AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಢಾಬಾದಲ್ಲಿ ಮಾಡ್ತಿದ್ರಾ ಡೀಸೆಲ್ ಪರೋಟ?, ಇದನ್ನು ತಿಂದವರು ಬದ್ಕೋದುಂಟಾ!

ಇತ್ತೀಚೆಗೆ ಫುಡ್​ ಬ್ಲಾಗರ್​ಗಳ ಸಂಖ್ಯೆ ಹೆಚ್ಚಾಗಿದೆ. ಟ್ವಿಟ್ಟರ್, ಫೇಸ್​ಬುಕ್ ಎಲ್ಲೇ ನೋಡಿದರೂ ಇವರ ಹಾವಳಿಯೇ ಹೆಚ್ಚು. ಇವರಿಂದ ಕೆಲವು ಹೋಟೆಲ್​, ಢಾಬಾಗಳು ಹೆಚ್ಚೆಚ್ಚು ಪ್ರಾಮುಖ್ಯತೆ ಪಡೆದರೆ ಕೆಲವರು ಮಾಡುವ ತಪ್ಪುಗಳಿಂದ ಬಾಗಿಲು ಮುಚ್ಚುವ ಪರಿಸ್ಥಿತಿಯೂ ಬರುತ್ತದೆ. ಅಂಥದ್ದೇ ಒಂದು ಘಟನೆ ಬಗ್ಗೆ ಮಾಹಿತಿ ಇಲ್ಲಿದೆ.

ಈ ಢಾಬಾದಲ್ಲಿ ಮಾಡ್ತಿದ್ರಾ ಡೀಸೆಲ್ ಪರೋಟ?, ಇದನ್ನು ತಿಂದವರು ಬದ್ಕೋದುಂಟಾ!
ಪರೋಟ
ನಯನಾ ರಾಜೀವ್
|

Updated on:May 15, 2024 | 3:23 PM

Share

ಚಂಡೀಗಢದಲ್ಲಿ ಡೀಸೆಲ್​ ಪರೋಟ(Diesel Paratha) ಮಾಡುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್​ ಆಗಿತ್ತು. ಅದನ್ನು ತಿಂದ್ರೆ ಬದುಕುವುದುಂಟೇ ಎಂದು ಜನರು ಬಾಯಿ ಮೇಲೆ ಬೆರಳಿಟ್ಟಿದ್ದರು. ಆದರೆ ಫುಡ್ ಬ್ಲಾಗರ್​ ಅಚಾತುರ್ಯದಿಂದ ಈ ಢಾಬಾ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗಿದೆ. ಚಂಡೀಗಢದಲ್ಲಿ ರಸ್ತೆ ಬದಿ ಇರುವ ಢಾಬಾವೊಂದರಲ್ಲಿ ಡೀಸೆಲ್ ಪರೋಟ ಮಾಡುತ್ತಾರೆ ಎಂದು ವಿಡಿಯೋಹಾಕಿ ಫುಡ್ ಬ್ಲಾಗರ್ ಅಮನ್​ಪ್ರೀತ್ ಎಂಬುವವರು​ ಬರೆದುಕೊಂಡಿದ್ದರು. ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತದೆ ಎಂದಿದ್ದರು.

ಢಾಬಾ ಮಾಲೀಕ ಬಬ್ಲು ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ತಾನು ಡೀಸೆಲ್ ಪರಾಠವನ್ನು ಸಿದ್ಧಪಡಿಸುತ್ತಿರುವುದಾಗಿ ಹೇಳಿದ್ದಾನೆ. ಅವನು ಒಂದು ಕ್ಯಾನ್‌ನಿಂದ ದ್ರವವನ್ನು ಸಿಜ್ಲಿಂಗ್ ಪ್ಯಾನ್‌ನ ಮೇಲೆ ಪರೋಟದ ಮೇಲೆ ಸುರಿಯುತ್ತಾನೆ. ವೀಡಿಯೋದಲ್ಲಿ ಹೊಗೆ ಉಕ್ಕುವುದು ಮತ್ತು ಪರೋಟವು ಸುಟ್ಟುಹೋಗುತ್ತಿರುವುದನ್ನು ತೋರಿಸುತ್ತದೆ.

ಈ ವಿಡಿಯೋ ನೋಡಿದ ಸಾಕಷ್ಟು ಜನ ಆಶ್ಚರ್ಯಗೊಂಡಿದ್ದರು, ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಡೀಸೆಲ್ ಸೇವಿಸುವುದರಿಂದ ಉಂಟಾಗುವ ಆರೋಗ್ಯದ ಅಪಾಯಗಳ ಬಗ್ಗೆ ಎಚ್ಚರಿಕೆಯನ್ನು ವ್ಯಕ್ತಪಡಿಸಿದ್ದಾರೆ, ಇದು ಮಾರಕವಾಗಬಹುದು ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Winter Special Recipes: ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನದ ಭೋಜನಕ್ಕೆ ಈ 5 ರೀತಿಯ ಪರೋಟ ಉತ್ತಮ

