕರ್ಮಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು. “ಪಶ್ಚಿಮ ಬಂಗಾಳದಲ್ಲಿ ಜನರು ಮಾತನಾಡಲು ಸಾಧ್ಯವಿಲ್ಲ, ಸರ್ಕಾರವು ಕೊಲೆಗಾರರನ್ನು ರಕ್ಷಿಸುತ್ತಿದೆ,  ಚುನಾವಣೆಯಲ್ಲಿ ಗೆದ್ದ ನಂತರ ಜನರನ್ನು ಕೊಲ್ಲುವ ಸರ್ಕಾರವಿರುವ ರಾಜ್ಯ ಬೇರೆಲ್ಲೂ ಇಲ್ಲ, ನಾವು ಮನುಷ್ಯರು, ನಾವು ಕಲ್ಲು ಹೃದಯದ ರಾಜಕೀಯ ಮಾಡುವುದಿಲ್ಲ,” ಎಂದು ರಾಜ್ಯಸಭೆಯಲ್ಲಿ ಕಣ್ಣೀರು ಹಾಕಿದರು.

ಘಟನೆಯ ಸ್ಥಳದಿಂದ ಹೇಳಲಾದ ವಿಡಿಯೊಗಳು, ಸುಟ್ಟ ದೇಹಗಳನ್ನು ತೋರಿಸುವ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಇದು ಪ್ರತ್ಯೇಕ ಘಟನೆಯಲ್ಲ ಎಂದು ಬಿಜೆಪಿ ಹೇಳಿದ್ದು, ಆಡಳಿತಾರೂಢ ತೃಣಮೂಲ ರಾಜಕೀಯ ವಿರೋಧಿಗಳ ಹತ್ಯೆಗೆ ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದೆ. ಬಿಜೆಪಿಯ ಹಲವು ನಾಯಕರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದ್ದಾರೆ.

ಬಿಜೆಪಿ ಸದಸ್ಯರು ಬಿರ್ಭೂಮ್ ಘಟನೆಯನ್ನು ಪ್ರಸ್ತಾಪಿಸಿದ ನಂತರ ರಾಜ್ಯಸಭೆಯಲ್ಲಿ ಗದ್ದಲ

ಬಿಜೆಪಿ ಸಂಸದೆ ರೂಪಾ ಗಂಗೂಲಿ ಅವರು ಪಶ್ಚಿಮ ಬಂಗಾಳದಲ್ಲಿ ಎಂಟು ಜನರು ಸುಟ್ಟು ಹತ್ಯೆ ಮಾಡಿದ ಬಿರ್ಭೂಮ್ ಘಟನೆಯನ್ನು ಪ್ರಸ್ತಾಪಿಸಿದ ನಂತರ ಗದ್ದಲದ ನಡುವೆ ಶುಕ್ರವಾರ ಬೆಳಿಗ್ಗೆ ಅಧಿವೇಶನದಲ್ಲಿ ರಾಜ್ಯಸಭೆಯ ಕಲಾಪವನ್ನು ಸ್ವಲ್ಪ ಸಮಯದವರೆಗೆ ಮುಂದೂಡಲಾಯಿತು.

ಬಿಜೆಪಿ ಸದಸ್ಯರು ತಮ್ಮ ಶೂನ್ಯವೇಳೆಯಲ್ಲಿ ಘಟನೆಯನ್ನು ಸಾಮೂಹಿಕ ಹತ್ಯೆ ಪ್ರಕರಣ ಎಂದು ಬಣ್ಣಿಸಿದ್ದಾರೆ.

ಇದು ಪಶ್ಚಿಮ ಬಂಗಾಳದ ಆಡಳಿತ ಪಕ್ಷವಾದ ಟಿಎಂಸಿ ಸದಸ್ಯರ ಪ್ರತಿಭಟನೆಗೆ ಕಾರಣವಾಯಿತು ಮತ್ತು ಅವರಲ್ಲಿ ಕೆಲವರು ಸದನದ ಅಂಗಣಕ್ಕಿಳಿದು ಘೋಷಣೆ ಕೂಗಿದರು

ಇದನ್ನೂ ಓದಿ: ಬಿರ್ಭೂಮ್‌ನಲ್ಲಿ ಮೃತಪಟ್ಟವರ ಕುಟುಂಬ ಭೇಟಿ ಮಾಡಿದ ಮಮತಾ ಬ್ಯಾನರ್ಜಿ; ₹5 ಲಕ್ಷ ಪರಿಹಾರ ಘೋಷಣೆ

Published On - 4:03 pm, Fri, 25 March 22