AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali 2021: ದೀಪಾವಳಿಗೆ ಮಕ್ಕಳು ಪಟಾಕಿ ಸಿಡಿಸಲಿ; ವಾಯುಮಾಲಿನ್ಯ ನಿಯಂತ್ರಿಸಲು ಹೊಸ ಉಪಾಯ ಹೇಳಿದ ಸದ್ಗುರು!

Fire Crackers: ಸದ್ಗುರು ಜಗ್ಗಿ ವಾಸುದೇವ್ 'ಮಕ್ಕಳು ದೀಪಾವಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಲಿ. ಆ ಆನಂದಕ್ಕೆ ವಾಯುಮಾಲಿನ್ಯದ ನೆಪ ಅಡ್ಡಿಯಾಗದಿರಲಿ' ಎಂದು ಹೇಳುವ ಮೂಲಕ ಪಟಾಕಿ ಸಿಡಿಸುವುದನ್ನು ಬೆಂಬಲಿಸಿದ್ದಾರೆ.

Deepavali 2021: ದೀಪಾವಳಿಗೆ ಮಕ್ಕಳು ಪಟಾಕಿ ಸಿಡಿಸಲಿ; ವಾಯುಮಾಲಿನ್ಯ ನಿಯಂತ್ರಿಸಲು ಹೊಸ ಉಪಾಯ ಹೇಳಿದ ಸದ್ಗುರು!
ಸದ್ಗುರು ಜಗ್ಗಿ ವಾಸುದೇವ್
TV9 Web
| Edited By: |

Updated on: Nov 03, 2021 | 3:50 PM

Share

ದೀಪಾವಳಿ ಹಬ್ಬ (Deepavali Festival) ಬಂದಕೂಡಲೆ ಪಟಾಕಿ ಹೊಡೆಯದೆ ಪರಿಸರ ಸ್ನೇಹಿ ದೀಪಾವಳಿ (Eco Friendly Diwali) ಆಚರಿಸಿ ಎಂದು ಎಲ್ಲೆಡೆ ಅಭಿಯಾನ ಶುರುವಾಗುತ್ತದೆ. ಇದೇ ವಿಷಯಕ್ಕೆ ಭಾರತದಲ್ಲಿ ಎರಡು ಬಣಗಳು ನಿರ್ಮಾಣವಾಗಿವೆ. ಒಂದು ಬಣ ಹಿಂದೂಗಳ ಪ್ರಮುಖ ಹಬ್ಬವಾದ ದೀಪಾವಳಿಯಂದು ಒಂದು ದಿನ ಪಟಾಕಿ ಹೊಡೆದರೆ ಏನು ತಪ್ಪು? ಬೇರೆ ಸಮಾರಂಭಗಳಲ್ಲಿ ಪಟಾಕಿ ಹೊಡೆದು ಸಂಭ್ರಮಿಸಲು ಅನುಮತಿ ನೀಡುತ್ತೀರಲ್ಲ ಎಂದು ವಾದಿಸಿದರೆ ಇನ್ನೊಂದು ಬಣ ದೀಪಾವಳಿಯ ದಿನ ಎಲ್ಲರೂ ಪಟಾಕಿ (Fire Crackers)  ಹೊಡೆದು ಹೊಗೆಯೆಬ್ಬಿಸಿದರೆ ವಾಯು ಮಾಲಿನ್ಯ (Air Pollution) ಹೆಚ್ಚಾಗುತ್ತದೆ ಎಂದು ವಾದಿಸುತ್ತಿದೆ.

ಆದರೆ, ಸದ್ಗುರು ಜಗ್ಗಿ ವಾಸುದೇವ್ ‘ಮಕ್ಕಳು ದೀಪಾವಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಲಿ. ಆ ಆನಂದಕ್ಕೆ ವಾಯುಮಾಲಿನ್ಯದ ನೆಪ ಅಡ್ಡಿಯಾಗದಿರಲಿ’ ಎಂದು ಹೇಳುವ ಮೂಲಕ ಪಟಾಕಿ ಸಿಡಿಸುವುದನ್ನು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ, ವಾಯುಮಾಲಿನ್ಯ ನಿಯಂತ್ರಣಕ್ಕೆ ಹೊಸ ಮಾರ್ಗವನ್ನು ಕೂಡ ಅವರು ಕಂಡುಹಿಡಿದಿದ್ದಾರೆ. ಪಟಾಕಿ ಸಿಡಿಸುವ ವಿಚಾರದಲ್ಲಿ ದೇಶ ಇಬ್ಭಾಗವಾಗಿರುವ ಈ ಸಂದರ್ಭದಲ್ಲಿ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ “ಮಕ್ಕಳು ಪಟಾಕಿಯ ಆನಂದವನ್ನು ಅನುಭವಿಸುವುದನ್ನು ತಡೆಯಲು ವಾಯು ಮಾಲಿನ್ಯದ ಕಾಳಜಿ ಒಂದು ಕಾರಣವೇ ಅಲ್ಲ” ಎಂದು ಹೇಳಿದ್ದಾರೆ.

