AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋರಖ್​ನಾಥ ದೇಗುಲಕ್ಕೆ ನುಗ್ಗಲು ಯತ್ನಿಸಿದ್ದ ಮುಸ್ಲಿಂ ಯುವಕನ ಮಾನಸಿಕ ಆರೋಗ್ಯದ ಬಗ್ಗೆ ವೈದ್ಯರು ಮೌನ; ತಂದೆಯ ಮಾತುಗಳಿಗೆ ಇಲ್ಲ ಪುರಾವೆ

ಅಹ್ಮದ್​ ಮುರ್ತಾಜಾ ಕೈ ಮೇಲೆ ಗಾಯವಾಗಿದ್ದು ಬಿಟ್ಟರೆ, ಬೇರೆನೂ ಸಮಸ್ಯೆ ಆಗಿಲ್ಲ. ಆ ಗಾಯಕ್ಕೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ.  ಅದರ ಹೊರತಾಗಿ ಬೇರೇನೂ ಸಮಸ್ಯೆ ಆತನಿಗೆ ಆಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಗೋರಖ್​ನಾಥ ದೇಗುಲಕ್ಕೆ ನುಗ್ಗಲು ಯತ್ನಿಸಿದ್ದ ಮುಸ್ಲಿಂ ಯುವಕನ ಮಾನಸಿಕ ಆರೋಗ್ಯದ ಬಗ್ಗೆ ವೈದ್ಯರು ಮೌನ; ತಂದೆಯ ಮಾತುಗಳಿಗೆ ಇಲ್ಲ ಪುರಾವೆ
ಗೋರಖ್​ಪುರದಲ್ಲಿ ನಡೆದ ಘಟನೆ
TV9 Web
| Edited By: |

Updated on: Apr 13, 2022 | 4:38 PM

Share

ಕೈಯಲ್ಲಿ ಹರಿತವಾದ ಆಯುಧ ಹಿಡಿದು, ಸ್ವಧರ್ಮದ ಘೋಷಣೆ ಕೂಗುತ್ತ ಗೋರಖಪುರದ ದೇಗುಲಕ್ಕೆ ನುಗ್ಗಲು ಯತ್ನಿಸಿದ್ದ ಅಹ್ಮದ್​ ಮುರ್ತಾಜಾನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆತನನ್ನು ವಿಚಾರಣೆ ನಡೆಸುತ್ತಿರುವ ಆ್ಯಂಟಿ ಟೆರರಿಸಂ ಸ್ಕ್ವಾಡ್​  ಮಂಗಳವಾರ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಗೋರಖ್​ಪುರದ ಸಾದರ್​ ಆಸ್ಪತ್ರೆಗೆ ಕರೆದೊಯ್ದಿತ್ತು. ಆತನ ತಪಾಸಣೆಯನ್ನು ಡಾ. ಜೆ.ಎಸ್​. ಪಿ.ಸಿಂಗ್​ ಮಾಡಿದ್ದಾರೆ. ಆದರೆ ಆರೋಪಿಯ ಮಾನಸಿಕ ಆರೋಗ್ಯದ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಲು ಅವರು ನಿರಾಕರಿಸಿದ್ದಾರೆ. 

