10 ವರ್ಷ ಆಡಳಿತ ನಡೆಸಿದೆವು, ಇನ್ನೂ 20 ವರ್ಷ ಅಧಿಕಾರದಲ್ಲಿರುತ್ತೇವೆ: ರಾಜ್ಯಸಭೆಯಲ್ಲಿ ಮೋದಿ, ವಿಪಕ್ಷ ಸಭಾತ್ಯಾಗ

PM Modi Rajya Sabha speech: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಈ ಲೇವಡಿಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, "ಕಾಂಗ್ರೆಸ್‌ನ ಕೆಲವು ಸಹೋದ್ಯೋಗಿಗಳಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ. ಫಲಿತಾಂಶಗಳು ಬಂದಾಗಿನಿಂದ, ನಾನು ಸಹೋದ್ಯೋಗಿಯನ್ನು ಗಮನಿಸುತ್ತಿದ್ದೆ. ಅವರ ಪಕ್ಷದಿಂದ ಬೆಂಬಲವಿಲ್ಲದಿದ್ದರೂ ಅವರು ತಮ್ಮ ಪಕ್ಷದ ಧ್ವಜವನ್ನು ಮಾತ್ರ ಹಿಡಿದಿದ್ದರು. ಅವರು ಹಾಗೆ ಹೇಳಿದ್ದಕ್ಕಾಗಿ, ಉನ್ಕೇ ಮೂಹ್ ಮೇ ಘೀ ಶಕ್ಕರ್ ಎಂದಿದ್ದಾರೆ.

10 ವರ್ಷ ಆಡಳಿತ ನಡೆಸಿದೆವು, ಇನ್ನೂ 20 ವರ್ಷ ಅಧಿಕಾರದಲ್ಲಿರುತ್ತೇವೆ: ರಾಜ್ಯಸಭೆಯಲ್ಲಿ ಮೋದಿ, ವಿಪಕ್ಷ ಸಭಾತ್ಯಾಗ
ನರೇಂದ್ರ ಮೋದಿ
Follow us
|

Updated on:Jul 03, 2024 | 3:02 PM

ದೆಹಲಿ ಜುಲೈ 03:  ಪ್ರಧಾನಿ ನರೇಂದ್ರ ಮೋದಿ (Narendra Modi)  ಬುಧವಾರ ತಮ್ಮ ರಾಜ್ಯಸಭೆಯ (Rajya Sabha) ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, 10 ವರ್ಷಗಳು ನಮ್ಮ ಅಧಿಕಾರದ ಮೂರನೇ ಒಂದು ಭಾಗ ಮಾತ್ರ ಎಂದು ಹೇಳಿದ್ದಾರೆ. ಎನ್‌ಡಿಎಗೆ ಇನ್ನೂ 20 ವರ್ಷ ಆಡಳಿತ  ನಡೆಸುತ್ತೇವೆ ಎಂದು ಹೇಳಿದ್ದಾರೆ.  ದೇಶದಲ್ಲಿ ಜನರು ಬಿಜೆಪಿಗೆ (BJP) ಸತತ ಮೂರನೇ ಬಾರಿಗೆ ಹೆಚ್ಚಿನ ಬಹುಮತವನ್ನು ನೀಡಲಿಲ್ಲ, ಇದು ಬಿಜೆಪಿಯ “ನೈತಿಕ ಗೆಲುವು” ಎಂದು ಕಾಂಗ್ರೆಸ್ ಹೇಳಿತ್ತು. ಪ್ರಧಾನಿ  ಮೋದಿ ಮತ್ತು ಬಿಜೆಪಿ ಸಾರ್ವತ್ರಿಕ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ಮತ್ತು 16 ಸ್ಥಾನಗಳನ್ನು ಗೆದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ ಮೇಲೆ ಅವಲಂಬಿತವಾಗಿದೆ. ಎನ್‌ಡಿಎಯಲ್ಲಿ ಎರಡು ಮಿತ್ರಪಕ್ಷಗಳ ಪ್ರಾಮುಖ್ಯತೆಯಿಂದಾಗಿ, ಕಾಂಗ್ರೆಸ್ ಮೋದಿ 3.0 ಅನ್ನು “ಮೂರನೇ ಒಂದು ಸರ್ಕಾರ” ಎಂದು ಲೇವಡಿ ಮಾಡುತ್ತಿದೆ.