ದೇಶದಲ್ಲಿ ಪಟಾಕಿ ನಿಷೇಧವನ್ನು ಬೆಂಬಲಿಸುವ ಜನರ ಬಗ್ಗೆ ಮಾತನಾಡುತ್ತಾ ಸದ್ಗುರು ಜಗ್ಗಿ ವಾಸುದೇವ್, ‘ಮಕ್ಕಳು ದೀಪಾವಳಿಗೆ ಪಟಾಕಿ ಸಿಡಿಸಿ ಆನಂದಿಸುವ ಸಲುವಾಗಿ ನೀವು 3 ದಿನ ನಿಮ್ಮ ಆಫೀಸುಗಳಿಗೆ ನಡೆದುಕೊಂಡು ಹೋಗಿ. ನಿಮ್ಮ ಮಕ್ಕಳಿಗಾಗಿ ನೀವು 3 ದಿನ ಕಾರು, ಬೈಕುಗಳಲ್ಲಿ ಓಡಾಡುವುದನ್ನು ನಿಲ್ಲಿಸಿದರೆ ಮಕ್ಕಳು ಪಟಾಕಿ ಸಿಡಿಸಿ ಹಬ್ಬವನ್ನು ಆನಂದಿಸಲು ಸಾಧ್ಯವಿದೆ. ನಿಮ್ಮ ಮಕ್ಕಳಿಗಾಗಿ ನೀವು ಇಷ್ಟೂ ತ್ಯಾಗ ಮಾಡಲು ಸಾಧ್ಯವಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಸದ್ಗುರು ಜಗ್ಗಿ ವಾಸುದೇವ್,’ನಾನು ಕೆಲವು ವರ್ಷಗಳಿಂದ ಪಟಾಕಿಯನ್ನು ಹೊತ್ತಿಸಿಲ್ಲ. ಆದರೆ ನಾನು ಚಿಕ್ಕವನಾಗಿದ್ದಾಗ ಪಟಾಕಿ ಹೊಡೆಯುವುದೇ ಒಂದು ಸಂಭ್ರಮವಾಗಿತ್ತು. ಸೆಪ್ಟೆಂಬರ್ ತಿಂಗಳ ಆರಂಭದಿಂದಲೇ ನಾವು ಪಟಾಕಿಗಳ ಕನಸು ಕಾಣುತ್ತಿದ್ದೆವು. ದೀಪಾವಳಿ ಮುಗಿದ ನಂತರವೂ ಮುಂದಿನ ಒಂದು-ಎರಡು ತಿಂಗಳು ನಾವು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದೆವು. ಆದರೆ, ಇಂದಿನ ಕಾಲದ ಮಕ್ಕಳಿಗೆ ಪಟಾಕಿ ಸಿಡಿಸುವ ಖುಷಿ, ಸಂಭ್ರಮ ಇಲ್ಲದಂತಾಗಿದೆ’ ಎಂದಿದ್ದಾರೆ.

ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದ ಕೊಲ್ಕತ್ತಾ ಹೈಕೋರ್ಟ್ ವಿಧಿಸಿದ್ದ ಪಟಾಕಿ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಗಾಳಿಯ ಗುಣಮಟ್ಟ “ಉತ್ತಮ” ಅಥವಾ “ಮಧ್ಯಮ” ಇರುವ ಪ್ರದೇಶಗಳಲ್ಲಿ ಪ್ರಮಾಣೀಕೃತ ಹಸಿರು ಪಟಾಕಿಗಳನ್ನು ಮಾರಾಟ ಮಾಡಬಹುದು ಮತ್ತು ಸಿಡಿಯಬಹುದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತೀರ್ಪು ನೀಡಿತ್ತು. ಹಸಿರು ಪಟಾಕಿ ಸೇರಿದಂತೆ ಪಟಾಕಿಗಳ ಮೇಲಿನ ಕೊಲ್ಕತ್ತಾ ಹೈಕೋರ್ಟ್‌ನ ನಿಷೇಧವನ್ನು ಪ್ರಶ್ನಿಸಿ ಎರಡು ಅರ್ಜಿಗಳ ಪೀಠ ವಿಚಾರಣೆ ನಡೆಸುತ್ತಿದೆ. ಪಟಾಕಿ ವ್ಯಾಪಾರಿಗಳು ಈ ಕುರಿತು ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: Diwali 2021: ನಿಮ್ಮ ದೀಪಾವಳಿ ಸಂತಸವನ್ನು ಮತ್ತಷ್ಟು ಹೆಚ್ಚಿಸಬೇಕೇ? ಈ ಸಲಹೆಗಳನ್ನು ಅನುಸರಿಸಿ

ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್​

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು