ಸನಾತನ ಧರ್ಮ ಕೆಟ್ಟ ಧರ್ಮವೇ? ಮಮತಾ ಬ್ಯಾನರ್ಜಿಯನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ

|

Updated on: Apr 01, 2025 | 10:08 AM

‘ಸನಾತನ ಧರ್ಮ ಕೆಟ್ಟ ಧರ್ಮವೇ?’ಎಂದು ಬಿಜೆಪಿಯು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ತರಾಟೆಗೆ ತೆಗೆದುಕೊಂಡಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಸನಾತನ ಧರ್ಮವು ಕೊಳಕು ಧರ್ಮವೇ ಎಂದು ಅಮಿತ್ ಮಾಳವೀಯ ಪ್ರಶ್ನಿಸಿದ್ದಾರೆ.ನೀವು ನಿರ್ದಿಷ್ಟವಾಗಿ ಯಾವ ಧರ್ಮದ ಬಗ್ಗೆ ಉಲ್ಲೇಖಿಸುತ್ತಿದ್ದೀರಿ? ಸನಾತನ ಹಿಂದೂ ಧರ್ಮ? ಅದು ಧಾರ್ಮಿಕ ಕಾರ್ಯಕ್ರಮವಾಗಿತ್ತೋ ಅಥವಾ ರಾಜಕೀಯ ಕಾರ್ಯಕ್ರಮವಾಗಿತ್ತೋ ಎಂದು ಪ್ರಶ್ನಿಸಲಾಗಿದೆ.

ಸನಾತನ ಧರ್ಮ ಕೆಟ್ಟ ಧರ್ಮವೇ? ಮಮತಾ ಬ್ಯಾನರ್ಜಿಯನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ
ಮಮತಾ ಬ್ಯಾನರ್ಜಿ
Image Credit source: Mint
Follow us on

ಕೋಲ್ಕತ್ತಾ, ಏಪ್ರಿಲ್ 1: ‘‘ಸನಾತನ ಧರ್ಮ ಕೆಟ್ಟ ಧರ್ಮವೇ?’’ಎಂದು ಬಿಜೆಪಿಯು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee)ಯನ್ನು ತರಾಟೆಗೆ ತೆಗೆದುಕೊಂಡಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಸನಾತನ ಧರ್ಮವು ಕೊಳಕು ಧರ್ಮವೇ ಎಂದು ಅಮಿತ್ ಮಾಳವೀಯ ಪ್ರಶ್ನಿಸಿದ್ದಾರೆ. ಮಮತಾ ಅಧಿಕಾರಾವಧಿಯಲ್ಲಿ ಅನೇಕ ಹಿಂದೂ ವಿರೋಧಿ ಗಲಭೆಗಳು ನಡೆದಿವೆ. ಆದರೂ ಅವರು ಹಿಂದೂಗಳನ್ನು ಅಪಹಾಸ್ಯ ಮಾಡುವ ಮತ್ತು ಅವರ ನಂಬಿಕೆಯನ್ನು ಅವಮಾನಿಸುವ ಧೈರ್ಯವನ್ನು ಮಾಡಿದ್ದಾರೆ.

