AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಪಂಚದ ಸಮಸ್ಯೆ ಯುರೋಪಿನ ಸಮಸ್ಯೆಯಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಲಿ: ಜೈಶಂಕರ್

ಯುರೋಪ್ ಮಾತನಾಡದ ಸಾಕಷ್ಟು ಸಮಸ್ಯೆಗಳಿವೆ.ಯುರೋಪ್‌ನ ಸಮಸ್ಯೆಯು ಪ್ರಪಂಚದ ಸಮಸ್ಯೆಯಾಗಿದೆ. ಆದರೆ ಪ್ರಪಂಚದ ಸಮಸ್ಯೆ ಯುರೋಪಿನ ಸಮಸ್ಯೆಯಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಬೇಕು" ಎಂದು ವಿದೇಶಾಂಗ ಸಚಿವರು ಹೇಳಿದರು.

ಪ್ರಪಂಚದ ಸಮಸ್ಯೆ ಯುರೋಪಿನ ಸಮಸ್ಯೆಯಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಲಿ: ಜೈಶಂಕರ್
ಎಸ್ ಜೈಶಂಕರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 03, 2022 | 4:29 PM

ದೆಹಲಿ: ಭಾರತದ ವಿದೇಶಾಂಗ ನೀತಿಯು ಕೆಲವು ರಾಷ್ಟ್ರಗಳಿಗೆ ಒಪ್ಪಿಗೆ ಆಗುವುದಿಲ್ಲ ಎಂದು ಹೇಳಿ ನಿರ್ಧಾರ ಕೈಗೊಳ್ಳಲು ವಿಳಂಬ ಮಾಡಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಗುರುವಾರ ಹೇಳಿದ್ದಾರೆ. ನಾನು ನಿಮ್ಮೊಂದಿಗೆ ಒಮ್ಮತ ಹೊಂದಿಲ್ಲ ಎಂದು ನಾನು ನಿರ್ಧಾರ ವಿಳಂಬ ಮಾಡಿಲ್ಲ ಎಂದು GLOBESEC ನಲ್ಲಿ ಭಾಗವಹಿಸಿದ ಸಚಿವರು ಹೇಳಿದ್ದಾರೆ. Taking Friendship to the Next Level: Allies in the Indo-Pacific  ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದರವರು. ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದ ನಿಲುವು ಮತ್ತು ಉದಯೋನ್ಮುಖ ವಿಶ್ವ ನಾಯಕನಾಗಿ ನಿರ್ಧಾರ ತೆಗೆದುಕೊಳ್ಳಲು ಭಾರತಕ್ಕೆ ಸಾಧ್ಯವೇ ಎಂದು ವಿದೇಶಾಂಗ ಸಚಿವರನ್ನು ಕೇಳಿದ್ದಕ್ಕೆ ಸಚಿವರು ಈ ಉತ್ತರ ನೀಡಿದ್ದಾರೆ. ಈ ಕಲ್ಪನೆ ಹೇಗಿದೆ ಅಂದರೆ ಒಂದು ಘರ್ಷಣೆ ಬಗ್ಗೆ ನಾನು ಮಾಡಿದ ವ್ಯವಹಾರವು ಇನ್ನೊಂದು ಘರ್ಷಣೆಗೆ ಸಹಾಯ ಮಾಡುತ್ತದೆ ಎನ್ನುವಂತಿದೆ. ಜಗತ್ತಿನ ವ್ಯವಹಾರವೇ ಈ ರೀತಿ ಇದೆ. ಚೀನಾದಲ್ಲಿನ ನಮ್ಮ ಬಹಳಷ್ಟು ಸಮಸ್ಯೆಗಳಿಗೆ ಉಕ್ರೇನ್, ರಷ್ಯಾದೊಂದಿಗೆ ಯಾವುದೇ ಸಂಬಂಧವಿಲ್ಲ. ಚೀನಾದೊಂದಿಗಿನ ತನ್ನ ಪರಿಸ್ಥಿತಿಯಲ್ಲಿ ಭಾರತವು ಜಾಗತಿಕ ಸಹಾಯವನ್ನು ನಿರೀಕ್ಷಿಸುತ್ತದೆಯೇ ಎಂಬ ಪ್ರಶ್ನೆಗೆ ಇದು ತುಂಬಾ ಮುಂಚಿತ ಎಂದು ಉತ್ತರಿಸಿದ್ದಾರೆ.

ಯುರೋಪ್ ಮಾತನಾಡದ ಸಾಕಷ್ಟು ಸಮಸ್ಯೆಗಳಿವೆ.ಯುರೋಪ್‌ನ ಸಮಸ್ಯೆಯು ಪ್ರಪಂಚದ ಸಮಸ್ಯೆಯಾಗಿದೆ. ಆದರೆ ಪ್ರಪಂಚದ ಸಮಸ್ಯೆ ಯುರೋಪಿನ ಸಮಸ್ಯೆಯಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಬೇಕು” ಎಂದು ವಿದೇಶಾಂಗ ಸಚಿವರು ಹೇಳಿದರು. “ಇಂದು ಚೀನಾ ಮತ್ತು ಭಾರತದ ನಡುವೆ ಸಂಪರ್ಕವನ್ನು ಮಾಡಲಾಗುತ್ತಿದೆ. ಉಕ್ರೇನ್​​ನಲ್ಲಿ ಏನಾಗುತ್ತಿದೆ? ಉಕ್ರೇನ್ ವಿಷಯಕ್ಕಿಂತ ಮುಂಚೆಯೇ ಚೀನಾ ಮತ್ತು ಭಾರತ ಪರಸ್ಪರ ಸಂಪರ್ಕಹೊಂದಿದೆ. ಇದೊಂದು ಚತುರ ಚರ್ಚೆ ಎಂದು ನನಗನಿಸುವುದಿಲ್ಲ. ಜಗತ್ತು ಎದುರಿಸುತ್ತಿರುವ ಎಲ್ಲಾ ದೊಡ್ಡ ಸವಾಲುಗಳಿಗೆ ಭಾರತದಿಂದ ಕೆಲವು ರೀತಿಯಲ್ಲಿ ಪರಿಹಾರಗಳು ಬರುತ್ತಿವೆ ಎಂದು ಜೈಶಂಕರ್ ಹೇಳಿದರು.