ಕಾಂಗ್ರೆಸ್ ಪಕ್ಷದ ಈ ಲೇವಡಿಗೆ ಉತ್ತರಿಸಿದ  ಮೋದಿ, “ಕಾಂಗ್ರೆಸ್‌ನ ಕೆಲವು ಸಹೋದ್ಯೋಗಿಗಳಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ. ಫಲಿತಾಂಶಗಳು ಬಂದಾಗಿನಿಂದ, ನಾನು ಸಹೋದ್ಯೋಗಿಯನ್ನು ಗಮನಿಸುತ್ತಿದ್ದೆ. ಅವರ ಪಕ್ಷದಿಂದ ಬೆಂಬಲವಿಲ್ಲದಿದ್ದರೂ ಅವರು ತಮ್ಮ ಪಕ್ಷದ ಧ್ವಜವನ್ನು ಮಾತ್ರ ಹಿಡಿದಿದ್ದರು. ಅವರು ಹಾಗೆ ಹೇಳಿದ್ದಕ್ಕಾಗಿ, ಉನ್ಕೇ ಮೂಹ್ ಮೇ ಘೀ ಶಕ್ಕರ್ (ಅವರು ಹೇಳಿದಂತೆಯೇ ನಿಜ ಆಗಲಿ). ನಾನು ಇದನ್ನು ಏಕೆ ಹೇಳುತ್ತಿದ್ದೇನೆ ಎಂದರೆ ನಾವು ಈಗಾಗಲೇ 10 ವರ್ಷಗಳನ್ನು ಪೂರೈಸಿದ್ದೇವೆ. ಇನ್ನೂ 20 ವರ್ಷಗಳು ಉಳಿದಿವೆ, ಆದ್ದರಿಂದ ನಾವು ಅವರ ಭವಿಷ್ಯವಾಣಿಯನ್ನು ಪೂರ್ಣಗೊಳಿಸಿದ್ದೇವೆ ಎಂದಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ  ಉತ್ತರಿಸಿದ ಮೋದಿ 60 ವರ್ಷಗಳಲ್ಲಿ ಮೊದಲ ಬಾರಿಗೆ ಸರ್ಕಾರ ಸತತ ಮೂರನೇ ಬಾರಿಗೆ ಗೆದ್ದಿದೆ.  ಆದರೆ ಎನ್‌ಡಿಎಯ ಚುನಾವಣಾ ಗೆಲುವನ್ನು ಮಂಕಾಗಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮೋದಿ ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೇಳಿಸಿಕೊಳ್ಳುವುದಿಲ್ಲ,ಅವರಿಂದ ಓಡಿಹೋಗಲು ಮಾತ್ರ ಸಾಧ್ಯ ಎಂದಿದ್ದಾರೆ.

ಪ್ರಧಾನಿ ಭಾಷಣದ ವೇಳೆ ಮಧ್ಯಪ್ರವೇಶಿಸಲು ಅನುಮತಿ ನೀಡಲು ಸಭಾಪತಿ ಜಗದೀಪ್ ಧನ್ಖರ್ ನಿರಾಕರಿಸಿದ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಪ್ರತಿಪಕ್ಷ ಸಂಸದರು ಸಭಾತ್ಯಾಗ ಮಾಡಿದರು.

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಮತ್ತು ರಾಜ್ಯಸಭಾ ಸಂಸದೆ ಸೋನಿಯಾ ಗಾಂಧಿ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದ ನಂತರ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ್ದಾರೆ.  ಈ ಜನರು ಆಟೋ ಪೈಲಟ್ ಮತ್ತು ರಿಮೋಟ್ ಪೈಲಟ್‌ನಲ್ಲಿ ಸರ್ಕಾರವನ್ನು ನಡೆಸಲು ಬಳಸುತ್ತಾರೆ. ಅವರು ಕೆಲಸ ಮಾಡುವುದನ್ನು ನಂಬುವುದಿಲ್ಲ, ಅವರಿಗೆ ಹೇಗೆ ಕಾಯಬೇಕೆಂದು ತಿಳಿದಿದೆ  ಎಂದಿದ್ದಾರೆ ಮೋದಿ.

