AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಶಾನ್ಯ ರಾಜ್ಯಗಳ ವೈವಿಧ್ಯತೆಯೇ ಅದರ ದೊಡ್ಡ ಶಕ್ತಿ; ಪ್ರಧಾನಿ ಮೋದಿ ಬಣ್ಣನೆ

ಭಾರತದ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಅನ್ವೇಷಿಸಲು ಪ್ರಧಾನಿ ನರೇಂದ್ರ ಮೋದಿ ಹೂಡಿಕೆದಾರರನ್ನು ಒತ್ತಾಯಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ ಇದು ಪ್ರಮುಖ ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಈಶಾನ್ಯ ಎಂದರೆ ಜೈವಿಕ ಆರ್ಥಿಕತೆ, ಬಿದಿರು, ಚಹಾ ಉತ್ಪಾದನೆ, ಪೆಟ್ರೋಲಿಯಂ, ಕ್ರೀಡೆ, ಕೌಶಲ್ಯ, ಪರಿಸರ ಪ್ರವಾಸೋದ್ಯಮದ ಉದಯೋನ್ಮುಖ ಕೇಂದ್ರ ಮತ್ತು ಸಾವಯವ ಉತ್ಪನ್ನಗಳಿಗೆ ಹೊಸ ಜಗತ್ತು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಈಶಾನ್ಯ ರಾಜ್ಯಗಳ ವೈವಿಧ್ಯತೆಯೇ ಅದರ ದೊಡ್ಡ ಶಕ್ತಿ; ಪ್ರಧಾನಿ ಮೋದಿ ಬಣ್ಣನೆ
Rising Northeast
ಸುಷ್ಮಾ ಚಕ್ರೆ
|

Updated on:May 23, 2025 | 4:41 PM

Share

ನವದೆಹಲಿ, ಮೇ 23: ನವದೆಹಲಿಯಲ್ಲಿ ಆಯೋಜಿಸಿರುವ ರೈಸಿಂಗ್ ಈಶಾನ್ಯ ಹೂಡಿಕೆದಾರರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಈಶಾನ್ಯದ ವೈವಿಧ್ಯತೆಯೇ ಅದರ ದೊಡ್ಡ ಶಕ್ತಿ. ಈಶಾನ್ಯವು ನಮ್ಮ ರಾಷ್ಟ್ರದ ಅತ್ಯಂತ ವೈವಿಧ್ಯಮಯ ಭಾಗವಾಗಿದೆ ಎಂದು ಹೇಳಿದ್ದಾರೆ. “ವ್ಯಾಪಾರದಿಂದ ಸಂಪ್ರದಾಯದವರೆಗೆ, ಜವಳಿಯಿಂದ ಪ್ರವಾಸೋದ್ಯಮದವರೆಗೆ, ಈಶಾನ್ಯದ ವೈವಿಧ್ಯತೆಯೇ ಅದರ ಶಕ್ತಿ. ಈಶಾನ್ಯ ಎಂದರೆ ಜೈವಿಕ ಆರ್ಥಿಕತೆ, ಬಿದಿರು, ಚಹಾ ಉತ್ಪಾದನೆ, ಪೆಟ್ರೋಲಿಯಂ, ಕ್ರೀಡೆ, ಕೌಶಲ್ಯ, ಪರಿಸರ ಪ್ರವಾಸೋದ್ಯಮದ ಉದಯೋನ್ಮುಖ ಕೇಂದ್ರ ಮತ್ತು ಸಾವಯವ ಉತ್ಪನ್ನಗಳಿಗೆ ಹೊಸ ಜಗತ್ತು ಎಂದು ಜನಜನಿತವಾಗುತ್ತಿದೆ. ಈಶಾನ್ಯವು ಶಕ್ತಿಕೇಂದ್ರವಾಗುತ್ತಿದೆ. ಈಶಾನ್ಯ ರಾಜ್ಯಗಳು ನಮ್ಮ ದೇಶದ ಅಷ್ಟ ಲಕ್ಷ್ಮಿ” ಎಂದು ಅವರು ಹೇಳಿದ್ದಾರೆ.

