AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್​ ಅಹಮದಾಬಾದ್​ನ ಸಬರಮತಿ ನದಿ ನೀರಿನಲ್ಲಿ ಕೊರೊನಾ ವೈರಸ್ ಪತ್ತೆ!

ಕೊರೊನಾ ವೈರಾಣು ಪತ್ತೆ ಕೇವಲ ಅಷ್ಟಕ್ಕೇ ನಿಂತಿಲ್ಲ. ಕನಕಾರಿಯಾ, ಚಾಂದೋಲ ಕೆರೆಯ ನೀರಿನ ಮಾದರಿಯಲ್ಲಿ ಕೂಡ ಕೊರೊನಾ ವೈರಾಣು ಪತ್ತೆಯಾಗಿದೆ. ಈ ಬಗ್ಗೆ ಐಐಟಿ ಗಾಂಧಿ ನಗರ ಸೇರಿದಂತೆ ಎಂಟು ಸಂಸ್ಥೆಗಳಿಂದ ಸಂಶೋಧನೆ ನಡೆಸಲಾಗಿದೆ.

ಗುಜರಾತ್​ ಅಹಮದಾಬಾದ್​ನ ಸಬರಮತಿ ನದಿ ನೀರಿನಲ್ಲಿ ಕೊರೊನಾ ವೈರಸ್ ಪತ್ತೆ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 18, 2021 | 8:41 PM

Share

ಗಾಂಧಿನಗರ: ಕೊರೊನಾ ಮೊದಲನೇ ಅಲೆ ಬಳಿಕ, ಎರಡನೇ ಅಲೆಯೇ ಭಾರತಕ್ಕೆ ಬಂದೊದಗಿದ್ದೇ ಬಹಳ ಚಿಂತಾಜನಕ ಸ್ಥಿತಿ ಉಂಟುಮಾಡಿತ್ತು. ಅದರಿಂದ ದೇಶದಲ್ಲಿ ತುಂಬಾ ಕಷ್ಟನಷ್ಟ ಉಂಟಾಗಿತ್ತು. ಆ ಬಳಿಕ, ಪ್ರಾಣಿಗಳಲ್ಲಿ ಕೂಡ ಕೊರೊನಾ ವೈರಾಣು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದೀಗ ಮತ್ತೊಂದು ಅಚ್ಚರಿಯ ಮಾಹಿತಿ ತಿಳಿದುಬಂದಿದೆ. ಗುಜರಾತ್​ ಅಹಮದಾಬಾದ್ನ‌ ಸಬರಮತಿ ನದಿ ನೀರಿನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಮೂಲಕ ನೀರಿನಲ್ಲೂ ಕೊರೊನಾ ವೈರಾಣು ಕಂಡುಬಂದಿದೆ. ನದಿಯಲ್ಲಿ ಪಡೆದ ಎಲ್ಲಾ ನೀರಿನ ಸ್ಯಾಂಪಲ್​ಗಳಲ್ಲೂ ಕೊರೊನಾ ವೈರಸ್ ಪತ್ತೆಯಾಗಿದೆ.

ಕೊರೊನಾ ವೈರಾಣು ಪತ್ತೆ ಕೇವಲ ಅಷ್ಟಕ್ಕೇ ನಿಂತಿಲ್ಲ. ಕನಕಾರಿಯಾ, ಚಾಂದೋಲ ಕೆರೆಯ ನೀರಿನ ಮಾದರಿಯಲ್ಲಿ ಕೂಡ ಕೊರೊನಾ ವೈರಾಣು ಪತ್ತೆಯಾಗಿದೆ. ಈ ಬಗ್ಗೆ ಐಐಟಿ ಗಾಂಧಿ ನಗರ ಸೇರಿದಂತೆ ಎಂಟು ಸಂಸ್ಥೆಗಳಿಂದ ಸಂಶೋಧನೆ ನಡೆಸಲಾಗಿದೆ. ದೆಹಲಿಯ ಜೆಎನ್​ಯು ಪರಿಸರ ವಿಜ್ಞಾನದ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಭಾಗಿಯಾಗಿದ್ದಾರೆ. ಅಸ್ಸಾಂನ ಭರೂ ನದಿಯ ನೀರಿನ ಸ್ಯಾಂಪಲ್​ನಲ್ಲಿಯೂ ಕೊರೊನಾ ವೈರಸ್ ಕಂಡುಬಂದಿದೆ.

ಗಾಂಧಿನಗರದ ಐಐಟಿ ಭೂ ವಿಜ್ಞಾನ ವಿಭಾಗದ ಮನೀಶ್ ಕುಮಾರ್​ರಿಂದ ಸಂಶೋಧನೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಮ್ಮ‌ ತಂಡ ಪರೀಕ್ಷಿಸಿದ ಎಲ್ಲ ನೀರಿನ ಸ್ಯಾಂಪಲ್​ಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಸೆಪ್ಟೆಂಬರ್ 3 ರಿಂದ ಡಿಸೆಂಬರ್ 29 ರವರೆಗೆ ಸಬರಮತಿ ನದಿ ನೀರಿನ 694 ನೀರಿನ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಗಿದೆ. ಸ್ವಚ್ಚ ನೀರಿನಲ್ಲೂ ಕೊರೊನಾ ವೈರಸ್ ಉಳಿಯುತ್ತೆ ಎಂದು ಮನೀಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಶಾಲೆ ಪುನಾರಂಭ ಯಾವಾಗ? ಈ ಬಗ್ಗೆ ಕೇಂದ್ರದ ಅಧಿಕಾರಿಗಳು ಏನು ಹೇಳುತ್ತಾರೆ? ಇಲ್ಲಿದೆ ವಿವರ

ಕೊರೊನಾದಿಂದ ಮಕ್ಕಳ ಮೇಲೆ ಹೆಚ್ಚಿನ ಅಪಾಯ ಇರುವುದಿಲ್ಲ; ಆದರೆ ಜನರು ಎಚ್ಚರಿಕೆಯಿಂದ ಇರಲೇಬೇಕು: ವಿ ಕೆ ಪೌಲ್

Published On - 8:37 pm, Fri, 18 June 21

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್