ತನಗೆ ಇಷ್ಟವಾದ ಅಡುಗೆ ಮಾಡಲಿಲ್ಲ ಎಂದು ಲಿವ್​-ಇನ್ ಸಂಗಾತಿಯ ಹತ್ಯೆಗೈದ ವ್ಯಕ್ತಿ

ತನಗೆ ಇಷ್ಟವಾದ ಅಡುಗೆ ಮಾಡಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ವ್ಯಕ್ತಿ ತನ್ನ ಲಿವ್-ಇನ್ ಸಂಗಾತಿಯನ್ನೇ ಹತ್ಯೆಗೈದಿದ್ದಾನೆ. ಲಲ್ಲನ್ ಯಾದವ್ (35) ವಿಚಾರಣೆ ವೇಳೆ ಮದ್ಯದ ಅಮಲಿನಲ್ಲಿ ತನ್ನ ಸಂಗಾತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಗೆ ಇಷ್ಟವಾದ ಅಡುಗೆ ಮಾಡಲಿಲ್ಲ ಎಂದು ಲಿವ್​-ಇನ್ ಸಂಗಾತಿಯ ಹತ್ಯೆಗೈದ ವ್ಯಕ್ತಿ
ಅಪರಾಧ

Updated on: Mar 17, 2024 | 3:10 PM

ತನಗೆ ಇಷ್ಟವಾದ ಅಡುಗೆ ಮಾಡಲಿಲ್ಲ ಎಂದು ವ್ಯಕ್ತಿಯೊಬ್ಬ ತನ್ನ ಲಿವ್​-ಇನ್ ಸಂಗಾತಿಯನ್ನು ಹತ್ಯೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ಆತ ತನ್ನ ಲಿವ್​ ಇನ್ ಸಂಗಾತಿಯನ್ನು ಹೊಡೆದು ಹತ್ಯೆ ಮಾಡಿದ್ದಾನೆ. ಲಲ್ಲನ್ ಯಾದವ್ (35) ವಿಚಾರಣೆ ವೇಳೆ ಮದ್ಯದ ಅಮಲಿನಲ್ಲಿ ತನ್ನ ಸಂಗಾತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆ ಮೊಟ್ಟೆ ಕರಿ ಮಾಡಲು ನಿರಾಕರಿಸಿದಾಗ ಆತ ತನ್ನ ತಾಳ್ಮೆ ಕಳೆದುಕೊಂಡು ಸುತ್ತಿಗೆ ಮತ್ತು ಬೆಲ್ಟ್‌ನಿಂದ ಹೊಡೆದಿದ್ದಾನೆ ಎಂದು ಯಾದವ್ ಪೊಲೀಸರಿಗೆ ತಿಳಿಸಿದ್ದಾರೆ. ಬಿಹಾರದ ಮಾಧೇಪುರ ಜಿಲ್ಲೆಯ ಔರಾಹಿ ಗ್ರಾಮದವರಾದ ಯಾದವ್ ಅವರನ್ನು ಪಾಲಮ್ ವಿಹಾರ್ ಪೊಲೀಸ್ ಠಾಣೆಯ ತಂಡ ದೆಹಲಿಯ ಸರಾಯ್ ಕಾಲೇ ಖಾನ್ ಪ್ರದೇಶದಿಂದ ಬಂಧಿಸಿದೆ.

ಚಿಂದಿ ಆಯುವ ಅಂಜಲಿ (32) ಚೌಮಾ ಗ್ರಾಮದ ನಿರ್ಮಾಣ ಹಂತದ ಕಟ್ಟಡದಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ. ಶವವನ್ನು ಕಂಡ ನಂತರ ಕಟ್ಟಡದ ಉಸ್ತುವಾರಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಪ್ರಕಾರ, ಯಾದವ್ ಮತ್ತು ಅಂಜಲಿಯನ್ನು ಮಾರ್ಚ್ 10 ರಂದು ಗುರುಗ್ರಾಮ ಬಸ್ ನಿಲ್ದಾಣದಿಂದ ಕೆಲಸದ ಸ್ಥಳಕ್ಕೆ ಕರೆತರಲಾಗಿತ್ತು.

ಮತ್ತಷ್ಟು ಓದಿ: Uttar Pradesh: ನಿರಂತರ ಕಿರುಕುಳದಿಂದ ಬೇಸತ್ತು ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಅವರ ಸರಿಯಾದ ಹೆಸರುಗಳು, ವಿಳಾಸಗಳು ಮತ್ತು ಐಡಿಗಳನ್ನು ಸಹ ಮನೆ ಮಾಲೀಕರು ತೆಗೆದುಕೊಂಡಿಲ್ಲ. ಯಾದವ್ ಅಂಜಲಿಯನ್ನು ತನ್ನ ಹೆಂಡತಿ ಎಂದು ಪರಿಚಯಿಸಿದ್ದ. ಆರು ವರ್ಷಗಳ ಹಿಂದೆ ಹಾವು ಕಡಿತದಿಂದ ಪತ್ನಿ ಮೃತಪಟ್ಟಿದ್ದು, ಬಳಿಕ ದೆಹಲಿಗೆ ಬಂದಿದ್ದಾಗಿ ಯಾದವ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.

ಸುಮಾರು ಏಳು ತಿಂಗಳ ಹಿಂದೆ, ಅವರು ಚಿಂದಿ ಆಯುವ ಅಂಜಲಿಯನ್ನು ಭೇಟಿಯಾಗಿದ್ದ ಮತ್ತು ಇಬ್ಬರೂ ಕೂಲಿ ಕೆಲಸ ಮಾಡುವಾಗ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಕೊಂದು ಆತ ಪರಾರಿಯಾಗಿದ್ದ, ಕೊಲೆಗೆ ಬಳಸಿದ ಸುತ್ತಿಗೆ ಮತ್ತು ಬೆಲ್ಟ್ ಅನ್ನು ನಾವು ವಶಪಡಿಸಿಕೊಂಡಿದ್ದೇವೆ ಮತ್ತು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪಾಲಂ ವಿಹಾರ್ ಎಸಿಪಿ ನವೀನ್ ಕುಮಾರ್ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us