AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಮು ಹಿಂಸಾಚಾರವು ಜ್ವಾಲಾಮುಖಿಯಿಂದ ಲಾವಾ ಹೊರಹೊಮ್ಮಿದಂತೆ: ಸುಪ್ರೀಂಕೋರ್ಟ್​​ನಲ್ಲಿ ಕಪಿಲ್ ಸಿಬಲ್

Zakia Jafri plea ಜಾಕಿಯಾ ಜಾಫ್ರಿ ಫೆಬ್ರವರಿ 28, 2002 ರಂದು ನಡೆದ ಹಿಂಸಾಚಾರದಲ್ಲಿ ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ಕೊಲ್ಲಲ್ಪಟ್ಟ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಅವರ ಪತ್ನಿ ಆಗಿದ್ದಾರೆ. ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನ ಎಸ್-6 ಕೋಚ್ ಅನ್ನು ಸುಟ್ಟು 59 ಜನರನ್ನು ಕೊಂದ...

ಕೋಮು ಹಿಂಸಾಚಾರವು ಜ್ವಾಲಾಮುಖಿಯಿಂದ ಲಾವಾ ಹೊರಹೊಮ್ಮಿದಂತೆ: ಸುಪ್ರೀಂಕೋರ್ಟ್​​ನಲ್ಲಿ ಕಪಿಲ್ ಸಿಬಲ್
ಝಾಕಿಯಾ ಜಾಫ್ರಿ (ಸಂಗ್ರಹ ಚಿತ್ರ)
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Nov 10, 2021 | 6:19 PM

Share

ದೆಹಲಿ: ಕೋಮುಗಲಭೆಯು (Communal violence )ಜ್ವಾಲಾಮುಖಿಯಿಂದ ಹೊರಸೂಸುವ ಲಾವಾದಂತೆ. ಅದು ಸ್ಪರ್ಶಿಸಿದ ನೆಲವನ್ನು ಗಾಯಗೊಳಿಸುತ್ತದೆ ಎಂದು ಬುಧವಾರ ಸುಪ್ರೀಂಕೋರ್ಟ್​​ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ (Kapil Sibal) ಹೇಳಿದ್ದಾರೆ. 2002ರ ಗಲಭೆಯ(2002 riots) ವೇಳೆ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ (Narendra Modi) ಸೇರಿದಂತೆ 64 ಜನರಿಗೆ ಎಸ್‌ಐಟಿಯ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿದ ಝಾಕಿಯಾ ಜಾಫ್ರಿ (Zakia Jafri) ಪರವಾಗಿ ಸಿಬಲ್ ವಾದ ಮಂಡಿಸಿದ್ದರು. ಕೋಮು ಹಿಂಸಾಚಾರವು ಭವಿಷ್ಯದ ಸೇಡು ತೀರಿಸಿಕೊಳ್ಳಲು “ಫಲವತ್ತಾದ ನೆಲ” ಎಂದು ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ (Justice A M Khanwilkar )ನೇತೃತ್ವದ ಪೀಠಕ್ಕೆ ಸಿಬಲ್ ಹೇಳಿದರು. ನಾನೂ ಪಾಕಿಸ್ತಾನದಲ್ಲಿ ತಮ್ಮ ಅಮ್ಮನ ಅಜ್ಜಿಯರನ್ನು ಕಳೆದುಕೊಂಡಿದ್ದೇನೆ. “ಕೋಮು ಹಿಂಸಾಚಾರವು ಜ್ವಾಲಾಮುಖಿಯಿಂದ ಲಾವಾ ಹೊರಹೊಮ್ಮಿದಂತೆ. ಇದು ಪದ್ದತಿಯಲ್ಲಿನ ಹಿಂಸಾಚಾರ. ಆ ಲಾವಾ ಸ್ಪರ್ಶಿಸಿದಲ್ಲೆಲ್ಲಾ ಅದು ಭೂಮಿಯನ್ನು ಗಾಯಗೊಳಿಸುತ್ತದೆ. ಭವಿಷ್ಯದ ಪ್ರತೀಕಾರಕ್ಕೆ ಇದು ಫಲವತ್ತಾದ ನೆಲವಾಗಿದೆ, ”ಎಂದು ಕಪಿಲ್ ಸಿಬಲ್ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.”ಪಾಕಿಸ್ತಾನದಲ್ಲಿ ನಾನು ನನ್ನ ತಾಯಿಯ ಅಜ್ಜಿಯರನ್ನು ಕಳೆದುಕೊಂಡಿದ್ದೇನೆ” ಎಂದು ಸಿಬಲ್ ಭಾವುಕರಾಗಿ ಹೇಳಿದರು.

