AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ಸಂದರ್ಭದಲ್ಲಿ ಕೊಡುವ ಪುಕ್ಕಟ್ಟೆ ಕೊಡುಗೆ ಗಂಭೀರ ಸಮಸ್ಯೆಯಾಗಿದೆ -ಸುಪ್ರೀಂಕೋರ್ಟ್ ಆತಂಕ

ಆರ್ಥಿಕತೆಯು ಹಣವನ್ನು ಕಳೆದುಕೊಳ್ಳುತ್ತಿರುವುದರಿಂದ ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಭರವಸೆ ನೀಡುವುದು ಮತ್ತು ಪುಕ್ಕಟ್ಟೆ ಕೊಡುಗೆಗಳನ್ನು ವಿತರಿಸುವುದು "ಗಂಭೀರ ವಿಷಯ" ಎಂದು ಸುಪ್ರೀಂ ಕೋರ್ಟ್ ಗುರುವಾರ ಗಮನಿಸಿದೆ.

ಚುನಾವಣೆ  ಸಂದರ್ಭದಲ್ಲಿ ಕೊಡುವ ಪುಕ್ಕಟ್ಟೆ ಕೊಡುಗೆ ಗಂಭೀರ ಸಮಸ್ಯೆಯಾಗಿದೆ -ಸುಪ್ರೀಂಕೋರ್ಟ್ ಆತಂಕ
ಸುಪ್ರೀಂಕೋರ್ಟ್
TV9 Web
| Updated By: ಆಯೇಷಾ ಬಾನು|

Updated on: Aug 11, 2022 | 6:15 PM

Share

ದೆಹಲಿ: ನಮ್ಮ ದೇಶದಲ್ಲಿ ಚುನಾವಣೆ ಸಂದರ್ಭದಲ್ಲಿ ಜನರಿಗೆ ರಾಜಕೀಯ ಪಕ್ಷಗಳು ಪುಕ್ಕಟ್ಟೆ ಕೊಡುಗೆಗಳನ್ನು ಘೋಷಿಸುತ್ತಾವೆ. ಗೆದ್ದ ರಾಜಕೀಯ ಪಕ್ಷವು ಅವುಗಳನ್ನು ಬಳಿಕ ಜಾರಿಗೊಳಿಸುತ್ತೆ. ಉಚಿತ ಕಲರ್ ಟಿವಿ, ಫ್ರಿಡ್ಜ್, ಉಚಿತ ವಿದ್ಯುತ್, ಉಚಿತ ನೀರು, ನಿರುದ್ಯೋಗ ಭತ್ಯೆ ಸೇರಿದಂತೆ ಅನೇಕ ಉಚಿತ ಕೊಡುಗೆಗಳ ಸರಮಾಲೆಯನ್ನೇ ರಾಜಕೀಯ ಪಕ್ಷಗಳು ಘೋಷಿಸಿ ಜಾರಿಗೆ ತರುವುದು ಉಂಟು. ಆದರೇ, ಇವುಗಳನ್ನ ನಿಲ್ಲಿಸಲು ಕ್ರಮಕೈಗೊಳ್ಳಬೇಕು ಎಂದು ವಕೀಲರೊಬ್ಬರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ಸಿಜೆ ರಮಣ ಅವರ ಪೀಠವು ವಿಚಾರಣೆ ನಡೆಸಿದೆ.

ಆರ್ಥಿಕತೆ ಮತ್ತು ಜನರ ಕಲ್ಯಾಣದ ಮಧ್ಯೆ ಸಮತೋಲನ ಬೇಕೆಂದ ಸುಪ್ರೀಂಕೋರ್ಟ್

ಆರ್ಥಿಕತೆಯು ಹಣವನ್ನು ಕಳೆದುಕೊಳ್ಳುತ್ತಿರುವುದರಿಂದ ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಭರವಸೆ ನೀಡುವುದು ಮತ್ತು ಪುಕ್ಕಟ್ಟೆ ಕೊಡುಗೆಗಳನ್ನು ವಿತರಿಸುವುದು “ಗಂಭೀರ ವಿಷಯ” ಎಂದು ಸುಪ್ರೀಂ ಕೋರ್ಟ್ ಗುರುವಾರ ಗಮನಿಸಿದೆ.