ಇದನ್ನೂ ಓದಿ: ಲೋಕಸಭೆಯ ಮೊದಲ ಅಧಿವೇಶನದಲ್ಲಿ ಉತ್ಪಾದಕತೆ ಶೇ 103 : ಸ್ಪೀಕರ್ ಓಂ ಬಿರ್ಲಾ

ಆದರೆ ನಾವು ಕಠಿಣ ಪರಿಶ್ರಮ ಮುಂದುವರಿಸುತ್ತೇವೆ. ಕಳೆದ 10 ವರ್ಷಗಳಲ್ಲಿ ನಾವು ಏನು ಮಾಡಿದ್ದೇವೆಯೋ ಅದನ್ನು ನಾವು ಮುಂದುವರಿಸುತ್ತೇವೆ. ನಮ್ಮ ಕನಸುಗಳ ಬಗ್ಗೆ ಹೇಳುವುದಾದರೆ ಈ 10 ವರ್ಷಗಳು ಸ್ಟಾರ್ಟರ್ ಆಗಿತ್ತು, ಮೇನ್ ಕೋರ್ಸ್ ಈಗ ಶುರುವಾಗಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ಭಾಷಣದ ನಡುವೆ ಮಧ್ಯ ಪ್ರವೇಶಿಸಲು ಖರ್ಗೆಯವರಿಗೆ ಅನುಮತಿ ನೀಡಬೇಕು ಎಂದು  ಪ್ರತಿಪಕ್ಷದ ಸದಸ್ಯರು ಒತ್ತಾಯಿಸಿದರು. ಪ್ರತಿಪಕ್ಷದ ಸಂಸದರು ಎಲ್ ಒಪಿ ಕೋ ಬೋಲ್ನೆ ದೋ ಎಂಬ ಘೋಷಣೆಗಳನ್ನು ಕೂಗಿದರು. ಖರ್ಗೆ ಅವರು ಮಧ್ಯಪ್ರವೇಶಿಸಲು ಅವಕಾಶ ನೀಡುವಂತೆ ಸಭಾಪತಿಗೆ ಪದೇ ಪದೇ ಮನವಿ ಮಾಡಿದರು. ನಾವು ನಮ್ಮ ಅಭಿಪ್ರಾಯಗಳನ್ನು ಮುಂದಿಡಲು ಬಯಸುತ್ತೇವೆ, ಪ್ಲೀಸ್ ಎಂದು ಖರ್ಗೆ ಮನವಿ ಮಾಡಿದ್ದಾರೆ.  ವಿಪಕ್ಷ ಸದಸ್ಯರು ಸದನದಲ್ಲಿ ಮೋದಿ ಭಾಷಣದ ನಡುವೆ “ಝೂಟ್ ಬೋಲ್ನಾ ಬಂದ್ ಕರೋ (ಸುಳ್ಳು ಹೇಳುವುದನ್ನು ನಿಲ್ಲಿಸಿ)” ಮತ್ತು “ಶರ್ಮ್ ಕರೋ (ನಾಚಿಕೆ ಆಗ್ಬೇಕು)” ಎಂದು ಘೋಷಣೆ ಕೂಗಿದ್ದಾರೆ. ಪ್ರತಿಪಕ್ಷದ ನಡವಳಿಕೆ ಸೂಕ್ತವಲ್ಲ ಎಂದ ಧನ್ಖರ್,”ನಾನು ಅಸಂಸದೀಯ ಪದ್ಧತಿಯನ್ನು ಬಲವಾಗಿ ಖಂಡಿಸುತ್ತೇನೆ, ದಯವಿಟ್ಟು ನಿಮ್ಮ ಸ್ಥಾನಕ್ಕೆ ಮರಳಿ ಎಂದು ವಿಪಕ್ಷ ನಾಯಕರಿಗೆ ವಿನಂತಿಸಿದ್ದಾರೆ.

ಘೋಷಣೆಗಳು ಮುಂದುವರಿಯುತ್ತಿದ್ದಂತೆ, ಸರ್ಕಾರದ ಸಾಧನೆಗಳ ಕುರಿತು ತಮ್ಮ ಭಾಷಣ ಮುಂದುವರಿಸಿದ ಮೋದಿ,  ಅಧ್ಯಕ್ಷರೇ, ದೇಶ ಗಮನಿಸುತ್ತಿದೆ, ಸುಳ್ಳುಗಳನ್ನು ಹರಡುವವರಿಗೆ ಸತ್ಯವನ್ನು ಕೇಳುವ ಧೈರ್ಯವಿಲ್ಲ, ಅವರು ಉತ್ತರಗಳನ್ನು ಕೇಳಲು ಕುಳಿತುಕೊಳ್ಳಲು ಸಾಧ್ಯವಿಲ್ಲ. ಅವರು ಎತ್ತಿದ ಪ್ರಶ್ನೆಗಳು ಮೇಲ್ಮನೆಯನ್ನು, ಅದರ ಸಂಪ್ರದಾಯಗಳನ್ನು ಅವಮಾನಿಸುತ್ತಿವೆ. ಜನರು ಅವರನ್ನು ಎಲ್ಲ ರೀತಿಯಲ್ಲಿ ಸೋಲಿಸಿದ್ದಾರೆ. ಅವರು ಘೋಷಣೆ ಕೂಗುವುದನ್ನು ಬಿಟ್ಟರೆ ಅವರಿಗೆ ಬೇರೆ ಆಯ್ಕೆಗಳಿಲ್ಲ. “ಘೋಷಣೆ ಮಾಡುವುದು, ಕೂಗುವುದು ಮತ್ತು ಓಡಿಹೋಗುವುದು, ಇದು ಅವರ ಹಣೆಬರಹ” ಎಂದು ಪ್ರಧಾನಿ ಹೇಳಿದರು.

