AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಮಾಯಾ ಲೇಡಿಯನ್ನು ಹಿಡಿದುಕೊಟ್ಟರೆ ನಗದು ಬಹುಮಾನ ಕೊಡ್ತೀವಿ ಎಂದು ಘೋಷಿಸಿದ ಆಂಧ್ರ ಪೊಲೀಸರು

Andhra Pradesh Police: ಈ ಆರೋಪಿ ಮಹಿಳೆಯನ್ನು ಹಲವು ರೀತಿಯಲ್ಲಿ ಹುಡುಕಿ ಸುಸ್ತಾಗಿರುವ ಪೊಲೀಸರು ಕೊನೆಗೂ ಆಕೆಯನ್ನು ಹಿಡಿದುಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ್ದಾರೆ.

ಈ ಮಾಯಾ ಲೇಡಿಯನ್ನು ಹಿಡಿದುಕೊಟ್ಟರೆ ನಗದು ಬಹುಮಾನ ಕೊಡ್ತೀವಿ ಎಂದು ಘೋಷಿಸಿದ ಆಂಧ್ರ ಪೊಲೀಸರು
ಈ ಮಾಯಾ ಲೇಡಿಯನ್ನು ಹಿಡಿದುಕೊಟ್ಟರೆ ನಗದು ಬಹುಮಾನ
ಸಾಧು ಶ್ರೀನಾಥ್​
|

Updated on: Jun 24, 2023 | 11:06 AM

Share

ಆಕೆ ಸಾಮಾನ್ಯ ವ್ಯಕ್ತಿಯಲ್ಲ. ಜಂತರ್ ಮಂತರ್ ಜಾದೂ ಕಿಲಾಡಿ. ಕಳ್ಳಕಾಕರ ಮಾರಿ. ಪರಿಚಯವಾದ ಸ್ವಲ್ಪ ಸಮಯದಲ್ಲೇ ಪದಗಳ ಪೋಣಿಸಿ, ಆತ್ಮೀಯತೆಯ ಸಂಪರ್ಕ ಬೆಳೆಸುತ್ತಾಳೆ. ತುಂಬಾ ಸಭ್ಯ ವ್ಯಕ್ತಿಯಂತೆ ಕಾಣುತ್ತಾರೆ. ಅದೇ ವೇಳೆ ಸಮಯ ಸಾಧಿಸಿ, ಕಾರ್ಯರೂಪಕ್ಕೆ ಇಳಿದು ಎದುರಿಗಿದ್ದವರನ್ನು ದೋಚುತ್ತಾಳೆ. ಒಂದಲ್ಲ.. ಎರಡಲ್ಲ.. ಈ ಮಾಯಾ ಮಹಿಳೆಯ ಮೇಲೆ ಹಲವು ಪ್ರಕರಣಗಳಿವೆ. ಪೊಲೀಸರ ಕಣ್ತಪ್ಪಿಸಿ ಅಲೆದಾಡುತ್ತಿರುವ ಈ ಮೋಸ್ಟ್ ವಾಂಟೆಡ್ ಮಹಿಳೆಯ ಬಗ್ಗೆ ಮಾಹಿತಿ ನೀಡಿದರೆ ನಗದು ಬಹುಮಾನ ನೀಡುವುದಾಗಿ ಪೂರ್ವ ಗೋದಾವರಿ ಜಿಲ್ಲಾ ಪೊಲೀಸರು ಘೋಷಿಸಿದ್ದಾರೆ. ಆಕೆಯನ್ನು ಹಿಡಿದರೆ 10 ಸಾವಿರ ರೂಪಾಯಿ ಕೊಡುತ್ತೇವೆ ಎಂದಿದ್ದಾರೆ. ಒಂಟಿ ಮಹಿಳೆಯರಿಗೆ ಮಾದಕ ವಸ್ತು ನೀಡಿ ದರೋಡೆ ಮಾಡುತ್ತಿದ್ದ ಆರೋಪವೂ ಆಕೆಯ ಮೇಲಿದೆ.

ಇನ್ನೂ ಅವಳ ಹೆಸರು ಗೊತ್ತಾಗಲಿಲ್ಲ ಅಲ್ಲವೇ? ಅವಳೇ ಜಗದಾಂಬ ಅಲಿಯಾಸ್ ಬುಜ್ಜಿ! ನಿಮಗೆ ಚೆನ್ನಾಗಿ ಪರಿಚಯ ಇರುವವಳಂತೆ ಮಾತಿಗೆ ಇಳಿಯುತ್ತಾಳೆ. ಅಕ್ಕ ಪಕ್ಕ ಬಂದು ಕುಳಿತು ನಿಮ್ಮ ಯೋಗಕ್ಷೇಮ ವಿಚಾರಿಸುತ್ತಾಳೆ. ನಿಮ್ಮ ಆಶೀರ್ವಾದ ಬೇಡುತ್ತಾಳೆ. ಆಗಲೇ ತನ್ನ ಕೃತ್ರಿಮ ಬುದ್ಧಿ ತೋರಿ ಒಂಟಿ ಮಹಿಳೆಯರಿಗೆ ನಿದ್ದೆ ಮಾತ್ರೆ ಬೆರೆಸಿದ ತಂಪು ಪಾನೀಯ ನೀಡಿ ಪ್ರಜ್ಞೆ ತಪ್ಪುವಂತೆ ಮಾಡುತ್ತಾಳೆ. ಬಳಿಕ ಚಿನ್ನಾಭರಣ ಹಾಗೂ ನಗದನ್ನು ಕದ್ದು ಅಲ್ಲಿಂದ ಪರಾರಿಯಾಗುತ್ತಾಳೆ.

ಈ ಆರೋಪಿ ಮಹಿಳೆಯನ್ನು ಹಲವು ರೀತಿಯಲ್ಲಿ ಹುಡುಕಿ ಸುಸ್ತಾಗಿರುವ ಪೊಲೀಸರು ಕೊನೆಗೂ ಆಕೆಯನ್ನು ಹಿಡಿದುಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ್ದಾರೆ. ಮೇಲಿನ ಫೋಟೊದಲ್ಲಿರುವ ಮಹಿಳೆ ಜಗದಂಬಾ ನಿಮ್ಮ ಕಣ್ಣಿಗೆ ಕಂಡರೆ ದಯವಿಟ್ಟು 9491326456 ಅಥವಾ 996333265 ಅನ್ನು ಸಂಪರ್ಕಿಸಿ, ಮಾಹಿತಿ ನೀಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