“ನಮಗೆ ಪೂರ್ವ ಎಂದರೆ ಕೇವಲ ದಿಕ್ಕು ಅಲ್ಲ. ನಮಗೆ ಪೂರ್ವ ಎಂದರೆ ಸಬಲೀಕರಣ, ಕಾರ್ಯ, ಬಲವರ್ಧನೆ ಮತ್ತು ಪರಿವರ್ತನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈಶಾನ್ಯವನ್ನು ಕೇವಲ ಗಡಿ ಪ್ರದೇಶ ಎಂದು ಕರೆಯುತ್ತಿದ್ದ ಕಾಲವಿತ್ತು. ಆದರೆ, ಇಂದು ಅದು ಬೆಳವಣಿಗೆಯ ಮುಂಚೂಣಿಯಲ್ಲಿದೆ. ಉತ್ತಮ ಮೂಲಸೌಕರ್ಯವು ಪ್ರವಾಸೋದ್ಯಮವನ್ನು ಆಕರ್ಷಕವಾಗಿಸುತ್ತದೆ ಮತ್ತು ಹೂಡಿಕೆದಾರರಿಗೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತದೆ. ನಾವು ಈಶಾನ್ಯದಲ್ಲಿ ಮೂಲಸೌಕರ್ಯ ಕ್ರಾಂತಿಯನ್ನು ಪ್ರಾರಂಭಿಸಿದ್ದೇವೆ. ಇದು ಈಗ ಅವಕಾಶಗಳನ್ನು ಹೆಚ್ಚಿಸುತ್ತಿದೆ. ಈಶಾನ್ಯದಲ್ಲಿ ಸಂಪರ್ಕವು ಬಲಗೊಳ್ಳುತ್ತಿದೆ” ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
Image
ಭಾರತದ ಸಂಸದರ ನಿಯೋಗ ಏರ್​ಪೋರ್ಟ್​ನಲ್ಲಿ ಇಳಿಯುವಾಗ ಡ್ರೋನ್ ದಾಳಿ
Image
ಪಾಕಿಸ್ತಾನದ ದೊಡ್ಡ ನಗರಗಳಲ್ಲಿ ಉಗ್ರರು ಮುಕ್ತವಾಗಿ ಸುತ್ತಾಡುತ್ತಿದ್ದಾರೆ
Image
ಕ್ಯಾಮೆರಾ ಮುಂದೆ ಮಾತ್ರ ರಕ್ತ ಕುದಿಯೋದೇಕೆ? ಮೋದಿಗೆ ರಾಹುಲ್ ಗಾಂಧಿ ಪ್ರಶ್ನೆ

ಇದನ್ನೂ ಓದಿ: ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಪೋಸ್ಟ್; ಬಾಗಲಕೋಟೆಯ ಯುವಕನ ಬಂಧನ

ಈಶಾನ್ಯ ಪ್ರದೇಶದ ಅಗಾಧ ಸಾಮರ್ಥ್ಯ ಮತ್ತು ದೇಶದ ಅಭಿವೃದ್ಧಿ ಪ್ರಯಾಣದಲ್ಲಿ ಅದರ ಮಹತ್ವವನ್ನು ಪ್ರಧಾನಿ ಮೋದಿ ಎತ್ತಿ ತೋರಿಸಿದರು. “ನಮ್ಮ ಭಾರತವನ್ನು ವಿಶ್ವದ ಅತ್ಯಂತ ವೈವಿಧ್ಯಮಯ ರಾಷ್ಟ್ರ ಎಂದು ಕರೆಯಲಾಗುತ್ತದೆ. ನಮ್ಮ ಈಶಾನ್ಯವು ವ್ಯಾಪಾರದಿಂದ ಸಂಪ್ರದಾಯದವರೆಗೆ, ಜವಳಿಯಿಂದ ಪ್ರವಾಸೋದ್ಯಮದವರೆಗೆ ಈ ವೈವಿಧ್ಯಮಯ ರಾಷ್ಟ್ರದ ಅತ್ಯಂತ ವೈವಿಧ್ಯಮಯ ಭಾಗವಾಗಿದೆ. ವೈವಿಧ್ಯತೆಯೇ ನಮ್ಮ ದೇಶದ ದೊಡ್ಡ ಶಕ್ತಿ” ಎಂದಿದ್ದಾರೆ.

