MCD Election 2022 Results ದೆಹಲಿ ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಹುಮತದ ಗೆಲುವು; ಮಹಿಳೆಗೆ ಮೇಯರ್ ಸ್ಥಾನ:ಎಎಪಿ

| Updated By: ರಶ್ಮಿ ಕಲ್ಲಕಟ್ಟ

Updated on: Dec 07, 2022 | 2:54 PM

ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 126ರಷ್ಟು ಬಹುಮತವನ್ನು ಗಳಿಸಿ ಗೆಲುವು ಸಾಧಿಸುವ ಮೂಲಕ  ನಾಗರಿಕ ಸಂಸ್ಥೆಯ ಮೇಲೆ ಬಿಜೆಪಿಯ 15 ವರ್ಷಗಳ ಹಿಡಿತವನ್ನು ಕೊನೆಗೊಳಿಸಿತು. ಮಹಿಳಾ ಮೇಯರ್ ನಾಗರಿಕ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂದು ಎಎಪಿ ಘೋಷಿಸಿದೆ.

MCD Election 2022 Results ದೆಹಲಿ ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಹುಮತದ ಗೆಲುವು; ಮಹಿಳೆಗೆ ಮೇಯರ್ ಸ್ಥಾನ:ಎಎಪಿ
ದೆಹಲಿಯಲ್ಲಿ ಎಎಪಿ ಸಂಭ್ರಮಾಚರಣೆ
Follow us on

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (Municipal Corporation of Delhi) ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಬಹುಮತದ 126 ಸೀಟುಗಳನ್ನು ಗಳಿಸುವ ಮೂಲಕ ಆಮ್ ಆದ್ಮಿ ಪಕ್ಷ(AAP) ವಿಜಯಶಾಲಿಯಾಗಿ ಹೊರಹೊಮ್ಮಿದೆ. ಎಂಸಿಡಿ (MCD) 250 ವಾರ್ಡ್‌ಗಳನ್ನು ಹೊಂದಿದ್ದು ಸರಳ ಬಹುಮತದ ಮಾರ್ಕ್ ಅಥವಾ ಮ್ಯಾಜಿಕ್ ನಂಬರ್ 126 ಆಗಿದೆ. ಬೆಳಿಗ್ಗೆ 11:30 ಕ್ಕೆ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಎಎಪಿ 56 ಗೆಲುವುಗಳು ಮತ್ತು 77 ಸ್ಥಾನಗಳಲ್ಲಿ ಮುನ್ನಡೆಯೊಂದಿಗೆ ಮ್ಯಾಜಿಕ್ ಸಂಖ್ಯೆ 126 ಅನ್ನು ದಾಟಿದೆ. ಎಂಸಿಡಿ ಚುನಾವಣೆಯಲ್ಲಿ ಎಎಪಿ ಗೆಲುವಿಗಾಗಿ ಮನೀಶ್ ಸಿಸೋಡಿಯಾ ದೆಹಲಿಯ ಜನರಿಗೆ ಧನ್ಯವಾದ ಹೇಳಿದ್ದಾರೆ. ದೆಹಲಿ ಎಂಸಿಡಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ನಂಬಿದ್ದಕ್ಕಾಗಿ ದೆಹಲಿಯ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ನಕಾರಾತ್ಮಕ ಪಕ್ಷವನ್ನು ಸೋಲಿಸುವ ಮೂಲಕ, ದೆಹಲಿಯ ಜನರು ಪ್ರಾಮಾಣಿಕ ಮತ್ತು ಕೆಲಸ ಮಾಡುವ ಅರವಿಂದ ಕೇಜ್ರಿವಾಲ್ ಅವರನ್ನು ಗೆಲ್ಲಿಸಿದ್ದಾರೆ. ನಮಗೆ ಇದು ಕೇವಲ ಗೆಲುವಲ್ಲ, ದೊಡ್ಡ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಚುನಾವಣೆ ಗೆುಲುವಿನ ಬಗ್ಗೆ ಟ್ವೀಟ್ ಮಾಡಿದ ರಾಘವ್ ಚಡ್ಡಾ, ಧನ್ಯವಾದಗಳು, ದೆಹಲಿ.ಎಂಸಿಡಿ ಚುನಾವಣೆಯಲ್ಲಿ ಎಎಪಿಯ ಗೆಲುವು ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವ ಮತ್ತು ದೃಷ್ಟಿಯಲ್ಲಿ ನಿಮ್ಮ ನಂಬಿಕೆಯ ಪ್ರತಿಬಿಂಬವಾಗಿದೆ.ತಮ್ಮ ನಿರಾಸಕ್ತಿ, ಸುಳ್ಳು ಮತ್ತು ಕೆಸರೆರಚಾಟದ ರಾಜಕೀಯದಿಂದ ದೆಹಲಿಯನ್ನು ನಾಶಮಾಡಲು ಯತ್ನಿಸಿದವರ ವಿರುದ್ಧ ಇದು ನಿಮ್ಮ ವಿಜಯವಾಗಿದೆ.ಸ್ವಚ್ಛವಾದ, ಹಸಿರಿನಿಂದ ಕೂಡಿದ ದೆಹಲಿ ಇಲ್ಲಿದೆ ಎಂದಿದ್ದಾರೆ.

ಎಂಸಿಡಿ ಚುನಾವಣೆಯಲ್ಲಿ ಎಎಪಿ ಗೆಲುವಿನ ನಂತರ ಸಿಎಂ ಮತ್ತು ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ತಮ್ಮ ನಿವಾಸದಿಂದ ಹೊರಟು ಪಕ್ಷದ ಕಚೇರಿಗೆ ತಲುಪಲಿದ್ದಾರೆ. ಅಲ್ಲಿ  ಅವರು ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಬಿಜೆಪಿಯ 15 ವರ್ಷದ ಅಧಿಕಾರ ಅಂತ್ಯ

ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 126ರಷ್ಟು ಬಹುಮತವನ್ನು ಗಳಿಸಿ ಗೆಲುವು ಸಾಧಿಸುವ ಮೂಲಕ  ನಾಗರಿಕ ಸಂಸ್ಥೆಯ ಮೇಲೆ ಬಿಜೆಪಿಯ 15 ವರ್ಷಗಳ ಹಿಡಿತವನ್ನು ಕೊನೆಗೊಳಿಸಿತು. ಮಹಿಳಾ ಮೇಯರ್ ನಾಗರಿಕ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂದು ಎಎಪಿ ಘೋಷಿಸಿದೆ.

ಪೂರ್ವ ದೆಹಲಿಗೆ ಧನ್ಯವಾದಗಳು: ಗೌತಮ್ ಗಂಭೀರ್


ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್  ಪೂರ್ವ ದೆಹಲಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ, ಅಲ್ಲಿ ಬಿಜೆಪಿ ಬಹುಪಾಲು ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ. “ನಾವು ಗಾಜಿಪುರದ ಕಸದ ರಾಶಿಯನ್ನು ನಾವು ಕೊನೆಗೊಳಿಸುತ್ತೇವೆ! ಜೈ ಹಿಂದ್” ಎಂದು ಹಿಂದಿಯಲ್ಲಿ ಬರೆದಿದ್ದಾರೆ.

 

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Wed, 7 December 22