ಅಹ್ಮದ್​ ಮುರ್ತಾಜಾ ಕೈ ಮೇಲೆ ಗಾಯವಾಗಿದ್ದು ಬಿಟ್ಟರೆ, ಬೇರೆನೂ ಸಮಸ್ಯೆ ಆಗಿಲ್ಲ. ಆ ಗಾಯಕ್ಕೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ.  ಅದರ ಹೊರತಾಗಿ ಬೇರೇನೂ ಸಮಸ್ಯೆ ಆತನಿಗೆ ಆಗಿಲ್ಲ. ಕೈಗೆ ಎಕ್ಸ್​ರೇಯನ್ನೂ ಮಾಡಲಾಗಿದೆ. ಆತನಿಗೆ ಆಗಿದ್ದು ಅಂಥ ದೊಡ್ಡ ಗಾಯವಲ್ಲ ಎಂದು ಹೇಳಿರುವ ವೈದ್ಯರು ಮುರ್ತಾಜಾ ಮಾನಸಿ ಆರೋಗ್ಯದ ಬಗ್ಗೆ ಜಾಸ್ತಿ ಏನೂ ಹೇಳಲಿಲ್ಲ.  ಈ  ಅಹ್ಮದ್​ ಮುರ್ತಾಜಾ  29ವರ್ಷದವ. ಏಪ್ರಿಲ್​ 3ರ ಸಂಜೆ 7ಗಂಟೆ ಹೊತ್ತಿಗೆ ಗೋರಖ್​​ಪುರ ದೇವಾಲಯದ ಒಳಗೆ ನುಗ್ಗುವಾಗ ತನ್ನ ಧರ್ಮಕ್ಕೆ ಸಂಬಂಧಪಟ್ಟ ಘೋಷಣೆಗಳನ್ನು ಕೂಗಿದ್ದ. ಬಳಿಕ ಸುತ್ತಲೂ ಇದ್ದ ಜನರೇ ಆತನನ್ನು ತಡೆದು, ಓಡಿಸಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು.. ಈತ ಕೈಯಲ್ಲಿ ಕತ್ತಿಯಂಥ ಹರಿತವಾದ ಆಯುಧ ಹಿಡಿದು, ದೊಡ್ಡದಾಗಿ ಕೂಗುತ್ತ ದೇಗುಲದೆಡೆಗೆ ಬರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಹಾಗೇ ಅಡ್ಡ ಬಂದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದ.

ಆತನನ್ನು ಪೊಲೀಸರು ಬಂಧಿಸಿದ್ದ ಬೆನ್ನಲ್ಲೇ  ತಂದೆ ಪ್ರತಿಕ್ರಿಯೆ ನೀಡಿ, ಮುರ್ತಾಜಾ ಮಾನಸಿಕವಾಗಿ ಅಸ್ವಸ್ಥ. ಹೀಗಾಗಿ ಅಪರಾಧ ಮಾಡುವ ಉದ್ದೇಶದಿಂದ ಆತ ಹೀಗೆ ಮಾಡಿದ್ದಲ್ಲ. ಆತನೇನು ಮಾಡುತ್ತಿದ್ದಾನೆ ಎಂಬುದು ಅವನಿಗೇ ಗೊತ್ತಿಲ್ಲ. ಹಾಗಾಗಿ ಇದನ್ನು ಅಪರಾಧವೆಂದು ಪರಿಗಣಿಸಬಾರದು ಎಂದು ಹೇಳಿದ್ದರು. ಆದರೆ ತಾಪಸಣೆ ಮಾಡಿದ ವೈದ್ಯ, ಜೆ.ಎಸ್​.ಪಿ.ಸಿಂಗ್​, ಮುರ್ತಾಜಾ ಮಾನಸಿ ಅಸ್ವಸ್ಥ ಎಂಬುದನ್ನು ನಿಶ್ಚಯವಾಗಿ ಹೇಳಲು ನಮಗೆ ಪುರಾವೆಗಳು ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಅಷ್ಟು ಬಿಟ್ಟರೆ ಹೆಚ್ಚೇನೂ ವಿವರಣೆ ಕೊಟ್ಟಿಲ್ಲ.

ಏಪ್ರಿಲ್ 3ರಂದು ಸಂಜೆ ಈತ ಇಷ್ಟೆಲ್ಲ ಗಲಭೆ ಸೃಷ್ಟಿಸಿದ ಬೆನ್ನಲ್ಲೇ ಪೊಲೀಸರು ಇವನನ್ನ ಬಂಧಿಸಿದ್ದರು. ಇದು ಉಗ್ರಕೃತ್ಯ ಎಂಬುದನ್ನು ಅಲ್ಲಗಳೆಯಲಾಗದು ಎಂದು ಹೇಳಲಾಗಿತ್ತು. ಹಾಗಾಗಿ ಏಪ್ರಿಲ್ 6ರಂದು ಮುರ್ತಾಜಾನನ್ನು ಭಯೋತ್ಪಾದಕ ವಿರೋಧಿ ಸ್ಕ್ವಾಡ್​ಗೆ ವರ್ಗಾಯಿಸಲಾಗಿತ್ತು.

ಇದನ್ನೂ ಓದಿ: IPL 2022: 5 ಇನ್ನಿಂಗ್ಸ್, ಕೇವಲ 107 ರನ್! ನಾಯಕತ್ವದಿಂದ ಕೆಳಗಿಳಿದರೂ ಬದಲಾಗಲಿಲ್ಲ ಕೊಹ್ಲಿ ಹಣೆಬರಹ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