ಸಂಪತ್ತಿನ ಹಿಂದೂ ದೇವತೆಯನ್ನು ಉಲ್ಲೇಖಿಸಿದ ಅವರು ಈಶಾನ್ಯ ರಾಜ್ಯಗಳನ್ನು ಅಷ್ಟಲಕ್ಷ್ಮಿ ಎಂದು ಬಣ್ಣಿಸಿದರು. “ಅದಕ್ಕಾಗಿಯೇ ಈಶಾನ್ಯವು ನಮ್ಮ ಅಷ್ಟಲಕ್ಷ್ಮಿ. ಅಷ್ಟಲಕ್ಷ್ಮಿಯ ಆಶೀರ್ವಾದದೊಂದಿಗೆ ಈಶಾನ್ಯದ ಪ್ರತಿಯೊಂದು ರಾಜ್ಯವು ನಾವು ಹೂಡಿಕೆಗೆ ಸಿದ್ಧರಿದ್ದೇವೆ, ನಾವು ನಾಯಕತ್ವಕ್ಕೆ ಸಿದ್ಧರಿದ್ದೇವೆ ಎಂದು ಹೇಳುತ್ತಿದೆ” ಎಂದಿದ್ದಾರೆ.

ಇದನ್ನೂ ಓದಿ: ನನ್ನ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಬಿಸಿ ಸಿಂಧೂರ: ನರೇಂದ್ರ ಮೋದಿ

“ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಪೂರ್ವ ಭಾರತದ ಅಭಿವೃದ್ಧಿ ಬಹಳ ಮುಖ್ಯ. ಈಶಾನ್ಯವು ಪೂರ್ವ ಭಾರತದ ಅತ್ಯಂತ ನಿರ್ಣಾಯಕ ಭಾಗವಾಗಿದೆ. ಉತ್ತಮ ಮೂಲಸೌಕರ್ಯವು ಪ್ರವಾಸೋದ್ಯಮವನ್ನು ಆಕರ್ಷಕವಾಗಿಸುತ್ತದೆ ಮತ್ತು ಹೂಡಿಕೆದಾರರಿಗೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತದೆ. ನಮ್ಮ ಕೈಗಾರಿಕೆಗಳು ಮುಂದೆ ಬಂದು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಮುಂಬರುವ ದಶಕದಲ್ಲಿ ಈಶಾನ್ಯದ ವ್ಯಾಪಾರ ಸಾಮರ್ಥ್ಯವು ಹಲವಾರು ಪಟ್ಟು ಹೆಚ್ಚಾಗುತ್ತದೆ” ಎಂದಿದ್ದಾರೆ.

ಪ್ರಧಾನಿ ಮೋದಿ ಉದ್ಘಾಟಿಸಿದ ರೈಸಿಂಗ್ ಈಶಾನ್ಯ ಹೂಡಿಕೆದಾರರ ಶೃಂಗಸಭೆಯು ಮೇ 24ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ಈ ಶೃಂಗಸಭೆಯು ಈಶಾನ್ಯ ಪ್ರದೇಶವನ್ನು ಅವಕಾಶಗಳ ಭೂಮಿಯಾಗಿ ಎತ್ತಿ ತೋರಿಸುವ, ಜಾಗತಿಕ ಮತ್ತು ದೇಶೀಯ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:38 pm, Fri, 23 May 25

ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