AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ದಂಡ, ಲೈಸನ್ಸ್ ರದ್ದು ಶಿಕ್ಷೆ ಜತೆಗೆ ರಕ್ತದಾನವೂ ಕಡ್ಡಾಯ

ಒಂದು ಬಾರಿಗಿಂತ ಹೆಚ್ಚು ಬಾರಿ ತಪ್ಪೆಸಗಿದರೆ ದಂಡವೂ ಹೆಚ್ಚಿಗೆ ಆಗುತ್ತದೆ. ಆದರೆ ಸಮುದಾಯದ ಸೇವೆ ಅದೇ ರೀತಿ ಇರುತ್ತದೆ.  ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸಿ ಮೊದಲ ಬಾರಿ..

ಪಂಜಾಬ್​​ನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ದಂಡ, ಲೈಸನ್ಸ್ ರದ್ದು ಶಿಕ್ಷೆ ಜತೆಗೆ ರಕ್ತದಾನವೂ ಕಡ್ಡಾಯ
ಪಂಜಾಬ್ ಪೊಲೀಸ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 17, 2022 | 6:06 PM

ಚಂಡೀಗಢ: ಅತಿ ವೇಗದ ವಾಹನ ಚಾಲನೆ ಅಥವಾ ಮದ್ಯ (alcohol), ಮಾದಕ ವಸ್ತು ಸೇವನೆಯ ಅಮಲಿನಿಂದ ವಾಹನ ಚಲಾಯಿಸಿದ್ದರೆ  ಪಂಜಾಬ್​​ನಲ್ಲಿ (Punjab) ದಂಡ ಮಾತ್ರವಲ್ಲ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಅಥವಾ ರಕ್ತದಾನ (Blood Donation) ಕಡ್ಡಾಯವಾಗಿ ಮಾಡಲೇಬೇಕು. ಪಂಜಾಬ್ ಪೊಲೀಸರು  ಭಾನುವಾರ ಬಿಡುಗಡೆ ಮಾಡಿದ ಹೊಸ ಟ್ರಾಫಿಕ್ ನಿಯಮಗಳ ಪ್ರಕಾರ ವಾಹನಗಳ ಅತಿ ವೇಗದ ಚಾಲನೆಗೆ ದಂಡ ಕಟ್ಟುವುದು, ಲೈಸನ್ಸ್ ತಾತ್ಕಾಲಿಕ ರದ್ದತಿ ಜತೆಗೆ ಕಡ್ಡಾಯ ರಕ್ತದಾನವನ್ನೂ ಸೇರಿಸಲಾಗಿದೆ. ಒಂದಕ್ಕಿಂತ ಹೆಚ್ಚು ಬಾರಿ ತಪ್ಪೆಸಗಿದರೆ ದಂಡವೂ ಹೆಚ್ಚುತ್ತದೆ. ಆದರೆ ಸಮುದಾಯದ ಸೇವೆ ಅದೇ ರೀತಿ ಇರುತ್ತದೆ.  ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸಿ ಮೊದಲ ಬಾರಿ ಪೊಲೀಸರ ಕೈಗೆ ಸಿಕ್ಕಿಹಾಕೊಂಡರೆ ₹ 1,000 ದಂಡ ಮತ್ತು ಮೂರು ತಿಂಗಳಿಗೆ ಚಾಲಕನ ಲೈಸನ್ಸ್ ರದ್ದು ಮಾಡಲಾಗುತ್ತದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಮತ್ತು ಮೂರು ತಿಂಗಳಿಗೆ ಚಾಲಕನ ಲೈಸನ್ಸ್ ರದ್ದು ಮಾಡಲಾಗುತ್ತದ್ದು ₹ 5,000 ದಂಡ ವಿಧಿಸಲಾಗುತ್ತದೆ.

ಮತ್ತೊಮ್ಮೆ ತಪ್ಪೆಸಗಿದರೆ ಮೂರು ತಿಂಗಳಿಗೆ ಚಾಲಕನ ಲೈಸನ್ಸ್ ರದ್ದು ಮಾಡಲಾಗುತ್ತದೆ ಜತೆಗೆ ₹ 2,000 ದಂಡ ಕಟ್ಟಬೇಕು. ಮದ್ಯ ಸೇವಿಸಿ ವಾಹನ ಜಲಾಯಿಸುತ್ತಿದ್ದರೆ ಲೈಸನ್ಸ್ ರದ್ದು ಜತೆ ₹ 10,000 ರೂ ಪಾವತಿ ಮಾಡಬೇಕಾಗುತ್ತದೆ.

ತಪ್ಪಿತಸ್ಥರು ಟ್ರಾನ್ಸ್ ಪೋರ್ಟ್ ಅಥಾರಿಟಿಯಲ್ಲಿ ರಿಫ್ರೆಶರ್ ಕೋರ್ಸ್ ಮಾಡಿ ಆಮೇಲೆ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕನಿಷ್ಠ 2 ಗಂಟೆ ಬೋಧನೆ ಮಾಡಬೇಕು. ದಂಡ ಪಾವತಿ ಹೊತ್ತಲ್ಲಿ ಈ ಬೋಧನೆಗಾಗಿ ನೋಡಲ್ ಆಫೀಸರ್ ಪ್ರಮಾಣ ಪತ್ರವೊಂದನ್ನು ನೀಡುತ್ತಾರೆ. ಇದರ ಜತೆಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿ ಹತ್ತಿದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬೇಕು ಅಥವಾ ಹತ್ತಿರದ ಬ್ಲಡ್ ಬ್ಯಾಂಕ್ ಗೆ ಒಂದು ಯೂನಿಟ್ ರಕ್ತದಾನ ಮಾಡಬೇಕು

Published On - 6:00 pm, Sun, 17 July 22

RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