ಆಗ ಸಭಾಪತಿ ಧನ್ಖರ್ ಅವರು ಪ್ರತಿಪಕ್ಷಗಳ ನಡವಳಿಕೆಯು “ಬೇಸರದ ಸಂಗತಿ” ಎಂದು ಹೇಳಿದರು. ”ವಿರೋಧ ಪಕ್ಷದ ನಾಯಕರಿಗೆ ಅಡ್ಡಿಯಿಲ್ಲದೆ ಮಾತನಾಡುವ ಅವಕಾಶ ನೀಡಿದ್ದೇನೆ, ಅವರು ಸದನದಿಂದ ಹೊರಹೋಗಲಿಲ್ಲ, ಅವರು ಸಂಪ್ರದಾಯವನ್ನುತೊರೆದರು. ಅವರು ನನಗೆ ಬೆನ್ನು ಹಾಕಲಿಲ್ಲ, ಆದರೆ ಸಂವಿಧಾನಕ್ಕೆ ಹಾಕಿದರು. ಅವರು ನಮಗೆ ಅಗೌರವ ತೋರಲಿಲ್ಲ, ಅವರು ಪ್ರಮಾಣವಚನಕ್ಕೆ ಅಗೌರವ ತೋರಿದರು. ಸಂವಿಧಾನಕ್ಕೆ ಮಾಡುವ ಅಗೌರವ ದೊಡ್ಡದು. ವಿರೋಧ ಪಕ್ಷದ ಸಂಸದರು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಅವರು ಕರ್ತವ್ಯದ ಹಾದಿಗೆ ಮರಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಸಭಾಪತಿ ಹೇಳಿದ್ದಾರೆ.

ಇದನ್ನೂ ಓದಿ: ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಂವಿಧಾನ ಲೈಟ್​ ಹೌಸ್​ನಂತೆ ಕಾರ್ಯನಿರ್ವಹಿಸುತ್ತೆ: ಪ್ರಧಾನಿ ಮೋದಿ

ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅನ್ನು ಗುರಿಯಾಗಿಸುವ ಆಕ್ರಮಣವನ್ನು ಪ್ರಧಾನಿ ಇಂದು ದ್ವಿಗುಣಗೊಳಿಸಿದ್ದು, “ಕಾಂಗ್ರೆಸ್ ಸಂವಿಧಾನದ ಅತಿದೊಡ್ಡ ವಿರೋಧಿ ಎಂದು ನಾನು ಗಂಭೀರವಾಗಿ ಹೇಳುತ್ತೇನೆ” ಎಂದು ಅವರು ಹೇಳಿದರು.

ತುರ್ತು ಪರಿಸ್ಥಿತಿಯ ನಂತರ ನಡೆದ 1977ರ ಲೋಕಸಭಾ ಚುನಾವಣೆಯ ಕುರಿತು ಮಾತನಾಡಿದ ಪ್ರಧಾನಿ, ದೇಶದ ಜನರು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಮತ ಚಲಾಯಿಸಿದ್ದರು. “ಸಂವಿಧಾನವನ್ನು ರಕ್ಷಿಸಲು ಇದಕ್ಕಿಂತ ದೊಡ್ಡ ಚುನಾವಣೆ ನಡೆದಿಲ್ಲ, 1977 ರಲ್ಲಿ ದೇಶವು ಪ್ರಜಾಪ್ರಭುತ್ವವನ್ನು ತನ್ನ ಧಮನಿಯಲ್ಲಿ ನಡೆಸುತ್ತಿದೆ.ಈ  ವರ್ಷದ ಚುನಾವಣೆಯು ಸಂವಿಧಾನವನ್ನು ರಕ್ಷಿಸಲು ಆಗಿರುವ ಕಾರಣ , ದೇಶದ ಜನರು ನಮಗೆ ಮತ ಹಾಕಿದರು ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Wed, 3 July 24

ತಾಜಾ ಸುದ್ದಿ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?