ಮತ್ತೊಮ್ಮೆ, ಅವರು ಹಿಂದೂಗಳನ್ನು ಗುರಿಯಾಗಿಸಲು ಮುಸ್ಲಿಮರಿಗೆ ಮುಕ್ತ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದರು. ಸುಭೇಂದು ಅಧಿಕಾರಿ ಮಾತನಾಡಿ, ಮುಸ್ಲಿಂ ಸಮುದಾಯವನ್ನು ಮೆಚ್ಚಿಸಲು, ನೀವು ‘ಕೊಳಕು ಧರ್ಮ’ವನ್ನು ಅನುಸರಿಸುವುದಿಲ್ಲ ಎಂದು ಈ ಹೇಳಿಕೆ ನೀಡಿದ್ದೀರಿ. ನೀವು ನಿರ್ದಿಷ್ಟವಾಗಿ ಯಾವ ಧರ್ಮದ ಬಗ್ಗೆ ಉಲ್ಲೇಖಿಸುತ್ತಿದ್ದೀರಿ? ಸನಾತನ ಹಿಂದೂ ಧರ್ಮ? ಅದು ಧಾರ್ಮಿಕ ಕಾರ್ಯಕ್ರಮವಾಗಿತ್ತೋ ಅಥವಾ ರಾಜಕೀಯ ಕಾರ್ಯಕ್ರಮವಾಗಿತ್ತೋ? ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸುವ ಉದ್ದೇಶದಿಂದ ನೀವು ಉದ್ದೇಶಪೂರ್ವಕವಾಗಿ ದ್ವೇಷವನ್ನು ಏಕೆ ಹರಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ
ಶಿವರಾಜ್ ಸಿಂಗ್ ಚೌಹಾಣ್ ದಲ್ಲಾಳಿ ಎಂದ ಟಿಎಂಸಿ ಸಂಸದ; ಬಿಜೆಪಿ ಆಕ್ರೋಶ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಮಹಾ ಕುಂಭ ಮೃತ್ಯು ಕುಂಭವಾಗಿ ಮಾರ್ಪಟ್ಟಿದೆ; ಮಮತಾ ಬ್ಯಾನರ್ಜಿ ವಾಗ್ದಾಳಿ
ರಾಜೀನಾಮೆ ನೀಡಲೂ ಸಿದ್ಧ; ವೈದ್ಯೆಯ ಕೊಲೆ ಪ್ರಕರಣ ಹಿನ್ನೆಲೆ ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಹೇಳಿದ್ದೇನು?
ನಾನು ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರು ಅನುಸರಿಸಿದ ಧರ್ಮವನ್ನು ಅನುಸರಿಸುತ್ತೇನೆ. ಆದರೆ ಬಿಜೆಪಿಯ ಹಾಗೆ ಕೆಟ್ಟ ಧರ್ಮವನ್ನು ನಾನು ಅನುಸರಿಸುವುದಿಲ್ಲ, ಅವರು ಹಿಂದೂ ಧರ್ಮಕ್ಕೂ ವಿರುದ್ಧವಾಗಿದ್ದಾರೆ ಎಂದು ಹೇಳಿದ್ದರು.

ಮತ್ತಷ್ಟು ಓದಿ: Video: ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಮಮತಾ ಬ್ಯಾನರ್ಜಿ ಭಾಷಣದ ವೇಳೆ ಗದ್ದಲ

ಯಾವುದೇ ಧರ್ಮವು ಇನ್ನೊಬ್ಬ ಮನುಷ್ಯನ ವಿರುದ್ಧ ದ್ವೇಷವನ್ನು ಬೋಧಿಸುವುದಿಲ್ಲ, ಆದರೆ ಕೆಲವು ನಾಯಕರು ಮತ್ತು ರಾಜಕೀಯ ಪಕ್ಷಗಳು ತಮ್ಮ ಸ್ವಂತ ಲಾಭಕ್ಕಾಗಿ ದ್ವೇಷವನ್ನು ಬೆಳೆಸುತ್ತಿವೆ ಎಂದಿದ್ದರು.
ಗಲಭೆಗಳನ್ನು ಪ್ರಚೋದಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಈ ಪ್ರಯತ್ನಗಳನ್ನು ವಿರೋಧಿಸುವಂತೆ ಸಾರ್ವಜನಿಕರನ್ನು ಒತ್ತಾಯಿಸಿದರು . ಗಲಭೆಗಳನ್ನು ಉತ್ತೇಜಿಸಲು ಪ್ರಚೋದನೆ ನೀಡಲಾಗುತ್ತಿದೆ, ಆದರೆ ದಯವಿಟ್ಟು ಈ ಬಲೆಗಳಲ್ಲಿ ಬೀಳಬೇಡಿ. ಪಶ್ಚಿಮ ಬಂಗಾಳ ಸರ್ಕಾರ ಅಲ್ಪಸಂಖ್ಯಾತರ ಪರವಾಗಿ ನಿಂತಿದೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:07 am, Tue, 1 April 25