ಜಾಫ್ರಿ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್, ನಾನು ಎ ಅಥವಾ ಬಿ ವಿರುದ್ಧ ಆರೋಪ ಮಾಡುತ್ತಿಲ್ಲ ಆದರೆ ಇದು “ಸ್ವೀಕಾರಾರ್ಹವಲ್ಲ” ಮತ್ತು “ಸಹಿಸಲು ಸಾಧ್ಯವಿಲ್ಲ” ಎಂಬ ಸಂದೇಶವನ್ನು ಜಗತ್ತಿಗೆ ಕಳುಹಿಸಬೇಕು ಎಂದು ಹೇಳಿದರು. ಇದು “ಐತಿಹಾಸಿಕ ವಿಷಯ”. ಏಕೆಂದರೆ ಆಯ್ಕೆಯು ಕಾನೂನಿನ ಆಳ್ವಿಕೆಯು ಮೇಲುಗೈ ಸಾಧಿಸುತ್ತದೆ ಎಂದು ಹೇಳಿದ್ದಾರೆ.

ಝಾಕಿಯಾ ಜಾಫ್ರಿ ಫೆಬ್ರವರಿ 28, 2002 ರಂದು ನಡೆದ ಹಿಂಸಾಚಾರದಲ್ಲಿ ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ಕೊಲ್ಲಲ್ಪಟ್ಟ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಅವರ ಪತ್ನಿ ಆಗಿದ್ದಾರೆ. ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನ ಎಸ್-6 ಕೋಚ್ ಅನ್ನು ಸುಟ್ಟು 59 ಜನರನ್ನು ಕೊಂದ ಮತ್ತು ಗುಜರಾತ್‌ನಲ್ಲಿ ಗಲಭೆಗಳನ್ನು ಪ್ರಚೋದಿಸಿದ ಒಂದು ದಿನದ ನಂತರ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ 68 ಜನರಲ್ಲಿ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಕೂಡ ಸೇರಿದ್ದಾರೆ.

64 ಮಂದಿಗೆ ಕ್ಲೀನ್ ಚಿಟ್ ನೀಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ಯ ಮುಕ್ತಾಯ ವರದಿ ಮತ್ತು ಅದನ್ನು ಅಂಗೀಕರಿಸುವ ಸಂದರ್ಭದಲ್ಲಿ ಮ್ಯಾಜಿಸ್ಟ್ರೀಯಲ್ ಕೋರ್ಟ್ ನೀಡಿದ ಸಮರ್ಥನೆಯನ್ನು ಪರಿಶೀಲಿಸಲು ಬಯಸುವುದಾಗಿ ಅಕ್ಟೋಬರ್ 26 ರಂದು ಸುಪ್ರೀಂ ಕೋರ್ಟ್ ಹೇಳಿತ್ತು.