ಇದನ್ನೂ ಓದಿ
Image
ರಾಷ್ಟ್ರೀಯ ಹಿತಾಸಕ್ತಿ ಕಾಪಾಡಿಕೊಳ್ಳುವುದು, ಆತ್ಮವಿಶ್ವಾಸವನ್ನು ಅಹಂಕಾರ ಎನ್ನಲಾಗದು; ರಾಹುಲ್ ಗಾಂಧಿಗೆ ಸಚಿವ ಜೈಶಂಕರ್ ತಿರುಗೇಟು
Image
ಭಾರತವು ಪ್ರಪಂಚದೊಂದಿಗೆ ತನ್ನದೇ ಆದ ನಿಯಮಗಳೊಂದಿಗೆ ತೊಡಗಿಸಿಕೊಳ್ಳುತ್ತದೆ, ಆದೇಶದ ಯುಗ ಮುಗಿದಿದೆ: ಜೈಶಂಕರ್
Image
ಕೇಂದ್ರ ಸಚಿವ ಎಸ್​.ಜೈಶಂಕರ್ ಮಾತಿನಿಂದ ಶಶಿ ತರೂರ್ ಫುಲ್​ ಖುಷ್​; ಸೆಲ್ಫೀ ತೆಗೆದುಕೊಂಡು ಟ್ವೀಟ್ ಮಾಡಿ, ಧನ್ಯವಾದ ಸಲ್ಲಿಸಿದ ಸಂಸದ !

ಭಾರತವು ರಷ್ಯಾದ ತೈಲವನ್ನು ಖರೀದಿಸುತ್ತಿರುವುದು ನಡೆಯುತ್ತಿರುವ ಯುದ್ಧಕ್ಕೆ ಧನಸಹಾಯ ನೀಡಿದಂತೆ ಅಲ್ಲವೇ ಎಎಂಬ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, “ನೋಡಿ, ನಾನು ವಾದ ಮಾಡಲು ಬಯಸುವುದಿಲ್ಲ. ಆದರೆ ರಷ್ಯಾದ ಅನಿಲವನ್ನು ಖರೀದಿಸುವುದು ಯುದ್ಧಕ್ಕೆ ಧನಸಹಾಯವಲ್ಲವೇ? ರಷ್ಯಾದಿಂದ ಭಾರತಕ್ಕೆ ತೈಲ ಬರುತ್ತಿದ್ದು ಅದಕ್ಕೆ ಭಾರತ ಪಾವತಿ ಮಾಡಿದರೆ ಮಾತ್ರ ಅದು ಯುದ್ಧಕ್ಕೆ ನಿಧಿ ಸಹಾಯ ಮಾಡಿದಂತಾಗುತ್ತದೆಯೇ? ಯುರೋಪ್‌ಗೆ ಬರುವ ರಷ್ಯಾದ ಅನಿಲವು ನಿಧಿಯನ್ನು ನೀಡುವುದಿಲ್ಲವೇ? ಪ್ರಶ್ನೆಗಳು ಸರಿಯಾಗಿರಲಿ ಎಂದು ಜೈಶಂಕರ್ ಹೇಳಿದ್ದಾರೆ.

ಭಾರತವು ರಷ್ಯಾ-ಉಕ್ರೇನ್ ಯುದ್ಧವನ್ನು ‘ನಿರ್ಲಕ್ಷಿಸುತ್ತಿದೆ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ಭಾರತವು ಬುಚಾ ಹತ್ಯೆಯನ್ನು ಖಂಡಿಸುತ್ತದೆ ಮತ್ತು ತನಿಖೆಗೆ ಒತ್ತಾಯಿಸುತ್ತದೆ ಎಂದು ಹೇಳಿದರು. “ಉಕ್ರೇನ್ ಸಂಘರ್ಷದೊಂದಿಗೆ ಏನಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ, ನಾವು ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂದು ಬಯಸುತ್ತಿದ್ದೇವೆ. ನಾವು ಪುಟಿನ್ ಮತ್ತು ಝೆಲೆನ್ಸ್ಕಿ ಅವರಿಗೆ ಕರೆ ಮಾಡಿದ್ದೆವು. ಇದನ್ನು ನೀವು ನಿರ್ಲಕ್ಷಿಸುತ್ತಿದ್ದೀರಿ ಎಂದು ಜೈಶಂಕರ್ ಉತ್ತರಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 4:28 pm, Fri, 3 June 22

RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