AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗರದ ವ್ಯಾಪಾರಿಗಳಿಗಾಗಿ ದೆಹಲಿ ಬಜಾರ್ ವೆಬ್ ಪೋರ್ಟಲ್ ಸಿದ್ಧಪಡಿಸುವುದಾಗಿ ಘೋಷಿಸಿದ ಅರವಿಂದ ಕೇಜ್ರಿವಾಲ್

Delhi Bazaar ಪೋರ್ಟಲ್‌ನ ವೈಶಿಷ್ಟ್ಯಗಳ ಬಗ್ಗೆ ಹೇಳಿದ ಕೇಜ್ರಿವಾಲ್ ಇದು 'ವರ್ಚುವಲ್ ಮಾರುಕಟ್ಟೆಗಳು' ಎಂದಿದ್ದಾರೆ. ದೆಹಲಿಯಲ್ಲಿ ಖಾನ್ ಮಾರ್ಕೆಟ್ ಇದೆ. ಇಲ್ಲಿಯೂ ಸಹ, ಅದರ ಎಲ್ಲಾ ಅಂಗಡಿಗಳು ಇರುತ್ತವೆ, ಅಲ್ಲಿ ಒಂದು ಖಾನ್ ಮಾರ್ಕೆಟ್ ಇರುತ್ತದೆ. ಲಜಪತ್ ನಗರ ಮಾರುಕಟ್ಟೆ ಕೂಡ ಇಲ್ಲಿದೆ.

ನಗರದ ವ್ಯಾಪಾರಿಗಳಿಗಾಗಿ ದೆಹಲಿ ಬಜಾರ್ ವೆಬ್ ಪೋರ್ಟಲ್ ಸಿದ್ಧಪಡಿಸುವುದಾಗಿ ಘೋಷಿಸಿದ ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
TV9 Web
| Edited By: |

Updated on: Nov 03, 2021 | 3:56 PM

Share

ದೆಹಲಿ: ನಗರದಲ್ಲಿನ ಎಲ್ಲಾ ವ್ಯಾಪಾರಿಗಳು, ಅಂಗಡಿಕಾರರು ಮತ್ತು ಸೇವಾ ಪೂರೈಕೆದಾರರಿಗೆ ಆನ್‌ಲೈನ್ ವೇದಿಕೆ ಒದಗಿಸಲು ದೆಹಲಿ ಸರ್ಕಾರವು ‘ದೆಹಲಿ ಬಜಾರ್’ (Delhi Bazaar) ಎಂಬ ಆನ್‌ಲೈನ್ ಪೋರ್ಟಲ್ ಅನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಬುಧವಾರ ಘೋಷಿಸಿದ್ದಾರೆ.  ಪೋರ್ಟಲ್ ದೆಹಲಿಯ ತೆರಿಗೆ ಆದಾಯ, ಜಿಡಿಪಿ ಮತ್ತು ಉದ್ಯೋಗವನ್ನು “ಶೀಘ್ರವಾಗಿ” ಹೆಚ್ಚಿಸುತ್ತದೆ ಎಂದು ಆಶಿಸುತ್ತಾ ಮುಂದಿನ ವರ್ಷದ ಆಗಸ್ಟ್ ವೇಳೆಗೆ ಇದು ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಕೇಜ್ರಿವಾಲ್ ಹೇಳಿದರು.“ಪ್ರತಿ ಕೈಗಾರಿಕೋದ್ಯಮಿ, ಪ್ರತಿಯೊಬ್ಬ ಅಂಗಡಿಯವ, ಪ್ರತಿಯೊಬ್ಬ ಸೇವಾ ಪೂರೈಕೆದಾರರು ಈ ಪೋರ್ಟಲ್‌ನಲ್ಲಿ ಜಾಗವನ್ನು ಪಡೆಯುತ್ತಾರೆ. ಅಂಗಡಿಯವನು ತನ್ನ ಅಂಗಡಿಯಲ್ಲಿ ಲಭ್ಯವಿರುವ ಪ್ರತಿಯೊಂದು ಉತ್ಪನ್ನವನ್ನು ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲು ಸಾಧ್ಯವಾಗುತ್ತದೆ. ಇದರ ಮೂಲಕ, ನೀವು ನಿಮ್ಮ ಉತ್ಪನ್ನಗಳನ್ನು ದೆಹಲಿಯಾದ್ಯಂತದ ಜನರಿಗೆ, ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ಜನರಿಗೆ ಕೊಂಡೊಯ್ಯಬಹುದು. ಎಲ್ಲಿಯೇ ಇದ್ದರೂ ಯಾವುದೇ ನಿರ್ದಿಷ್ಟ ಉತ್ಪನ್ನವನ್ನು ಹುಡುಕಬಹುದು ಮತ್ತು ಆ ಐಟಂ ಅನ್ನು ಇರಿಸಿಕೊಂಡು ಎಲ್ಲಾ ಅಂಗಡಿಗಳು ಹುಡುಕಾಟದಲ್ಲಿ ತೋರಿಸುತ್ತವೆ. ದೆಹಲಿಯ ಎಲ್ಲಾ ಆರ್ಥಿಕ ಚಟುವಟಿಕೆಗಳು, ಉತ್ಪನ್ನಗಳು ಮತ್ತು ಸೇವೆಗಳು ಒಂದೇ ಪೋರ್ಟಲ್‌ನಲ್ಲಿರುತ್ತವೆ ”ಎಂದು ಕೇಜ್ರಿವಾಲ್ ಹೇಳಿದರು.

