AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bizarre Story: ವಿಮಾನದಲ್ಲಿ ಇರುವೆ ಕಾಣಿಸಿಕೊಂಡಿದ್ದರಿಂದ ದೆಹಲಿಯಿಂದ ಲಂಡನ್​ಗೆ ಹೊರಟ್ಟಿದ್ದೇ 3 ಗಂಟೆ ತಡ

ದೆಹಲಿಯಿಂದ ಲಂಡನ್​ಗೆ ತೆರಳಬೇಕಿದ್ದ ವಿಮಾನದ ಬಿಜೆನೆಸ್​ ಕ್ಲಾಸ್​ನಲ್ಲಿ ಇರುವೆಗಳು ಕಾಣಿಸಿಕೊಂಡಿದ್ದರಿಂದ 3 ಗಂಟೆ ತಡವಾಗಿ ಹೊರಟಿದೆ.

Bizarre Story: ವಿಮಾನದಲ್ಲಿ ಇರುವೆ ಕಾಣಿಸಿಕೊಂಡಿದ್ದರಿಂದ ದೆಹಲಿಯಿಂದ ಲಂಡನ್​ಗೆ ಹೊರಟ್ಟಿದ್ದೇ 3 ಗಂಟೆ ತಡ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Sep 06, 2021 | 9:28 PM

Share

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (IGI)ದಿಂದ ಸೋಮವಾರ ಮಧ್ಯಾಹ್ನ 2 ಗಂಟೆಗೆ ಹೊರಡಬೇಕಿದ್ದ ಏರ್ ಇಂಡಿಯಾದ ದೆಹಲಿ-ಲಂಡನ್ ವಿಮಾನದ ಬಿಜಿನೆಸ್ ಕ್ಲಾಸ್​ನಲ್ಲಿ ಇರುವೆಗಳ ಸಮೂಹ ಪತ್ತೆಯಾದ ನಂತರ ಮೂರು ಗಂಟೆಗೂ ಹೆಚ್ಚು ವಿಳಂಬವಾಯಿತು ಎಂದು ಮೂಲಗಳು ತಿಳಿಸಿವೆ. AI-111 ವಿಮಾನವು ದೆಹಲಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ಸಮಯಕ್ಕೆ ಬದಲಾಗಿ ಸಂಜೆ 5.20ಕ್ಕೆ ಹೊರಟಿತು ಎಂದು ಅವರು ಹೇಳಿದರು. ಮೂಲಗಳ ಪ್ರಕಾರ, ವಿಮಾನವು ಲಂಡನ್‌ಗೆ ಹೊರಡುವ ಮುನ್ನ ಬಿಜಿನೆಸ್ ಕ್ಲಾಸ್​ನ ಒಂದು ವಿಭಾಗದಲ್ಲಿ ಇರುವೆಗಳು ಕಂಡುಬಂದವು. ಆ ನಂತರ ವಿಮಾನವನ್ನು ಮತ್ತೊಂದು ಬೋಯಿಂಗ್ 787-8 ವಿಮಾನದೊಂದಿಗೆ ಬದಲಿಸಲಾಯಿತು. ಈ ಕುರಿತು ಹೇಳಿಕೆಗಾಗಿ ಪಿಟಿಐ ಸುದ್ದಿ ಸಂಸ್ಥೆಯ ಕೋರಿಕೆಗೆ ಏರ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಇದೇ ರೀತಿಯ ಘಟನೆ ಮೇ 27ರಂದು ನಡೆದಿತ್ತು. ಏರ್ ಇಂಡಿಯಾ ವಿಮಾನವು ಅಮೆರಿಕದ ನೆವಾರ್ಕ್​ಗೆ ತೆರಳಬೇಕಾಗಿದ್ದು ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಬೇಕಾಗಿ ಬಂದ ನಂತರ ಕ್ಯಾಬಿನ್ ಸಿಬ್ಬಂದಿ ವಿಮಾನದೊಳಗೆ ಬಾವುಲಿ ಹಾರುತ್ತಿರುವುದನ್ನು ಕಂಡರು. ನಂತರ ಪೈಲಟ್‌ಗಳು ಬಾವುಲಿ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲರ್‌(ATC)ಗೆ ಮಾಹಿತಿ ನೀಡಿದರು ಮತ್ತು ವಿಮಾನವನ್ನು ತಿರುಗಿಸಲಾಯಿತು.

ವಿಮಾನವು ಮೇ 27ರ ಸಂಜೆ ಇಳಿದ ನಂತರ ಮತ್ತು ಎಲ್ಲರೂ ವಿಮಾನದಿಂದ ಹೊರಬಂದಾಗ, ಬೋಯಿಂಗ್ B777-300ER ವಿಮಾನದೊಳಗೆ ಹೊಗೆ ಆಡಿಸಲಾಯಿತು ಮತ್ತು ಬಾವುಲಿ ಸತ್ತುಹೋಯಿತು. ಅದರ ನಂತರ ಅದರ  ಕಳೇಬರವನ್ನು ಬಿಜಿನೆಸ್ ಕ್ಲಾಸ್​ನ ಎಂಟನೇ ಸಾಲಿನಿಂದ ತೆಗೆಯಲಾಯಿತು.

ಇದನ್ನೂ ಓದಿ: Viral Video: ಎರಡು ಸುರಂಗಗಳ ಮೂಲಕ ವಿಮಾನ ಹಾರಿಸಿದ ಪೈಲಟ್; ದಿಗ್ಭ್ರಮೆಗೊಳಿಸುವ ವಿಡಿಯೋ ವೈರಲ್

(Delhi- London Flight Delayed After Ants Found In Business Class At Indira Gandhi International Airport)

Published On - 9:27 pm, Mon, 6 September 21

ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!