ಆಹಾರ ಸುರಕ್ಷತಾ ಅಧಿಕಾರಿಗಳು ಢಾಬಾದ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೆಲವರು ವಿಡಿಯೋದ ಸತ್ಯಾಸತ್ಯತೆಯನ್ನೂ ಪ್ರಶ್ನಿಸಿದ್ದಾರೆ. ವೀಡಿಯೊ ವೈರಲ್ ಆದ ಕೆಲವೇ ದಿನಗಳಲ್ಲಿ, ಅಮನ್‌ಪ್ರೀತ್ ಸಿಂಗ್ ಅದನ್ನು ಡಿಲೀಟ್​ ಮಾಡಿ ಕ್ಷಮೆಯಾಚಿಸಿದ್ದಾರೆ.

ಈ ವಿಡಿಯೋವನ್ನು ಮನರಂಜನಾ ಉದ್ದೇಶಕ್ಕಾಗಿ ಚಿತ್ರಿಸಿಲಾಗಿದೆ ಎಂದು ಢಾಬಾ ಮಾಲೀಕ ಚನ್ನಿ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಅಡುಗೆಗೆ ಬೇಕಾದ ತೈಲವನ್ನು ಮಾತ್ರ ಬಳಕೆ ಮಾಡಲಾಗುತ್ತದೆ, ಡೀಸೆಲ್​ನಲ್ಲಿ ಬೇಯಿಸಿದ ಪರೋಟವನ್ನು ಯಾರೂ ತಿನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:52 pm, Wed, 15 May 24

Follow Us
ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ಫ್ಯಾಮಿಲಿ ದರ್ಶನ
ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ಫ್ಯಾಮಿಲಿ ದರ್ಶನ
ದೆಹಲಿಯಲ್ಲಿ ನಕಲಿ ಔಷಧಿಗಳ ತಯಾರಿಸುವ ದಂಧೆ
ದೆಹಲಿಯಲ್ಲಿ ನಕಲಿ ಔಷಧಿಗಳ ತಯಾರಿಸುವ ದಂಧೆ
ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ: ಸ್ಪೆಷಲ್ ವಿಡಿಯೋ ಹಂಚಿಕೊಂಡ ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ: ಸ್ಪೆಷಲ್ ವಿಡಿಯೋ ಹಂಚಿಕೊಂಡ ವಿಜಯ್ ದೇವರಕೊಂಡ
ಈ ವಾರ ಈ ರಾಶಿಗೆ ಆದಾಯದಲ್ಲಿ ಏರಿಕೆ ಮತ್ತು ಅದೃಷ್ಟ ಕೂಡಿಬರಲಿದೆ
ಈ ವಾರ ಈ ರಾಶಿಗೆ ಆದಾಯದಲ್ಲಿ ಏರಿಕೆ ಮತ್ತು ಅದೃಷ್ಟ ಕೂಡಿಬರಲಿದೆ
ದಾವಣಗೆರೆ ಬೈಎಲೆಕ್ಷನ್​​: ಅಸಮಾಧಾನ ಆರೋಪಕ್ಕೆ ಜಮೀರ್​​ ಫಸ್ಟ್​​ ರಿಯಾಕ್ಷನ್
ದಾವಣಗೆರೆ ಬೈಎಲೆಕ್ಷನ್​​: ಅಸಮಾಧಾನ ಆರೋಪಕ್ಕೆ ಜಮೀರ್​​ ಫಸ್ಟ್​​ ರಿಯಾಕ್ಷನ್
47ನೇ ವಯಸ್ಸಿನಲ್ಲಿ ನಟಿ ಜ್ಯೋತಿಕಾ ವರ್ಕೌಟ್ ಹೇಗಿದೆ ನೋಡಿ; ವಿಡಿಯೋ ವೈರಲ್
47ನೇ ವಯಸ್ಸಿನಲ್ಲಿ ನಟಿ ಜ್ಯೋತಿಕಾ ವರ್ಕೌಟ್ ಹೇಗಿದೆ ನೋಡಿ; ವಿಡಿಯೋ ವೈರಲ್
ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಡಬಲ್ ಧಮಾಕ
ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಡಬಲ್ ಧಮಾಕ
ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿದ ಚಿರತೆ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿದ ಚಿರತೆ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಸಿದ್ದರಾಮಯ್ಯಗೆ ಹೆಚ್​​ಡಿಕೆ ಸವಾಲ್​​: ಕೇಂದ್ರ ಸಚಿವ ಹೇಳಿದ್ದೇನು?
ಸಿದ್ದರಾಮಯ್ಯಗೆ ಹೆಚ್​​ಡಿಕೆ ಸವಾಲ್​​: ಕೇಂದ್ರ ಸಚಿವ ಹೇಳಿದ್ದೇನು?
ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೇಕೆ ಸಂತಾನ ಹರಣ ಚಿಕಿತ್ಸೆ?
ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೇಕೆ ಸಂತಾನ ಹರಣ ಚಿಕಿತ್ಸೆ?