ಪೋರ್ಟಲ್‌ನ ವೈಶಿಷ್ಟ್ಯಗಳ ಬಗ್ಗೆ ಹೇಳಿದ ಅವರು ಇದು ‘ವರ್ಚುವಲ್ ಮಾರುಕಟ್ಟೆಗಳು’ ಎಂದಿದ್ದಾರೆ. ದೆಹಲಿಯಲ್ಲಿ ಖಾನ್ ಮಾರ್ಕೆಟ್ ಇದೆ. ಇಲ್ಲಿಯೂ ಸಹ, ಅದರ ಎಲ್ಲಾ ಅಂಗಡಿಗಳು ಇರುತ್ತವೆ, ಅಲ್ಲಿ ಒಂದು ಖಾನ್ ಮಾರ್ಕೆಟ್ ಇರುತ್ತದೆ. ಲಜಪತ್ ನಗರ ಮಾರುಕಟ್ಟೆ ಕೂಡ ಇಲ್ಲಿದೆ.ಕಾಲೋನಿಗಳ ಒಳಗೆ ಡಿಡಿಎ ಮಾರುಕಟ್ಟೆಗಳು ಸೇರಿದಂತೆ ಎಲ್ಲಾ ಸಣ್ಣ ಮತ್ತು ದೊಡ್ಡ ಮಾರುಕಟ್ಟೆಗಳು ಇರುತ್ತವೆ. ನೀವು ಈ ಪೋರ್ಟಲ್‌ಗೆ ಹೋಗಿ ಮಾರುಕಟ್ಟೆಯಲ್ಲಿರುವ ಹುಡುಗಿ ಶಾಪಿಂಗ್ ಮಾಡಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.ಮತ್ತೊಂದು ವೈಶಿಷ್ಟ್ಯವೆಂದರೆ ವಿವಿಧ ರೀತಿಯ ಉತ್ಪನ್ನಗಳ ‘ವರ್ಚುವಲ್ ಪ್ರದರ್ಶನ’ಗಳನ್ನು ಇಲ್ಲಿ ಆಯೋಜಿಸಬಹುದು.

ಹಬ್ಬದ ಋತುವಿನಲ್ಲಿ ಜನರು ಮಾಸ್ಕ್ ಧರಿಸದೆ ಮಾರುಕಟ್ಟೆಗೆ ನುಗ್ಗುತ್ತಿರುವ ಜನರ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ಮಾಸ್ಕ್ ಧರಿಸದೆ ಜನರು ಹೊರಗೆ ಹೋಗಬಾರದು, ಹೋಗುವುದಾದರೆ ಮಾಸ್ಕ್ ಧರಿಸಿ ಎಂದು ವಿನಂತಿಸಿದರು. ತಮ್ಮ ಸಂಪುಟದ ಸಚಿವರು ಗುರುವಾರ ಸಂಜೆ 7 ಗಂಟೆಗೆ ದೀಪಾವಳಿ ಪೂಜೆಯನ್ನು ಮಾಡಲಿದ್ದು ಅದನ್ನು ದೂರದರ್ಶನ ಚಾನೆಲ್‌ಗಳ ಮೂಲಕ ಪ್ರಸಾರ ಮಾಡಲಾಗುವುದು. ದೆಹಲಿಯ ಎಲ್ಲಾ ಜನರು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ ಕೇಜ್ರಿವಾಲ್ 2 ಕೋಟಿ ಜನರು ಒಟ್ಟಾಗಿ ಪ್ರಾರ್ಥಿಸುತ್ತಾರೆ. ಇದು ವಾತಾವರಣದಲ್ಲಿ ಅನೇಕ ಉತ್ತಮ ಕಂಪನಗಳನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ಜನಸೇವಕ ಮತ್ತು ಜನಸ್ಪಂದನ ಯೋಜನೆ; ಏನಿದರ ವಿಶೇಷತೆ?

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!