ಚುನಾವಣಾ ಪೂರ್ವದಲ್ಲಿ ಮತದಾರರನ್ನು ಸೆಳೆಯಲು ‘ಉಚಿತ’ ಭರವಸೆ ನೀಡುವ ರಾಜಕೀಯ ಪಕ್ಷಗಳನ್ನು ನಿಷೇಧಿಸುವಂತೆ ಕೋರಿ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಚುನಾವಣಾ ಪ್ರಣಾಳಿಕೆಯನ್ನು ನಿಯಂತ್ರಿಸಲು ಮತ್ತು ಅದರಲ್ಲಿ ನೀಡಿದ ಭರವಸೆಗಳಿಗೆ ರಾಜಕೀಯ ಪಕ್ಷಗಳನ್ನು ಹೊಣೆಗಾರರನ್ನಾಗಿ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿಯಲ್ಲಿ ಕೇಳಲಾಗಿದೆ. “ಇದು ಸಮಸ್ಯೆಯಲ್ಲ ಎಂದು ಯಾರೂ ಹೇಳುವುದಿಲ್ಲ. ಇದು ಗಂಭೀರ ಸಮಸ್ಯೆಯಾಗಿದೆ. ಪಡೆಯುತ್ತಿರುವವರು ಅದನ್ನು ಬಯಸುತ್ತಾರೆ ಮತ್ತು ನಮ್ಮದು ಕಲ್ಯಾಣ ರಾಜ್ಯವಾಗಿದೆ. ಕೆಲವರು ತೆರಿಗೆ ಪಾವತಿಸುತ್ತಿದ್ದಾರೆ ಮತ್ತು ಅದನ್ನು ಅಭಿವೃದ್ಧಿ ಪ್ರಕ್ರಿಯೆಗೆ ಬಳಸಬೇಕು ಎಂದು ಹೇಳಬಹುದು. ಆದ್ದರಿಂದ ಇದು ಗಂಭೀರ ಸಮಸ್ಯೆಯಾಗಿದೆ. ಹಾಗಾಗಿ ಸಮಿತಿಯು ಎರಡೂ ಕಡೆಯ ವಾದವನ್ನು ಆಲಿಸಬೇಕು, ”ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಹೇಳಿದ್ದಾರೆ.

ಭಾರತವು “ಬಡತನವಿರುವ ದೇಶವಾಗಿದೆ ಮತ್ತು ಕೇಂದ್ರ ಸರ್ಕಾರವು ಹಸಿವಿನಿಂದ ಆಹಾರವನ್ನು ನೀಡುವ ಯೋಜನೆಗಳನ್ನು ಹೊಂದಿದೆ” ಎಂದು ಅವರು ಸಿಜೆಐ ಹೇಳಿದರು. ಪುಕ್ಕಟ್ಟೆ ನೀಡುವ ಯೋಜನೆಗಳಿಂದಾಗಿ ಆರ್ಥಿಕತೆಯು ಹಣವನ್ನು ಕಳೆದುಕೊಳ್ಳುತ್ತಿದೆ ಮತ್ತು “ಜನರ ಕಲ್ಯಾಣವನ್ನು ಸಮತೋಲನಗೊಳಿಸಬೇಕಾಗಿದೆ” ಎಂದು ಹೇಳಿದರು. ಸುಪ್ರೀಂಕೋರ್ಟ್, ಆಗಸ್ಟ್ 17 ರಂದು ಮತ್ತೆ ಈ ಅರ್ಜಿಯ ವಿಚಾರಣೆ ನಡೆಸಲಿದೆ.

ಇದಕ್ಕೂ ಮೊದಲು, ಆಮ್ ಆದ್ಮಿ ಪಕ್ಷ (ಎಎಪಿ) ಮನವಿಯನ್ನು ವಿರೋಧಿಸಿತು ಮತ್ತು “ಅರ್ಹ ಮತ್ತು ಅನಾನುಕೂಲಕರ ಜನಸಾಮಾನ್ಯರ ಸಾಮಾಜಿಕ ಆರ್ಥಿಕ ಕಲ್ಯಾಣಕ್ಕಾಗಿ ಇರುವ ಯೋಜನೆಗಳನ್ನು ‘ಉಚಿತ’ ಎಂದು ವಿವರಿಸಲಾಗುವುದಿಲ್ಲ” ಎಂದು ಹೇಳಿದರು. ಅರ್ಜಿದಾರರು ಬಿಜೆಪಿಯೊಂದಿಗೆ “ಬಲವಾದ ಸಂಪರ್ಕ” ಹೊಂದಿದ್ದಾರೆ ಎಂದು ಹೇಳಿದ ಆಮ್ ಆದ್ಮಿ ಪಕ್ಷವು “ನಿರ್ದಿಷ್ಟ ರಾಜಕೀಯ ಕಾರ್ಯಸೂಚಿಯನ್ನು ಮುಂದುವರಿಸುತ್ತಿದ್ದಾರೆ” ಎಂದು ಆರೋಪಿಸಿದೆ.

ಪುಕ್ಕಟ್ಟೆ ಕೊಡುಗೆ ಬಗ್ಗೆ ಮೋದಿ, ಕೇಜ್ರಿವಾಲ್ ಹೇಳಿದ್ದೇನು?

ನೆನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಪಕ್ಷಗಳು ಹಾಗೂ ರಾಜ್ಯ ಸರ್ಕಾರಗಳು ಪುಕ್ಕಟ್ಟೆ ಕೊಡುಗೆ ನೀಡುವುದರ ವಿರುದ್ಧ ಮಾತನಾಡಿದ್ದಾರೆ. ಹರಿಯಾಣದ ಪಾಣಿಪತ್‌ನ ಎಥೆನಾಲ್ ಘಟಕದ ಉದ್ಘಾಟನೆ ವೇಳೆ ಮಾತನಾಡಿದ್ದ ಪ್ರಧಾನಿ ಮೋದಿ, ಯಾರೇ ಬಂದು ಉಚಿತ ಪೆಟ್ರೋಲ್, ಡೀಸೆಲ್ ನೀಡುವ ಘೋಷಣೆ ಮಾಡಬಹುದು. ಅವರ ರಾಜಕಾರಣ ಸ್ವಕೇಂದ್ರೀತವಾಗಿದ್ದರೇ, ಉಚಿತ ಪೆಟ್ರೋಲ್, ಡೀಸೆಲ್ ನೀಡಿಕೆಯ ಘೋಷಣೆ ಮಾಡ್ತಾರೆ. ಆದರೇ, ಅಂಥ ಕ್ರಮಗಳು ನಮ್ಮ ಮಕ್ಕಳ ಹಕ್ಕುಗಳನ್ನು ಕಿತ್ತುಕೊಳ್ಳುತ್ತಾವೆ. ನಮ್ಮ ದೇಶ ಸ್ವಾವಲಂಬಿ ಆಗುವುದನ್ನು ತಡೆಯುತ್ತದೆ. ದೇಶದ ತೆರಿಗೆದಾರರ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಆಮ್ ಆದ್ಮಿ ಪಾರ್ಟಿ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪುಕ್ಕಟ್ಟೆ ಕೊಡುಗೆ ನೀಡುವ ಬಗ್ಗೆ ದೇಶದಲ್ಲಿ ಜನಮತ ಗಣನೆ ಆಗಲಿ ಎಂದಿದ್ದಾರೆ. ಬಡವರಿಗೆ ಪುಕ್ಕಟ್ಟೆ ಕೊಡುಗೆಗಳ ಅಗತ್ಯ ಇದೆ. ದೇಶದ ಬಡವರು, ತೀರಾ ಬಡವರು ಕೂಡ ತೆರಿಗೆ ಪಾವತಿಸುತ್ತಾರೆ. ಬಡವರು ಮಾರುಕಟ್ಟೆಯಲ್ಲಿ ಏನನ್ನಾದರೂ ಪಾವತಿಸಿದಾಗ ಜಿಎಸ್‌ಟಿ ಪಾವತಿಸುತ್ತಾರೆ. ಹೀಗಾಗಿ ಪುಕ್ಕಟ್ಟೆ ಕೊಡುಗೆ ಬಗ್ಗೆ ಜನ ಮತಗಣನೆ ಆಗಬೇಕು, ಜನರ ಅಭಿಪ್ರಾಯವನ್ನು ಕೇಳಬೇಕು. ಸರ್ಕಾರಿ ಹಣ ಒಂದೇ ಪರಿವಾರ, ಒಂದೇ ರಾಜಕೀಯ ಪಕ್ಷಕ್ಕೆ ಉಪಯೋಗ ಆಗಬೇಕೇ ಬೇಡವೇ ಎಂಬ ಬಗ್ಗೆ ಜನರ ಅಭಿಪ್ರಾಯ ಕೇಳಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೇಶದಲ್ಲಿ ಈಗ ರಾಜಕೀಯ ಪಕ್ಷಗಳ ಘೋಷಿಸಿ ಜಾರಿಗೆ ತರುವ ಪುಕ್ಕಟ್ಟೆ ಕೊಡುಗೆಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಪುಕ್ಕಟ್ಟೆ ಕೊಡುಗೆ ನೀಡಿಯೇ ಕೆಲ ದೇಶಗಳು ಆರ್ಥಿಕವಾಗಿ ದಿವಾಳಿಯಾಗಿವೆ. ಹೀಗಾಗಿ ಭಾರತಕ್ಕೆ ಯಾವುದು ಸೂಕ್ತ ಅಥವಾ ಅಲ್ಲ ಎನ್ನುವ ಬಗ್ಗೆ ಸರಿಯಾದ ತೀರ್ಮಾನ ಕೈಗೊಳ್ಳಬೇಕು.

ವರದಿ: ಚಂದ್ರಮೋಹನ್, ಟಿವಿ9 ಕನ್ನಡ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