Delhi Liquor Scam: ದೆಹಲಿ ಮದ್ಯ ಹಗರಣದಲ್ಲಿ ಕವಿತಾ ಪಿಎಯಿಂದ 25 ಕೋಟಿ ರೂ. ಪಡೆದಿದ್ದ ವಿನೋದ್ ಚೌಹಾಣ್‌; ಇಡಿ ಆರೋಪ

ಈ ತಿಂಗಳ ಅಂತ್ಯದೊಳಗೆ ವಿನೋದ್ ಚೌಹಾಣ್ ವಿರುದ್ಧ ಪ್ರಾಸಿಕ್ಯೂಷನ್ ದೂರು ದಾಖಲಿಸಲಾಗುವುದು ಎಂದು ಜಾರಿ ನಿರ್ದೇಶನಾಲಯ (ಇಡಿ) ಪರ ವಕೀಲರು ತಿಳಿಸಿದ್ದಾರೆ. ಅವರನ್ನು ಮೇ ತಿಂಗಳಲ್ಲಿ ಬಂಧಿಸಲಾಗಿತ್ತು.

Delhi Liquor Scam: ದೆಹಲಿ ಮದ್ಯ ಹಗರಣದಲ್ಲಿ ಕವಿತಾ ಪಿಎಯಿಂದ 25 ಕೋಟಿ ರೂ. ಪಡೆದಿದ್ದ ವಿನೋದ್ ಚೌಹಾಣ್‌; ಇಡಿ ಆರೋಪ
ಕವಿತಾ
Follow us
|

Updated on: Jun 19, 2024 | 5:08 PM

ನವದೆಹಲಿ: ಗೋವಾ ಚುನಾವಣೆಗಾಗಿ (Goa Elections) ಬಿಆರ್‌ಎಸ್ ನಾಯಕಿ ಕೆ. ಕವಿತಾ (K Kavitha) ಅವರ ಪಿಎಯಿಂದ ಅಭಿಷೇಕ್ ಬೋನಪಲ್ಲಿ ಮೂಲಕ ವಿನೋದ್ ಚೌಹಾಣ್ 25 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಇಂದು ಆರೋಪಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ. ಈ ತಿಂಗಳ ಅಂತ್ಯದೊಳಗೆ ವಿನೋದ್ ಚೌಹಾಣ್ (Vinod Chauhan) ವಿರುದ್ಧ ಪ್ರಾಸಿಕ್ಯೂಷನ್ ದೂರು ದಾಖಲಿಸಲಾಗುವುದು ಎಂದು ಇಡಿ ಪರ ವಕೀಲರು ತಿಳಿಸಿದ್ದಾರೆ. ಅವರನ್ನು ಮೇ ತಿಂಗಳಲ್ಲಿ ಬಂಧಿಸಲಾಗಿತ್ತು.

ರೂಸ್ ಅವೆನ್ಯೂ ನ್ಯಾಯಾಲಯವು ವಿನೋದ್ ಚೌಹಾಣ್ ಅವರ ನ್ಯಾಯಾಂಗ ಬಂಧನವನ್ನು ಜುಲೈ 3ರವರೆಗೆ ವಿಸ್ತರಿಸಿದೆ. ನ್ಯಾಯಾಂಗ ಬಂಧನದ ಅವಧಿ ಮುಗಿದ ನಂತರ ಅವರನ್ನು ತಿಹಾರ್ ಜೈಲಿನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಜುಲೈ 3ರವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್​: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಹೇಮಂತ್ ಸೊರೇನ್ ಅರೆಸ್ಟ್

