AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್​ ಹೊತ್ತಿಗೆ ಮಕ್ಕಳಿಗೂ ಕೊರೊನಾ ಲಸಿಕೆ ಲಭ್ಯವಾಗಲಿದೆ: ಡಾ.ರಣದೀಪ್​ ಗುಲೇರಿಯಾ

ಮಕ್ಕಳಿಗೆ ಲಸಿಕೆ ಹಾಕಿ, ನಂತರ ಶಾಲೆಗಳನ್ನು ತೆರೆಯುವುರಿಂದ ಶಿಕ್ಷಣ ಸಂಸ್ಥೆಗಳು ಕೊರೊನಾ ಸೂಪರ್​ ಸ್ಪ್ರೆಡರ್ ಆಗುವುದು ತಪ್ಪುತ್ತದೆ. ನೀತಿ ನಿರೂಪಕರು ಶಾಲೆಗಳನ್ನು ತೆರೆಯುವತ್ತ ಗಮನಹರಿಸಬೇಕು ಎಂದು ಡಾ. ರಣದೀಪ್​ ಗುಲೇರಿಯಾ ಹೇಳಿದ್ದಾರೆ.

ಸೆಪ್ಟೆಂಬರ್​ ಹೊತ್ತಿಗೆ ಮಕ್ಕಳಿಗೂ ಕೊರೊನಾ ಲಸಿಕೆ ಲಭ್ಯವಾಗಲಿದೆ: ಡಾ.ರಣದೀಪ್​ ಗುಲೇರಿಯಾ
ಡಾ.ರಣದೀಪ್​ ಗುಲೇರಿಯಾ
TV9 Web
| Edited By: |

Updated on: Jun 23, 2021 | 11:52 AM

Share

ಸೆಪ್ಟೆಂಬರ್​ ವೇಳೆಗೆ ಮಕ್ಕಳಿಗೂ ಕೊವಿಡ್​ 19 ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ದೆಹಲಿ ಏಮ್ಸ್​ನ ವೈದ್ಯ ರಣದೀಪ್​ ಗುಲೇರಿಯಾ ತಿಳಿಸಿದ್ದಾರೆ. ದೇಶದಲ್ಲಿ ಸದ್ಯ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. ಮಕ್ಕಳ ಮೇಲೆ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ನಡೆಯುತ್ತಿದೆ. ಸೆಪ್ಟೆಂಬರ್​ ಹೊತ್ತಿಗೆ ಕ್ಲಿನಕಲ್​ ಟ್ರಯಲ್​​ನ ಎರಡು ಹಾಗೂ ಮೂರನೇ ಹಂತಗಳು ಮುಕ್ತಾಯವಾಗಲಿದ್ದು, ಅದೇ ತಿಂಗಳಿಂದಲೇ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲು ಶುರು ಮಾಡಬಹುದು ಎಂದು ಕೇಂದ್ರ ಸರ್ಕಾರದ ಕೊವಿಡ್ 19 ಟಾಸ್ಕ್​ ಫೋರ್ಸ್​​ನಲ್ಲಿರುವ ಪ್ರಮುಖ ಸದಸ್ಯರು ಈಗಾಗಲೇ ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಡಾ. ಗುಲೇರಿಯಾ ಕೂಡ, 2ವರ್ಷಕ್ಕಿಂತ ಹೆಚ್ಚಾಗಿರುವ ಮಕ್ಕಳಿಗೆ ಸೆಪ್ಟೆಂಬರ್​​ ಹೊತ್ತಿಗೆ ಕೊವ್ಯಾಕ್ಸಿನ್​ ಲಸಿಕೆ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ಫಿಜರ್​-ಬಯೋಟೆಕ್​​ನ ಲಸಿಕೆಗೆ ಭಾರತದಲ್ಲಿ ಗ್ರೀನ್​ ಸಿಗ್ನಲ್​ ಸಿಕ್ಕರೆ ಅದೂ ಕೂಡ ಮಕ್ಕಳಿಗೆ ಒಂದು ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ.

ಮಕ್ಕಳ ಮೇಲೆ ಟ್ರಯಲ್​ ಇನ್ನು ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಈಗಾಗಲೇ ದೆಹಲಿಯ ಏಮ್ಸ್​ ಕ್ಲಿನಿಕಲ್​ ಟ್ರಯಲ್​ ಶುರು ಮಾಡಿದೆ. 2-17ವರ್ಷದವರ ಮೇಲೆ ಜೂ.7ರಿಂದಲೇ ಪ್ರಯೋಗ ನಡೆಯುತ್ತಿದ್ದು, ಮೂರನೇ ಹಂತ ಮುಗಿಯುತ್ತಿದ್ದಂತೆ ಅವರಿಗೆ ಕೊವಿಡ್​ 19 ಲಸಿಕೆ ನೀಡುವ ಅಭಿಯಾನ ಪ್ರಾರಂಭವಾಗಲಿದೆ. ಮಕ್ಕಳ ಮೇಲೆ ಕೊವ್ಯಾಕ್ಸಿನ್​ ಕೊರೊನಾ ಲಸಿಕೆ 2 ಮತ್ತು 3ನೇ ಹಂತದ ಪ್ರಯೋಗಕ್ಕೆ ಮೇ 12ರಂದು ಡಿಸಿಜಿಐ ಅನುಮೋದನೆ ನೀಡಿತ್ತು.

ಮಕ್ಕಳಿಗೆ ಲಸಿಕೆ ಹಾಕಿ, ನಂತರ ಶಾಲೆಗಳನ್ನು ತೆರೆಯುವುರಿಂದ ಶಿಕ್ಷಣ ಸಂಸ್ಥೆಗಳು ಕೊರೊನಾ ಸೂಪರ್​ ಸ್ಪ್ರೆಡರ್ ಆಗುವುದು ತಪ್ಪುತ್ತದೆ. ನೀತಿ ನಿರೂಪಕರು ಶಾಲೆಗಳನ್ನು ತೆರೆಯುವತ್ತ ಗಮನಹರಿಸಬೇಕು..ಹಾಗೇ ಅದನ್ನು ತೆಗೆಯುವ ಮುನ್ನ ಕೊರೊನಾ ನಿಯಂತ್ರಕ ಸಮಗ್ರ ವಿಧಾನವನ್ನೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಹಾಗೇ, ಕಂಟೈನ್​ಮೆಂಟ್​ ಝೋನ್​ಗಳಲ್ಲದ ಪ್ರದೇಶದಲ್ಲಿ ಶಾಲೆಗಳನ್ನು ತೆರೆಯುವತ್ತ ಗಮನಹರಿಸಬಹುದು. ಆದರೆ ಸಮ-ಬೆಸ ಮಾದರಿಯಲ್ಲಿ ಶಾಲೆ ನಡೆಸಬೇಕು. ಅದರಲ್ಲೂ ಯಾವುದೇ ಕೋಣೆಯಲ್ಲಿ ಶಾಲೆ ನಡೆಸದೆ, ತೆರೆದ ಪ್ರದೇಶದಲ್ಲಿ ಶಾಲೆ ನಡೆಸಬೇಕು ಎಂದು ಡಾ. ಗುಲೇರಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: Throwback Video: ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಮೆಚ್ಚಿಕೊಂಡ ಸೋನು ನಿಗಮ್

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