AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಲ್ಟಾ ಸ್ಥಾನವನ್ನು ಒಮಿಕ್ರಾನ್ ಆಕ್ರಮಿಸಿಕೊಂಡರೆ ಮಾ. 11ರ ವೇಳೆಗೆ ಕೊವಿಡ್ ಸ್ಥಳೀಯವಾಗಬಹುದು; ಐಸಿಎಂಆರ್​ ವಿಜ್ಞಾನಿ

ದೆಹಲಿ ಮತ್ತು ಮುಂಬೈ ಕೋವಿಡ್ ಪ್ರಕರಣಗಳ ಉತ್ತುಂಗವನ್ನು ತಲುಪಿದೆಯೇ ಮತ್ತು ಕೆಟ್ಟದು ಮುಗಿದಿದೆಯೇ ಎಂದು ಹೇಳಲು ನಾವು ಇನ್ನೂ ಎರಡು ವಾರ ಕಾಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಡೆಲ್ಟಾ ಸ್ಥಾನವನ್ನು ಒಮಿಕ್ರಾನ್ ಆಕ್ರಮಿಸಿಕೊಂಡರೆ ಮಾ. 11ರ ವೇಳೆಗೆ ಕೊವಿಡ್ ಸ್ಥಳೀಯವಾಗಬಹುದು; ಐಸಿಎಂಆರ್​ ವಿಜ್ಞಾನಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jan 19, 2022 | 4:29 PM

Share

ನವದೆಹಲಿ: ಡೆಲ್ಟಾ ವೈರಸ್​ (Delta Virus) ಜೊತೆಗೆ ಇದೀಗ ವಿಶ್ವಾದ್ಯಂತ ಹೆಚ್ಚುತ್ತಿರುವ ಒಮಿಕ್ರಾನ್ (Omicron) ಕೂಡ ಆತಂಕ ಮೂಡಿಸುತ್ತಿದ್ದು, ಮಾರ್ಚ್​ 11ರ ವೇಳೆಗೆ ಕೊವಿಡ್ ಸೋಂಕು ಸ್ಥಳೀಯವಾಗಲಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಸಮೀರನ್ ಪಾಂಡಾ ಹೇಳಿದ್ದಾರೆ. “ದೆಹಲಿ ಮತ್ತು ಮುಂಬೈನಲ್ಲಿ ಕೊವಿಡ್ ಪ್ರಕರಣಗಳು ಕಡಿಮೆಯಾಗಿದೆಯೇ ಎಂದು ನಾವು ಈಗಲೇ ಹೇಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ. ಕೊರೊನಾವೈರಸ್‌ನ ಓಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರಗಳು ದೆಹಲಿ ಮತ್ತು ಮುಂಬೈನಲ್ಲಿ ಸರಿಸುಮಾರು 80:20 ಅನುಪಾತವನ್ನು ಹೊಂದಿವೆ ಎಂದು ಪಾಂಡಾ ತಿಳಿಸಿದ್ದಾರೆ.

“ನಾವು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡದಿದ್ದರೆ, ಇನ್ನು ಯಾವುದೇ ಹೊಸ ರೂಪಾಂತರವು ಹೊರಹೊಮ್ಮದಿದ್ದರೆ ಮಾರ್ಚ್ 11ರ ವೇಳೆಗೆ ಕೋವಿಡ್ ಸೋಂಕು ಸ್ಥಳೀಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಮಾರ್ಚ್ 11ರಿಂದ ಕೊರೊನಾ ವಿಷಯದಲ್ಲಿ ಸ್ವಲ್ಪ ಪರಿಹಾರವನ್ನು ನೋಡುತ್ತೇವೆ. ದೆಹಲಿ ಮತ್ತು ಮುಂಬೈ ಕೋವಿಡ್ ಪ್ರಕರಣಗಳ ಉತ್ತುಂಗವನ್ನು ತಲುಪಿದೆಯೇ ಮತ್ತು ಕೆಟ್ಟದು ಮುಗಿದಿದೆಯೇ ಎಂದು ಹೇಳಲು ನಾವು ಇನ್ನೂ ಎರಡು ವಾರ ಕಾಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ರಾಜ್ಯಗಳು ಸಾಂಕ್ರಾಮಿಕ ರೋಗದ ವಿವಿಧ ಹಂತಗಳಲ್ಲಿವೆ. ಕೊರೊನಾ ಪರೀಕ್ಷೆಯನ್ನು ಕಡಿಮೆ ಮಾಡಬೇಡಿ ಎಂದು ನಾವು ಎಂದಿಗೂ ರಾಜ್ಯಗಳಿಗೆ ಸೂಚಿಸಿಲ್ಲ. ಹೋಮ್ ಟೆಸ್ಟಿಂಗ್ ಇತ್ಯಾದಿಗಳ ಕುರಿತು ಸ್ಥಳೀಯ ಭಾಷೆಗಳಲ್ಲಿ ಮಾರ್ಗಸೂಚಿಗಳನ್ನು ಲಭ್ಯವಾಗುವಂತೆ ಮಾಡುವುದರಿಂದ ಜನರಿಗೆ ಸಹಾಯಕವಾಗುತ್ತದೆ ಎಂದು ಸಮೀರನ್ ಪಾಂಡಾ ಹೇಳಿದ್ದಾರೆ.

ಅನೇಕ ರಾಜ್ಯಗಳು ಸಾಂಕ್ರಾಮಿಕ ರೋಗದ ವಿವಿಧ ಹಂತಗಳಲ್ಲಿವೆ ಮತ್ತು ವೈರಸ್‌ನಲ್ಲಿನ ಸಾಂಕ್ರಾಮಿಕ ರೋಗಶಾಸ್ತ್ರದ ವ್ಯತ್ಯಾಸಗಳಿಂದಾಗಿ ಮತ್ತು ಸಾಂಕ್ರಾಮಿಕವು ತನ್ನ ವಿಧಾನವನ್ನು ಬದಲಾಯಿಸುವುದರಿಂದ ICMR ತನ್ನ ಪರೀಕ್ಷಾ ತಂತ್ರವನ್ನು ಸಹ ಬದಲಾಯಿಸಿದೆ. ಅಲ್ಲದೆ, ಜೀನೋಮಿಕ್ ಸೀಕ್ವೆನ್ಸಿಂಗ್ ಕುರಿತು ಮಾತನಾಡುವ ಡೈನಾಮಿಕ್ ವಿದ್ಯಮಾನವಾಗಿದೆ ಎಂದು ಪಾಂಡಾ ಹೇಳಿದರು.

ಇದನ್ನೂ ಓದಿ: ಒಂದೇ ದಿನ 2,68,833 ಕೊರೊನಾ ಪ್ರಕರಣಗಳು ಪತ್ತೆ; 6,401ಕ್ಕೇರಿದ ಒಮಿಕ್ರಾನ್ ಪ್ರಕರಣಗಳು

ಬೆಂಗಳೂರಿನ ಎಂಟು ವಲಯಗಳಲ್ಲಿ ಕೊವಿಡ್ ನಿಯಂತ್ರಣಾ ಕೊಠಡಿಗಳು ಲಭ್ಯ ಬಿಬಿಎಂಪಿ ಪ್ರಕಟಣೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