AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ತಾಪಮಾನ ಕೇಳಿದರೇ ಚಳಿ ಹುಟ್ಟುತ್ತೆ! 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ದಾಖಲು

ದೆಹಲಿ: ಕಳೆದ 14 ವರ್ಷಗಳಲ್ಲಿ ಕಂಡು ಕೇಳರಿಯದ ಚಳಿಗಾಲಕ್ಕೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿದೆ. ದೆಹಲಿಯ ತಾಪಮಾನ ಇಂದು ಮುಂಜಾನೆ 1.1 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದ್ದು, ಕಳೆದ 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ಎಂಬ ಸ್ಥಾನಕ್ಕೆ ಇಂದಿನ ಬೆಳಗು ಪ್ರಾಪ್ತವಾಗಿದೆ. ಚಳಿಯ ಜತೆಗೆ ದಟ್ಟ ಮಂಜು ಸಹ ದೆಹಲಿಯ ಹೆದ್ದಾರಿಗಳನ್ನು ಆವರಿಸಿದೆ. 2006ರ ಜನವರಿ 8ರಂದು ಈವರೆಗಿನ ಅತಿ ಕಡಿಮೆ 0.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ತಾಪಮಾನವೇ ದೆಹಲಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನವಾಗಿದೆ. […]

ದೆಹಲಿಯ ತಾಪಮಾನ ಕೇಳಿದರೇ ಚಳಿ ಹುಟ್ಟುತ್ತೆ! 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ದಾಖಲು
2021ರ ಮೊದಲ ದಿನದ ಮುಂಜಾನೆ ಮಂಜು ಮುಸುಕಿದ ಹೆದ್ದಾರಿಯಲ್ಲಿ ಸಂಚರಿಸಲು ವಾಹನಗಳ ಪರದಾಟ
guruganesh bhat
| Updated By: ಸಾಧು ಶ್ರೀನಾಥ್​|

Updated on: Jan 01, 2021 | 11:50 AM

Share

ದೆಹಲಿ: ಕಳೆದ 14 ವರ್ಷಗಳಲ್ಲಿ ಕಂಡು ಕೇಳರಿಯದ ಚಳಿಗಾಲಕ್ಕೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿದೆ. ದೆಹಲಿಯ ತಾಪಮಾನ ಇಂದು ಮುಂಜಾನೆ 1.1 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದ್ದು, ಕಳೆದ 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ಎಂಬ ಸ್ಥಾನಕ್ಕೆ ಇಂದಿನ ಬೆಳಗು ಪ್ರಾಪ್ತವಾಗಿದೆ.

ಚಳಿಯ ಜತೆಗೆ ದಟ್ಟ ಮಂಜು ಸಹ ದೆಹಲಿಯ ಹೆದ್ದಾರಿಗಳನ್ನು ಆವರಿಸಿದೆ. 2006ರ ಜನವರಿ 8ರಂದು ಈವರೆಗಿನ ಅತಿ ಕಡಿಮೆ 0.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ತಾಪಮಾನವೇ ದೆಹಲಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನವಾಗಿದೆ. ಹಿಂದಿನ ವರ್ಷ 2.4 ಡಿಗ್ರಿ ಸೆಲ್ಸಿಯಸ್ ತಾಪಮಾನವೇ ಅತಿ ಕಡಿಮೆ ತಾಪಮಾನವಾಗಿತ್ತು.

ಅತಿ ಹೆಚ್ಚು ಮಂಜು ಆವರಿಸಿದಾದಗ 0 ದಿಂದ 50 ಮೀಟರ್​ವರೆಗಿನ ದೃಶ್ಯವನ್ನು ನೋಡಬಹುದು. ಆದರೆ ಇಂದು ಮುಂಜಾನೆ ಆರು ಘಂಟೆಯ ಮಂಜಿಗೆ ಕಿಂಚಿತ್ ದೂರವೂ ಕಣ್ಣಿಗೆ ಗೋಚರವಾಗುತ್ತಿರಲಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥ ಕುಲ್ದೀಪ್ ಶ್ರೀವಾಸ್ತವ್ ತಿಳಿಸಿದ್ದಾರೆ. ಹಿಮಾಲಯದ ಕಡೆಯಿಂದ ಬೀಸುವ ಶೀತ ಮಾರುತಗಳು ಈ ಪ್ರಮಾಣದ ಚಳಿಯನ್ನು ಸೃಷ್ಟಿಸುತ್ತಿವೆ ಎಂದಿರುವ ಅವರು, ಜನವರಿ 5ರವರೆಗೆ ಸರಾಸರಿ 8 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗುವ ನಿರೀಕ್ಷೆಯಿದೆ ಎಂದಿದ್ದಾರೆ.

ಈ ಡಿಸೆಂಬರ್​ನ ಕನಿಷ್ಠ ಸರಾಸರಿ ತಾಪಮಾನ 7.1ಡಿಗ್ರಿ ಸೆಲ್ಸಿಯಸ್​ ಆಗಿದ್ದರೆ 2019ರ ಡಿಸೆಂಬರ್​ನಲ್ಲಿ 7.8 ಡಿಗ್ರಿ ಕನಿಷ್ಠ ಸರಾಸರಿ ತಾಪಮಾನ ದಾಖಲಾಗಿತ್ತು.

ಚುಮು ಚುಮು ಚಳಿ, ಫಳಫಳ ಮಂಜು: ಸ್ವೆಟರ್ ತೊಟ್ಟ ಉತ್ತರ ಭಾರತ!

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