AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ದಂಡ, ಲೈಸನ್ಸ್ ರದ್ದು ಶಿಕ್ಷೆ ಜತೆಗೆ ರಕ್ತದಾನವೂ ಕಡ್ಡಾಯ

ಒಂದು ಬಾರಿಗಿಂತ ಹೆಚ್ಚು ಬಾರಿ ತಪ್ಪೆಸಗಿದರೆ ದಂಡವೂ ಹೆಚ್ಚಿಗೆ ಆಗುತ್ತದೆ. ಆದರೆ ಸಮುದಾಯದ ಸೇವೆ ಅದೇ ರೀತಿ ಇರುತ್ತದೆ.  ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸಿ ಮೊದಲ ಬಾರಿ..

ಪಂಜಾಬ್​​ನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ದಂಡ, ಲೈಸನ್ಸ್ ರದ್ದು ಶಿಕ್ಷೆ ಜತೆಗೆ ರಕ್ತದಾನವೂ ಕಡ್ಡಾಯ
ಪಂಜಾಬ್ ಪೊಲೀಸ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Jul 17, 2022 | 6:06 PM

Share

ಚಂಡೀಗಢ: ಅತಿ ವೇಗದ ವಾಹನ ಚಾಲನೆ ಅಥವಾ ಮದ್ಯ (alcohol), ಮಾದಕ ವಸ್ತು ಸೇವನೆಯ ಅಮಲಿನಿಂದ ವಾಹನ ಚಲಾಯಿಸಿದ್ದರೆ  ಪಂಜಾಬ್​​ನಲ್ಲಿ (Punjab) ದಂಡ ಮಾತ್ರವಲ್ಲ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಅಥವಾ ರಕ್ತದಾನ (Blood Donation) ಕಡ್ಡಾಯವಾಗಿ ಮಾಡಲೇಬೇಕು. ಪಂಜಾಬ್ ಪೊಲೀಸರು  ಭಾನುವಾರ ಬಿಡುಗಡೆ ಮಾಡಿದ ಹೊಸ ಟ್ರಾಫಿಕ್ ನಿಯಮಗಳ ಪ್ರಕಾರ ವಾಹನಗಳ ಅತಿ ವೇಗದ ಚಾಲನೆಗೆ ದಂಡ ಕಟ್ಟುವುದು, ಲೈಸನ್ಸ್ ತಾತ್ಕಾಲಿಕ ರದ್ದತಿ ಜತೆಗೆ ಕಡ್ಡಾಯ ರಕ್ತದಾನವನ್ನೂ ಸೇರಿಸಲಾಗಿದೆ. ಒಂದಕ್ಕಿಂತ ಹೆಚ್ಚು ಬಾರಿ ತಪ್ಪೆಸಗಿದರೆ ದಂಡವೂ ಹೆಚ್ಚುತ್ತದೆ. ಆದರೆ ಸಮುದಾಯದ ಸೇವೆ ಅದೇ ರೀತಿ ಇರುತ್ತದೆ.  ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸಿ ಮೊದಲ ಬಾರಿ ಪೊಲೀಸರ ಕೈಗೆ ಸಿಕ್ಕಿಹಾಕೊಂಡರೆ ₹ 1,000 ದಂಡ ಮತ್ತು ಮೂರು ತಿಂಗಳಿಗೆ ಚಾಲಕನ ಲೈಸನ್ಸ್ ರದ್ದು ಮಾಡಲಾಗುತ್ತದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಮತ್ತು ಮೂರು ತಿಂಗಳಿಗೆ ಚಾಲಕನ ಲೈಸನ್ಸ್ ರದ್ದು ಮಾಡಲಾಗುತ್ತದ್ದು ₹ 5,000 ದಂಡ ವಿಧಿಸಲಾಗುತ್ತದೆ.

ಮತ್ತೊಮ್ಮೆ ತಪ್ಪೆಸಗಿದರೆ ಮೂರು ತಿಂಗಳಿಗೆ ಚಾಲಕನ ಲೈಸನ್ಸ್ ರದ್ದು ಮಾಡಲಾಗುತ್ತದೆ ಜತೆಗೆ ₹ 2,000 ದಂಡ ಕಟ್ಟಬೇಕು. ಮದ್ಯ ಸೇವಿಸಿ ವಾಹನ ಜಲಾಯಿಸುತ್ತಿದ್ದರೆ ಲೈಸನ್ಸ್ ರದ್ದು ಜತೆ ₹ 10,000 ರೂ ಪಾವತಿ ಮಾಡಬೇಕಾಗುತ್ತದೆ.

ತಪ್ಪಿತಸ್ಥರು ಟ್ರಾನ್ಸ್ ಪೋರ್ಟ್ ಅಥಾರಿಟಿಯಲ್ಲಿ ರಿಫ್ರೆಶರ್ ಕೋರ್ಸ್ ಮಾಡಿ ಆಮೇಲೆ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕನಿಷ್ಠ 2 ಗಂಟೆ ಬೋಧನೆ ಮಾಡಬೇಕು. ದಂಡ ಪಾವತಿ ಹೊತ್ತಲ್ಲಿ ಈ ಬೋಧನೆಗಾಗಿ ನೋಡಲ್ ಆಫೀಸರ್ ಪ್ರಮಾಣ ಪತ್ರವೊಂದನ್ನು ನೀಡುತ್ತಾರೆ. ಇದರ ಜತೆಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿ ಹತ್ತಿದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬೇಕು ಅಥವಾ ಹತ್ತಿರದ ಬ್ಲಡ್ ಬ್ಯಾಂಕ್ ಗೆ ಒಂದು ಯೂನಿಟ್ ರಕ್ತದಾನ ಮಾಡಬೇಕು

Published On - 6:00 pm, Sun, 17 July 22

Follow Us
Web contact
Web contact

TV9 Kannada

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!