“ಅಕ್ರಮ ಹಣ ವರ್ಗಾವಣೆ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಇಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಮಾಡಲಾಗಿದೆ ಎಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ. ಅರವಿಂದ್ ಕೇಜ್ರಿವಾಲ್ ಅವರು 100 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ. ನಾವು ಬಂಧನಕ್ಕೂ ಮುನ್ನವೇ ಸಾಕ್ಷ್ಯವನ್ನು ಸಂಗ್ರಹಿಸಿದ್ದೇವೆ.” ಇಡಿ ಪ್ರತಿನಿಧಿಸಿದ ಎಎಸ್‌ಜಿ ರಾಜು ಹೇಳಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಯು ದೆಹಲಿಯ ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ವಿನೋದ್ ಚೌಹಾಣ್ ಅವರನ್ನು ಬಂಧಿಸಿತ್ತು. 2022ರ ಗೋವಾ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ‘ಸೌತ್ ಗ್ರೂಪ್’ ನೀಡಿದ ಆಪಾದಿತ ಕಿಕ್‌ಬ್ಯಾಕ್‌ಗಳ ಮೂಲಕ ಪಡೆದ ನಗದು ಹಣವನ್ನು ವರ್ಗಾಯಿಸಿದ ಆರೋಪ ವಿನೋದ್ ಚೌಹಾಣ್ ಮೇಲಿದೆ. ಈ ಪ್ರಕರಣದಲ್ಲಿ ಬಂಧಿತರಾದ 18ನೇ ವ್ಯಕ್ತಿ ವಿನೋದ್ ಚೌಹಾಣ್.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕ ಮತ್ತು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕೆ. ಕವಿತಾ ಮತ್ತು ಹಲವಾರು ಮದ್ಯದ ಉದ್ಯಮಿಗಳನ್ನು ಏಜೆನ್ಸಿ ಬಂಧಿಸಿದೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಅವರ ಕೋರ್ಟ್​ ವಿಡಿಯೋ ಡಿಲೀಟ್ ಮಾಡಿ; ಸುನಿತಾ ಕೇಜ್ರಿವಾಲ್​ಗೆ ದೆಹಲಿ ಹೈಕೋರ್ಟ್ ಸೂಚನೆ

ಕವಿತಾ ಬಂಧನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿದ ಅಧಿಕೃತ ದಾಖಲೆಯಲ್ಲಿ ಪ್ರಕರಣದಲ್ಲಿ ವಿನೋದ್ ಚೌಹಾಣ್ ಅವರ ಪಾತ್ರವನ್ನು ಇಡಿ ಉಲ್ಲೇಖಿಸಿದೆ. “ಅಭಿಷೇಕ್ ಬೋನಪಲ್ಲಿ ಅವರ ನಿರ್ದೇಶನದ ಮೇರೆಗೆ ಆರೋಪಿ ದಿನೇಶ್ ಅರೋರಾ ಅವರ ಕಚೇರಿಯಿಂದ ನಗದು ಹೊಂದಿರುವ 2 ಭಾರವಾದ ಬ್ಯಾಗ್‌ಗಳನ್ನು ಸಂಗ್ರಹಿಸಿ ವಿನೋದ್ ಚೌಹಾಣ್ ಅವರಿಗೆ ತಲುಪಿಸಿದ್ದಾರೆ ಎಂದು ಕೆ. ಕವಿತಾ ಅವರ ಸಿಬ್ಬಂದಿಯೊಬ್ಬರ ಹೇಳಿಕೆಯಿಂದ ತಿಳಿದುಬಂದಿದೆ” ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ.

ಕವಿತಾ ಮತ್ತು ಇತರರು ಸದಸ್ಯರಾಗಿದ್ದ ಸೌತ್ ಗ್ರೂಪ್ ಎಎಪಿಗೆ ನೀಡಿದ 100 ಕೋಟಿ ರೂ. ಲಂಚದ ಹಣದಲ್ಲಿ 45 ಕೋಟಿ ರೂ.ಗಳನ್ನು ಗೋವಾ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಳಸಲಾಗಿದೆ ಎಂದು ಇಡಿ ಈ ಹಿಂದೆ ಆರೋಪ ಮಾಡಿತ್ತು. ‘ಸೌತ್ ಗ್ರೂಪ್’ನಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ, ಅವರ ಪುತ್ರ ರಾಘವ್ ಮಾಗುಂಟಾ ಮತ್ತು ಅರಬಿಂದೋ ಗ್ರೂಪ್ ಪ್ರವರ್ತಕ ಶರತ್ ರೆಡ್ಡಿ ಕೂಡ ಇದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