“ಅಧಿಕಾರಶಾಹಿ ನಿಷ್ಕ್ರಿಯತೆ, ಪೊಲೀಸ್ ಸಹಭಾಗಿತ್ವ, ದ್ವೇಷದ ಭಾಷಣಗಳು ಮತ್ತು ಹಿಂಸಾಚಾರದ ಹಿಂದೆ ದೊಡ್ಡ ಪಿತೂರಿ ಇದೆ” ಎಂದು ಜಾಫ್ರಿ ಅವರ ದೂರಿನ ಬಗ್ಗೆ ಸಿಬಲ್ ಈ ಹಿಂದೆ ವಾದಿಸಿದ್ದರು. ಫೆಬ್ರವರಿ 8, 2012 ರಂದು ಎಸ್ಐಟಿ ಮುಕ್ತಾಯದ ವರದಿಯನ್ನು ಸಲ್ಲಿಸಿ ಮೋದಿ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಸೇರಿದಂತೆ 63 ಇತರರಿಗೆ ಕ್ಲೀನ್ ಚಿಟ್ ನೀಡಿತು. ಅವರ ವಿರುದ್ಧ “ಯಾವುದೇ ವಿಚಾರಣೆಗೆ ಒಳಪಡುವ ಸಾಕ್ಷ್ಯಗಳಿಲ್ಲ” ಎಂದು ಎಸ್ಐಟಿ ಹೇಳಿತ್ತು.

ಎಸ್‌ಐಟಿಯ ನಿರ್ಧಾರದ ವಿರುದ್ಧ ತನ್ನ ಮನವಿಯನ್ನು ತಿರಸ್ಕರಿಸಿದ ಗುಜರಾತ್ ಹೈಕೋರ್ಟ್ 2017 ರ ಅಕ್ಟೋಬರ್ 5 ರ ಆದೇಶವನ್ನು ಪ್ರಶ್ನಿಸಿ ಝಾಕಿಯಾ ಜಾಫ್ರಿ 2018 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆಯ ನ್ಯಾಯಾಧೀಶರ ಮುಂದೆ ಎಸ್‌ಐಟಿ ತನ್ನ ಮುಚ್ಚುವಿಕೆಯ ವರದಿಯಲ್ಲಿ ಕ್ಲೀನ್ ಚಿಟ್ ನೀಡಿದ ನಂತರ ಝಾಕಿಯಾ ಜಾಫ್ರಿ ಅರ್ಜಿಯನ್ನು ಸಲ್ಲಿಸಿದರು.ಅದನ್ನು ಮ್ಯಾಜಿಸ್ಟ್ರೇಟ್ ಪರಿಗಣಿಸದೆ ವಜಾಗೊಳಿಸಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ. ಅಹಮದಾಬಾದ್‌ನ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಗುಲ್ಬರ್ಗ್ ಸೊಸೈಟಿ ಪ್ರಕರಣದಿಂದ ಸ್ವತಂತ್ರವಾಗಿರುವ ಅರ್ಜಿದಾರರ ದೂರನ್ನು ಹೈಕೋರ್ಟ್ “ಶ್ಲಾಘಿಸಲು ವಿಫಲವಾಗಿದೆ” ಎಂದು ಅದು ಹೇಳಿದೆ.

ಅಕ್ಟೋಬರ್ 2017 ರ ಆದೇಶದಲ್ಲಿ ಹೈಕೋರ್ಟ್ ಎಸ್‌ಐಟಿ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಿತ್ತು. ಆದಾಗ್ಯೂ, ಹೆಚ್ಚಿನ ತನಿಖೆಯ ಬೇಡಿಕೆಗೆ ಸಂಬಂಧಿಸಿದಂತೆ ಅದು ಝಾಕಿಯಾ ಜಾಫ್ರಿ  ಅವರ ಅರ್ಜಿಯನ್ನು ಭಾಗಶಃ ಅನುಮತಿಸಿತು. ಅರ್ಜಿದಾರರು ಹೆಚ್ಚಿನ ತನಿಖೆಯನ್ನು ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಹೈಕೋರ್ಟ್ ವಿಭಾಗೀಯ ಪೀಠ ಅಥವಾ ಸುಪ್ರೀಂ ಕೋರ್ಟ್ ಸೇರಿದಂತೆ ಸೂಕ್ತ ವೇದಿಕೆಯನ್ನು ಸಂಪರ್ಕಿಸಬಹುದು ಎಂದು ಅದು ಹೇಳಿತ್ತು.

ಇದನ್ನೂ ಓದಿ: MPLAD ಯೋಜನೆಯನ್ನು ಮರುಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ನಿರ್ಧಾರ: ಕೇಂದ್ರ ಸಚಿವ ಅನುರಾಗ್ ಠಾಕೂರ್

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?